ಏಳು ರಾಜ್ಯಗಳಲ್ಲಿ ಉಪಕ್ರಮ | ರಾಜ್ಯದ 26 ಜಿಲ್ಲೆಗಳು ಆಯ್ಕೆ

ಏಳು ರಾಜ್ಯಗಳಲ್ಲಿ ಉಪಕ್ರಮ | ರಾಜ್ಯದ 26 ಜಿಲ್ಲೆಗಳು ಆಯ್ಕೆ

ಖಾದ್ಯ ತೈಲ ಸ್ವಾವಲಂಬನೆಗೆ ಮಹತ್ವದ ಹೆಜ್ಜೆ

ಮೃತ್ಯುಂಜಯ ಕಪಗಲ್ ಬೆಂಗಳೂರು ರಾಷ್ಟ್ರೀಯ ಖಾದ್ಯ ತೈಲ ಅಭಿಯಾನದಡಿ ಎಣ್ಣೆಕಾಳುಗಳ ಉತ್ಪಾದಕತೆ ಸಾಕಷ್ಟು ಸುಧಾರಿಸಿರುವ ನಡುವೆಯೇ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಿಸಲು ಕರ್ನಾಟಕ ಸೇರಿ ಏಳು ರಾಜ್ಯಗಳಲ್ಲಿ ವಿಶೇಷ ಉಪಕ್ರಮ ಆಯೋಗ ಶಿಫಾರಸು ಮಾಡಿದೆ. ಈ ಅಭಿಯಾನದಡಿ ರಾಜ್ಯದ 26 ಜಿಲ್ಲೆಗಳು ಆಯ್ಕೆಯಾಗಿದ್ದು, ವಿವಿಧ ಚಟುವಟಿಕೆಗಳಿಗೆ ಸಹಾಯಧನ ಲಭ್ಯವಾಗಲಿದೆ. ಏನೆಲ್ಲ ಉಪಕ್ರಮ?: ಬಿತ್ತನೆ ಬೀಜ ವಿತರಣೆ, ಸಮಗ್ರ ಪೋಷಕಾಂಶ, ಸಮಗ್ರ ಪೀಡೆ ನಿರ್ವಹಣೆ, ಬಿತ್ತನೆ ಬೀಜ ಸಹಾಯಧನ, ತಾಂತ್ರಿಕತೆ ಸುಧಾರಣೆ, ಸಸ್ಯ ಸಂರಕ್ಷಣೆ, ಮಣ್ಣಿನ ಫಲವತ್ತತೆ, ಕ್ಷೇತ್ರ ವಿಸ್ತರಣೆ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಆಯಾ ಆರ್ಥಿಕ ವರ್ಷಕ್ಕೆ ವಿವಿಧ ವಿಭಾಗಗಳಿಗೆ ಘಟಕ ಮತ್ತು ಫಲಾನುಭವಿವಾರು ತಗಲುವ ವೆಚ್ಚ ಆಧರಿಸಿ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ.

ಪ್ರಸಕ್ತ ವರ್ಷಕ್ಕೆ ಪರಿಕರಗಳು, ನೀರಾವರಿ ಸಾಧನ, ಪ್ರಾತ್ಯಕ್ಷಿಕೆ, ಬೀಜ ಸಹಾಯಧನ ಸೌಲಭ್ಯ ಒದಗಿಸಲಾಗುತ್ತದೆ. ಸೋಯಾ, ಶೇಂಗಾ, ಸೂರ್ಯಕಾಂತಿ, ಔಡಲ, ಅಗಸೆ, ತಾಳೆ, ಕೊಬ್ಬರಿ, ಸಾಸಿವೆ, ರೈಸ್‌ಬ್ರಾನ್ ಮತ್ತಿತರ ಎಣ್ಣೆಕಾಳುಗಳಿಗೆ 2,500 ರೂ. ರಿಂದ 4000 ರೂ. ವರೆಗೆ ಸಹಾಯಧನ ಸೌಲಭ್ಯ ನೀಡಲಾಗುತ್ತಿದೆ. ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ.40 ಪಾಲು ಭರಿಸಲಿವೆ. ಅನುಕೂಲಕರ ಹವಾಮಾನ, ಎಣ್ಣೆಕಾಳುಗಳ ಉತ್ಪಾದನೆಗೆ ಬೆಂಬಲ, ಅಭಿವೃದ್ಧಿ ನೀತಿಯಿಂದಾಗಿ ಪ್ರತಿ ಹೆಕ್ಟೇರ್ ಗೆ 2023-24ರಲ್ಲಿ 1368 ಕೆಜಿಗಳಷ್ಟಾಗಿದೆ. ಹಿಂದಿನ ಆರ್ಥಿಕ ವರ್ಷ (2022-23) ಪ್ರತಿ ಹೆಕ್ಟೇರ್‌ಗೆ 1,314 ಕೆಜಿ ಉತ್ಪಾದನೆಯಾಗಿದೆ.
ಉತ್ಪಾದಕತೆ ಹೆಚ್ಚಳ ಗುರಿ: ಎಣ್ಣೆ ಕಾಳುಗಳನ್ನು ಬೆಳೆಯುವ ಪ್ರಮುಖ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ ಹಾಗೂ ಹರ್ಯಾಣ ರಾಜ್ಯಗಳಲ್ಲಿ ಪ್ರೋತ್ಸಾಹಕ ಕ್ರಮ ಕೈಗೊಂಡರೆ ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಲು ಸಾಧ್ಯವೆಂದು ಆಯೋಗದ ವರದಿ ತಿಳಿಸಿದೆ.

ಇದನ್ನೂ ಓದಿ: ಭಗವಂತನ ನಾನಾ ರೂಪಗಳನ್ನು ಬಲ್ಲವರಾರು?

ಸಂಶೋಧನೆ ಮತ್ತು ಅಭಿವೃದ್ಧಿ, ಮಣ್ಣಿನ ಫಲವತ್ತತೆ ಸಂರಕ್ಷಣೆ, ಸಕಾಲಕ್ಕೆ ಬೀಜ, ಗೊಬ್ಬರ ಬೆಳೆ ಪೂರೈಕೆ, ರೈತರಿಗೆ ಸೂಕ್ತ ಮಾಹಿತಿ, ಮಾರುಕಟ್ಟೆ ಹಾಗೂ ಲಕರ ಬೆಲೆ ಖಾತರಿ, ದಾಸ್ತಾನು ವ್ಯವಸ್ಥೆ, ಮೌಲ್ಯವರ್ಧನೆ, ಒಳ ಹೆಚ್ಚು ಇಳುವರಿ ನೀಡುವ ತಳಿಗಳ ಅಭಿವೃದ್ಧಿ, ಮಾರುಕಟ್ಟೆ ಕೌಶಲ ಮುಂತಾದವುಗಳು ಎಣ್ಣೆಕಾಳು ಸೂ ಬೆಳೆಗಾರರಲ್ಲಿ ಆತ್ಮವಿಶ್ವಾಸ ವೃದ್ಧಿಸಿ ಬದುಕಿಗೆ ನೆಮ್ಮದಿ ಸಾ ತಂದುಕೊಡುತ್ತವೆ ಎಂದು ತಿಳಿಸಿದೆ.

ದೇಶದಲ್ಲಿ ಮುಂದಿನ ಐದು ವರ್ಷಗಳಲ್ಲಿ (2030) 9 ಪ್ರಮುಖ ಎಣ್ಣೆಕಾಳುಗಳ ಉತ್ಪಾದನೆ ಪ್ರಮಾಣ ಕ್ರಮ 43.2 ದಶಲಕ್ಷ ಟನ್, 2047ರ ವೇಳೆಗೆ 53.7 ದಶಲಕ್ಷ ಟನ್‌ಗೆ ತಲುಪುವ ಅಂದಾಜಿದೆ. ಇದಕ್ಕೆ ಪೂರಕವಾಗಿ ನೀತಿ ಆಯೋಗ ಶಿಫಾರಸು ಮಾಡಿದೆ.
ಆಯಾ ಜಿಲ್ಲೆಗೆ ಅನುಗುಣವಾಗಿ ಸಮಗ್ರ ಕ್ಲಸ್ಟರ್, ನಿರ್ದಿಷ್ಟ ಬೆಳೆಗೆ ತಕ್ಕಂತೆ ಕೃಷಿ-ಪರಿಸರ ಉಪ ಪ್ರದೇಶ ರಚನೆ, ಮುಂದುವರಿದ ತಂತ್ರಜ್ಞಾನ ಬಳಕೆ, ಆರ್ಥಿಕವಾಗಿ ಕಾರ್ಯ ಸಾಧುವಾದ ಎಣ್ಣೆಕಾಳು ಬೆಳೆ ಬೆಳೆಯಲು ರೈತರಿಗೆ ಉತ್ತೇಜನ, ಬೀಜಗ್ರಾಮದಡಿ ಅಗತ್ಯ ನೆರವು, ಐಸಿಎಆರ್ ಗುರುತಿಸಿದ ಜಿಲ್ಲೆಗಳಲ್ಲಿ ಒಟ್ಟು 6.18 ದಶಲಕ್ಷ ಹೆಕ್ಟೇರ್ ಸಾಗುವಳಿ ಜಮೀನು ಪಾಳುಬಿದ್ದಿದೆ. ಬೀಳು ಜಮೀನಿನಲ್ಲಿ ಶೇಂಗಾ, ಸೂರ್ಯಕಾಂತಿ, ಕುಸುಬೆ, ಔಡಲ, ಎಳ್ಳು, ಸಾಸಿವೆ, ಸೋಯಾ, ಸಾಸಿವೆ ಮುಂತಾದ ಬೆಳೆಗಳ ಪೈಕಿ ಯಾವುದು ಹೊಂದಿಕೆಯಾಗುತ್ತದೆ ಎಂದು ಪರಿಶೋಧಿಸಿ, ಅಂತಹ ತಳಿ ಎಣ್ಣೆಬೀಜಗಳ ಪೂರೈಕೆಗೆ ಕ್ರಮ, ಪಾಳುಬಿದ್ದ ಜಮೀನಿನಲ್ಲಿ ಎಣ್ಣೆಕಾಳುಗಳನ್ನು ಬೆಳೆಸುವ ನಿಟ್ಟಿನಲ್ಲಿ ರೈತ ಉತ್ಪಾದಕ ಸಂಘಟನೆಗಳು ಹಾಗೂ ಸ್ತ್ರೀಶಕ್ತಿ ಸ್ವಹಾಯ ಗುಂಪುಗಳ ಬಲವನ್ನು ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ.

Leave a Comment