ಒತ್ತಡ, ಆತಂಕಗಳ ಸಮರ ಭೂಮಿಯಿಂದಾಚೆಗೆ ವಿದ್ಯಾರ್ಥಿಗಳು
ಪ್ರಕೃತಿ ತನ್ನ ಅಪರಿಮಿತ ಜ್ಞಾನದಲ್ಲಿ ಪ್ರತಿಯೊಬ್ಬರಿಗೂ ವಿಶಿಷ್ಟ ಗುರುತು ನೀಡಿದೆ. ಬೆರಳಚ್ಚುಗಳಿಂದ ಕಣ್ಣುಗುಡ್ಡೆವರೆಗೆ, ಗ್ರಹಿಕೆಗಳಿಂದ ಆಲೋಚನೆವರೆಗೆ, ಪ್ರತಿಭೆಯಿಂದ ಸಾಧನೆವರೆಗೆ ಪ್ರತಿಯೊಬ್ಬರೂ ವಿಶಿಷ್ಟ, ಮನುಷ್ಯರ ಅನನ್ಯತೆ ಬಗೆಗಿನ ಈ ಅದ್ಭುತ ಸತ್ಯ ನಮ್ಮ ಸಮಾಜದ ವಿಶಿಷ್ಟ ಲಕ್ಷಣ. ನಮ್ಮ ಶಿಕ್ಷಣ ವ್ಯವಸ್ಥೆಯೂ ಈ ಅನನ್ಯತೆಯನ್ನು ಪ್ರತಿಬಿಂಬಿಸಬೇಕು. ಪ್ರತಿ ಮಗುವಿಗೆ ಕೆಲವು ಸಹಜ ಪ್ರತಿಭೆಗಳು ಇರುತ್ತವೆ; ಕೆಲವರು ಶೈಕ್ಷಣಿಕ ತೇಜಸ್ವಿನಿಂದ ಹೊಳೆಯುತ್ತಾರೆ. ಕೆಲವರು ಸೃಜನಶೀಲತೆ ಹೊಂದಿರುತ್ತಾರೆ. ಇನ್ನು ಕೆಲವರು ಅಥ್ಲೆಟಿಕ್ ನಲ್ಲಿ ಪಾರಮ್ಯ ಮತ್ತು ವೃತ್ತಿಪರ ಕುಶಾಗ್ರಮತಿ ಹೊಂದಿರುತ್ತಾರೆ. ‘ಶಿಕ್ಷಣವು ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಅಭಿವ್ಯಕ್ತಿ’ ಎಂಬ ಸ್ವಾಮಿ ವಿವೇಕಾನಂದರ ಮಾತುಗಳು ಈ ವಿಶಿಷ್ಟತೆಯ ಪ್ರತಿಬಿಂಬ.
ಮಕ್ಕಳ ಸಹಜ ಪ್ರತಿಭೆ ಹೊರತರುವುದು, ಅವರ ಆಯ್ಕೆಯ ಶೈಕ್ಷಣಿಕ-ಪತ್ಯೇತರ ಚಟುವಟಿಕೆಗಳಲ್ಲಿ ಸೃಜನಶೀಲವಾಗಿ ತೊಡಗಿಸುವುದು ಈಗ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ದೊಡ್ಡ ಸವಾಲು. ಮಗುವಿನ ವಿಶಿಷ್ಟ ಪ್ರತಿಭೆಯನ್ನು ಪೋಷಿಸುವುದು ಶಿಕ್ಷಣತಜ್ಞರು, ನೀತಿನಿರೂಪಕರ ಪಾತ್ರ. ಮಗುವಿನ ಆಯ್ಕೆಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗೆ ಅನುವು ಮಾಡಿಕೊಡಲು ಇದರಿಂದ ಸಾಧ್ಯವಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ಪ್ರತಿಭೆಯನ್ನು ವ್ಯಾಖ್ಯಾನಿಸುವ ಮತ್ತು ಪೋಷಿಸುವ ರೀತಿಯಲ್ಲಿ ಮಾದರಿ ಬದಲಾವಣೆ ತಂದಿದೆ. ಇದು ದೇಶದ ಪ್ರಗತಿಗೆ ಕೊಡುಗೆ ನೀಡುವ ಪ್ರತಿಯೊಂದು ಮಗುವಿನಲ್ಲಿರುವ ವೈಶಿಷ್ಟ್ಯವನ್ನು ವಿವರಿಸುವ ತಾತ್ವಿಕ ಚೌಕಟ್ಟಾಗಿದೆ. ಮಗುವಿನ ಶೈಕ್ಷಣಿಕ ಪ್ರಯಾಣ ರೋಮಾಂಚನಕಾರಿ ಮತ್ತು ಸ್ಮರಣೀಯವಾಗಿರಬೇಕು. ಅಧ್ಯಯನ ಮತ್ತು ಪರೀಕ್ಷೆ ಸಮಯದಲ್ಲಿ ಒತ್ತಡ-ಆತಂಕದಿಂದ ದೂರವಿರಬೇಕು. ಇದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಾವು ಶಿಕ್ಷಣದಲ್ಲಿ ಆರೋಗ್ಯಕರ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದೇವೆ.
ಕೆಲವು ವರ್ಷಗಳ ಹಿಂದೆ, ಪುಟ್ಟ ಮಕ್ಕಳಿಗೆ ಬಾಲವಾಟಿಕಾ ಅಥವಾ ಆಟಿಕೆ ಆಧಾರಿತ ಕಲಿಕೆ ವ್ಯಾಪಕ ಸಂದೇಹಗಳಿಗೆ ಕಾರಣವಾಗಿತ್ತು. ಇಂದು, ಎನ್ ಇಪಿಯಿಂದಾಗಿ ಈ ನವೀನ ವಿಧಾನಗಳು ಆರಂಭಿಕ ಶಿಕ್ಷಣದಲ್ಲಿ ಕ್ರಾಂತಿ ಮಾಡುತ್ತಿವೆ. ಕಲಿಕೆಯನ್ನು ಸಂತೋಷದಾಯಕವಾಗಿಸುತ್ತಿವೆ.
ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅನ್ನು ಸ್ಥಾಪಿಸುವ ನಮ್ಮ ಕ್ರೆಡಿಟ್ ವರ್ಗಾವಣೆ ನೀತಿಯು ಮತ್ತೊಂದು ವಿನೂತನ ಹೆಜ್ಜೆ. ಜೀವನದ ಮಾರ್ಗವು ಯಾವಾಗಲೂ ನೇರವಾಗಿರದೆ ಅಂಕುಡೊಂಕಾಗಿ ಮತ್ತು ಕಲಿಕೆಯು ವಿಭಿನ್ನ ಸಂದರ್ಭಗಳಲ್ಲಿ ಮತ್ತು ವಿಭಿನ್ನ ವೇಗಗಳಲ್ಲಿ ಇರಬಹುದೆಂದು ಅದು ಗುರುತಿಸುತ್ತದೆ. ಇಷ್ಟದ ಆಸಕ್ತಿಯನ್ನು ಅನುಸರಿಸಲು, ಪ್ರಾಯೋಗಿಕ ಅನುಭವ ಪಡೆಯಲು ಅಥವಾ ತಮ್ಮ ಕುಟುಂಬಗಳಿಗೆ ನೆರವಾಗಲು ಕಲಿಯುವವರು ಔಪಚಾರಿಕ ಶಿಕ್ಷಣವನ್ನು ಮಧ್ಯದಲ್ಲಿಯೇ ನಿಲ್ಲಿಸಬಹುದು. ಅವರು ಔಪಚಾರಿಕ ಶಿಕ್ಷಣಕ್ಕೆ ಹಿಂದಿರುಗಿದಾಗ,ಒತ್ತಡ ಉಂಟುಮಾಡುವ ಪರೀಕ್ಷಾ ಆತಂಕ ಹೋಗಲಾಡಿಸಲು ಪ್ರಧಾನಿ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದಾರೆ.
ಇದನ್ನೂ ಓದಿ:ಪ್ರಯಾಣಿಕರ ಹಿತ ಕಾಪಾಡಿ
ಪ್ರಧಾನಿಯ ಸ್ವಂತ ಜೀವನ ಮತ್ತು ಅನುಭವಗಳಿಂದ ಪಡೆದ ಪ್ರಾಯೋಗಿಕ ಸಲಹೆಗಳು ಪರೀಕ್ಷಾರ್ಥಿಗಳಿಗೆ ಮೆಚ್ಚುಗೆಯಾಗಿವೆ. ತೊಂದರೆರಹಿತ, ಒತ್ತಡರಹಿತ ಪರೀಕ್ಷೆಯ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಿವೆ. ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವು ಮಾನಸಿಕ ಆರೋಗ್ಯ ಮತ್ತು ಬೆಂಬಲ ಕಲಿಕೆಯ ಪರಿಸರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವಲ್ಲಿ ಮಹತ್ವದ್ದಾಗಿದೆ. 10ನೇ 12ನೇ ತರಗತಿಗಳಲ್ಲದೇ – ನಮ್ಮ ಸಂಪೂರ್ಣ ಶೈಕ್ಷಣಿ ದಾಖಲೆಗಳಲ್ಲಿ ಕ್ರೆಡಿಟ್ ಆಗಿ ಸೇರಿಸಲಾಗುತ್ತದೆ. ಕಲಿಕೆಯ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂಬುದನ್ನು ಇದು ಒತ್ತಿಹೇಳುತ್ತದೆ. ಜನರನ್ನು ಅವರ ಜೀವನದ ಯಾವುದೇ ಹಂತದಲ್ಲಿ ಕಲಿಕೆಯ ಪರಿಸರ ವ್ಯವಸ್ಥೆಗೆ ಮರಳಿ ತರುತ್ತದೆ. ಪರೀಕ್ಷೆಗಳಲ್ಲಿನ ಯಶಸ್ಸು ಎಂದಿಗೂ ಯುವಜನರ ಒಟ್ಟಾರೆ ಅಭಿವೃದ್ಧಿಯನ್ನು ಮರೆಮಾಚದ, ಅವರ ಮಾನಸಿಕ ಆರೋಗ್ಯಕ್ಕೆ ಧಕ್ಕೆ ತರದ ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ.
ಪರೀಕ್ಷಾ ಒತ್ತಡ ನಿವಾರಿಸುವುದಕ್ಕೆ ಸಹಾಯ ಮಾಡಲು ಆದ್ಯತೆ ನೀಡಿದೆ. ಪ್ರಧಾನಿಯ ‘ಪರೀಕ್ಷಾ ಪೇ ಚರ್ಚಾ’ ಉಪಕ್ರಮ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಮೌಲ್ಯಮಾಪನ ಮಾಡುವ ವಿಧಾನವನ್ನು ಪರಿವರ್ತಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಪಾಲಕರೊಂದಿಗೆ ಪ್ರಧಾನಿ ಸಂವಾದವು ಪರೀಕ್ಷೆಯ ಆತಂಕವನ್ನು ರಾಷ್ಟ್ರೀಯ ಸಂವಾದವಾಗಿ ಪರಿವರ್ತಿಸಿದೆ. ಸೂಕ್ಷ್ಮ ಮನಸ್ಸಿನ ಮೇಲೆ ‘ಮಗುವನ್ನು ನಿಮ್ಮ ಸ್ವಂತ ಸೀಮಿತಗೊಳಿಸಬೇಡಿ, ಏಕೆಂದರೆ ಅವನು ಬೇರೆ ಸಮಯದಲ್ಲಿ ಜನಿಸಿದ್ದಾನೆ’ ಎಂದು ರವೀಂದ್ರನಾಥ ಟ್ಯಾಗೋರ್ ಹೇಳಿದ್ದಾರೆ. ಶೈಕ್ಷಣಿಕ ಬದಲಾವಣೆಯ ನಮ್ಮ ವಿಧಾನವು ಈ ಜ್ಞಾನದಿಂದ ಮಾರ್ಗದರ್ಶನ ಪಡೆದಿದೆ. ಸಮುದಾಯಗಳು, ಶಿಕ್ಷಕರು, ಮತ್ತು ಕುಟುಂಬಗಳು ಒಟ್ಟಾಗಿ ವಿದ್ಯಾರ್ಥಿಗಳು ಪ್ರವರ್ಧಮಾನಕ್ಕೆ ಬರುವಂತಹ ವಾತಾವರಣವನ್ನು ಸೃಷ್ಟಿಸಲು ಕೆಲಸ ಮಾಡಿದಾಗ, ಯಶಸ್ಸು ಬಂದೇ ಬರುತ್ತದೆ. ತರಗತಿಗಳಿಂದ
ಆಟದ ಮೈದಾನಗಳವರೆಗೆ, ವೃತ್ತಿಪರ ತರಬೇತಿ ಕೇಂದ್ರಗಳಿಂದ ಸಂಶೋಧನಾ
ಪ್ರಯೋಗಾಲಯಗಳವರೆಗೆ, ವೈವಿಧ್ಯಮಯ ಪ್ರತಿಭೆಗಳು ಬೆಳಗುವ ಮತ್ತು
ಪ್ರವರ್ಧಮಾನಕ್ಕೆ ಬರುವಂತಹ ಸ್ಥಳಗಳನ್ನು ನಾವು ಸೃಷ್ಟಿಸಬೇಕು. ನಾವು ವೇಗವಾಗಿ
ವಿಕಸಿತ ಭಾರತದತ್ತ ಸಾಗುತ್ತಿರುವಾಗ, ನಮ್ಮ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ
ಪರಿವರ್ತನೆಯ ಪ್ರಮುಖ ಅಡಿಪಾಯವಾಗಿದೆ. ಪ್ರತಿಯೊಂದು ಕೌಶಲ್ಯವು
ಅರ್ಹತೆಯನ್ನು ಹೊಂದಿದೆ. ಪ್ರತಿ ಪ್ರಯಾಣವು ಮೌಲ್ಯವನ್ನು ಹೊಂದಿದೆ ಮತ್ತು ಪ್ರತಿ
ಮಗುವಿಗೆ ಶ್ರೇಷ್ಠತೆಯ ಅನನ್ಯ ಮಾರ್ಗವನ್ನು ಕಂಡುಕೊಳ್ಳುವ ಹಕ್ಕಿದೆ ಎಂದು ನಾವು
ಗುರುತಿಸುತ್ತೇವೆ. ನಾವು ವೈವಿಧ್ಯಮಯ ಪ್ರತಿಭೆಗಳನ್ನು ಪೋಷಿಸಿದಾಗ, ನಾವು ನಮ್ಮ
ಸಮಾಜದ ರಚನೆಯನ್ನು ಬಲಪಡಿಸುತ್ತೇವೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ರಾಷ್ಟ್ರದ
ಸಾಮರ್ಥ್ಯವನ್ನು ಹೆಚ್ಚಿಸುತ್ತೇವೆ. ಇಂದು, ನಾನು ನಮ್ಮ ಮಹಾನ್ ರಾಷ್ಟ್ರದ ಪ್ರತಿಯೊಬ್ಬ ಪೋಷಕರು, ಶಿಕ್ಷಕರು ಮತ್ತು ನಾಗರಿಕರಿಗೆ ಮನವಿ ಮಾಡುತ್ತೇನೆ. ಶಿಕ್ಷಣದ ಪರಿವರ್ತನೆಯು ಕೇವಲ ಸರ್ಕಾರದ ಉಪಕ್ರಮವಲ್ಲ ಇದು ನಮ್ಮ ಸಾಮೂಹಿಕ ಬದ್ಧತೆ ಮತ್ತು ಹಂಚಿಕೆಯ ದೃಷ್ಟಿಕೋನಗಳನ್ನು ಬೇಡುವ ರಾಷ್ಟ್ರೀಯ ಧೈಯವಾಗಿದೆ. ಸರ್ಕಾರ ಮತ್ತು ನಾಗರಿಕ ಸಮಾಜದ ನಡುವಿನ ಸಹಯೋಗ ಮತ್ತು ಪಾಲುದಾರಿಕೆಯು ನಮ್ಮ ನೀತಿಗಳು ಮತ್ತು ಕಾರ್ಯಗಳನ್ನು ವ್ಯಾಖ್ಯಾನಿಸಿದಾಗ ನಾವು ನಮ್ಮ ಗುರಿಗಳನ್ನು ಸಾಧಿಸುತ್ತೇವೆ.
ನಮ್ಮ ಮಕ್ಕಳು ನಮ್ಮ ಭವಿಷ್ಯ, ಅವರು ತಮ್ಮ ವಿಶಿಷ್ಟ ಪ್ರತಿಭೆಯಿಂದ ಬೆಳಗುತ್ತಾರೆ. ದೇಶಕ್ಕೆ ಹೆಮ್ಮೆ ತರುತ್ತಾರೆ. ಉಜ್ವಲ ಭವಿಷ್ಯ ನಮಗೆ ಕಾಯುತ್ತಿದೆ. ಭಾರತದ ಭವಿಷ್ಯದ ಅನನ್ಯತೆ ಪ್ರತಿ ಮಗುವಿನ ಅನನ್ಯತೆಯಲ್ಲಿದೆ. ಆಗಾಧ ಪ್ರತಿಭಾವಂತ ವಿದ್ಯಾರ್ಥಿಗಳ ಕೊಡುಗೆಗಳನ್ನು ಬಳಸಿಕೊಳ್ಳುವಲ್ಲಿ ಒತ್ತಡರಹಿತ ಶಿಕ್ಷಣ ಪ್ರಮುಖವಾಗಿದೆ.