ಚಿನ್ನ ವಾಪಸ್ ಕೊಟ್ಟ ವರ್ತೂರ್ ಪ್ರಕಾಶ್
ಅಪ್ತೆ ಸೋವಿನಲ್ಲಿ ಮಹಿಳೆಯಿಂದ ವಂಚನೆ ಪ್ರಕರಣ. ಪೊಲೀಸರಿಂದ ಮಾಜಿ ಸಚಿವರ ವಿಚಾರಣೆ
ಬೆಂಗಳೂರು :ಚಿನ್ನಾಭರಣ ಪಡೆದು ಅಂಗಡಿ ಮಾಲೀಕರಿಗೆ ₹2.42 ಕೋಟಿ ವಂಚಿಸಿದ್ದ ಪ್ರಕರಣದ ಸಂಬಂಧ ಮಾಜಿ ಸಚಿವ ವರ್ತೂರ್ ಪ್ರಕಾಶ್ ಅವರನ್ನು ಪೊಲೀಸರು ಮಂಗಳವಾರ ವಿಚಾರಣೆಗೆ ನಡೆಸಿದರು. ಕಾಮಾಷ್ಮಿಯಲಸ್ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಬಾಗಲಕೋಟೆ ನಿವಾಸಿ ಶ್ವೇತ ಗೌಡ ಅವರನ್ನು ಬಂಧಿಸಲಾಗಿತ್ತು. ಆಕೆಯ ಹೇರಿಕೆ ಆಧರಿಸಿ ವಿಚಾರಣೆಗೆ ಬರುವಂತೆ ವರ್ತೂರು ಪ್ರಕಾಶ್ ಅವರಿಗೆ ಪೊಲೀಸರು ಮೂರು ನೋಟಿಸ್ ಜಾರಿ ಮಾಡಿದ್ದರು .ಮಂಗಳವಾರ ವಿಚಾರಣೆಗೆ ಬಂದಿದ್ದ ಪ್ರಕಾಶ್ ಅವರನ್ನು ಭಾರತಿ ನಗರ ಠಾಣೆಯಲ್ಲಿ ಪುಲಕೇಶಿ ನಗರ ಉಪ ವಿಭಾಗದ ಎಸಿಪಿ ಗೀತಾ, ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡರು ಎಂದು ಗೊತ್ತಾಗಿದೆ .
ಇದನ್ನೂ ಓದಿ: ವಾಜಪೇಯಿ ತಮ್ಮದೇ ಕವಿತೆಯ ಆಶಯವನ್ನು ಪಾಲಿಸಿದ್ದುದು ಗಮನಾರ್ಹ
ವರ್ತೂರು ಪ್ರಕಾಶ್ ಆಪ್ತೇ ಎಂದು ಪರಿಚಯಿಸಿಕೊಂಡಿದ್ದ ಶ್ವೇತಾ ಗೌಡ ಅವರು ಕಾಮಾಷ್ಮಿಯ ಲ್ ಸ್ಟ್ರೀಟ್ ನ ನವರತ್ನ ಜುವೆಲ್ಲರ್ಸ ಮಾಲಿಕ ಸಂಜಯ್ ಬಾಫ್ನಾ ಅವರಿಂದ ಸುಮಾರು 2.945ಕೆ.ಜಿ ಚಿನ್ನ ಪಡೆದು ವಂಚಿಸಿದ್ದರು.ದರು ಆಧರಿಸಿ ಮೈಸೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.ಶ್ವೇತಾ ಅವರು ನಿಮಗೆ ಹೇಗೆ ಪರಿಚಯ ? ಇಬ್ಬರು ಎಲ್ಲಾದರೂ ಸುತ್ತಾಟ ಮಾಡಿದ್ದೀರಾ? ಮಹಿಳೆ ತಮ್ಮಗೆ ಏನೆಲ್ಲಾ ಉಡುಗೊರೆ ಕೊಟ್ಟಿದ್ದರು? ಉಡುಗೊರೆ ಕೊಡಲು ಕಾರಣವೇನು ?ಎಂದು ವರ್ತೂರು ಅವರಿಗೆ ಪ್ರಶ್ನೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ . ಶ್ವೇತಾ ಅವರಿಗೆ ಚಿನ್ನ ನೀಡುವಂತೆ ಅಂಗಡಿ ಮಾಲೀಕರಿಗೆ ಶಿಫಾರಸು ಮಾಡಿಲ್ಲ. ನನ್ನ ಹೆಸರು ಬೆಳೆಸಿಕೊಂಡು ಚಿನ್ನಾಭರಣ ಖರೀದಿ ಮಾಡಿಕೊಂಡಿದ್ದಾರೆ .ವಂಚನೆ ಪ್ರಕಾರದಲ್ಲಿ ನನ್ನ ಪಾತ್ರವಿಲ್ಲ’ ಎಂದು ವರ್ತೂರ್ ಪ್ರಕಾಶ್ ಹೇಳಿದ್ದಾರೆ ಎಂದು ಗೊತ್ತಾಗಿದೆ.’
ಈ ಘಟನೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ಚಿನ್ನದ ಅಂಗಡಿಯವರು ಅಷ್ಟು ಮೊತ್ತದ ಚಿನ್ನವನ್ನು ಹೇಗೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಇನ್ನು ಕೆಲವು ರಾಜಕಾರಣಿಗಳು ಹೆಸರು, ಫೋಟೋ ತೆಗೆದುಕೊಂಡು ಅಕೆ ವಂಚನೆಮಾಡಿದ್ದಾರೆ’ ಎಂದು ಪ್ರಕಾಶ್ ಹೇಳಿಕೆ ನೀಡಿದ್ದಾರೆ. ಆರೋಪಿ ಮಹಿಳೆ ನೀಡಿದ ಚಿನ್ನದ ಉಡುಗೊರೆಗಳನ್ನು ವರ್ತೂರ್ ಪ್ರಕಾಶ್ ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ. ‘ನವರು ,ಚಿನ್ನಾಭರಣ ವಾಪಸ್ ನೀಡಿದ್ದಾರೆ. ಅದರ ಮೌಲ್ಯ ಅಂದಾಜಿಸಲಾಗುತ್ತಿದೆ. ವಾಪಸ್ ನೀಡಿದ ಚಿನ್ನವನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸಂಜಯ್ ಬಾಪ್ನಾ ಅವರ ಮಗಳಿಗೆ ಬರುತ್ತಿದ್ದ ಮಹಿಳೆ ,’ಮಾಜಿ ಸಚಿವ ವರ್ತೂರುಪ್ರಕಾಶ್ ಅವರ ಆಪ್ತೇ’ ಎಂದು ಪರಿಚಯಿಸಿಕೊಂಡಿದ್ದರು .’ನಾನು ಚಿನ್ನಾಭರಣ ವ್ಯಾಪಾರ ಆರಂಭಿಸುತಿದ್ದು ,ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ, ಎಂದಿದ್ದರು ಸಂಜಯ್ ಸಹ ಇದಕ್ಕೆ ಒಪ್ಪಿದರು. ಮನೆಯವರಿಗೆ ತೋರಿಸಿಕೊಂಡು ಬರುವುದಾಗಿ ಅನುಮತಿ ಪಡೆದು ಮಹಿಳೆ ತನ್ನ ಮನೆಗೆ ಆಭರಣ ಒಯ್ದಿದ್ದರು. ವರ್ತೂರು ಪ್ರಕಾಶ್ ಅವರ ಪುತ್ರನಜತೆಗೆ ಆರೋಪಿ ಮಹಿಳೆ ಸುತ್ತಾಟ ನಡೆಸುವುದು ಗೊತ್ತಾಗಿದೆ. ಹೀಗಾಗಿ ವಿಚಾರಣೆಗೆ ಬರುವಂತೆ ಅವರಿಗೂ ನೋಟಿಸ್ ನೀಡಲಾಗಿದೆ.