ಔಷದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’

ಔಷದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಗೆ ‘ಗ್ರಹಣ’

ಬಳ್ಳಾರಿಯ ವಿಮ್ಸ್ ನಲ್ಲಿ ಬಾಣಂತಿಯರು ಸಾವಿಗೆ ಅವರಿಗೆ ನೀಡಲಾಗಿದ್ದ ರಿಂಗರ್ ಲ್ಯಾಕ್ಟೇಟ್ ಐ.ವಿ. ದ್ರಾವಣದ ಗುಣಮಟ್ಟ ಕಳಪೆಯಾಗಿದ್ದುದೆ ಕಾರಣ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ವರದಿ ನೀಡಿದೆ. ಪ್ರಮಾಣಿತ ಗುಣಮಟ್ಟ ಪರೀಕ್ಷೆ (ಎನ್ ಎಸ್ ಕ್ಯೂ) ಕಳಪೆ ಗುಣಮಟ್ಟದ ಕಾರಣಕ್ಕೆ ಈ ಔಷಧಯನ್ನು ತಿರಸ್ಕರಿಸಿದ್ದೇ ಅಲ್ಲದೇ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮವು (ಕೆಎಸ್ಎಮ್ಎಸ್ಸಿಎಲ್) ಆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿತ್ತು . ಆದರೆ ,ಔಷಧವನ್ನು ಪೂರೈಸಿದ ಪಶ್ಚಿಮ ಬಂಗಾ ಕಂಪನಿಯು ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯದಿಂದ (ಸಿಡಿಎಲ್) ತನ್ನ ಔಷಧಿಯ ಗುಣಮಟ್ಟ ಉತ್ತಮವಾಗಿದೆ ಎಂದು ಪ್ರಾಮಾಣ ಪತ್ರ ತಂದ ಕಾರಣಕ್ಕೆ ರಾಜ್ಯವು ಅನಿವಾರ್ಯವಾಗಿ ಅದನ್ನು ಬಳಸಬೇಕಾಯಿತು ಎಂದು ರಾಜ್ಯ ಸರ್ಕಾರ ಹೇಳಿದೆ.
2022ರಲ್ಲಿ ಚಂಡಿಗಂಢದಲ್ಲಿ ಇಂಥದ್ದೇ ಒಂದು ಪ್ರಕರಣ ನಡೆದಿತ್ತು. ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಪಿಜಿಐಎಂಇ ಆರ್) ಐನರು ರೋಗಿಗಳು ಮೃತಪಟ್ಟರು. ಮೃತಪಟ್ಟ ರೋಗಿಗಳಿಗೆ ನೀಡಿದ ಚುಚ್ಚುಮದ್ದು ಕಲಬೆರಿಕೆ ಆಗಿದೆ ಎಂದು ಚಂಡಿಗಢದ ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ (ಆರ್ ಡಿ ಟಿ ಎಲ್) ನಡೆಸಿದ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು. ಅದನ್ನು ಅಲ್ಲಿನ ಸರ್ಕಾರ ಕಪ್ಪು ಪಟ್ಟಿಗೆ ಸೇರಿತ್ತು. ಆ ಚುಚ್ಚುಮದ್ದನ್ನು ತಯಾರಿಸಿದ್ದ ಕಂಪನಿಯು ಎರಡನೆ ಬಾರಿಗೆ ಔಷಧದ ಗುಣಮಟ್ಟ ಪರೀಕ್ಷೆ ಮಾಡುವಂತೆ ಸಿಡಿಎಲ್ ಅನು ಕೋರಿತ್ತು. ಆ ಔಷಧವು ಸಿಡಿಎಲ್ ನಡೆಸಿದ ಗುಣಮಟ್ಟದ ಎಲ್ಲಾ ಪರೀಕ್ಷೆಗಳಲ್ಲೂ ತೇರ್ಗಡೆಯಾಗಿರುವುದಾಗಿ ಆರು ತಿಂಗಳ ನಂತರ ,2023ರ ಮಾರ್ಚ್ ನಲ್ಲಿ, ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಸಚಿವರೇ ಲೋಕಸಭೆಯಲ್ಲಿ ತಿಳಿಸಿದ್ದರು. ಆದರೆ ,ಆ ಕಂಪನಿ ನೀಡಿದ್ದ ಸಿಡಿಎಲ್ ವರದಿ ನಕಲಿ ಎನ್ನುವುದು ನಂತರ ತಿಳಿದು ಬಂದಿತ್ತು.

ಈ ಎರಡು ಪ್ರಕರಣಗಳು ಔಷಧ ಗುಣಮಟ್ಟ ಪರೀಕ್ಷೆಗೆ ಸಿಬ್ಬಂದಿಸಿದ ಸಿಡಿಎಲ್ಲ ಪತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ಸಿಡಿಎಲ್, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿ ಕಾರ್ಯ ನಿರ್ವಹಿಸುವ ಸಂಸ್ಥೆ. ಅದು ತನ್ನ ಕೇಂದ್ರಿಕೃತ ದತ್ತಾಂಶವನ್ನಾಗಲಿ, ಪರೀಕ್ಷಾ ವಿಧಾನಗಳನ್ನಾಗಲಿ, ಪರೀಕ್ಷಾ ವರದಿಗಳನ್ನಾಗಲಿ ಬಹಿರಂಗಪಡಿಸುವುದಿಲ್ಲ.ಆ ಪರೀಕ್ಷೆಗಳನ್ನು ನಡೆಸಿದ ತಜ್ಞರ ಹೆಸರು ಮತ್ತು ಅರ್ಹತೆಗಳನೂ ಬಹಿರಂಗಪಡಿಸುವುದಿಲ್ಲ. ಎಲ್ಲವೂ ಗೋಪ್ಯವಾಗಿ ನಡೆಯುತ್ತಿವೆ.

ದೇಶದಲ್ಲಿ 7 ಕೇಂದ್ರೀಯ ಔಷಧ ಪರೀಕ್ಷಾ ಪ್ರಯೋಗಾಲಯಗಳಿದ್ದು, ಇವುಗಳಲ್ಲಿ ಕೊಲ್ಕತ್ತಾದ ಪ್ರಯೋಗಾಲಯವು ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥಪಡಿಸುವ, ಅಂತಿಮ ವರದಿ ನೀಡುವ ಅಧಿಕಾರ ಹೊಂದಿದೆ.

ಇದನ್ನೂ ಓದಿ:- ದೇವಪುತ್ರ, ಯೇಸು ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ!

ಉನ್ನತ ಮಟ್ಟದ, ಮೇಲ್ಮನವಿಗಳನ್ನು ಇತ್ಯರ್ಥ ಪಡಿಸುವ ಪರಮಾಧಿಕಾರ ಹೊಂದಿರುವ ಸಂಸ್ಥೆಯಾಗಿರುವ ಸಿಡಿಎಲ್, ಪಾರದರ್ಶಕತೆಯನ್ನು ಹೊಂದಿರುವುದು ಮೂಲಭೂತ ಅಗತ್ಯವಾಗಿರುತ್ತದೆ. ಈ ವಿಚಾರದಲ್ಲಿ ಸಿಡಿಎಲ್ ವಿಪರೀತ ಎನ್ನುವಷ್ಟು ಗೋಪ್ಯತೆಯನ್ನು ಅನುಸರಿಸುತ್ತಿದೆ. ಹಲವಾರು ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಕೇಳಿದಾಗಲೂ ಕೊಟ್ಟಿಲ್ಲ.

ಇನ್ನೊಂದು ಸಮಸ್ಯೆ ಎಂದರೆ, ರಾಜ್ಯಗಳಿಂದ ಸಿಸಿಎಲ್ ಔಷಧಗಳು ಮಾದರಿಗಳನ್ನು ಕಳುಹಿಸುವ ಕ್ರಮವು ಸಂಕೀರ್ಣವಾಗಿದ್ದು. ಹಲವು ಮಾರ್ಗಗಳ ಮೂಲಕ ನಡೆಯುತ್ತದೆ. ಡ್ರಗ್ ಇನ್ಸ್ ಪೆಕ್ಟರ್, ನ್ಯಾಯಾಲಯದ ಸಿಬ್ಬಂದಿ, ಅಂಚೆ ಇಲಾಖೆ ಮತ್ತು ಸಿಡಿಎಲ್ ಸಿಬ್ಬಂದಿ ಈ ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಈ ಮಾರ್ಗದಲ್ಲಿ ಯಾವ ಹಂತದಲ್ಲಿ ಬೇಕಾದರೂ ಮಾದರಿಗಳನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಔಷಧ ಕ್ಷೇತ್ರ ತಜ್ಞರು ಹಲವು ಬಾರಿ ಅನುಮಾನ ವ್ಯಕ್ತಪಡಿಸಿದ್ದರು. ಇಡೀ ಪ್ರಕ್ರಿಯೆಯೇ ಅನುಮಾನಸ್ಪದ ಮತ್ತು ದೋಷಪೂರ್ಣ ಎನ್ನುವುದು ಅವರ ವಾದ.

ಸಿಡಿಎಸ್‌ಸಿ ಒ ಪಾತ್ರ: ಹೊಸ ಔಷಧಗಳಿಗೆ ಅನುಮೋದನೆ, ಅವುಗಳ ಕ್ಲಿನಿಕಲ್ ಟ್ರಯಲ್ಸ್, ಔಷಧಗಳ ಮೇಲೆ ನಿಷೇಧ ಇತ್ಯಾದಿ ಜವಾಬ್ದಾರಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆಯದ್ದಾಗಿದೆ (ಸಿಬಿಎಸ್ ಸಿ ಒ). ಮಾರುಕಟ್ಟೆಗೆ ಅಡಿಯಿಟ್ಟ ಹೊಸ ಔಷಧಗಳ ಬಗ್ಗೆ ಸಿಡಿಎಸ್ ಸಿಒ ಕಾಲದಿಂದ ಕಾಲಕ್ಕೆ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡುತ್ತದೆ. ನಕಲಿ ಅಥವಾ ಕಳಪೆ ಗುಣಮಟ್ಟದ ಔಷಧಗಳು ಬಗ್ಗೆಯೂ ಅದು ಮಾಹಿತಿ ನೀಡಬೇಕು. ಆದರೆ ಸಿಡಿಎಸ್ ಸಿಒ ವೆಬ್ ಸೈಟ್ ನಲ್ಲಿ ಕೇಂದ್ರೀಕೃತ ಮಾಹಿತಿ ಲಭ್ಯವಿಲ್ಲ.

ಔಷಧಗಳ ಗುಣಮಟ್ಟ ಕಾಪಾಡುವ ವಿಚಾರದಲ್ಲಿ ಹತ್ತಾರು ತೊಡಕುಗಳಿವೆ. ಅದು ಸಿಬಿಎಸ್ ಸಿಒ ಜವಾಬ್ದಾರಿಯಾಗಿದ್ದು. ಅದರ ಕಾನೂನಾತ್ಮಕ ಮತ್ತು ಆಡಳಿತಾತ್ಮಕ ರಚನೆಯೇ ಒಂದು ದೊಡ್ಡ ಮಿತಿಯಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್), ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಇರುವಂಥ ಶಾಸನಾತ್ಮಕ ಬಲ ಸಿ ಡಿ ಎಸ್ ಸಿ ಒಗೆ ಇಲ್ಲ. ಇದು ಕೇಂದ್ರದ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ ಒಂದು ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ, ಆರೋಗ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವ ನೇರ ಉಸ್ತುವಾರಿಯಲ್ಲಿ ಕೆಲಸ ಮಾಡಬೇಕಿದೆ. ಸಿಡಿಎಸ್ ಒಗೆ ಸ್ವಾಯತೆ ನೀಡಲು 2013ರಲ್ಲಿ ಔಷಧಗಳು ಮತ್ತು ಸೌಂದರ್ಯವರ್ಧಕಗಳ (ತಿದ್ದುಪಡಿ) ಮಸೂದೆ ಮಂಡಿಸಲಾಗಿತ್ತು. ಆದರೆ, ಚರ್ಚೆ ನಡೆಯದೆಯೇ ವಸೂದೆಯನ್ನು ಹಿಂಪಡೆಯಲಾಗಿತ್ತು.

ಔಷಧಿಗಳ ಗುಣಮಟ್ಟ ನಿಯಂತ್ರಣ ಅಧಿಕಾರವೂ 38 ವಿವಿಧ ಸಂಸ್ಥೆಗಳ ಬಳಿ ಇದ್ದು, (ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಸಂಸ್ಥೆ ಮತ್ತು ಕೇಂದ್ರದ ಅಡಿಯಲ್ಲಿರುವ ಸಿಡಿಎಸ್‌ಸಿಒ ಸೇರಿ) ಅದೊಂದು ಸಂಕೀರ್ಣ ವ್ಯವಸ್ಥೆಯಾಗಿದೆ.
ಹೊಸ ಔಷಧಗಳಿಗೆ ಅನುಮೋದನೇ, ಅವುಗಳ ಕ್ಲಿನಿಕಲ್ ಟ್ರಯಲ್ಸ್, ಆಮದು, ರಫ್ತಿಗೆ ಸಂಬಂಧಿಸಿದ ಅನುಮತಿ ನೀಡುವುದು, ಔಷಧಿಗಳವನ್ನು ನಿಷೇಧಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದರೆ, ಔಷಧಿಗಳ ಉತ್ಪಾದನೆ ಮತ್ತು ಮಾರಾಟವು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತದೆ. ಸಿಬಿಎಸ್ ಸಿಒ ರಾಜ್ಯ ಔಷಧ ನಿಯಂತ್ರಕರು (ಎಸ್ ಡಿಸಿ) ಜೊತೆಯಾಗಿ ಕೆಲಸ ಮಾಡಬೇಕು. ಆದರೆ, ಔಷಧದ ಗುಣಮಟ್ಟ ನಿಯಂತ್ರಣದ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮನ್ವಯ ಮತ್ತು ಮಾಹಿತಿ ವಿನಿಮಯ ಇಲ್ಲದಿರುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಯಾವ ರಾಜ್ಯದಲ್ಲಿ ಯಾವ ಬ್ರ್ಯಾಂಡ್ ನ ಯಾವ ಔಷದದ ವಿರುದ್ಧ ಆರೋಪ ಕೇಳಿ ಬಂದಿತ್ತು. ಅದನ್ನು ಹೇಗೆ ಪರೀಕ್ಷೆ ನಡೆಸಲಾಗಿತ್ತು, ಅದರ ಫಲಿತಾಂಶ ಏನು ಎನ್ನುವುದರ ಮಾಹಿತಿಯೇ ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ. ರಾಜ್ಯ ಸರ್ಕಾರಗಳಿಗೂ ಅದು ಸಿಗುತ್ತಿಲ್ಲ. ಯಾವ ಔಷದ ಯಾವ ರಾಜ್ಯದಲ್ಲಿ ನಿಷೇಧವಾಗಿದೆ ಎನ್ನುವ ಮೂಲಭೂತ ವಿಚಾರ ಸಹ ಮತ್ತೊಂದು ರಾಜ್ಯಕ್ಕೆ ತಿಳಿಯುವುದಿಲ್ಲ.

ರಾಜ್ಯ ರಾಜ್ಯಗಳ ನಡುವೆ ಇರುವ ಮಾಹಿತಿಯ ಕೊರತೆ ಮತ್ತು ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ಕೇಂದ್ರೀಕರಣವನ್ನು ಕೆಲವು ಕಂಪನಿಗಳು ತಮ್ಮ ಅನುಕೂಲಕ್ಕೆ ಬಳಸಿಕೊಂಡು, ಕಳಪೆ ಔಷಧಿಗಳನ್ನು ಮಾರಾಟಕ್ಕೆ ಬಿಡುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave a Comment