ಕೆ ಜಿ ರೇಷ್ಮೆಯ ಗೂಡಿಗೆ 2 ರೂ ಗಳ ಅಧಿಕ ಬೆಲೆ
ಕೆ ಜಿ ರೇಷ್ಮೆಯ ಗೂಡಿಗೆ 2 ರೂ ಗಳ ಅಧಿಕ ಬೆಲೆಯನ್ನು ನೀಡುವುದಾಗಿ ನಂಬಿಸಿ ರೇಷ್ಮೆ ಬೆಳೆಗಾರನಿಂದ 18,823 ರೂ.ಗಳ ಮೌಲ್ಯದ 45 ಕೆ.ಜಿ ರೇಷ್ಮೆ ಗೂಡನ್ನು ಪಡೆದು ಹಣ ನೀಡದೇ ವಂಚಿಸಿರುವುದಾಗಿ ಅಂಗಟ್ಟ ಗ್ರಾಮದ ರೇಷ್ಮೆ ಬೆಳೆಗಾರ ಮುನಿರಾಜು ಎಂಬುವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಮೇ-06 ರಂದು ಅಂಗಟ್ಟ ಗ್ರಾಮದ ಮುನಿರಾಜು ಅವರು ತಾವು ಬೆಳೆದಿರುವ ರೇಷ್ಮೆಗೂಡನ್ನು ಬೈಕ್ನಲ್ಲಿ ಶಿಡ್ಲಘಟ್ಟ ಗೂಡುಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ವೇಳೆ ಹಂಡಿಗನಾಳ ಕೆರೆಯ ಕಟ್ಟೆ ಬಳಿ ಶಿಡ್ಲಘಟ್ಟ ನಗರ ವಾಸಿಗಳಾದ ಸೈಪು ಹಾಗೂ ಸಾಧಿಕ್ ಎಂಬುವವರು ಬೈಕ್ ಅಡ್ಡಗಟ್ಟಿ ತಡೆದು ನಿಲ್ಲಿಸಿ ರೇಷ್ಮೆ ಗೂಡನ್ನು ನಮಗೆ ಮಾರಾಟ ಮಾಡಿ ಎಂದು ಕೇಳಿದ್ದಾರೆ.
ಇದನ್ನೂ ಓದಿ:- ಆಗ್ನಿಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್
ಕೆ ಜಿ ರೇಷ್ಮೆಯ ಗೂಡಿಗೆ 2 ರೂ ಗಳ ಅಧಿಕ ಬೆಲೆ
ಕೆ ಜಿ ರೇಷ್ಮೆಯ ಗೂಡಿಗೆ 2 ರೂ.ಗಳ ಅಧಿಕ ಬೆಲೆ ಬೇಡ ಎಂದರೂ ಬಿಡದೇ ಮಾರುಕಟ್ಟೆಯ ಬೆಲೆಗಿಂತ ಕೆ.ಜಿಗೆ 02 ರೂ.ಗಳು ಹೆಚ್ಚಾಗಿ ಹಣ ನೀಡುವುದಾಗಿ ನಂಬಿಸಿ,ನಗರದ ಕೆಎಚ್ ಬಿ ಕಾಲೋನಿಯ ಇರ್ಫಾನ್ ಎಂಬುವರ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಕೆ ಜಿ ರೇಷ್ಮೆಯ ಗೂಡಿಗೆ 2 ರೂ ಗಳ ಅಧಿಕ ಬೆಲೆ
3 ಜನರೂ ಸೇರಿ 18,823 ರೂ.ಗಳ ಬೆಲೆಬಾಳುವ 45 ಕೆ.ಜಿ. ರೇಷ್ಮೆಗೂಡನ್ನು ಪಡೆದು,ಹಣವನ್ನು ಎಟಿಎಂನಿಂದ ಡ್ರಾ ಮಾಡಿ ಕೊಡುವುದಾಗಿ ಹೇಳಿ ರೇಷ್ಮೆಗೂಡಿನ ಮೂಟೆಯೊಂದಿಗೆ ಇಬ್ಬರು ಹೋದವರು ವಾಪಸ್ಸು ಬಂದಿಲ್ಲ. ಹಣ ನೀಡುವಂತೆ ಹಲವಾರು ಬಾರಿ ಮನೆಯ ಬಳಿ ಹೋಗಿ ಕೇಳಿದರೂ ನೀಡದೇ, ಬೆದರಿಕೆ ಹಾಕಿ ಕಳುಹಿಸಿದ್ದಾರೆಂದು ಮುನಿರಾಜು ತಮ್ಮ ದೂರಿನಲ್ಲಿ ತಿಳಿಸಿದ್ದು,ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.