ಇಂತಹ ಶೋಚನೆಯ ಪರಿಸ್ಥಿತಿಯಲ್ಲಿಯೂ
ಸರ್ಕಾರಗಳು ಯಾವುದೇ ಗಂಭೀರ, ಜನಪರವಾದ ಶಾಶ್ವತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಬದಲಿಗೆ, ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಮುಂದಾಗಿ ಹೋರಾಡಬೇಕಿರುವ ಜನರ ಮಧ್ಯದ ಐಕ್ಯತೆಯನ್ನು ಮುರಿಯುವ ಹುನ್ನಾರದಿಂದ ಹಾಗೂ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ದುರುದ್ದೇಶದಿಂದ, ಜಾತಿವಾದ ಮಾತು ಕೋಮುವಾದಗಳನ್ನು ಅವು ಪ್ರಚೋದಿಸುತ್ತಿವೆ. ಜೊತೆಗೆ, ಯಾವುದೇ ಅನ್ಯಾಯದ ವಿರುದ್ಧ ಹೋರಾಡಲು ಜನತೆಯಲ್ಲಿ, ವಿಶೇಷವಾಗಿ ಯುವಜನರಲ್ಲಿ ಅವಶ್ಯಕವಾದ ನೈತಿಕತೆಯನ್ನು ಹಾಳುಗೆಡಜಲು, ಆಳುವ ವರ್ಗವು ಅಶ್ಲೀಲತೆಯನ್ನು ಹರಾಡುತ್ತಿದೆ. ಯುವಜನರನ್ನು ಮಧ್ಯ ಮತ್ತು ಮಾದಕವಸ್ತುಗಳ ದಾಸರನ್ನಾಗಿಸಿ ಅವರನ್ನು ಮಿಸ್ಸತ್ವಗೊಳ್ಳುವ ಪ್ರಯತ್ನದಲ್ಲಿ ತೊಡಗಿದೆ.
ಇದನ್ನೂ ಓದಿ: ಹೋರಾಟದ ನಿಧಿಗೆ ಉದಾರವಾಗಿ ಕಾಣಿಕೆ ನೀಡಿ.
ಜನಸಾಮಾನ್ಯರು ಏನೇ ಆದರೂ, ತಾವಾಗಿಯೇ ಒಗ್ಗೋಡಿ, ಜನ ಹೋರಾಟ ಸಮಿತಿಗಳನ್ನು ಕಟ್ಟಿಕೊಂಡು ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸುತ್ತಾ ಪ್ರಬಲ ಜನಾಂದೋಲನವನ್ನು ಬೆಳೆಸಬೇಕಿರುವುದು ಇಂದು ಅವಶ್ಯಕ. ಸರ್ವರಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ಘನತೆಯ ಬದುಕನ್ನು ಖಾತ್ರಿಪಡಿಸುವ ಸಮಾಜವಾಗಿ ವ್ಯವಸ್ಥೆಗಾಗಿ ಒಂದಾಗಿ ಹೋರಾಡಬೇಕಿದೆ. ಕಾಲಕಾಲಕ್ಕೆ ಸಾಮಾಜಿಕ ಅವಶ್ಯಕತೆಯನ್ನು ಪೂರೈಸಲು ಬುದ್ಧವಿರದೆ ಹಿಡಿದು ವಿದ್ಯಾಸಾಗರ್, ಭಗತ್ ಸಿಂಗ್, ತಾಜಿ ಅಂತಹ ಯುಗ ಪ್ರವರ್ತಕರು, ಸಮಾಜ ಸುಧಾರಕರು, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು, ಹೋರಾಟದ ಅಗತ್ಯಗಳ ಪೂರೈಕೆಗಾಗಿ ನೇರವಾಗಿ ಜನರ ಬಳಿಗೆ ಬಂದಿದ್ದು.
ಜನರ ತೊಡಗುವಿಕೆಗೆ ಅಗ್ರಹಿಸಿದ್ದು, ಸಮಾಜವನ್ನು ಬದಲಾಯಿಸಿದ್ದು, ನಮ್ಮ ಇತಿಹಾಸವಲ್ಲವೇ? ಆ ಮಾರ್ಗವೇ ಇಂದು ನಮಗೂ ಸಹ ಸ್ಪೂರ್ತಿ ಹಾಗೂ ದಾರಿ ದೀಪ! ನಮ್ಮ ಪಕ್ಷ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್), ತನ್ನ ಮುಂದಳಗಳಾದ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆಗ್ರನ ಸ್ಟೇಷನ್ (ಎಐಡಿಎಸ್ಓ), ಆಲ್ ಇಂಡಿಯಾ ಡೆಮೊಕ್ರಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ) ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್) ಗಳ ಜೊತೆಗೂಡಿ ಸಮಾಜದಲ್ಲಿ ತುಳಿತಕ್ಕೊಗಾಗಿರುವ ಎಲ್ಲಾ ಶೋಷಿತ ಜನತೆಯ ಕ್ರಾಂತಿಕಾರಿ ಹೋರಾಟಗಳನ್ನು ಕಟ್ಟುತ್ತಿದೆ. ತಾವು ಉದಾರವಾಗಿ ಕಾಣಿಕೆ ನೀಡಿ ಈ ಹೋರಾಟವನ್ನು ಬೆಂಬಲಿಸಬೇಕೆಂದು ಮನವಿ ಮಾಡುತ್ತೇವೆ.