ಅನುದಾನ ಸ್ಥಗಿತದ ಬೆದರಿಕೆ ರಾಜಕಾರಣಕ್ಕೆ ಭಾಷೆಯ ಬಳಕೆ ಬೇಡ
ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರದ ನಡುವೆ ಉಂಟಾಗಿರುವ ಸಂಘರ್ಷವು ಭಾಷಾ ರಾಜಕೀಯ ಒಕ್ಕೂಟ ವ್ಯವಸ್ಥೆಯಲ್ಲಿ ಹಾಳಾಗಿರುವ ಸಂಬಂಧ ನೀತಿಯ ಅನು ಅನುಷ್ಠಾನವು ಲೋಪಗಳಿಂದ ಕೂಡಿರುವುದು ಹಾಗೂ ಅಧಿಕಾರವನ್ನು ಅನುಮಾನಾ ಸ್ಪದವಾಗಿ ಬೆಳಗ್ಗೆ ಮಾಡುತ್ತಿರುವುದರ ಎಲ್ಲ ಲಕ್ಷಣಗಳನ್ನೂ ಹೊಂದಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಹಾಗೂ ತ್ರಿಭಾಷಾ ಸೂತ್ರವನ್ನು ತಮಿಳುನಾಡು ಸರ್ಕಾರವು ಅನುಷ್ಠಾನಕ್ಕೆ ತೆರೆದೇ ಇದ್ದರೆ ಸಮಗ್ರ ಶಿಕ್ಷಣ ಅಭಿಯಾನದ ( ಎಸ್ ಎಸ್ ಎ ) ಅಡಿಯಲ್ಲಿ ಕೊಡಲಾಗುವ ಅನುದಾನವನ್ನು ನಿರಾಕರಿಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿರುವುದು ಅಧಿಕಾರವನ್ನು ಮನಸ್ಸಿಗೆ ಬಂದಂತೆ ಬಳಸುವುದಕ್ಕೆ ಹಾಗೂ ಸೊಕ್ಕಿನಿಂದ ವರ್ತಿಸುವುದಕ್ಕೆ ನಿದರ್ಶನ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನ್ ಅವರ ಮಾತನ್ನು ‘ಬ್ಲಾಕ್ಮೇಲ್ನ ಒರಟು ರೂಪ’ ಎಂದು ಕರೆದಿದ್ದಾರೆ. ತಮಿಳು ರಾಜಕೀಯ ಪಕ್ಷಗಳು, ಅಲ್ಲಿನ ವಿವಿಧ ಸಂಘಟನೆಗಳು ಹಾಗೂ ಶಿಕ್ಷಕರ ಒಕ್ಕೂಟಗಳು ಸ್ಟಾಲಿನ್ ಅವರನ್ನು ಬೆಂಬಲಿಸಿವೆ. ಇಲ್ಲಿ ಹೇಳಿರುವ ಅನುದಾನದ ಮೊತ್ತವು ₹2,150 ಕೋಟಿಯಷ್ಟಿದೆ. ಇದೇ ಆಧಾರದಲ್ಲಿ ಅನುದಾನದ ನಿರಾಕರಣೆ ಆಗುವ ಅಪಾಯವು ತಮಿಳುನಾಡು ಮಾತ್ರವೇ ಅಲ್ಲದೆ ಕೇರಳ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರವನ್ನೂ ಕಾಡಿದೆ. ಎನ್ಇಪಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು, ತ್ರಿಭಾಷಾ ಸೂತ್ರವನ್ನೂ ಜಾರಿಗೆ ತರಬೇಕು ಎಂದು ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.
ತ್ರಿಭಾಷಾ ಸೂತ್ರವನ್ನು ತಮಿಳುನಾಡು ವಿರೋಧಿ ಸುತ್ತಾ ಬಂದಿದೆ, ಅದನ್ನು ಆ ರಾಜ್ಯವು ಅನುಷ್ಠಾನಕ್ಕೆ ತಂದಿಲ್ಲ. ಈ ಸೂತ್ರವು ದಕ್ಷಿಣದ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವ ಅಸ್ತ್ರ ಎಂಬಂತೆ ಕಾಣಲಾಗಿದೆ. ಅದರಲ್ಲೂ ಮುಖ್ಯವಾಗಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಆಡಳಿತ ಇರುವಾಗ ಈ ಸೂತ್ರವನ್ನು ಈ ಬಗೆಯ ಅಸ್ತ್ರವಾಗಿ ಬಳಸಲಾಗುತ್ತದೆ ಎಂಬಂತೆ ಕಾಣಲಾಗಿದೆ. ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ರಾಜಕೀಯ ಮಾಡುತ್ತಿದೆ ಎಂದು ಪ್ರಧಾನ್ ಹೇಳಿದ್ದಾರೆ. ಆದರೆ ಹಿಂದಿಗೆ ಉತ್ತೇಜನ ನೀಡುವುದು ಬಿಜೆಪಿಯ ರಾಜಕಾರಣದ ಭಾಗವೂ ಹೌದು. ಈ ಬಗೆಯ ಹಿಂದಿ ಉತ್ತೇಜನವು ಬಹುತೇಕ ಸಂದರ್ಭಗಳಲ್ಲಿ ಭಾಷೆಯ ಒತ್ತಾಯದ ಹೇರಿಕೆ ಆಗುತ್ತದೆ. ಶಿಕ್ಷಣವು ಸಮವರ್ತಿ ಪಟ್ಟಿ ಯಲ್ಲಿ ಇರುವ ಕಾರಣಕ್ಕೆ, ಅದಕ್ಕೆ ಸಂಬಂಧಿಸಿದ ವಿಚಾರ ಗಳಲ್ಲಿ ತೀರ್ಮಾನ ಕೈಗೊಳ್ಳುವ ನ್ಯಾಯಸಮ್ಮತವಾದ ಹಕ್ಕು ರಾಜ್ಯ ಸರ್ಕಾರಗಳಿಗೂ ಇರುತ್ತದೆ. ಶಿಕ್ಷಣದಲ್ಲಿ ಏನಿರಬೇಕು, ಏನನ್ನು ಕಲಿಸಬೇಕು ಎಂಬುದನ್ನು ಕೇಂದ್ರ ಸರ್ಕಾರವೇ ತೀರ್ಮಾನಿಸುವುದಾದರೆ ರಾಜ್ಯ ಸರ್ಕಾರಗಳಿಗೆ ಅವುಗಳ ಹಕ್ಕುಗಳನ್ನು ನಿರಾಕರಿಸಿ ದಂತಾಗುತ್ತದೆ. ಭಾಷೆಯು ಬಹಳ ಸೂಕ್ಷ್ಮವಾದ ವಿಚಾರ, ಅದನ್ನು ಸೂಕ್ಷ್ಮವಾಗಿಯೇ ನಿಭಾಯಿಸಬೇಕು.
ಎನ್ಇಪಿಯು ಹಿಂದಿಯನ್ನು ತ್ರಿಭಾಷಾ ಸೂತ್ರದ ಭಾಗವಾಗಿ ಸೂಚಿಸುವುದಿಲ್ಲ. ಆದರೆ ಈ ಸೂತ್ರವನ್ನು ವಾಸ್ತವದಲ್ಲಿ ಕ್ರಿಯಾರೂಪಕ್ಕೆ ತರುವಾಗ ಅದು ಬಹುತೇಕ ಶಾಲೆಗಳಲ್ಲಿ ಹಿಂದಿಯನ್ನು ತೃತೀಯ ಭಾಷೆಯನ್ನಾಗಿ ಕಲಿಸುವುದಕ್ಕೆ ದಾರಿ ಮಾಡಿಕೊಡಬಹುದು. ತಮಿಳುನಾಡಿನಲ್ಲಿ ಹಿಂದಿನಿಂದಲೂ ದ್ವಿಭಾಷಾ ಸೂತ್ರ ಜಾರಿಯಲ್ಲಿದೆ. ಅಲ್ಲಿ ಬಲವಂತದ ಕ್ರಮಗಳ ಮೂಲಕ ಕೇಂದ್ರ ಸರ್ಕಾರದ ನೀತಿಯನ್ನು ಜಾರಿಗೆ ತರುವುದು ತಪ್ಪಾಗುತ್ತದೆ. ರಾಜ್ಯ ಸರ್ಕಾರವೊಂದು ಭಾಷಾ ಸೂತ್ರವನ್ನು ಅನುಷ್ಠಾನಕ್ಕೆ ತಂದಿಲ್ಲ ಎಂಬ ಕಾರಣ ನೀಡಿ ಅನುದಾನ ತಡೆಹಿಡಿಯುವ ಅಧಿಕಾರವು ಕೇಂದ್ರದ ಸಚಿವರಿಗೆ ಇಲ್ಲ. ತ್ರಿಭಾಷಾ ಸೂತ್ರವು ಸಂವಿಧಾನದಲ್ಲಿ ಇಲ್ಲ.
ಈ ಸೂತ್ರವನ್ನು ಯಾವುದೇ ಶಾಸನದಲ್ಲಿಯೂ ಅಡಕವಾಗಿಸಿಲ್ಲ, ಯಾವುದೇ ಶಾಸನವು ಈ ಸೂತ್ರವನ್ನು ಕಡ್ಡಾಯ ಮಾಡಿಲ್ಲ. ಇದು ಕೇಂದ್ರ ಸರ್ಕಾರ ರೂಪಿಸಿದ ಒಂದು ಸೂತ್ರ. ಈ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿದ ಮಾತ್ರಕ್ಕೆ ಕಾನೂನನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ. ಹಾಗಾಗಿ, ಅದಕ್ಕೆ ದಂಡ ತೆರಬೇಕಾದ ಅಗತ್ಯವೂ ಇರುವುದಿಲ್ಲ. ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯಗಳು ಪರಸ್ಪರ ಗೌರವಿಸಬೇಕು, ಎರಡೂ ಸರ್ಕಾರಗಳು ಒಂದಿಷ್ಟು ಹೊಂದಾಣಿಕೆಗಳಿಗೆ ಸಿದ್ಧವಿರಬೇಕು. ಒಂದು ಇನ್ನೊಂದರ ನಿಲುವನ್ನು ಗೌರವಿಸಬೇಕು. ಕೇಂದ್ರ ಸರ್ಕಾರವನ್ನು ಮುನ್ನಡೆಸು ತಿರುವ ರಾಜಕೀಯ ಪಕ್ಷದ ರಾಜಕಾರಣವನ್ನು ಮುಂದಕ್ಕೆ ಒಯ್ಯುವ ಅಸ್ತ್ರವನ್ನಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಬಳಕೆ ಮಾಡಬಾರದು. ಎಸ್ಎಸ್ಎಯನ್ನು ರೂಪಿಸಿದ್ದು ಶಿಕ್ಷಣದ ಲಭ್ಯತೆ ಹಾಗೂ ಕಲಿಕಾ ಮಟ್ಟವನ್ನು ಸುಧಾರಿಸುವ ಉದ್ದೇಶದಿಂದ. ಈ ಕಾರ್ಯಕ್ರಮಕ್ಕೂ ಹಿಂದಿ ಭಾಷೆಗೂ ಸಂಬಂಧ ಇಲ್ಲ. ಅದನ್ನು ಯಾವುದೇ ಭಾಷೆಯ ಜೊತೆ ಬೆಸೆಯುವ ಕೆಲಸ ಮಾಡಬಾರದು.