‘ಅತಿ’ ಜಾಣನಿಗೆ ಬೇಕು ಕಡಿಬಾಣ

ಕೃತಕ ಬುದ್ಧಿಮತ್ತೆ ನಿಯಂತ್ರಣಕ್ಕೆ ನಡೆದಿರುವ ಜಾಗತಿಕ ಪ್ರಯತ್ನ ಫಡಿಸುವುದೇ?
‘ಅತಿ’ ಜಾಣನಿಗೆ ಬೇಕು ಕಡಿಬಾಣ

ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜನ್ಸ್ (ಎ.ಐ) ಈಗ ಮನೆಮಾತಾಗಿದೆ. ವಿಂಡೋಸ್‌ನಲ್ಲಿನ ಕೋಪೈ ಲಟ್, ಗೂಗಲ್ ತೆರೆದಾಕ್ಷಣ ಕಾಣುವ ಜೆಮಿನಿ, ವಾಟ್ಸ್ಅಪ್ ಜೊತೆ ಇರುವ ಮೆಟಾದಂಥ ಎ.ಐ. ಟೂಲ್‌ಗಳು ನಮ್ಮೆಲ್ಲರನ್ನೂ ಜಾದೂಗಾರ ರನ್ನಾಗಿಸಿವೆ. ಚಾಟ್‌ಜಿಪಿಟಿಯಿಂದ ಹಿಡಿದು ಡೀಪ್‌ಸೀಕ್‌ವರೆಗೂ ಹರಡಿರುವ ಸಾವಿರಾರು ಎ. ಐ.ಟೂಲ್‌ಗಳು ಅಂತರ್ಜಾಲದ ಬಳಕೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಈ ತಂತ್ರಜ್ಞಾನ ನಮಗೆಹಲವು ರೀತಿಯಲ್ಲಿಸಹಕಾರಿಯಾಗಿದ್ದರೂ ಇದರ ದುರ್ಬಳಕೆಯೂ ನಡೆಯುತ್ತಿದೆ.ಕೃತಕ ಬುದ್ಧಿಮತ್ತೆಯನ್ನು ಕೈಗಾರಿಕಾ ಕ್ರಾಂತಿಯ. ನಂತರ ಬಂದ ಆತಿ ಪರಿಣಾಮಕಾರಿ ತಂತ್ರಜ್ಞಾನ ಎಂದೇ ಬಣ್ಣಿಸಲಾಗುತ್ತಿದೆ. ಪದ್ಯ ರಚನೆಯಿಂದ ಹಿಡಿದು ಕ್ಲಿಷ್ಟಕರವಾದ ಗಣಿತದ ಲೆಕ್ಕಗಳನ್ನು ಬಿಡಿಸುವುದರ ಜೊತೆಗೆ, ಕಠಿಣ ವೈದ್ಯಕೀಯ ಮಾಹಿತಿಯನ್ನು ಸರಳೀಕರಿ ಸುವುದೂ ಸೇರಿದಂತೆ, ಬಣ್ಣಿಸಲಾಗದವೈವಿಧ್ಯಮಯ ಸಹಾಯಗಳನ್ನು ನಾವು ಎ.ಐನಿಂದ ಪಡೆದುಕೊಳ್ಳಲು ಸಾಧ್ಯ. ಇದರ ವ್ಯಾಪ್ತಿ ದಿನೇದಿನೇ ಹೆಚ್ಚುತ್ತಿದ್ದು ಇದು ಎಲ್ಲಿಗೆ ತಲುಪಬಹುದು ಎಂಬುದು ಊಹಿಸಲು ಕಷ್ಟಸಾಧ್ಯ.

ಮೊದಲನೆಯದಾಗಿ, ಎ.ಐ ಅನ್ನುನಿಯಂತ್ರಿಸುವ ಅಗತ್ಯವಿದೆಯೇ ಎಂಬ ಸವಾಲಿಗೆ ಒಂದು ಸರಳ ಉದಾಹರಣೆಯನ್ನು ನೀಡಬಹುದು. ವಿಶ್ವದ ಅತಿ ದುಬಾರಿ ಕಾರು ಎಂದು ಕರೆಸಿಕೊಳ್ಳುವ ರೋಲ್‌ರಾಯ್ಕನ ಹೊಸ ಕಾರಿಗೆ ಬ್ರೇಕ್ ಅಳವಡಿಸದೇ ಇದ್ದರೆ, ಎಷ್ಟೇ ನುರಿತ ಚಾಲಕನಾದರೂ ಅದನ್ನು ಚಾಲನೆ ಮಾಡಲು ಧೈರ್ಯ ತೋರುವರೇ?ಯಾವುದೇ ತಂತ್ರಜ್ಞಾನವಿರಲಿ, ಅದಕ್ಕೆ ಸಹಜವಾಗಿಯೇ ಎರಡು ಮಜಲುಗಳು ಇದ್ದೇ ಇರುತ್ತವೆ. ಉದಾಹರಣೆಗೆ, ಪರಮಾಣು ತಂತ್ರಜ್ಞಾನ. ಇದರಿಂದ ಅಗಾಧ ಪ್ರಮಾಣದ ಶಕ್ತಿ ಪಡೆಯ ಬಹುದಾದರೂ ಅಣ್ವಸ್ತ್ರಗಳ ತಯಾರಿಕೆ, ಈ ಪ್ರಕ್ರಿಯೆಯಲ್ಲಿ ಸೃಷ್ಟಿಯಾಗುವ ಅಸಮರ್ಪಕ ತ್ಯಾಜ್ಯ ವಿಲೇವಾರಿಯಂತಹ ಸವಾಲುಗಳನ್ನುನಿಯಂತ್ರಿಸಲು ಜಾಗತಿಕ ಮಟ್ಟದಲ್ಲಿ ಹಲವಾರು ಕಾನೂನುಗಳನ್ನು ರೂಪಿಸಲಾಗಿದೆ. ಹಾಗೆಯೇ ಎ .ಐ .ಮೇಲೆನಿಯಂತ್ರಣವಿಲ್ಲದೇ ಹೋದರೆ ಪರಿಣಾಮ ತುಂಬಾ ಭೀಕರವಾಗಲೂಬಹುದು. ಎ.ಐ. ತಂತ್ರಜ್ಞಾನದ ಸಂಭಾವ್ಯ ಅಪಾಯಗಳನ್ನು ಪಟ್ಟಿ ಮಾಡುವುದಾದರೆ, ರಕ್ಷಣೆಗಾಗಿ ಮಾಡಿದ ಎ.ಐ. ಟೂಲ್‌ಗಳುಸ್ವಯಂಚಾಲಿತವಾಗಿ ನಿರ್ಧಾರಗಳನ್ನು ತೆಗೆದುಕೊಂಡು, ನಾಗರಿಕರನ್ನೇ ಶತ್ರುಗಳೆಂದು ಭಾವಿಸಿ, ಅವರ ಮೇಲೆ ದಾಳಿ ಮಾಡಬಹುದು ಪೂರ್ವಗ್ರಹ ಪೀಡಿತವಾಗಿ ನೈಜ ಮಾಹಿತಿಯನ್ನು ನೀಡದೇ ಹೋಗಬಹುದು ಅಥವಾ ತಪ್ಪಾದ ಮಾಹಿತಿ ನೀಡಿ. ಅದರ ಆಧಾರದ ಮೇಲೆ ಕೈಗೊಂಡ ನಿರ್ಧಾರಗಳು ಮಾರಕವಾಗಬಹುದು.

ಇದನ್ನೂ ಓದಿ:ಹಣ ವರ್ಗಾವಣೆ: ಹೀಗಿದೆ ವಾಸ್ತವ

ಉದಾಹರಣೆಗೆ, ತಪ್ಪು ಚಿಕಿತ್ಸೆ ಮತ್ತು ಅದರಿಂದ ಆಗಬಹುದಾದ ಅನಾಹುತ ಇತ್ತೀಚೆಗೆ ನಾನು ಹುಟ್ಟುಹಬ್ಬಕ್ಕಾಗಿ ಕೆಲವು ಚಿತ್ರಗಳನ್ನು ಸೃಷ್ಟಿಸಲು ಎ.ಐ. ಟೂಲ್ ಬಳಿ ಕೇಳಿದೆ. ಅದು ಯಾರೋ ಒಬ್ಬರ ಚಿತ್ರವನ್ನು ಪ್ರಕಟಿಸಿತು. ಅದು ಅವರ ಅನುಮತಿ ಯನ್ನಂತೂ ಪಡೆದಿರುವ ಸಾಧ್ಯತೆ ಇಲ್ಲ. ಇಂಥ ಹಲವಾರು ಗೋಪ್ಯ ವಿಷಯಗಳನ್ನು ಹೊರಹಾಕಿ ಗೋಪ್ಯತೆಯ ಹಕ್ಕಿಗೆ ಧಕ್ಕೆ ತರಬಹುದು. ಯಾರೋ ಸೃಷಿಸಿದ ಬರಹ, ಚಿತ್ರ, ವಿಡಿಯೊಗಳನ್ನು ಬಳಸಿ, ಕೃತಿಸ್ವಾಮ್ಯದ ಮಾಲೀಕತ್ವದ ಹಕ್ಕನ್ನೂ ಉಲ್ಲಂಘಿಸಬಹುದು. ಸೈಬರ್ ದಾಳಿಯಂತಹ ವಿಧ್ವಂಸಕ ಕೃತ್ಯಗಳ ಮೂಲಕ ದೇಶದ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರಬಹುದು. ಇನ್ನು ಚುನಾವಣೆಗಳಲ್ಲಿ ಸಾಮಾಜಿಕ ಅಭಿಪ್ರಾಯವನ್ನು ಬದಲಿಸುವ ಸಾಮರ್ಥ್ಯವು ಒಂದು ದೇಶದ ಪ್ರಜಾಪ್ರಭುತ್ವ ವನ್ನೇ ಹಾಳುಮಾಡಬಲ್ಲದು. ರಶ್ಮಿಕಾ ಮಂದಣ್ಣ ಪ್ರಕರಣದಲ್ಲಿ ಆದಂತೆ ಡೀಪ್‌ಪ್ಲೇಕ್‌ನಂಥ ಸುಳ್ಳು ಚಿತ್ರ ಹಾಗೂ ವಿಡಿಯೊಗಳನ್ನು ಎ.ಐ. ಮೂಲಕ ಸೃಷ್ಟಿಸಿ, ಸಾಮಾಜಿಕ ಸ್ವಾಸ್ಥ್ಯವನ್ನು ಕದಡಬಹುದು. ಎರಡು ಕೋಮುಗಳ ನಡುವೆ ವೈರತ್ನವನ್ನು ಸಾರುವ ಸಾಧ್ಯತೆಯೂ ಇದೆ. ಇನ್ನು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಅದು ಅನೇಕ ಉದ್ಯೋಗಗಳನ್ನು ನಾಶ ಮಾಡುವ ಸಂಭವವಿದೆ. ಇದರಿಂದ ಉದ್ಯೋಗಹಾನಿ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಎ.ಐ.ನಲ್ಲಿ ಪಾರದರ್ಶಕತೆ ಇಲ್ಲದಿರುವುದು ಸಹ ಸಮಸ್ಯೆಯನ್ನುಸೃಷ್ಟಿಸಬಲ್ಲದು.

ಇದಲ್ಲದೆ ನೈತಿಕ ಮೌಲ್ಯ, ಬದ್ಧತೆಯಂತಹ ಹಲವಾರು ಪ್ರಶ್ನೆಗಳನ್ನು ಎ.ಐ. ಒಡ್ಡುತ್ತದೆ. ಎ.ಐ. ನೆರವಿನಿಂದ ಎಸಗುವ ಅಪರಾಧ ಕೃತ್ಯಗಳಿಗೆ ಯಾರನ್ನು ಹೊಣೆ ಮಾಡಬೇಕು ಎನ್ನುವುದು ಪ್ರಮುಖ ಸವಾಲು. ಎ.ಐ.ಕೋಡ್ ಬರೆದವರನ್ನೇ ಬಳಸಿದವರನ್ನೇ ಬಳಕೆಯಾದ ಉಪಕರಣದಮಾಲೀಕರನ್ನೇ? ನಿಯಂತ್ರಣ ವ್ಯವಸ್ಥೆ ಮಾತ್ರ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು. ಈ ದಿಸೆಯಲ್ಲಿ ಜಾಗತಿಕವಾಗಿಯೂ ಹಲವು ಪ್ರಯತ್ನಗಳು ನಡೆಯುತ್ತಿವೆ. 2023ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ‘ಎ.ಐ. ಸುರಕ್ಷತೆಯ ಶೃಂಗಸಭೆ’ ಮೊದಲನೆಯದು. ಫ್ರಾನ್ಸ್‌ನಲ್ಲಿ ಇತ್ತೀಚೆಗೆ ನಡೆದ ‘ಎ.ಐ. ಆ್ಯಕ್ಷನ್ ಶೃಂಗಸಭೆ’ ಯಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಯುರೋಪ್‌ನ ನಡೆಗಳು ಭಿನ್ನವಾಗಿರುವುದು ಅಮೆರಿಕವು ಎ.ಐ. ಮೇಲೆ ಯಾವುದೇ ನಿಯಂತ್ರಣ ಹೇರಲು ಬಯಸದೆ, ಅದು ಸ್ವತಂತ್ರವಾಗಿ ಅಭಿವೃದ್ಧಿ ಹೊಂದಬೇಕೆಂದು ಬಲವಾಗಿ ಪ್ರತಿಪಾದಿಸಿತು. ಆದರೆ, ಎ.ಐ.ಗೆ ಸಂಬಂಧಿಸಿದಂತೆ ವಿಶ್ವದ ಮೊದಲ ಕಾನೂನು ಎಂದು ಕರೆಯಲಾಗುವ ಐರೋಪ್ಯ ಒಕ್ಕೂಟ 2024ರಲ್ಲಿ ರೂಪಿಸಿದ ಕಾಯ್ದೆಯು ಈ ತಂತ್ರಜ್ಞಾನ ಒಡ್ಡುವ ಅಪಾಯಗಳನ್ನು ಆಧರಿಸಿ, ಅದನ್ನು ಸೃಷ್ಟಿಸುವ ತಂತ್ರಜ್ಞರ ಮೇಲೆ ಕೆಲವು ಕಟ್ಟುಪಾಡುಗಳನ್ನು ಹೇರಿದೆ.

ಇದು ಕೆಲವು ಬಗೆಯ ಎ.ಐ. ತಂತ್ರಜ್ಞಾನಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ಉದಾಹರಣೆಗೆ ಅಪರಾಧ ಕೃತ್ಯಕ್ಕೆ ಎ.ಐ. ಬಳಕೆ, ಎ.ಐ. ಮೂಲಕ ಬಯೊಮೆಟ್ರಿಕ್ ಉಪಯೋಗ ದಂತಹವು ಚೀನಾದಲ್ಲೂ ಕೆಲವು ಎ.ಐ. ಅಪ್ಲಿಕೇಷನ್ ಗಳ ಬಳಕೆಯ ಮೇಲೆ ನಿಯಂತ್ರಣ ಇದೆ. ಇವುಗಳಲ್ಲಿ, ಸಮ್ಮತಿ ಇಲ್ಲದೆ ಡೇಟಾ ಬಳಕೆ, ಎ.ಐ. ಸೃಷ್ಟಿಸಿದ ವಿಡಿಯೊ. ಚಿತ್ರಗಳ ಬಳಕೆಯ ನಿಷೇಧ ಪ್ರಮುಖವಾಗಿವೆ ಹೀಗೆಯೇ ಸಿಂಗಪುರ, ಜಪಾನ್ ಮತ್ತು ಇಂಗ್ಲೆಂಡ್ ಸಎ.ಐ .ಮೇಲಿನ ನಿಯಂತ್ರಣಕ್ಕೆ ಕಾಯ್ದೆಗಳನ್ನು ರೂಪಿಸಿವೆ.ಕೃತಕ ಬುದ್ಧಿಮತ್ತೆಯ ಸುರಕ್ಷಿತ ಮತ್ತು ಸಂಬಿಕಾರ್ಹ ಬಳಕೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ, ಎ.ಐ. ತಂತ್ರಜ್ಞಾನವು ಮಾನವ ಹಕ್ಕುಗಳನ್ನು ಗೌರವಿಸಬೇಕು. ರಕ್ಷಿಸಬೇಕು ಎಂಬ ಗೊತ್ತುವಳಿ `ಯನ್ನು 2024ರಲ್ಲಿ ಅಂಗೀಕರಿಸಿದೆ ಭಾರತದಲ್ಲಿ ಎ.ಐ.ನಿಂದ ಉಂಟಾಗುವ ತೊಂದರೆಗಳನ್ನು ಮಾನನಷ್ಟ ಮೊಕದ್ದಮೆ. ಗೋಪ್ಯತೆ, ಹಕ್ಕುಸ್ವಾಮ್ಯ ಉಲ್ಲಂಘನೆ. ಸೈಬರ್ ಅಪರಾಧದಂತಹ ವಿಷಯಗಳಿಗೆ ಸಂಬಂಧಿಸಿದ ಕಾನೂನುಗಳ ಮೂಲಕ ನಿಯಂತ್ರಿಸಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಬಳಸಿಯೂ ಎ.ಐ.ನ ದುರುಪಯೋಗ ತಡೆಗೆ ಪ್ರಯತ್ನಿಸಲಾಗುತ್ತಿದೆ ಆದರೂ ಈಗಿನ ಕಾನೂನುಗಳಿಂದ ಎ.ಐ. ಅನ್ನು ಸೂಕ್ತವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಇದಕ್ಕೆ ತನ್ನದೇ ಆದ ಕಾನೂನಿನ ಅಗತ್ಯ ಇದೆ.

ಜಗತ್ತಿನಲ್ಲಿ ಭಾರತವು ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿಹೊರಹೊಮ್ಮಿದ್ದು, ಅತಿ ಹೆಚ್ಚು ಯುವ ಸಮೂಹವನ್ನು ಒಳಗೊಂಡ ದೇಶವಾಗಿದೆ. ಇಲ್ಲಿ ಎ.ಐ. ತಂತ್ರಜ್ಞಾನದ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಹಾಗಾಗಿ, ಸರ್ಕಾರವು ಜವಾಬ್ದಾರಿಯುತವಾದ ಎ.ಐ. ತಂತ್ರಜ್ಞಾನವನ್ನು ಉತ್ತೇಜಿಸುತ್ತಿದೆ ಪ್ರತಿ ಎ.ಐ. ಸೃಷ್ಟಿಕರ್ತನೂ ಬಳಕೆದಾರನೂ ತನ್ನ ಚಟುವಟಿಕೆಯಿಂದ ಸಮಾಜ ಅಥವಾ ವ್ಯಕ್ತಿಗಳಿಗೆ ಹಾನಿಯಾಗದಂತೆ ಅದನ್ನು ಬಳಸುವುದನ್ನು ರೂಢಿಸಿಕೊಂಡರೆ, ಮನುಕುಲಕ್ಕೆ ಎ.ಐ.ನಿಂದ ಅನುಕೂಲವಾಗಲಿದೆ ಎಂಬ ನಂಬಿಕೆಯನ್ನು ಸರ್ಕಾರ ಹೊಂದಿದೆ. ಈ ದಿಸೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜನ್ಸ್ ಸೇಪ್ಪಿ ಇನ್ ಸ್ಟಿಟ್ಯೂಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಯೋಜಿಸಿದೆ. ಇಂಡಿಯಾಎಐ ಮಿಷನ್ ಎಂಬ ಸಂಸ್ಥೆಯ ಮೂಲಕ ಎ.ಐ. ಬೆಳವಣಿಗೆಗೆ ಸಹಾಯ ಮಾಡುತ್ತಿದೆ. ಎ.ಐ. ಕ್ಷೇತ್ರದಲ್ಲಿ ಆಮೆರಿಕ, ಚೀನಾದಂತಹ ಪ್ರಬಲ ದೇಶಗಳ ನಡುವೆ ನಡೆಯುತ್ತಿರುವ ತೀವ್ರ ಪೈಪೋಟಿ, ಇದರ ನಿಯಂತ್ರಣಕ್ಕೆ ವಿಶ್ವ ಮಟ್ಟದಲ್ಲಿ ಯಾವುದೇ ಒಪ್ಪಂದಗಳು ಇಲ್ಲದೇ ಇರುವುದು ಅಪಾಯದ ಮುನ್ಸೂಚನೆಯನ್ನು ನೀಡುತ್ತಿವೆ. ಎ.ಐ ತಂತ್ರಜ್ಞಾನದ ಉಸಿರು ಕಟ್ಟಿಸದೆ, ದುರುಪಯೋಗ ತಡೆಯಲು ತುರ್ತಾಗಿ ಮೂಗುದಾರ ಹಾಕಬೇಕಾದ ಅಗತ್ಯ ಇದೆ. ಈ ದಿಸೆಯಲ್ಲಿ ವಿವಿಧ ದೇಶಗಳು ಮತ್ತು ವಿಶ್ವಸಂಸ್ಥೆ ಮುಂದೆ ಬಂದಾವೇ?

Leave a Comment