ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ?

ಎತ್ತ ಸಾಗುತ್ತಿದೆ ನಾಗರಿಕ ಪ್ರಜ್ಞೆ?

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ನುಡಿ ಮಹೋನ್ನತಿಯ ಕುರಿತು ಹೇಳಿದ ಮಾತಿದು. ಮಾತು ವ್ಯಕ್ತಿತ್ವದ ಪ್ರತಿಬಿಂಬ. ವ್ಯಕ್ತಿ ಬೆಳೆದು ಬಂದ ಸಾಮಾಜೋ-ಆರ್ಥಿಕ ಪರಿಸರ, ನಂಬಿಕೊಂಡು ಬಂದಿರುವ ಸಿದ್ದಾಂತ ಮತ್ತು ಅವರಿಗೆ ದಕ್ಕಿದ ಸಂಸ್ಕಾರದಿಂದ ಮಾತುಗಳು ಒಡಮೂಡುತ್ತವೆ. ಆದ್ದರಿಂದಲೇ ಅವು ಮನಸ್ಸಿನ ಕನ್ನಡಿಗಳು.

ಬಸವಣ್ಣನವರ ಕೂಡಲಸಂಗಯ್ಯನಲ್ಲಿ ‘ಆಸೆ ಅಮಿಷಾದಿ ನೀಚ ಗುಣಗಳೇ ನಮ್ಮ ನಾಲಿಗೆಯನ್ನು ನಿರ್ವಹಿಸುತ್ತವೆ. ಅದ್ದರಿಂದ ಆ ಎಲ್ಲಾ ದುಷ್ಟ ಗುಣಗಳನ್ನು ನನ್ನ ಮನಸ್ಸಿನಿಂದ ತೆಗೆದು ಹಾಕಬೇಕು’ಎಂದು ಸಂಗಯ್ಯನಲ್ಲಿ ಅರ್ಥಾತ್ ತಮ್ಮ ಆತ್ಮಸಾಕ್ಷಿಗೆ ಮೊರೆ ಹೋಗುತ್ತಾರೆ. ಮನಸ್ಸಿನಲ್ಲಿರುವ ಕುಟಿಲ, ಕುಹಕ ಭಾವನೆಗಳು ಲಯವಾದರೆ ಆಡುವ ಮಾತು ತನ್ನಷ್ಟಕ್ಕೆ ಮೌಲಿಕವಾಗುತ್ತದೆ. ಇಲ್ಲವಾದರೆ ಯತ ಭಾವ ತಥಾ ಭಾಷೆ. ಇದನ್ನು ನಮ್ಮ ರಾಜಕೀಯ ನಾಯಕರು ಸದನಗಳಲ್ಲಿ ತೋರ್ಪಡಿಸುತ್ತಿದ್ದಾರೆ.

ಕರ್ನಾಟಕ ಮೇಲ್ಮ ನೆ ಸದಸ್ಯರೊಬ್ಬರು ಸಚಿವೆಯೊಬ್ಬರನ್ನು ಉದ್ದೇಶಿಸಿ ಆಡಿದರು ಎನ್ನಲಾದ ಮಾತುಗಳು ಈಗ ವಿವಾದಕ್ಕೆ ಕಾರಣವಾಗಿವೆ. ಸಾರ್ವಜನಿಕ ತಳದಲ್ಲಿ ಜನಸಾಮಾನ್ಯರು ಸಹ ಆಡಲು ಹಿಂದೆ ಮುಂದೆ ನೋಡುವಂತಹ ಪದಗಳನ್ನು ಶಾಸಕರೊಬ್ಬರು ತಮ್ಮ ಸಹೋದ್ಯೋಗಿಗೆ ಸ್ವಲ್ಪವೂ ಅಳಕ್ಕಿಲ್ಲದೆ ಬಳಸುತ್ತಾರೆ, ಅದೂ ಚಿಂತಕರ ಚಾವಡಿ ಎಂದು ಖ್ಯಾತಿವೆತ್ತ ಮೇಲ್ಮನೆಯಲ್ಲಿ ಎನ್ನುವುದು ನಿಜವೇ ಆಗಿದ್ದರೆ, ಸಮಕಾಲಿನ ರಾಜಕಾರಣ ಆದಷ್ಟು ಪ್ರಪಾತಕ್ಕೆ ಕುಸಿದಿದೆ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ:- ಔಷದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’

ಮಹಿಳೆಯರು ರಾಜಕೀಯದಲ್ಲಿ ಸ್ವಲ್ಪವೇ ಮೇಲೆರುತ್ತಿದ್ದಾರೆ ಎನಿಸಿದರೆ ಸಾಕು, ಪುರುಷ ಸಂಗಾತಿಗಳು ಮೊದಲು ಆಕೆಯ ಚರಿತ್ರ್ಯಹರಣ ಮಾಡಲು ಮುಂದಾಗುತ್ತಾರೆ. ಲಿಂಗ ಸಂವೇದನೆಯುಳ್ಳ ಕೆಲವು ಪಕ್ಷಗಳ ಸದಸ್ಯರನ್ನು ಹೊರತುಪಡಿಸಿದರೆ ಬಹುತೇಕ ಪಕ್ಷಗಳ ಅನೇಕರು ಮಹಿಳೆಯರ ಕುರಿತು ಅವಾಚ್ಯವಾಗಿ ಮಾತನಾಡುತ್ತಾರೆ.
ನಾವು ಕೆಲವು ಗೆಳತಿಯರು ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆವು. ನಮ್ಮ ಮುಂದೆ ಕುಳಿತಿದ್ದ ಪಡ್ಡೆ ಹುಡುಗರಿಬ್ಬರು ಪರಸ್ಪರ ಬೈದಾಡುತ್ತ, ತಾಯಿ, ಅಕ್ಕ ,ತಂಗಿ, ಪದಗಳನ್ನು ಬಳಸಿ ತೀರ ಅಸಪಭ್ಯವಾಗಿ ಮಾತನಾಡುತ್ತಿದ್ದರು. ತಕ್ಷಣ ಜಾಗೃತರಾದ ನಾವು ಅವರನ್ನು ಹಿಡಿದು ತರಾಟೆಗೆ ತೆಗೆದುಕೊಂಡೆವು. ಉದ್ಧಟನೊಬ್ಬ ತಿರುಗಿ ಬಿದ್ದು ನಮ್ಮವ್ವ ನಮ್ಮ ಅಕ್ಕ ತಂಗಿಯರಿಗಿ ನಾವು ಬೈತೀವಿ. ನಾವೇನು ನಿಮಗ್ ಬೈದಿವೇನ್ರಿ’ಎಂದು ಎದೆಸೆಟೆಸಿ ನಿಂತ. ಇದರಿಂದ ಕನಲಿದ ನಾವು ‘ಏ ಮೂರ್ಖ, ಯಾವುದೇ ಮಹಿಳೆಯರಿಗೆ ಖಾಸಗಿಯಾಗಿ ಅಥವಾ ಸಾಮಾಜನಿಕವಾಗಿ ಹೀಗೆ ಬೈಯುವಂತಿಲ್ಲ. ಕೌಟುಂಬಿಕ ದೌಜನ್ಯ ತಡೆ ಕಾಯ್ದೆಅಡಿ ಒದ್ದು ಒಳಹಾಕ ಬೇಕಾಗುತ್ತದೆ ನೋಡು’ಎಂದು ದಬಾಯಿಸಿದೊಡನೆ ಆತ ತಾನು ಬಳಸಿದ ಅಸಭ್ಯ ಪದಗಳಿಗೆ ನಾಚಿಕೆಪಟ್ಟು ಕ್ಷಮೆ ಕೇಳಿದ. ಜೊತೆಗೆ, ಇನ್ನೆಂದೂ ಹೀಗೆ ಮಹಿಳೆಯರನ್ನು ಆವಾಚ್ಯವಾಗಿ ಭೈಯುವುದಿಲ್ಲ ಎಂದು ಭರವಸೆ ನೀಡಿದ. ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಆ ಹುಡುಗರಿಗೆ ವೀಮಾರಿ ಹಾಕಿದರು. ಅಲ್ಲಿದ್ದ ಎಲ್ಲರಲ್ಲಿಯೂ ನಾಗರಿಕ ಪ್ರಜ್ಞೆಯಿಂದ ಜಾಗೃತವಾಗಿತ್ತು. ಹೀಗೆ ಎಲ್ಲರೂ ನಮ್ಮೊಂದಿಗೆ ಧ್ವನಿಗೂಡಿಸಿದ್ದರಿಂದಲೇ ಆ ಹುಡುಗರಿಗೆ ತಾವು ತಪ್ಪು ಮಾಡಿದ್ದೇವೆ ಎನಿಸಿತು.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಪಡ್ಡೆ ಹುಡುಗರು ಮಹಿಳೆಯರ ಕುರಿತು ಬಳಸುತ್ತಿರುವ ಭಾಷೆ ಆದೆಷ್ಟು ಅಸಭ್ಯಾ ಮತ್ತು ಅಪಾಯಕಾರಿಯಾಗಿದೆ ಎಂದರೆ ,ಇದೀಗ ಯಾರ ಮನೆಯ ಮಹಿಳೆಯರೂ ಸುರಕ್ಷಿತವಾಗಿಲ್ಲ ಎಂದೇ ಹೇಳಬೇಕಾಗುತ್ತದೆ. ಕೋಮ ದ್ವೇಷದ ದಳ್ಳುರಿಯು ದೇಶದ ಆತ್ಮಪ್ರಜ್ಞೆಯನ್ನು ಸರ್ವನಾಶ ಮಾಡಿದೆ. ಅಸಭ್ಯ,ವಿಕೃತ ಭಾಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆ. ತಮ್ಮನ್ನು ಹಾಗೂ ತಮ್ಮ ನಾಯಕರನ್ನು ಅತ್ಯಂತ ಸಮರ್ಥರು ಎಂದು ಬಿಂಬಿಸಿಕೊಳ್ಳುತ್ತಿರುವ ಈ ಫೇಸ್ ಬುಕ್ ಶೂರಾರು ,ಮಹಿಳೆಯರ ಬಗೆಗಿನ ತಮ್ಮ ವಿಕೃತ ಲೈಂಗಿಕ ಚಟಗಳನ್ನು ತೀರಿಸಿಕೊಳ್ಳುತ್ತಿದ್ದಾರೆ. ಪದೇ ಪದೇ ನಡೆಯುತ್ತಿರುವ ಇಂತಹ ಪ್ರಕರಣಗಳು ದೇಶದ ಯುವಕರನ್ನು ವಿಕೃತಿ ಮರೆಯಲು ದಾರಿ ಮಾಡಿಕೊಳ್ಳುತ್ತಿವೆ. ಸಮಸ್ಯೆ ಹುಡುಗರನ್ನು ಕಾನೂನಿನ ಭಯದಿಂದ ನಿಯಂತ್ರಿಸಬಹುದು. ಆದರೆ ಶಾಸನಗಳನ್ನು ರೂಪಿಸಬೇಕಾದ ನಾಯಕರೇ ತೊಪೆದ್ದು ಹೋಗಿರುವುದಾಗ ಇಂಥ ದುಷ್ಟರನ್ನು ಯಾವ ಕಾನೂನು ಏನು ಮಾಡಿತು?  ದೇಶ ಈಗ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಜನರ ಸಂಸ್ಕೃತಿಕ ಮಟ್ಟ ಪಾತಾಳಕ್ಕೆ ಕುಸಿರಿದೆ. ನಗಾರಿಕಾ ಪ್ರಜ್ಞೆ ನಿರ್ನಾಮವಾಗಿದೆ. ಜೈಲಿನಲ್ಲಿ ಇರಬೇಕಾದ ಗೊಂಡಗಳು, ಅತ್ಯಾಚಾರ ಆರೋಪ ಹೊತ್ತವರು, ರಾಷ್ಟ್ರಧ್ರೋಹಿಗಳು ಶಾಸನಸಭೆಯಲ್ಲಿ ಕುಳಿತಿದ್ದಾರೆ. ಅವರುನ್ನು ನಿಯಂತ್ರಿಸುವುದು ಅಷ್ಟು ಸುಲಭವೇ? ಅನೇಕ ಮೌಲಿಕ ರಾಜಕಾರಣಿಗಳು ಇವರ ನಡುವೆ ಮೂಲೆಗುಂಪಾಗುತ್ತಿದ್ದಾರೆ .ಭಾಷೆಯು ಸಮಕಾಲಿನ ರಾಜಕಾರಣದಲ್ಲಿ ದುರ್ಬಳಕೆಯಾಗುತ್ತಿರುವಷ್ಟು ಇನ್ನೆಲೆಯೂ ಆಗುತ್ತಿಲ್ಲ. ಹೀಗೆ ದುರ್ಬಳಕೆ ಮಾಡಿಕೊಳ್ಳುವವರು ಈಗ ಅಪಾಯದ ಹತಂಕವನ್ನು ಮೀರಿದ್ದಾರೆ. ದೇಶದ ನುಡಿಗೆ ಸೂತಕ ಸುತ್ತುವರಿದಿದೆ.

Leave a Comment