ಕೋರ್ಟ್ ತೀರ್ಪುಗಳು ಕೂಡ ಒತ್ತಾಸೆ

ಕೋರ್ಟ್ ತೀರ್ಪುಗಳು ಕೂಡ ಒತ್ತಾಸೆ


ರಾಜಕೀಯ ಸ್ಪರ್ಶದಾಚೆ ಸರ್ಕಾರದ ಮಟ್ಟದಲ್ಲಿ ಕಾವೇರಿದ ಚರ್ಚೆ ಮೃತ್ತುಂಜಯ ಕಪಗಲ್ ಬೆಂಗಳೂರು ಎರಡು ಸಹಕಾರಿ ಮಸೂದೆಗಳನ್ನು ಹಿಂತಿರುಗಿಸಿದ ರಾಜ್ಯಪಾಲರ ನಡೆ. ಪುನರ್ ಪರಿಶೀಲಿಸಲು ನೀಡಿದ ಸಲಹೆಗೆಸಂವಿಧಾನದ ಬಲವಿದೆ ಎಂದು ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ,ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರಅಧಿಕಾರ ಮೊಟಕುಗೊಳಿಸುವುದು ಸೇರಿ ಸರ್ಕಾರ ಕಳುಹಿಸಿದ್ದ ವಿಧೇಯಕಗಳುರಾಜಭವನದ ಸ್ಪಷ್ಟಿಕರಣವೆಂಬ ಕ್ಷಕಿರಣದ ಪರೀಕ್ಷೆಗೆ ಒಳಗಾಗಿವೆ. ಈ ಪೈಕಿ ಪಾಸಿಟಿವ್ ರಿಪೋರ್ಟ್ ಪಡೆದಸುಗ್ರೀವಾಜ್ಞೆ ಹಾಗೂ ಕೆಲವು ಬಿಲ್‌ಳು ಸರಾಗವಾಗಿ ರಾಜ್ಯಪಾಲರ ಅಂಕಿತ ಗಿಟ್ಟಿಸಿಕೊಂಡವು. ಇನ್ನೂ ಕೆಲವು ರಾಜ್ಯಪಾಲ ದಾವರ ಚಂದ್ಗೆಹಲೋತ್ ಸಹಿ ಭಾಗ್ಯ ಕಂಡಿಲ್ಲ. ಅದರಲ್ಲಿ ಪ್ರಮುಖವಾದದ್ದು.ಸಹಕಾರ ಕ್ಷೇತಕ್ಕೆ ಸಂಬಂಧಿಸಿದ ಎರಡು ವಿಧೇಯಕಗಳು,ಇದು, ಪಕ್ಷ ರಾಜಕಾರಣದ ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಸಸ್ ರಾಜಭವನ ಎಂಬಂತೆ ಬಿಂಬಿತವಾಗುತ್ತಿದೆ.

ಆದರೆ ಸಂವಿಧಾನ ಹಾಗೂ ಕಾಯ್ದೆ ಪ್ರಕಾರ ಇನ್ನಷ್ಟು ಸ್ಪಷ್ಟತೆ ಕಂಡುಕೊಳ್ಳಬೇಕೆಂಬ ರಾಜ್ಯಪಾಲರ ಇಚ್ಛೆಯನ್ನು ಅರಿತು ಸರ್ಕಾರ ಆ ದಿಕ್ಕಿನಲ್ಲಿ ಸಾಗಿದೆ. ಕಾವೇರಿದ ಚರ್ಚೆ: ಸಹಿಗೆ ಕಳುಹಿಸಿದ ವಿಧೇಯಕ ರಾಜ್ಯಪಾಲರಿಗೆ ತೃಪ್ತಿ ಎನಿಸದಿದ್ದರೆ ಸ್ಪಷ್ಟಿಕರಣ ಕೇಳುವುದು ಸಹಜ. ಹಿಂದಿನ ರಾಜ್ಯಪಾಲರು ಸ್ಪಷ್ಟಿಕರಣ, ಹೆಚ್ಚಿನ ವಿವರಣೆ ಕೇಳಿದ ನಿದರ್ಶನಗಳಿವೆ. ಆದರೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ಪ್ರವೃತ್ತಿ ಹೆಚ್ಚಾಗಿದೆ ಎಂಬುದು ಕಾಂಗ್ರೆಸ್ ವಾದ. ರಾಜಭವನ ಬಿಜೆಪಿಯ ಕಂಟ್ರೋಲ್‌ನಲ್ಲಿದ್ದು, ಸಂವಿಧಾನದ ಮುಖ್ಯಸ್ಥರ ರೀತಿಯಲ್ಲಿ ರಾಜ್ಯಪಾಲರು ನಡೆದುಕೊಳ್ಳುತ್ತಿಲ್ಲ ಎಂದು ಕೆಲವು ಸಚಿವರು, ಶಾಸಕರು ಬಹಿರಂಗವಾಗಿ ಹೇಳಿದ್ದಿದೆ. ಬ್ರೇಕ್‌ಗೆ ಬಲ, ಬೆಂಬಲು ಎರಡು ಸಹಕಾರಿ ಬಿಲ್‌ಗಳಿಗೆ ರಾಜ್ಯಪಾಲರು ಸಹಿಗೆ ನಿರಾಕರಿಸಿ ಬ್ರೇಕ್ ಹಾಕಿದ್ದಕ್ಕೆ ಸಂವಿಧಾನದ ಬೆಂಬಲ ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳ ಬಲವಿದೆ ಎಂಬ ವಿಷಯವೂ ಸರ್ಕಾರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸಂವಿಧಾನದ 97ನೇ ತಿದ್ದುಪಡಿ ಪ್ರಕಾರ ಸಹಕಾರ ಸಂಘಗಳು ಸ್ವಾಯತ್ತವಾಗಿವೆ. ಇದನ್ನೇ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಲ್ಲಿ ಉಲ್ಲೇಖಿಸಿ, ಗುಜರಾತ್ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ. ಹೀಗಾಗಿ ನಾಮಕರಣ ಸದಸ್ಯರಿಗೆ ಮತದಾನ ಹಕ್ಕು ನೀಡುವುದು ಪ್ರಜಾಪ್ರಭುತ್ವ ಹಕ್ಕಿಗೆ ಚ್ಯುತಿ ತರುತ್ತದೆ ಎಂದು ರಾಜ್ಯಪಾಲರು ಉಲ್ಲೇಖಿಸಿ, ಸಹಕಾರ ಸಂಘಗಳ ಸ್ವಾಯತ್ತ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ:ದೆಹಲಿಯ ಬಾಗಿನವೂ, ಮಹಿಳೆಯರ ಕನಸೂ…


ಸ್ಪಷ್ಟವಾದ ನಿರ್ದೇಶನ: ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿರುವ ಸಹಕಾರಿ ಸಂಘಗಳ ಮೇಲೆ ಕೇಂದ್ರ ಸರ್ಕಾರದ ನಿಯಂತ್ರಣ ಸೀಮಿತಗೊಂಡಿದೆ. ಅಲ್ಲದೆ, ಸಹಕಾರಿ ಸಂಘುಗಳ ಸ್ವಾಯತ್ತತೆ ಬಲಪಡಿಸಿ ರಾಜ್ಯ ಸರ್ಕಾರಗಳ ಇತಿಮಿತಿ ಏನೆಂಬುದುತೋರಿಸಿಕೊಟ್ಟಿದೆ.
ಸಹಕಾರ ಸಂಘಗಳ ನೋಂದಣಿ, ನಿಯಂತ್ರಣ ಮತ್ತು ಲೆಕ್ಕಪರಿಶೋಧನೆಗೆ ಮಾತ್ರ ರಾಜ್ಯ ಸರ್ಕಾರಗಳ ಅಧಿಕಾರವಿದೆ ಎಂದೂ ತಿಳಿಸಿದೆ. ಸಹಕಾರ ಸಂಘಗಳ ಸ್ವಾಯತ್ತತೆಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಕೆಲವೇ ತಿಂಗಳ ಹಿಂದೆ ನೀಡಿದ ಆದೇಶವನ್ನೂ ಸರ್ಕಾರದ ಮೂಲಗಳು ನೆನಪು ಮಾಡುತ್ತಿವೆ ಸಂಘರ್ಷಕ್ಕೆ ಇಳಿದರೆ ಹಿನ್ನಡೆ?: ರಾಜ್ಯಪಾಲರ ಜತೆಗೆ ಸಂಘರ್ಷಕ್ಕೆ ಇಳಿದರೆ ಕಾನೂನು ಹೋರಾಟದಲ್ಲಿ ಹಿನ್ನಡೆ, ನ್ಯಾಯದ ತಕ್ಕಡಿಯಿಂದ ಸರ್ಕಾರ ಕೆಳಗೆ ಬೀಳುವ ಸಾಧ್ಯತೆಗಳೇ ಎಂದು ಸಹಕಾರ ಕಾಯ್ದೆ ತಜ್ಞರು ಹೇಳುತ್ತಾರೆ. ಸಂವಿಧಾನಬದ್ಧವಾಗಿ ರಾಜ್ಯ ಸರ್ಕಾರ ತನಗಿರುವ ಅಧಿಕಾರವನ್ನು ಬಳಸಿಕೊಂಡು ವಿವರಣೆಸಹಿತ ಕಳುಹಿಸಿದರೆ ರಾಜ್ಯಪಾಲರು ಅಂಕಿತ ಹಾಕುವರು. ಆದರೆ ಸಂವಿಧಾನಬದ್ಧ ಅಧಿಕಾರವನ್ನು ಸಹಕಾರ ಸಂಘಗಳು ಬಳಸಿಕೊಂಡು ಹೈಕೋರ್ಟ್ ಕದ ತಟ್ಟಿದರೆ, ಈ ಹಿಂದೆ ನೀಡಿದ ತೀರ್ಪುಗಳ ಪ್ರಕಾರ ಸರ್ಕಾರದ ತಿದ್ದುಪಡಿಗಳ ಬಾಗಿಲು ಮುಚ್ಚಲಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರದ ಮುಂದಿನ ನಡೆ ಏನು?: ಮೂರು ವಿಧೇಯಕಗಳನ್ನು ಮುಂದೆ ಯಾವ ರೀತಿ ತೆಗೆದುಕೊಂಡು ಹೋಗಬೇಕೆಂಬ ಕುರಿತು ಸೋಮವಾರ ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ. ಕಾನೂನು ಸಚಿವರು ಗದಗದಲ್ಲಿದ್ದು ಸೋಮವಾರ ವಿಧಾನ ಮಂಡಲ ಅಧಿವೇಶನಕ್ಕಾಗಿ ಬೆಂಗಳೂರಿಗೆ ಆಗಮಿಸುತ್ತಾರೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸುವರು. ಸದ್ಯದ ಮಾಹಿತಿ ಪ್ರಕಾರ, ರಾಜ್ಯಪಾಲರು ಯಾವ ರೀತಿ ಸ್ಪಷ್ಟನೆ ಕೋರಿದ್ದಾರೋ ಅದೇ ದಾಟಿಯಲ್ಲಿ ಸ್ಪಷ್ಟನೆ ನೀಡಿ ವಾಪಸ್ ಕಳಿಸುವುದು ಮೊದಲ ದಾರಿ. ಹಾಗೆಯೇ ಕಾನೂನು ಸಚಿವರು ಅಥವಾ ಹಿರಿಯ ಸಚಿವರು ರಾಜಭವನಕ್ಕೆ ತೆರಳಿ ಸಹಿ ಮಾಡುವಂತೆ ರಾಜ್ಯಪಾಲರ ಮನವೊಲಿಸುವುದು. ಮೂರನೇ ದಾರಿಯಾಗಿ, ಪುನಃ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಅದನ್ನುರಾಜಭವನಕ್ಕೆ ಕಳಿಸುವುದು. ಆ ಸಂದರ್ಭದಲ್ಲಿ ರಾಜ್ಯಪಾಲರು ಒಪ್ಪದೇ ವಿಧಿ ಇಲ್ಲ ಎಂದು ಕಾನೂನು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Leave a Comment