ಗ್ರಾಮೀಣ ಭಾಗದಲ್ಲಿನ ಕೂಲಿ ಕಾರ್ಮಿಕರು
ಗ್ರಾಮೀಣ ಭಾಗದಲ್ಲಿನ ಕೂಲಿ ಕಾರ್ಮಿಕರು,ಬಡತನ ರೇಖೆ ಕೆಳಗಿನವರು ರೈತರು ಹಾಗೂ ಇತರೆ ಆರ್ಥಿಕವಾಗಿ ಹಿಂದುಳಿದವರ ಅನುಕೂಲಕ್ಕಾಗಿ ಸಮುದಾಯದ ಆಸ್ತಿ ಸೃಜನೆಗಾಗಿ ಮನರೇಗಾ ಉತ್ತಮ ಯೋಜನೆಯಾಗಿದೆ ಎಲ್ಲಾ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕೆಂದು
ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ನಿಟ್ಟಾಲಿ ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಉಪ ಕಾರ್ಯದರ್ಶಿ ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮನರೇಗಾ ಸೇರಿದಂತೆ ನಾನಾ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಸರ್ಕಾರ ರೂಪಿಸಿರುವ ನೀತಿ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಆಗುತ್ತದೆ ಆಗ ನಿಮ್ಮ ನೆರವಿಗೆ ಯಾರೊಬ್ಬರೂ ಬರಲಾರರು ಆದ್ದರಿಂದ ಯಾರ ಒತ್ತಡಕ್ಕೂ ಯಾವ ಒತ್ತಡಕ್ಕೂ ಮಣಿಯದೆ ಕಾರ್ಯನಿರ್ವಹಿಸಿ ಎಂದು ಹೇಳಿದರು.
ಮನರೇಗಾ ಕಾಮಗಾರಿ ನಡೆಸುವಾಗ ಸರಕಾರ ರೂಪಿಸಿರುವ ಯಾವೊಂದು ನೀತಿ,ನಿಯಮಗಳನ್ನು ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿ,ಎಂಜಿನಿಯರ್ಗಳು ಮನರೇಗಾ ಯೋಜನೆಯಡಿ ತೊಡಗಿಸಿಕೊಂಡವರಿಗೆ ತಿಳಿಸಿದರು.
ಇದನ್ನೂ ಓದಿ: ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಖಾಯಿಲೆ ಹರಡುತ್ತದೆ!
ಗ್ರಾಮೀಣ ಭಾಗದಲ್ಲಿನ ಕೂಲಿ ಕಾರ್ಮಿಕರು
ನರೇಗಾ ಮಾನವ ದಿನಗಳ ಸೃಜನೆ,ಕಾಮಗಾರಿಗಳ ಮುಕ್ತಾಯ ವರದಿ,ಜಿಯೋ ಟ್ಯಾಗ್ ಮತ್ತಿತರ ವಿಷಯಗಳ ಪ್ರಗತಿಯ ಮಾಹಿತಿಯನ್ನು ಪಡೆದರು.
ಇದೇ ವೇಳೆ ಎಸ್.ಡಬ್ಲ್ಯೂ.ಎಂ. ಘಟಕದಿಂದ ತರಬೇತಿ ಪಡೆದ ಸ್ವಸಹಾಯ ಸಂಘದ ಮಹಿಳೆಯರಿಗೆ ವಾಹನಗಳ ಪರವಾನಗಿಯನ್ನು ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಯೋಜನಾ ನಿರ್ದೇಶಕರಾದ ಈಶ್ವರಪ್ಪ,ನರೇಗಾ ಸಹಾಯಕ ನಿರ್ದೇಶಕರಾದ ಚಂದ್ರಪ್ಪ, ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು,ಜಿಲ್ಲಾ ಪಂಚಾಯತಿ ಎಡಿಪಿಸಿ,ಡಿಪಿಎಂ ಮತ್ತಿತರರು ಹಾಜರಿದ್ದರು.