ಕರೆದರೂ ಕೇಳದೆ.., ಐದನೇ ತಲೆಮಾರಿನ ಅಂತರಂಗದ ಪಿಸುಮಾತು
ಸನಾದಿ ಅಪ್ಪಣ್ಣನ ಕುಡಿಯ ನೋಡಿರಣ್ಣಾ!
”ಮನಸಿವಾಗ ಉಳಿದ ಮಾತ್ ಹೇಳ್ತಿನಿ ಕೇಳಿ, ಬೀಳಗಿಯಲ್ಲಿ ಮುಸಲ್ಮಾನ ಬಾಂಧವರು ಮೊಹರಂ ಹಬ್ಬ ಬಹಳ ಚಂದ ಮಾಡ್ತಾರೆ. ಸನಾದಿ ಅಪ್ಪಣ್ಣನ ಕಾಲದಲ್ಲಿ ಒಮ್ಮೆ ಹುಸೇನ್ ಪೀರ (ಮುಸ್ಲಿಂ ಸಮುದಾಯ ಪೂಜಿಸುವ ದೇವರು) ಬೀಳಗಿಯಲ್ಲಿದ್ದ ಗುಡಿಯಿಂದ ಸೀದಾ ಸೊನ್ನದ (ಬೀಳಗಿಯ ಹತ್ತಿರದ ಊರು) ಊರ್ಕಡೆ ಹೊಂಟಿದ್ದಂತೆ. ಅಪಣ್ಣನ ಸನಾದಿ ನಾದ ಕೇಳಿ ದೇವರೇ ವಾಪಸ್ ಬಂದಿದ್ದನಂತೆ. ಅದಕ್ಕೆ ಸುತ್ತಮುತ್ತಲಿನ ಊರ ಜನ ನೀವು ಸಾಮಾನ್ಯ ಶಕ್ತಿಯವರು ಅಲ್ಲ, ದೇವರನ ವಾಪಸ್ ಕರೆಸಿದವರುಪಾ ಅಂತ ಹೇಳುತ್ತಾರೆ. ಇದನ್ನು ಕೇಳಿ ಭಾಳ ಅಂದ್ರೆ ಭಾಳ ಖುಷಿ ಆಗೈತೆ, ೨ ಖರೆ ಹೌದು ಅಲ್ಲೋ, ಅನ್ನೋದಕ್ಕಿಂತ ನಮ್ಮ ಇದು ಅಪ್ಪಣ್ಣನ ಮೇಲೆ ಜನರು ಎಂಥಾ ಪ್ರೀತಿ ಇಡ್ಕೊಂಡಾರ ಅಂತ ಆಶ್ಚರ್ಯ ಆಗತೈತಿ, ಹುಟ್ಟಿದಾಗ, ಸತ್ತಾಗ, ಎಲ್ಲಾ ಕಾರ್ಯಗಳಿಗೆ ಈ ಮಂಗಳವಾದ್ಯ ಬೇಕೇ ಬೇಕು. ಈ ಸನಾದಿ (ಷಹನಾಯ್) ಮೂಲಕ ಅಪ್ಪಣ್ಣ ರಾಜ ಮಹಾರಾಜರ ತನಕ ಎಲ್ಲರ ಪ್ರೀತಿ ಗಳಿಸಿದ್ದ ನಂದು ನಾಲ್ಕನೇ ತಲೆಮಾರು.
75 ವಯಸ್ಸಾಗೆತಿ. ಅಸ್ತಮಾ ಬ್ಯಾನಿನೂ ಸೇರ್ಕೊಂಡೈತಿ, ಹೃದಯ ಸಣ್ಣ ಅಪುರೇಷನ್ ಆಗೆತಿ. ಈಗ ಮೊದಲಿನಂಗ ಆಗುದುಲ್ರಿ. ಶಕ್ತಿ ಕಡಿಮೆ ಆಗತಿ. ಮಗ ಪುಟ್ಟರಾಜು ಕೈಗೆ ಬಂದಾನ್ರಿ. ನಾನು ಅವನೊಂದಿಗೆ ಸಾಥಿಗೆ ಹೋಗ್ತಿದ್ರಿ….” ಎಂದು ಬಸವಂತ ಭಜಂತ್ರಿ ಮಾತಿಗಿಳಿದರು. ಬಸವಂತ ಅವರು ಸನಾದಿ ಅಪ್ಪಣ್ಣನ ಮರಿಮೊಮ್ಮಗ, ಬಾಗಲಕೋಟೆಯ ಬೀಳಗಿ ನಿವಾಸಿ. ಅಪ್ಪಣ್ಣನ ಹುಟ್ಟೂರು ಕೂಡ ಇದೇ ಬೀಳಗಿ, ಸನಾದಿಯೇ ನಮ್ಮ ಪೂರಾ ಬದುಕು ಎನ್ನುವ ಬಸವಂತ ಭಜಂತ್ರಿ ಆರೂವರೆ ದಶಕ ನಿರಂತರ ನುಡಿಸಾಣಿಕೆ ನೀಡಿದವರು. ಭಾರತ ಮಾತ್ರವಲ್ಲದೆ ಫ್ರಾನ್ಸ್, ಬ್ರೆಜಿಲ್ ಸೇರಿದಂತೆ ಅನೇಕ ದೇಶಗಳಲ್ಲಿ, ನಾದಮಾಧುರ್ಯ ಹರಿಸಿದ್ದಾರೆ. ಇವರ ದೊಡ್ಡವನವರು, ಚಿಕ್ಕಪ್ಪನವರು, ತಂದೆ ಮಾರುತಿಯವರು ಎಲ್ಲರೂ ಸನಾದಿ ನುಡಿಸುತ್ತಿದ್ದರು. ಆರಂಭದಲ್ಲಿ ಇವರು ತಮ್ಮ ದೊಡ್ಡಪ್ಪ ಮತ್ತು ತಂದೆ ಮಾರುತಿಯವರ ಬಳಿಯೇ ಕಲಿತರು. ”ದೊಡ್ಡಪ್ಪ ಸಂಗೀತದ ದಾರಿ ಹೀಗೆ ಎಂದು ತೋರಿದವ.
ಸನಾದಿ ನಮಗೆ ದೇವರು ನೀಡಿದ ವರ ಎನ್ನುತ್ತಿದ್ದವ ಆಪ್ಪ ನಾವು ಮೂರು ಮಂದಿ ಅಣ್ಣ-ತಮ್ಮಂದಿರು. ಮೂರೂ ಜನ ನುಡಿಸ್ತಾ ಇದ್ದೇವು. ಈಗ ಇಬ್ಬರು ಉಳಿದಿದ್ದೇವೆ. ಗುರುವಿನ ಮೂಲಕ ತಾಳ-ರಾಗ ಜ್ಞಾನ ಪಡೆದರೆ ಮಾತ್ರ ಇದು ಕಲಿಯಬಹುದು. ಅದಕ್ಕಾಗಿ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಚನ್ನಬಸಪ್ಪ ಮಸ್ಕಿನಾಳ ಬಳಿ ಕಲಿತೆ,” ಎಂದರು ಬಸವಂತ. ಬಹಳಷ್ಟು ಮಂದಿ ಷಹನಾಯ್ ಅಂದರೆ ಏನೋ ಕಾರ್ಯಕ್ರಮಗಳಿಗೆ ನುಡಿಸಿಬಿಡ್ತಾರೆ.ಗುರುಮುಖೇನ ಕಲಿಯುವಂಥದ್ದಲ್ಲ ಎಂದುಕೊಳ್ಳುತ್ತಾರೆ. ಆದರೆ, “ಗುರು ಇಲ್ಲಾಂದ್ರೆ ಬರೂದಿಲ್ರಿ. ಕಲಿಯುವ ಸಮಯದಲ್ಲಿ ಕಠಿಣ ಅಭ್ಯಾಸ ಮಾಡಿದ್ದೇವೆ. ಶಾಲೆಗೆ ಹೋದ್ರೂ ಬಾ ಸನಾದಿ ಕಲಿ ಎಂದು ಶಾಲೆಯಿಂದ ಕರೆದುಕೊಂಡು ಬರುತ್ತಿದ್ರು. ಹಾಗಾಗಿ, ಮೆಟ್ರಿಕ್ ತನಕ ಹೇಗೋ ಓದಿದೆ, ಆದರೆ ಫೇಲಾದೆ,” ಎನ್ನುವ ಬಸವಂತ ಅವರ ಪ್ರಕಾರ, ಅಪಣ್ಯ ನುಡಿಸುತ್ತಿದ್ದ ನೂರಕ್ಕೂ ಹೆಚ್ಚು ರಾಗಗಳು ಪರಂಪರೆಯಿಂದ ಪರಂಪರೆಗೆ ದಾಟಿಕೊಂಡು ಬಂದಿವೆ. ಮಿಯಾಕೀ ತೋಡಿ, ಬಿಲಾಸ್ಖಾನ್ ತೋಡಿ, ಸಾರಂಗ ಪ್ರಕಾರಗಳು, ಮಧುವಂತಿ, ಯಮನ್, ಕಲ್ಯಾಣಿ, ಪೂರ್ವಿ, ಬಸಂತ, ಭೈರವಿ… ಸೇರಿದಂತೆ ಅನೇಕ ರಾಗಗಳು ಬಸವಂತ ಭಜಂತ್ರಿ ನೆನಪಿನಂಗಳದಲ್ಲಿ ಗಟ್ಟಿಯಾಗಿವೆ.
ಇದನ್ನೂ ಓದಿ:ಆಧ್ಯಾತ್ಮಿಕ ಆಶ್ರಯವೆಂದರೆ ತಳವಿಲ್ಲದ ಆಳದಂತೆ!
ಪತ್ನಿಯದ್ದೇ ಶ್ರುತಿ ಸಾಥಿ: ಬಸವಂತ ಅವರ ಕಛೇರಿಯಲ್ಲಿ ಅವರ ಪತ್ನಿ ಕಾಶೀಭಾಯಿ ಅವರದ್ದೇ ಹಾರ್ಮೋನಿಯಂ ಸಾಧಿ. ಆಕೆ ಕೂಲಿಗೆ ಹೋಗುವುದು ಬೇಡ, ನನ್ನ ವಾದನಕ್ಕೆ ಶ್ರುತಿಯಂತೂ ಬೇಕಿದೆ, ಅದಕ್ಕೆ ಅವಳಿಗೇ ಹಾರ್ಮೋನಿಯಂ ನುಡಿಸುವುದು ಕಲಿಸಿದ್ದೇನೆ ಎನ್ನುವ ಬಸವಂತ ಅವರ ಒಬ್ಬನೇ ಮಗ ಪುಟ್ಟರಾಜು ಈಗ ಷಹನಾಯ್ ನುಡಿಸಾಣಿಕೆಯಲ್ಲಿ ಉದಯೋನ್ಮುಖ ಕಲಾವಿದ ಗದಗದ ಪುಟ್ಟರಾಜ ಗವಾಯಿಗಳು ಮನೆಗೆ ಭೇಟಿ ನೀಡಿ ಹರಸಿದ್ದರಿಂದ ಮಗನಿಗೆ ಅಣ್ಣಾವ್ರ ಹೆಸರನ್ನೇ ಇಟ್ಟರಂತೆ, ಗದಗದ ಆಶ್ರಮದಲ್ಲಿಯೇ ಪುಟ್ಟರಾಜ ಸಂಗೀತದಲ್ಲಿ ಪದವಿ ಮುಗಿಸಿದರು. ಧಾರವಾಡದ ಕರ್ನಾಟಕ ವಿವಿಯಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯೂ ಮುಗಿಸಿದ ಇವರು, ಅದೇ ವಿವಿಯಲ್ಲಿ ಈಗ ಸಹಾಯಕ ಪ್ರಾಧ್ಯಾಪಕರೂ ಹೌದು. ‘ಸಹನಾಯ್ ವಾದನದಲ್ಲಿ ಖಯಾಲ್ ಗಾಯನದ ಪ್ರಭಾವ ಎಂಬ ವಿಷಯದಲ್ಲಿ ಡಾಕ್ಟರೇಟ್ ಪಡೆದು ಈಗ ಡಾ. ಪುಟ್ಟರಾಜು ಆಗಿದ್ದಾರೆ. ”ಸುಮಾರು ವರ್ಷ ತಬಲಾ ಕಲಿತು ಸಾಥಿ ನೀಡಲು ಹೋಗುತ್ತಿದ್ದೆ, ಗಾಯನವನ್ನೂ ಕಲಿತೆ, ಆದರೆ, ಷಹನಾಯ್ ಅನ್ನು ಮಾತ್ರ ಬಿಡಲೇಬಾರದು ಎಂದು ಪದೇಪದೆ ಅನಿಸತೊಡಗಿತು. ಅದಕ್ಕೆ ಪಂ. ಬಸವರಾಜ ತಿರುಕಪ್ಪ ಭಜಂತ್ರಿ ಅವರ ಶಿಷ್ಯನಾದೆ. ಹೊಟ್ಟೆಪಾಡಿಗೆ ಬೇರೆ ಉದ್ಯೋಗ ಅಂತ ಇದ್ದರೂ ಪರಂಪರೆಯಿಂದ ಬಂದ ವಾದ್ಯವನ್ನು ಕಛೇರಿಯಲ್ಲಿ ನುಡಿಸುವಾಗ ಸಿಗುವ ಆತ್ಮತೃಪ್ತಿಯೇ ಬೇರೆ.” ಎನ್ನುವುದು ಪುಟ್ಟರಾಜರ ಮಾತು.
ಅಪ್ಪಣ್ಣನ ಕತೆಗಳು: ತಮ್ಮ ಬದುಕು ಬಿಚ್ಚಿಡುತ್ತಲೇ ಬಸವಂತ ತಮ್ಮ ಹಿರಿಯರು ಹೇಳುತ್ತಿದ್ದ ಸನಾದಿ ಅಪ್ಪಣ್ಣನ ಕತೆಗಳನ್ನು ಹೇಳಲು ಮರೆಯಲಿಲ್ಲ. ಮುಧೋಳದ ಘೋರ್ಪಡೆ ಮಹಾರಾಜರಿಗೆ ಅಪ್ಪಣ್ಣ ಬಲುಪ್ರಿಯ. ಒಮ್ಮೆ ರಾಜರು ಅಪ್ಪಣ್ಣನ ನುಡಿಸಾಣಿಕೆ ಕೇಳಿ ಖುಷಿಗೊಂಡು ”ನಿಂಗೇನು ಬೇಕು ಕೇಳು ಅಪ್ಪಣ್ಯ” ಎಂದರೆ ” ನೀವು ನಂಗೆ ಏನಾರ ಕೊಡ್ಬೇಕು ಅಂದೊಂಡಿದ್ರ ಬೀಳಗಿ ಊರಿನ ಜನ್ರಪರವಾಗಿ ಮಹಾಲಿಂಗೇಶ್ವರನಿಗೆ ಒಂದು ತೆಂಗಿನಕಾಯಿ ಒಡೀರಿ ,ಆಗ ಮ್ಯಾಲೆ ಮಹಾಲಿಂಗೇಶ್ವರ ತೇರು ಎಳೆಯಿರಿ. ತೇರು ಮುಂದಕ್ಕೆ ಹೋಗೋ ತನಕ ಬೇರೆಯವರಾರೂ ಕಾಯಿ ಒಡೆಯೋ ಹಂಗಿಲ್ಲ ತಿಳ್ಕೊಲ್ರಿ. ಇದು ಬಿಟ್ರೆ, ನಂಗ ರೊಕ್ಕ, ಬಿರ್ದು ಇನ್ನೇನು ಬೇಡ ಮಹಾಸ್ವಾಮಿಗಳೇ,” ಎನ್ನಲು ಮಹಾರಾಜರು ಅಸ್ತು ಎಂದಿದ್ದರಂತೆ ಹಾಗೆಯೇ ಜಮಖಂಡಿ ಮಹಾರಾಜರು, ಕೊಲ್ಲಾಪುರ ಮಹಾರಾಜರೂ ಅಪ್ಪಣ್ಣನ ಅಭಿಮಾನಿಗಳಾಗಿದ್ದರು.
ಕೊಲ್ಲಾಪುರ ಮುಂದಕ ಮಹಾರಾಜರು ಅಪಣ್ಣನನ್ನು ಕರೆತರಲು ತನ್ನೂರಿನಿಂದ ಬೀಳಗಿಗೆ ಕುದುರೆಗಳನ್ನು ಕಳಿಸುತ್ತಿದ್ದರಂತೆ! ಕೊಲ್ಲಾಪುರದಲ್ಲಿ ಕಛೇರಿ ಮುಗಿಸಿ ಬರುವಾಗ ಮೀರಜ್ನಲ್ಲಿ ತಂಗುತ್ತಿದ್ದ ಅಪುಣ್ಯ ಅಲ್ಲಿನ ಮೀರಾಸಾಹೇಬ ದರ್ಗಾದಲ್ಲಿಯೂ ಸನಾದಿ ನಾದ ಹರಿಸುತ್ತಿದ್ದರು. ಅಲ್ಲೇ ಇದ್ದ ಕಿರಾಣಾ ಫರಾಣೆಯ ದಿಗ್ಗಜ ಉಸ್ತಾದ್ ಅಬ್ದುಲ್ ಕರೀಯಾನ್ ಅವರೂ ಅಪ್ಪಣ್ಣನ ಅಭಿಮಾನಿಗಳೇ. ವಿಶೇಷವೆಂದರೆ ಅಪ್ಪಣ್ಣ ಮೀರಜ್ ಕಡೆಯೆಲ್ಲಾ ಓಡಾಡಿದ್ದರಿಂದ ಬೀಳಗಿಗೂ ಮೀರಜ್ ಗೂ ಬೀಗರ ಸಂಬಂಧ ಹುಟ್ಟಿಕೊಂಡಿತ್ತಂತೆ. ಸನಾದಿಯಿಂದಲೇ ಬೆಳೆದ ಈ ಸಂಬಂಧ ಈಗಲೂ ಬೆಳೆಯುತ್ತಲೇ ಇದೆ ಎನ್ನುತ್ತಾರೆ ಬಸವಂತ ಭಜಂತ್ರಿ, ಅಂದಹಾಗೆ, ಸನಾದಿ ಬಗ್ಗೆ ಇಷ್ಟೆಲ್ಲಾ ಮಾತನಾಡಿ ಉಸ್ತಾದ್ ಬಿಸ್ಟಿಲ್ವಾಖಾನ್ ಅವರನ್ನು ನೋಡಿದೀರಾ ಎಂದು ಕೇಳಿದರೆ ಬಸವಂತ ಅವರು ಐದು ದಶಕಗಳ ಹಿಂದಿನ ನೆನಪಿಗೆ ಜಾರಿದರು: “ಬೆಂಗಳೂರಿನ ಲಾಲ್ ಬಾಗ್ನಲ್ಲಿ ಆಜಾನುಬಾಹು ಬಿಸಿಲ್ದಾರ ಕಛೇರಿ ಕೇಳಿದ್ದೆ ನಮ್ಮನ್ನು ನೋಡಿದ ಉಸ್ತಾದರು ‘ಶುಕ್ರಿಯಾ…ಶುಕ್ರಿಯಾ’ ಎಂದು ಕೈಮುಗಿದಿದಷ್ಟೇ ನೆನಪಿದೆ.” ಎಂದರು