ಕರ್ತವ್ಯ ಪಥದಲ್ಲಿ ಭಾರತದ ವೈಭವ.

ಕರ್ತವ್ಯ ಪಥದಲ್ಲಿ ಭಾರತದ ವೈಭವ.

ದಿಲ್ಲಿಯ ಕರ್ತವ್ಯ ಪಥದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ವೈಭವೋಪೇತವಾಗಿ ನಡೆಯಿತು. ಪಥ ಸಂಚಲನದ ವೇಳೆಗೆ, ಜಾನಪದ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು ಐದು ಸಾವಿರ ಕಲಾವಿದರೂ ದೇಶದ ಬೇರೆ ಬೇರೆ ಪ್ರದೇಶಗಳ 45 ಪ್ರಕಾರದ ನೃತ್ಯಗಳನ್ನು ಪ್ರದರ್ಶಿಸಿದರು. ಜಾರ್ಖಂಡ್ ಬುಡಕಟ್ಟು ನಾಯಕ ಬಿಸಾ೯ ಮುಂಡಾ ಅವರ 150ನೇ ಜನ್ಮ ವರ್ಷಾಚರಣೆಯ ಪ್ರಯುಕ್ತ ನಡೆದ ನೃತ್ಯ ರೂಪಕವು ಜಾನಪದ ಹಾಗೂ ಬುಡಕಟ್ಟು ಪರಂಪರೆಯ ಕಾಲ ಶ್ರೀಮಂತಿಕೆಯನ್ನು ಅನಾವರಣಗೊಳಿಸಿತು.’ ವಿಕಸಿತ ಭಾರತ ಶ್ರೇಷ್ಠ ಭಾರತ ‘ ವಿಷಯಾಧರಿತ ನೃತ್ಯ ಪ್ರದರ್ಶನಗಳು ಮೆಚ್ಚುಗೆಗೆ ಪಾತ್ರವಾದವು. ಸಂಗೀತ ನಾಟಕ ಅಕಾಡೆಮಿಯಿಂದ ‘ ಜಯತಿ ಜಯ ಮಮಃ ಭಾರತಂ ‘ ಶೀರ್ಷಿಕೆಯಲ್ಲಿ 11 ನಿಮಿಷಗಳ ಪ್ರದರ್ಶನ ನಡೆಯಿತು. ಕರ್ತವ್ಯ ಪದದಲ್ಲಿ ನಡೆದ ದ್ವಜಾರೋಹಣಕ್ಕೂ ಮೊದಲು ಹೊಸದಿಲ್ಲಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕ್ಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಹುತಾತ್ಮ ಸೈನಿಕರಿಗೆ ಗೌರವ ವಂದನೆ ಸಲ್ಲಿಸಿದರು.

ಈ ವೇಳೆ ಮೂರು ರಕ್ಷಣಾ ಪಡೆಗಳ ಮುಖ್ಯಸ್ಥರು ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಲಕ್ಕುಂಡಿ ಸ್ತಬ್ಧಚಿತ್ರ : ಕರ್ನಾಟಕದ ಲಕ್ಕುಂಡಿಯ ಸ್ತಬ್ಧಚಿತ್ರ ಕರ್ತವ್ಯ ಪದದಲ್ಲಿ ಗಮನ ಸೆಳೆಯಿತು. ಕಾಲ ನಿರ್ದೇಶಕ ಶಶಿಧರ ಆಡಪ ಇದರ ವಿನ್ಯಾಸಕ. ಮೈಸೂರು, ಬೆಂಗಳೂರು, ಗದಗ ಮತ್ತು ಧಾರವಾಡದ ಕಲಾವಿದರಿಂದ ಕೂಡಿರುವ 18 ಮಂದಿ ತಂಡವನ್ನು ಕಲಾವಿದರಾದ ಲಿಂಗಯ್ಯ ಮುನ್ನಡೆಸಿದರು. ಇಂಡೋನೇಷ್ಯಾ ಅತಿಥಿ : ಮುಖ್ಯ ಅತಿಥಿಯಾಗಿರುವ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೋ ಸುಬಿಯಾಂಟೊ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ವಿದೇಶಗಳ ರಾಜತಾಂತ್ರಿಕರು ಮತ್ತು ಇತರ ಗಣ್ಯರೊಂದಿಗೆ ಸೇನೆಯ ಪಥಸಂಚಲನ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಕಣ್ತುಂಬಿಕೊಂಡರು.

ಇದನ್ನೂ ಓದಿ: ಕೋವಿಡ್ ಅಕ್ರಮ ಅಧಿಕಾರಿಗಳು, 200 ಕಂಪನಿಗಳಿಗೆ ಶಾಕ್

ಮಾಜಿ ರಕ್ಷಣಾ ಸಚಿವರು ಆಗಿರುವ ಸುಬಿಯಾಂಟೊ, ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಇಂಡೋನೇಷಿಯಾದ ನಾಲ್ಕನೇ ಅಧ್ಯಕ್ಷರಾಗಿದ್ದಾರೆ. ಇಂಡೋನೇಷ್ಯಾದ ಮೊದಲ ಅಧ್ಯಕ್ಷ ಸುಕರ್ನೊ ಅವರು 1950ರಲ್ಲಿ ಮುಖ್ಯ ಅತಿಥಿಯಾಗಿದ್ದರು. ಇಂಡೋನೇಷ್ಯಾದ 352 ಸದಸ್ಯರ ಪಥಸಂಚಲನ ಹಾಗೂ ಬ್ಯಾಂಡ್ ತಂಡವೂ, ಪರೇಡ್ ನಲ್ಲಿ ಪಾಲ್ಗೊಂಡಿದ್ದರು,ವಿದೇಶದ ರಾಷ್ಟ್ರೀಯ ಸಮಾರಂಭದಲ್ಲಿ ಇಂಡೋನೇಷ್ಯಾದ ತಂಡ ಭಾಗವಹಿಸಿದ ಮೊದಲ ಕಾರ್ಯಕ್ರಮ ಇದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಉಪಮುಖ್ಯಮಂತ್ರಿ ಡಿ‌.ಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು, ಗಣರಾಜ್ಯೋತ್ಸವದ ಅಂಗವಾಗಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

Leave a Comment