ಕ್ರಿಕೆಟ್: ‘ ಡಬಲ್ ವಿಶ್ವ ಚಾಂಪಿಯನ್ ಕೋಚ್’ ನೋಷಿನ್
ಮನದ ಮಾತು :ನಾಯಕಿ ನಿಕಿಗೆ ಶ್ಲಾಘನೆ ಮೊದಲನೆಯದು ಕನಸು, ಎರಡನೆಯದು ವಿಶೇಷ..
ಬೆಂಗಳೂರು: ಚೊಚ್ಚಲ ವಿಶ್ವಕಪ್ ಜಯಿಸಿದಾಗ ಕನಸು ನನಸಾಗ ಸಂತಸ. ಈಗ ಎರಡನೇಯದನ್ನು ಜಯಸಿದ್ದು ವಿಶೇಷ ಹಾಗೂ ಎರಡು ವಿಶ್ವಕಪ್ ಜಯಸಿದ್ದು ಸಹಜ ಸಾಮರ್ಥ್ಯದಿಂದ ಎಂಬುದನ್ನು ಸಾಬೀತು ಮಾಡಲು ಮೂರನೇ ಪ್ರಶಸ್ತಿ ಗೆಲ್ಲಬೇಕು.
ಮಲೇಶಿಯಾದಲ್ಲಿ ಈಚೆಗೆ 19 ವರ್ಷದೊಳಗಿನವರು ಟಿ ಟ್ವೆಂಟಿ ವಿಶ್ವಕಪ್ ಜಯಿಸಿದ ಭಾರತ ಯುವ ತಂಡದ ಮುಖ್ಯ ಕೋಚ್ ನೋಷಿನ್
ಅಲ್ ಖಾದೀರ್
ಅವರ ನುಡಿಗಳಿವು. ಡಬಲ್ ವಿಶ್ವಚಾಂಪಿಯನ್ ಕೋಚ್ ನೋಷಿನ್ ಅವರು ಕರ್ನಾಟಕದವರು. ಪುರುಷರ ಕ್ರಿಕೆಟ್ ವಿಭಾಗದಲ್ಲಿ ಜೂನಿಯರ್ ಮತ್ತು ಯೂತ್ ವಿಭಾಗದಲ್ಲಿ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಂತೆಯೇ ನೂಷಿನ್ ಕೂಡ ಮಹಿಳಾ ಕ್ರಿಕೆಟ್ ನಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2023 ರಲ್ಲಿ ಶಫಾಲಿವರ್ಮ ನಾಯಕತ್ವದ ತಂಡವು 19 ವರ್ಷದೊಳಗಿನ ವರ ಚೊಚ್ಚಲ ಟಿ20 ವಿಶ್ವಕಪ್ ಜಯಿಸಿತ್ತು. ಈಗ ಕರ್ನಾಟಕದ ನಿಕಿ ಪ್ರಸಾದ್ ಅವರ ನಾಯಕತ್ವದಲ್ಲಿ ಮತ್ತೆ ಕಿರೀಟ ಧರಿಸಿದೆ. ಎರಡು ಸಲವೂ ನೋಷಿನ್ ಮುಖ್ಯ ಕೋಚ್ ಆಗಿದ್ದರು. ಅವರು ತಮ್ಮ ಅನುಭವವನ್ನು ಪ್ರಜಾವಾಣಿಯೊಂದಿಗೆ ಹಂಚಿಕೊಂಡಿದ್ದಾರೆ .
ಎರಡು ವಿಶ್ವಕಪ್ ಗೆಲುವುಗಳಲ್ಲಿ ಏನು ವ್ಯತ್ಯಾಸ ಗುರುತಿಸುತ್ತೀರಿ?
ಚೊಚ್ಚಲ ಟ್ರೋಫಿ ಗೆದ್ದು ಇತಿಹಾಸ ರಚಿಸುವ ಕನಸಿತ್ತು .ಅದು ಈಡೇರಿತು. ಈ ಬಾರಿಯದ್ದು ವಿಶೇಷ. ಹೋದ ಸಲ ಭಾರತ ಸೀನಿಯರ್ ತಂಡದಲ್ಲಿ ಆಡಿದ್ದ ಶಫಾಲಿ ವರ್ಮ ಮತ್ತು ರಿಚಾ ಘೋಷ್ ಅವರು ಟೂರ್ನಿಗೆ ಎರಡು ದಿನ ಬಾಕಿ ಇದ್ದಾಗ ಬಂದು ಸೇರಿಕೊಂಡಿದ್ದರು. ಆದರೆ ಈ ಸಲ ಅನುಭವಗಳ ಸಾಂಗತ್ಯ ಇರಲಿಲ್ಲ. ಪ್ರತಿಭಾನ್ವಿತ ಆಟಗಾರ್ತಿಯರು ಅಜೇಯವಾಗಿ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದರು. ಕಳೆದ ಏಳೆಂಟು ತಿಂಗಳುಗಳಲ್ಲಿ ಆಟಗಾರ್ತಿಯರು ಬಹಳ ಪರಿಶ್ರಮಪಟ್ಟಿದ್ದಾರೆ. ಅದರಲ್ಲೂ ಗೊಂಗಡಿ ತ್ರಿಷಾ ಅವರ ಆಟ ಪ್ರಬುದ್ಧವಾಗಿತ್ತು. ಶಫಾಲಿ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದರು.
ಇದನ್ನೂ ಓದಿ: ಗೌರಿಬಿದನೂರು ಉದ್ಯಾನದ ಜಾಗಗಳಲ್ಲಿಯೂ ನಿವೇಶನ ರಚನೆ
ಹೋದ ಸಲವೂ ಆಡಿದ್ದ ಅವರ ಅನುಭವ ಇಲ್ಲಿ ಉಪಯೋಗವಾಯಿತು. ಟಿ ಟ್ವೆಂಟಿ ಬ್ಯಾಟಿಂಗ್ ಗೆ ಹೊಸ ಆಯಾಮ ನೀಡಿದರು .
-ಈ ಗೆಲುವುಗಳು ಭಾರತದ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಹೇಗೆ ನೆರವಾಗ ಬಲ್ಲವೂ?
ಭಾರತ ಮಹಿಳಾ ಕ್ರಿಕೆಟ್ ಗೆ ಈ ಗೆಲುವುಗಳು ಅಪಾರ ಶಕ್ತಿ ತುಂಬಲಿದೆ. ಇವರೇ ಮುಂದೆ ಸೀನಿಯರ್ ತಂಡದ ಆಟಗಾರ್ತಿಯರಾಗುತ್ತದೆ. ಕೌಶಲ, ಗಟ್ಟಿ ಮನೋದಾರ್ಢ್ಯ ಮತ್ತು ಅಪಾರ ಪ್ರತಿಭೆಗಳಿರುವ ಆಟಗಾರ್ತಿಯರು ಇವರು.
– ನಿಕ್ಕಿ ಪ್ರಸಾದ್ ಅವರ ನಾಯಕತ್ವದ ಕುರಿತು ಏನು ಹೇಳುವಿರಿ?
ಅವರು ಮುಂಚೂಣಿ ನಾಯಕಿ. ಇಷ್ಟು ಕಡಿಮೆ ವಯಸ್ಸಿನಲ್ಲಿಯೇ ಅಪಾರ ನಾಯಕತ್ವ ಗುಣ ಹೊಂದಿದ್ದಾರೆ. ತಂಡದಲ್ಲಿ ಯಾರಿಗೆ ಯಾವ ರೀತಿಯ ಸಾಮರ್ಥ್ಯ ಇದೆ ಎಂಬುದನ್ನು ಗುರುತಿಸಿ ಹೊಣೆ ನೀಡಿದ್ದರು. ಶಾಂತ ಚಿತ್ತ ಹಾಗೂ ಲವಲವಿಕೆಯಿಂದ ಸಹ ಆಟಗಾರ್ತಿಯರಿಗೆ ಸ್ಪೂರ್ತಿ ತುಂಬಿ ಮುನ್ನಡೆಸಿದರು. ಉತ್ತಮ ಭವಿಷ್ಯ ಇದೆ ಅವರಿಗೆ.
– ಈ ಗೆಲುವುಗಳಲ್ಲಿ ನೆರವು ಸಿಬ್ಬಂದಿಯ ಪಾತ್ರವೇನು?
– ಇಡೀ ಟೂರ್ನಿಯಲ್ಲಿ ಒಬ್ಬ ಆಟಗಾರ್ತಿಯು ಗಾಯಗೊಳ್ಳದೆ ಆಡಿದ್ದು ನೆರವು ಸಿಬ್ಬಂದಿಯ ಕಾರ್ಯಕತತ್ಪರತೆಗೆ ಉತ್ತಮ ನಿದರ್ಶನ. ಫಿಸಿಯೋ, ಟ್ರೈನರ್ ಮತ್ತಿತರರು ಕಳೆದ ಎಂಟು ತಿಂಗಳುಗಳಿಂದ ತಂಡವನ್ನು ನಿರ್ವಹಿಸಿದ್ದಾರೆ. ಯಶಸ್ಸಿನಲ್ಲಿ ನೆರವು ಸಿಬ್ಬಂದಿಯದ್ದೇ ಸಿಂಹ ಪಾಲಿದೆ. ಮಲೇಶಿಯಾದಲ್ಲಿ ನಮಗೆ ಹಾವಾಗುಣದ್ದೆ ದೊಡ್ಡ ಸವಾಲಿತ್ತು. ಆರಂಭಿಕ ಪಂದ್ಯಗಳ ಸಂದರ್ಭದಲ್ಲಿ ಮಳೆ ಇತ್ತು. ಸೂಪರ್ ಸಿಕ್ಸ್ ಹಾಗೂ ನಂತರ ಸ್ಥಿತಿ ಸುಧಾರಿಸಿತು. ಈ ಬದಲಾವಣೆಗಳಿಗೆ ತ್ವರಿತವಾಗಿ ಹೊಂದಿಕೊಳ್ಳುವಲ್ಲಿ ತಂಡ ಯಶಸ್ವಿಯಾಯಿತು. ಇದರಲ್ಲಿ ನೆರವು ಸಿಬ್ಬಂದಿಯ ಪಾತ್ರವಿತ್ತು.
– ಮಹಿಳಾ ಪ್ರೀಮಿಯರ್ ಲೀ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಟೂರ್ನಿಯು ಹೆಣ್ಣು ಮಕ್ಕಳ ಕ್ರಿಕೆಟ್ ಗೆ ಉತ್ತೇಜನಕಾರಿಯೇ?
– ಹೌದು; ಡಬ್ಲ್ಯೂ ಪಿ ಎಲ್ ಆರಂಭವಾಗಿದ್ದು ಒಳ್ಳೆಯ ಬೆಳವಣಿಗೆ. ಇಲ್ಲಿಯ ಆಟಗಾರ್ತಿಯರಿಗೆ ವಿದೇಶಿ ಆಟಗಾರ್ತಿಯರೊಂದಿಗೆ ಒಡನಾಡಲು ಸಾಧ್ಯವಾಗುತ್ತದೆ. ಅವರ ಆಟ, ವ್ಯಕ್ತಿತ್ವ ಹಾಗೂ ಕಾರ್ಯ ಶೈಲಿಯನ್ನು ಸಮೀಪದಿಂದ ಗಮನಿಸುವ ಅವಕಾಶ ಸಿಗುತ್ತದೆ. ಇದು ಆಟಗಾರ್ತಿಯರಲ್ಲಿ ಆತ್ಮವಿಶ್ವಾಸ ಬೆಳೆಸುತ್ತದೆ . ಜಿ .ಕಮಲಿನಿ ಅವರು ಈಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ರೂ 1.6 ಕೋಟಿ ಪಡೆದು ಸೇರ್ಪಡೆಗೊಂಡರು. ಅಲ್ಲಿ ಆಲ್ರೌಂಡರ್ ನ್ಯಾಟ್ ಸೀವರ್ ಅವರೊಂದಿಗೆ ಆಡುವುದು ಕಮಲಿನಿ ಯಂತಹ ಜೂನಿಯರ್ ಆಟಗಾರ್ತಿಯರಿಗೆ ಉತ್ತಮ ಅನುಭವವಾಗಲಿದೆ.