ಎಎಪಿ ಸೋಲನ್ನು ಸಂಭ್ರಮಿಸಲಾಗದು

ಎಎಪಿ ಸೋಲನ್ನು ಸಂಭ್ರಮಿಸಲಾಗದು

‘ಈಗ ನೀವು ಮುಕ್ತವಾಗಿ ಮಾತನಾಡಬಹುದು’ ಎಂದು ಸುದ್ದಿವಾಹಿನಿಯೊಂದರ ನಿರೂಪಕರು ನನ್ನನ್ನು ಪ್ರಚೋದಿಸಿದರು. ಎಎಪಿ ಇನ್ನೇನು ಅಧಿಕಾರಕ್ಕೆ ಬಂತು ಎಂದಾಗ ಆ ಪಕ್ಷ ತೊರೆದ ನಾಯಕರ ಸಾಲಿಗೆ ನನ್ನನ್ನೂ ಸೇರಿಸಲು ಯತ್ನಿಸಿದರು. ಎಎಪಿಯ ಸೋಲನ್ನು ಸಂಭ್ರಮಿಸುವ ರೀತಿಯಲ್ಲಿ ಕುಮಾ‌ರ್ ವಿಶ್ವಾಸ್ ಅಥವಾ ಸ್ವಾತಿ ಮಲಿವಾಲ್ ಅವರು ನೀಡಿರುವ ಸಂದೇಶಗಳು ಎಎಪಿ ತೊರೆದವರ ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿವೆ. ಈ ಕುರಿತು ಮರುಕಪಡಬೇಕು ಅಷ್ಟೇ, ಇಂತಹುದರ ಭಾಗವಾಗುವ ಮನಃಸ್ಥಿತಿಯಲ್ಲಿ ನಾನಿಲ್ಲ.

ಒಂದು ದಶಕದ ಹಿಂದೆ, ಎಎಪಿಯವರು ನಮ್ಮ ಕುರಿತು ಆಡಿದ್ದ ಮಾತುಗಳು ಮತ್ತು ಮಾಡಿದ್ದ ಅವಮಾನವನ್ನು ಮರೆತಿದ್ದೇನೆ ಎಂದಲ್ಲ. ದೆಹಲಿಯಲ್ಲಿ ಬಿಜೆಪಿಯ ಗೆಲುವು ಮತ್ತು ಎಎಪಿಯ ಸೋಲಿನಲ್ಲಿ ಇರುವ ಹೆಚ್ಚು ಗಂಭೀರ ವಿಚಾರಗಳನ್ನು ನನ್ನ ವೈಯಕ್ತಿಕ ಅನುಭವವು ಮರೆಮಾಚುವಂತೆ ಅಗಬಾರದು. ಇದು ನನ್ನ ಕುರಿತು ಅಥವಾ ಅಮ್ ಆದಿ ಪಕ್ಷದ ಕುರಿತು ಅಥವಾ ಅದರ ನಾಯಕರ ಕುರಿತು ಅಲ್ಲ. ಇಲ್ಲಿ ಮುಖ್ಯವಾಗುವುದು ‘ಆಮ್ ಆದಿ’ (ಸಾಮಾನ್ಯ ಜನ).

ಈ ಚುನಾವಣೆಯ ಫಲಿತಾಂಶವು ಎಎಪಿಯ ಒಂದು ದಶಕದ ಅಳ್ವಿಕೆಯ ಕುರಿತ ಜನಮತಗಣನೆ. ಜನರು ಸ್ಪಷ್ಟ ವಾಗಿ ಎಎಪಿಯನ್ನು ತಿರಸ್ಕರಿಸುವ ತೀರ್ಪು ನೀಡಿದ್ದಾರೆ. ಈ ತೀರ್ಪಿನ ಪ್ರಯೋಜನ ಬಿಜೆಪಿಗೆ ದೊರೆಯಿತು ಅಷ್ಟೇ, ಯಾವ ಕ್ರಮಗಳನ್ನು ಕೈಗೊಂಡಿದ್ದರೆ ಈಗಿನ ಪರಿಸ್ಥಿತಿ ಯನ್ನು ತಿರುವು ಮುರುವು ಮಾಡಬಹುದಿತ್ತು ಎಂದು ಈಗ ಊಹಿಸುವುದು ಕಷ್ಟ, ಬಿಜೆಪಿ ನಾಯಕತ್ವದ ಕುರಿತು ಭ್ರಷ್ಟಾಚಾರದ ಆರೋಪಗಳು ಕೇಳಿಬಂದರೆ ಸಮೂಹ ಮಾಧ್ಯಮಗಳು ಅವುಗಳಿಗೆ ಪ್ರಚಾರ ನೀಡದೆ ಮುಚ್ಚಿಹಾಕಲು ಯತ್ನಿಸುತ್ತವೆ. ಎಎಪಿ ನಾಯಕತ್ವದ ಕುರಿತು ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳನ್ನು ಹೀಗೆಯೇ ಮಾಡಿದ್ದರೆ ಅದರಿಂದ ಎಎಪಿಗೆ ಅನುಕೂಲ ಆಗಬಹುದಿತ್ತು.

ಇದನ್ನೂ ಓದಿ:ಜನಗಣತಿಗೆ ಬಜೆಟ್‌ನಲ್ಲಿ ಅಲ್ಪ ಮೊತ್ತ ಅನುಮಾನ ಮೂಡಿಸಿದ ಕೇಂದ್ರದ ನಡೆ

ಕೇಂದ್ರದ ಬಜೆಟ್ ಮಂಡನೆಗಿಂತ ಮೊದಲೇ ಮತದಾನ ನಡೆಯುವಂತೆ ಚುನಾವಣಾ ಆಯೋಗವು ನೋಡಿಕೊಂಡಿದ್ದರೆ ಅಥವಾ ತಾನು ಭರವಸೆ ನೀಡಿದಂತೆ, ಬಜೆಟ್‌ನ ಘೋಷಣೆಗಳು ಮತದಾರರ ಮೇಲೆ ಪ್ರಭಾವ ಬೀರದಂತೆ ನೋಡಿಕೊಂಡಿ ದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು. ಮಹಿಳೆಯರಿಗೆ ನಗದು ವರ್ಗಾವಣೆ ಯೋಜನೆಯನ್ನು ಜಾರಿ ಮಾಡಲು ವಿಎಪಿ ನೇತೃತ್ವದ ಸರ್ಕಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಅನುವು ಮಾಡಿಕೊಟ್ಟಿದ್ದರೆ ಫಲಿತಾಂಶ ಬದಲಾಗಬಹುದಿತ್ತು.ಎಎಪಿ ಮತ್ತು ಕಾಂಗ್ರೆಸ್ ‘ ಮೈತ್ರಿ ಮಾಡಿಕೊಳ್ಳದೇ ಇದ್ದರೂ ಚುನಾವಣಾ ಹೊಂದಾಣಿಕೆಮಾಡಿಕೊಂಡಿದ್ದರೂ ಆಗುತ್ತಿತ್ತು. ಇದರಲ್ಲಿ ಯಾವುದೇ ಒಂದು ಸಾಕಾರಗೊಂಡಿದ್ದರೂ ಶೇ 2ರಷ್ಟು ಮತಗಳು ಎಎಪಿಗೆ ಬೀಳುತ್ತಿದ್ದವು. ಅದಾಗಿದ್ದರೆ ಫಲಿತಾಂಶ ಬೇರೆಯೇ ಆಗುತ್ತಿತ್ತು.

ಹೀಗಿದ್ದರೂ ಅಡಳಿತವಿರೋಧಿ ಅಲೆ ಬಲವಾಗಿಯೇ
ಇತ್ತು ಎಂಬುದನ್ನು ಅಲ್ಲಗಳೆಯಲು ಆಗದು, ಅಭಿವೃದ್ಧಿ, ರಸ್ತೆಗಳು, ಸ್ವಚ್ಛತೆ, ಒಳಚರಂಡಿ ಮತ್ತು ಕುಡಿಯುವ ನೀರಿನ ವಿಚಾರಗಳಲ್ಲಿ ಜನ ಭ್ರಮನಿರಸನಗೊಂಡಿದ್ದರು ಎಂದುಸಿಎಸ್‌ಡಿಎಸ್‌-ಲೋಕನೀತಿ ಸಮೀಕ್ಷೆಯು ಹೇಳಿದೆ. ಹಾಗೆಯೇ ಕೇಬ್ರಿವಾಲ್‌ ಅವರ ಜನಪ್ರಿಯತೆಯು ಎಎಪಿಯ ಮತ ಪ್ರಮಾಣಕ್ಕಿಂತ ಕಡಿಮೆ ಇದೆ. ಆಘಾತಕಾರಿ ವಿಚಾರ ವೆಂದರೆ, ಭ್ರಷ್ಟಾಚಾರವನ್ನು ವಿರೋಧಿಸುತ್ತಲೇ ಮುಂಚೂ ಣಿಗೆ ಬಂದ ಎಎಪಿ ನೇತೃತ್ವದ ಸರ್ಕಾರವು ‘ಪೂರ್ಣವಾಗಿ’ ಅಥವಾ ‘ಒಂದು ಮಟ್ಟಿಗೆ’ ಭ್ರಷ್ಟವಾಗಿದೆ ಎಂದು ದೆಹಲಿಯ ಮೂರನೇ ಎರಡರಷ್ಟು ಜನ ಭಾವಿಸಿದ್ದಾರೆ. ಎವಿಪಿಗೆ ಮತ ಹಾಕಿರುವ ಹೆಚ್ಚಿನವರಿಗೆ ಬೇರೊಂದು ಅಯ್ಕೆ ಇದ್ದಿದ್ದರೆ, ಬಿಜೆಪಿ ವಿಶ್ವಾಸಾರ್ಹ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರೆ ಅಥವಾ ಕಾಂಗ್ರೆಸ್ ಪಕ್ಷವು ಇನ್ನಷ್ಟು ಬಲವಾಗಿ ಇದ್ದಿದ್ದರೆ ಎಎಪಿಯ ವಿರುದ್ಧ ಇನ್ನೂ ಸ್ಪಷ್ಟವಾದ ಫಲಿತಾಂಶವೇ ಬರುತ್ತಿತ್ತು.

ಸಾಂವಿಧಾನಿಕ ಪ್ರಜಾಸತ್ತೆಯ ಪರವಾಗಿ ಇರುವವರಿಗೆ ಚಿಂತಿಸಲು ಮತ್ತು ಆತ್ಮಾವಲೋಕನಕ್ಕೆ ಇಲ್ಲಿ ಕಾರಣ ಇದೆ. ನಿಜ ಹೇಳಬೇಕು ಎಂದರೆ, ರಾಜಕಾರಣವನ್ನು ಬದಲಿಸುವ ಉದ್ದೇಶದಿಂದ ಬಂದ ಪಕ್ಷವು ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ರಾಜಕೀಯ ಆಟದ ನಿಯಮಗಳನ್ನು ಒಪ್ಪಿಕೊಂಡಿತ್ತು. ವ್ಯಕ್ತಿ ಆರಾಧನೆ, ಒಬ್ಬ ವ್ಯಕ್ತಿಯ ಕೈಯಲ್ಲೇ ಅಧಿಕಾರ ಕೇಂದ್ರೀಕರಣ, ನಾಯಕರ ಸುತ್ತಲಿನ ಕೂಟದಿಂದ ನಿಗೂಢ ಕಾರ್ಯಾಚರಣೆಗಳು, ಸಿನಿಕತನದ ದ್ವಿಮುಖ ನೀತಿ, ಸಾಮಾನ್ಯ ಕಾರ್ಯಕರ್ತನ ಕುರಿತು ಅಸಡ್ಡೆ… ಹೀಗೆ ಎಎಪಿ ಇತರ ಪಕ್ಷಗಳಿಗಿಂತ ಭಿನ್ನವೇನೂ ಅಲ್ಲ ಎಂಬುದನ್ನು ಸಾಬೀತುಪಡಿಸಲಾಗಿದೆ. ಮುಖ್ಯಮಂತ್ರಿ ಯವರ ‘ಶೀಷ್ ಮಹಲ್’ ಹಗರಣವನ್ನು ಪ್ರತಿಕೂಲ ಮಾಧ್ಯಮವು ಉತ್ತೇಕ್ಷ ಮಾಡಿತು. ಆದರೆ, ಗಾಂಧಿ ಮಾರ್ಗ ವನ್ನು ಅನುಸರಿಸುವುದಾಗಿ ಎಎಪಿ ನಾಯಕತ್ವವು ಹೇಳಿ ಕೊಳ್ಳುತ್ತಿದ್ದರೂ ನಡವಳಿಕೆ ಅದಕ್ಕೆ ವ್ಯತಿರಿಕ್ತವಾಗಿರುವುದು ಮಾಧ್ಯಮದ ಉಪ್ಪೇಕ್ಷೆಗೆ ಕಾರಣವಾಗಿರಬಹುದು.

ಅಬಕಾರಿ ಹಗರಣದಲ್ಲಿ ಎಎಪಿ ನಾಯಕರು ದೋಷಿಗಳು ಎಂದು ನ್ಯಾಯಾಲಯವು ಹೇಳದೇ ಇರಬಹುದು. ಈ ಹಗರಣವು ಬರೇ ಕಲ್ಪನೆಯಂತೂ ಅಲ್ಲ ಹಾಗೂ ಇದರಿಂದಾಗಿ ಎಎಪಿಗೆ ಇದ್ದ ನೈತಿಕ ಮೇಲುಗೈ ಕಳೆದುಹೋಯಿತು. ಈ ಎಲ್ಲಕ್ಕಿಂತಲೂ ಕೆಟ್ಟದಾಗಿ ನಡೆದ ಕೆಲವು ಬೆಳವಣಿಗೆಗಳೂ ಇವೆ- ದೆಹಲಿ ಗಲಭೆ ಸಂದರ್ಭದಲ್ಲಿ ಎಎಪಿ ನೇತೃತ್ವದ ಸರ್ಕಾರ ಏನನ್ನೂ ಮಾತನಾಡಲಿಲ್ಲ; ಬುಲ್ಲೋಜರ್ ಕಾರ್ಯಾಚರಣೆಯಲ್ಲಿ ಎಎಪಿ ಸಹಭಾಗಿಯಾಯಿತು; ರೋಹಿಂಗ್ಯ ಸಮುದಾಯದ ಅಸಹಾಯಕ ಮುಸ್ಲಿಮರ ಬೆನ್ನಟ್ಟುವಿಕೆ ಕಾರ್ಯಾಚರಣೆ ಯಲ್ಲಿ ಸಕ್ರಿಯವಾಗಿಯೇ ಭಾಗಿಯಾಯಿತು. ಗಳೂ ಬಿಜೆಪಿಯ ಹಿಂದೂ ಬಹುಸಂಖ್ಯಾತವಾದವನ್ನು ಈ ಎಲ್ಲ ನಡೆ ಹಿಂದಿಕ್ಕಿ ತಾನು ಮುಂದೆ ಹೋಗಲು ಕೈಗೊಂಡ ಪ್ರಜ್ಞಾ ಪೂರ್ವಕ ರಾಜಕೀಯ ತಂತ್ರಗಳಾಗಿದ್ದವು.


ಎಎಪಿ ಹೇಳಿಕೊಳ್ಳುತ್ತಿರುವ ‘ದೆಹಲಿಮಾದರಿ’ಯಶಸ್ವಿಯಾಗಿದೆ ಎಂಬುದು ನನಗೇನು ಮನದಾಟ್ಟಾಗಿಲ್ಲ. ಸಾರ್ವಜನಿಕ ಶಿಕ್ಷಣದ ವ್ಯವಸ್ಥೆಯನ್ನು ಎಎಪಿ ನೇತೃತ್ವದ ಸರ್ಕಾರವು ರಾಜಕೀಯ ಮುನ್ನೆಲೆಗೆ ತಂದು ನಿಲ್ಲಿಸಿದೆ.ಸರ್ಕಾರಿ ಶಾಲೆಗಳ ಮೂಲಸೌಕರ್ಯವನ್ನು ಉತ್ತಮ ಪಡಿಸಿದೆ. ಆದರೆ, ಗುಣಮಟ್ಟಕ್ಕೆ ಸಂಬಂಧಿಸಿ ಬಾರಿ ಸಾಧನೆಯಾಗಿದೆ ಎಂಬುದು ಚರ್ಚಾಹ ಮೋಹ ಲ್ಲಾ ಕ್ಲಿನಿಕ್ ಸ್ಥಾಪನೆ ಒಳ್ಳೆಯ ಚಿಂತನೆ . ಅಂದರೆ ಅನುಷ್ಠಾನವುನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಉಚಿತ ವಿದ್ಯುತ್. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಗಳು ಬಡವರ ಕಲ್ಯಾಣಕ್ಕೆ ಆದ್ಯತೆ ಕೊಟ್ಟವು. ಆದರೆ, ಇಷ್ಟೇ ಮೊತ್ತವನ್ನು ಖರ್ಚು ಮಾಡಿ ಬಡವರ ಜೀವನಮಟ್ಟ ಸುಧಾರಣೆಯ ದೀರ್ಘಾವಧಿ ಕಾರ್ಯಕ್ರಮಗಳನ್ನು ಜಾರಿ ಮಾಡಬಹುದಿತ್ತು. ಇದನ್ನು ಬಿಟ್ಟರೆ, ನಗರ ಮೂಲಸೌಕರ್ಯ, ದೆಹಲಿ ಹೊರವಲಯದ ಪರಿಸ್ಥಿತಿ, ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ಮತ್ತು ವಾಯುಮಾಲಿನ್ಯ ಪರಿಸ್ಥಿತಿಯ ಸುಧಾರಣೆಗೆ ದೆಹಲಿ ಮಾದರಿ ಮಾಡಿದ್ದು ಬಹಳವೇನೂ ಇಲ್ಲ.

ವಿಶ್ವ ದರ್ಜೆಯ ನಗರ ಮತ್ತು ಇತರ ಕಾರ್ಯಸೂಚಿ ಯೊಂದಿಗೆ ಬಂದಿರುವ ಬಿಜೆಪಿ, ದೆಹಲಿಯ ನಿಜವಾದ ಬಹುಸಂಖ್ಯಾತರನ್ನು ಅಗೋಚರಗೊಳಿಸುತ್ತದೆ. ಕಪಿಲ್ ಮಿಶ್ರಾಮತ್ತು ರವೀಂದರ್ ನೇಗಿ ಅವರಂತಹವರ ಗೆಲುವು ಮತಾಂಧತೆಗೆ ಮನ್ನಣೆ ನೀಡುತ್ತದೆ. ರಾಜಕೀಯವಾಗಿ ಸಂಪೂರ್ಣ ಪಾರಮ್ಯ ಬೇಕು ಎಂಬ ಬಿಜೆಪಿಯ ಪ್ರಯತ್ನ ವನ್ನು ದೆಹಲಿಯಲ್ಲಿನ ಗೆಲುವು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಒಯ್ಯುತ್ತದೆ ಎಂಬುದು ಕೂಡ ನನ್ನ ಚಿಂತೆಗೆ ಕಾರಣವಾಗಿದೆ. ದೆಹಲಿ ಸರ್ಕಾರದ ಮೇಲೆ ಕೇಂದ್ರವು ನೇಮಿಸಿದ್ದ ಲೆಫ್ಟಿನೆಂಟ್ ಗವರ್ನರ್ ಒಂದು ದಶಕ ನಡೆಸಿದ ನ್ಯಾಯಸಮ್ಮತವಲ್ಲದ ಹಸ್ತಕ್ಷೇಪಕ್ಕೆ ಬಿಜೆಪಿಯ ಗೆಲುವು ಮಾನ್ಯತೆ ನೀಡುತ್ತದೆ. ಚುನಾವಣಾ ಆಯೋಗದ ಪಕ್ಷಪಾತಿ ಧೋರಣೆ ಮತ್ತು ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳ ಸನ್ನಿವೇಶ ದೊರೆಯುತ್ತಿಲ್ಲ ಎಂಬುದನ್ನೆಲ್ಲ ಬದಿಗೆ ಸರಿಸುತ್ತದೆ.

ಎಎಪಿ ಎಂಬ ಪ್ರಯೋಗದ ಸೋಲು ಮುಂದಿನ ದಿನಗಳಲ್ಲಿ ಪರ್ಯಾಯ ರಾಜಕೀಯ ಕಟ್ಟುವ ಪ್ರಯತ್ನ ಗಳನ್ನು ನಿರುತ್ಸಾಹಗೊಳಿಸುತ್ತದೆ ಎಂಬುದು ಚಿಂತೆಯ ಇನ್ನೊಂದು ವಿಚಾರವಾಗಿದೆ. ದೆಹಲಿಯಲ್ಲಿ ಮತ್ತು ದೇಶದಲ್ಲಿ ನಿಜವಾಗಿಯೂ ಜನಪರವಾದ ಹಾಗೂ ಧರ್ಮ ನಿರಪೇಕ್ಷ ರಾಜಕಾರಣವು ಸೃಷ್ಟಿಯಾಗಲು ಎಎಪಿಗೊಂದು ಪಾಠ ಕಲಿಸಬೇಕಾಗಿದ್ದ ಅಗತ್ಯ ಇತ್ತು ಎಂಬುದು ನಿಜ. ಎಎಪಿ ತನ್ನ ಸ್ಥಾನವನ್ನು ಬಿಟ್ಟುಕೊಟ್ಟರೆ, ದೆಹಲಿಯಲ್ಲಿರುವ ದೊಡ್ಡ ಪ್ರಮಾಣದ ಶೋಷಿತ ವರ್ಗವು ತನ್ನ ರಾಜಕೀಯ ಧ್ವನಿಗಾಗಿ ಪರ್ಯಾಯವನ್ನು ಹುಡುಕಾಡಬೇಕಾಗುತ್ತದೆ. ವಾಸ್ತವದಲ್ಲಿ, ಅರ್ಥಪೂರ್ಣವಾದ ಪರ್ಯಾಯವೊಂದು ಹುಟ್ಟಿಕೊಳ್ಳುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಅಲ್ಲಿಯವರೆಗೆ, ಪ್ರಾಮಾಣಿಕ ರಾಜಕೀಯ ಮಾಡುತ್ತೇವೆ ಎಂದು ಯಾರಾದರೂ ಹೇಳಿದರೆ ಜನ ನಗುತ್ತಾರೆ. ಈ ಕಾರಣಕ್ಕಾಗಿಯೇ ನನಗೆ ಬೇಸರವಾಗಿದೆ ಮತ್ತು ನೀವು ಕೂಡ ಬೇಸರ ಮಾಡಿಕೊಳ್ಳಬೇಕಿದೆ.

Leave a Comment