ಟೋಲ್ ವಸೂಲಿ ಮಾಡಿದರೂ ಸೌಲಭ್ಯವಿಲ್ಲ

ರಸ್ತೆ ಕಾಮಗಾರಿ ಕೆಲವೆಡೆ ಅಪೂರ್ಣ, ಸೂಚನಾ ಫಲಕಗಳ ವ್ಯವಸ್ಥೆಯೂ ಇಲ್ಲ । ಬೀದಿ ದೀಪಗಳ ಸಮಸ್ಯೆ ಬಗೆಹರಿಸಲು ನಿರಾಸಕ್ತಿ

ಟೋಲ್ ವಸೂಲಿ ಮಾಡಿದರೂ ಸೌಲಭ್ಯವಿಲ್ಲ

ದೊಡ್ಡಬಳ್ಳಾಪುರದ ಮೂಲಕ ಹಾದು ಹೋಗಿರುವ ಯಲಹಂಕ-ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಟೋಲ್ ವಸೂಲಿ ಮಾತ್ರ ಉತ್ತಮವಾಗಿ ನಡೆಯುತ್ತಿದೆ. ಆದರೆ, ಸೌಲಭ್ಯಗಳ ವಿಷಯದಲ್ಲಿ ಮಾತ್ರ ಹಿಂದುಳಿದಿದೆ. ಈ ಮೂಲಕ ಜನರ ಸಂಚಾರಕ್ಕೆ ಸಾಕಷ್ಟು ಸವಾಲು ತಂದೊಡ್ಡಲಾಗಿದೆ. ದೊಡ್ಡಬಳ್ಳಾಪುರದ ಮಾರಸಂದ್ರದಿಂದ ಗೌರಿಬಿ ದನೂರು ಗಡಿಯವರೆಗೂ ದೊಡ್ಡಬಳ್ಳಾಪುರವನ್ನು ಹಾದು ಹೋಗಿರುವ ರಾಜ್ಯ ಹೆದ್ದಾರಿಯು 2 ಕಡೆಗಳಲ್ಲಿ ಟೋಲ್ ವಸೂಲಾತಿ ಕೇಂದ್ರವನ್ನು ಹೊಂದಿದೆ. ಇವುಗಳಲ್ಲಿ ಟೋಲ್ ವಸೂಲಿ ಸಮರ್ಪ ಕವಾಗಿ ನಡೆಯುತ್ತಿದೆ. ಆದರೆ, ಈ ಹೆದ್ದಾರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಆ ಬಗ್ಗೆ ಟೋಲ್ ಅಧಿಕಾರಿಗಳು, ಸಿಬ್ಬಂದಿ ಮಾತ್ರ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಿದೆ.


ಈ ಹೆದ್ದಾರಿಯಲ್ಲಿ ವಾಹನ ದಟ್ಟನೆ ಹೆಚ್ಚಾಗಿದ್ದರೂ ಸೂಚನಾ ಫಲಕಗಳ ವ್ಯವ ಸ್ಥೆಯೂ ಇಲ್ಲ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಈ ಬಗ್ಗೆ ದೊಡ್ಡಬಳ್ಳಾ ಪುರ ಶಾಸಕರು ಮಾತ್ರವಲ್ಲದೆ ಜನಪ್ರತಿನಿಧಿ ಗಳು ಮನವಿ ಮಾಡಿದರೂ ಯಾವುದೇಪ್ರಯೋಜನವಾಗಿಲ್ಲ.ಬೆಂಗಳೂರಿನಿಂದ ಹಿಂದೂಪುರಕ್ಕೆ ಸಂಪರ್ಕ ನೀಡುವ ರಸ್ತೆಯಿದಾಗಿದ್ದು,ವಾಹನ ಸಂಚಾರ ಹೆಚ್ಚಾಗಿರುತ್ತದೆ. ಆದರಲ್ಲೂ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಾಹನ ದಟ್ಟನೆ ಹೆಚ್ಚಿನ ಪ್ರಮಾಣದಲ್ಲಿರಲಿದೆ. ಆದರೆ ಹಲ ವೆಡೆ ಕಾಮಗಾರಿ ಅಪೂರ್ಣಗೊಂಡಿದ್ದು, ಅಪಘಾತಗಳು ಸಂಭವಿ ಸುತ್ತಿವೆ. ಇಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಒಂದಿಷ್ಟು ಕಡೆ ಟೋಲ್ ಸಿಬ್ಬಂದಿ ಭೇಟಿ ನೀಡಿದ್ದು ಬಿಟ್ಟರೆ, ಆದರಿಂದಯಾವುದೇ ಬದಲಾವಣೆಯಾಗಿಲ್ಲ.

ಇದನ್ನೂ ಓದಿ:ಮುಡಾ ಹಗರಣ: ಇ.ಡಿ ಕಾತುಕ ಬಾಕಿ


ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಏನೇನು ಸಮಸ್ಯೆ?: ಈ ಟೋಲ್ ರಸ್ತೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದರಲ್ಲಿ ಪ್ರಮುಖವಾಗಿ ಹಲವೆಡೆ ಭೂಸ್ವಾಧೀನ ಪೂರ್ಣಗೊಳ್ಳದೆ ಕಾಮ ಗಾರಿ ಸಮರ್ಪಕವಾಗಿ ನಡೆದಿಲ್ಲ. ಕೆಲವೆಡೆ ರಸ್ತೆ ಕಿರಿದಾಗಿದೆ. ಬಾಶೆಟ್ಟಿಹಳ್ಳಿ, ಮುತ್ತೂರು ಸೇರಿದಂತೆ ಹಲವೆಡೆ ಇದೇ ಸ್ಥಿತಿಯಿದೆ. ಇನ್ನೂ ಹೆಚ್ಚಾಗಿ ಅಪಘಾತಗಳು ಸಂಭವಿಸುವ ಕಡೆಗಳಲ್ಲಿ ತಿರುವುಗಳಲ್ಲಿ ಸೂಚನಾ ಫಲಕಗಳ ಅಳವಡಿಸಿಲ್ಲ.ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಇನ್ನೂ ಕೆಲವೆಡೆ ರಸ್ತೆಯನ್ನು ದಾಟಲುಸ್ಕೈವಾಕ್ ಅಗತ್ಯವಿದ್ದರೂ, ವ್ಯವಸ್ಥೆಯಿಲ್ಲ. ಸಂಜೆ ಹಾಗೂ ರಾತ್ರಿ ವೇಳೆ ಈ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವು ದರಿಂದ, ಬೀದಿ ದೀಪಗಳ ವ್ಯವಸ್ಥೆ ಅಗತ್ಯವಾಗಿದೆ. ಟೋಲ್ ರಸ್ತೆಯಲ್ಲಿ ಕೆಲವೆಡೆ ಬೀದಿ ದೀಪಗಳ ಅಳವಡಿಸಿಲ್ಲ. ಕೆಲವೆಡೆ ಅಳವಡಿಸಿದ್ದರೂ, ಅದು ಹಾಳಾಗಿವೆ. ಈಗಾಗಲೇ ದೊಡ್ಡಬಳ್ಳಾಪುರ ಶಾಸಕರು ಟೋಲ್ ವಸೂಲಾತಿಯನ್ನು ರದ್ದು ಮಾಡುವಂತೆ ಸಚಿವರಿಗೆ ಮನವಿ ಮಾಡಿದ್ದಾರೆ. ಜತೆಗೆ ಹಲವುಬಾರಿ ಸೌಲಭ್ಯ ಒದಗಿಸಲು ಸೂಚನೆ ನೀಡಿದ್ದರು.

Leave a Comment