ದೇವಪುತ್ರ, ಯೇಸು
ನಮ್ಮ ಹಳ್ಳಿಗಳಿನ ಕ್ರೈಸ್ತ ಜನಪದರು ಕೋಲಾಟವಾಡುವಾಗ ಹೀಗೆ ಹಾಡುತ್ತಾರೆ:
‘ಅಗೊಸ್ತುಸ್ ರಾಯನಿಂದ ಬಂದ ಆಣತಿಯ
ಮೇರೆಗೆ
ದಾವಿದ್ ಕುಲದ ಜೋಸೆಫ್ ತನ್ನ ಪತ್ನಿಯೊಂದಿಗೆ ಬೆತ್ಲೆಹೇಮ್ ಗ್ರಾಮಕ್ಕೆ ಈರ್ವರೂ ತ್ವರೆಯೊಳು ಬಂದರು
ಮನೆಗಳು ಸಿಕ್ಕದೆ ದನಗಳ ಕೊಟ್ಟಿಗೆಯೊಂದಲಿ ತಂಗಿದರು
ಡಿಸೆಂಬರ್ ತಿಂಗಳಿನ ಇಪ್ಪತ್ತೈದನೇ
ಸುದಿನದಲಿ
ಮಧ್ಯರಾತ್ರಿ ದೇವಪುತ್ರ ಯೇಸು ಜನಿಸಿದನು’
ಹೀಗೆ ಪ್ರತಿ ವರ್ಷವೂ ಇಡಿ ಜಗತ್ತಿನಾದ್ಯಂತ ಕ್ರಿಸ್ಮಸ್ ಆಚರಣೆ ಡಿಸೆಂಬರ್ 25ರಂದು ಜನ ಜನತಿ ವಾಗಿದೆ.
ಆದರೆ ನಿಜವಾಗಿಯೂ ಕ್ರಿಸ್ತ ಹುಟ್ಟಿದ್ದು ಎಂದು? ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಜೂಲಿಯನ್ ಕ್ಯಾಲೆಂಡರಿನ ಪ್ರಕಾರ ಡಿಸೆಂಬರ್ 24ರ ನಡುರಾತ್ರಿ ಸೂರ್ಯನು ಮಕರ ಸಂಕ್ರಾಂತಿಯನ್ನು ದಾಟುವ ಸಂದರ್ಭ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಬೆಳಕಿನ ಹಬ್ಬವಾಗಿತ್ತು. ಯೇಸು ಕ್ರಿಸ್ತರ ಶುಭ ಸಂದೇಶವನ್ನು ಸೂರುತ್ತಾ ಅವರ ಶಿಷ್ಯರು ದೇಶವಿದೇಶಗಳಲ್ಲಿ ಸಂಚರಿಸುತ್ತಾ ಸಾಗಿದಂತೆ ಕ್ರಿಸ್ತತತ್ವವನ್ನು ಅನುಸರಿಸುವ ಅಪಾರ ಅನುಯಾಯಿಗಳು ಹುಟ್ಟಿಕೊಂಡರು.
ಇಸ್ರೇಲಿನ ಮೂಡಣ ನಾಡುಗಳಲ್ಲಿ ಸಾಂಸ್ಕೃತಿಕವಾಗಿ ಸಮೃದ್ಧವಾಗಿದ್ದ ಗ್ರೀಕ್, ಸಿರಿಯಾ ಮುಂತಾದ ದೇಶಗಳಲ್ಲಿ ಡಿಸೆಂಬರ್ 25 ರಿಂದ ಪ್ರಾರಂಭವಾಗಿ ಒಂದು ವಾರ ಆಚರಿಸಲಾಗುತ್ತಿದ್ದ ಸೂರ್ಯ ದೇವರ ಜಾತ್ರೆ ಪ್ರಮುಖವಾಗಿತ್ತು.
ಕ್ರಿಸ್ತಶಕ 306 ರಲ್ಲಿ ರೋಮ್ ಚಕ್ರವರ್ತಿಯಾದ ಕಾನ್ ಸ್ಟಂಟೈನ್ ಮಹಾರಾಜನ ಕ್ರೈಸ್ತ ಧರ್ಮವನ್ನು ಅಪ್ಪಿಕೊಂಡ ಮೇಲೆ ಕ್ರೈಸ್ತ ಧರ್ಮವು ರಾಜ ಧರ್ಮ ವಾಯಿತು. ಅದೇ ಸಂದರ್ಭದಲ್ಲಿ ಪ್ರಜೆಗಳ ನೆಚ್ಚಿನ ವಾರ್ಷಾಂತ್ಯದ ಜಾನಪದ ಜಾತ್ರೆಯಾಗಿದ್ದ ಸೂರ್ಯನ ಹಬ್ಬವು ರೋಮಿನೊಳಗೂ ಕಾಲಿಟ್ಟು ಜಾಗದ ಹಬ್ಬವಾಯಿತು. ಕ್ರೈಸ್ತ ಧರ್ಮಪೀಠದ ಅಧಿಕಾರಿಯೂ ಆಗಿದ್ದ ಕಾನ್ ಸ್ಟಂಟೈನ್ ಚಕ್ರವರ್ತಿಯು ಕ್ರಿಸ್ತಶಕ 325 ರಲ್ಲಿ ನೈಸಿಯಾ ಪಟ್ಟಣದಲ್ಲಿ ವಿಶ್ವ ಕ್ರೈಸ್ತ ಅಧಿವೇಶವವನ್ನು ಆಯೋಜಿಸಿ, ಅದರಲ್ಲಿ ಕೆಲವು ನಿರ್ಣಯ ಗಳನ್ನು ಅಂಗೀಕರಿಸಿದ. ‘ಮನುಷ್ಯನಾಗಿ ಜನಿಸಿ ನಮ್ಮ ಜೊತೆಯಲ್ಲೇ ಬಾಳಿದ ಯೇಸು ಕ್ರಿಸ್ತರೇ ಜಗತ್ತಿಗೆಲ್ಲ ಪ್ರೀತಿ ಶಾಂತಿಯ ಬೆಳಕನ್ನು ನೀಡುವ ನೈಜ ಸೂರ್ಯ’-ಎಂಬುದು ಒಂದು ಪ್ರಮುಖ ನಿರ್ಣಯವಾಗಿತ್ತು. ಹೀಗೆ ಸೂರ್ಯನ ಹಬ್ಬವು ಕ್ರಿಸ್ತ ಜಯಂತಿಯಾಯಿತು, ಡಿಸೆಂಬರ್ 25ರಂದೇ ಕ್ರಿಸ್ತನು ಉದಯಿಸಿದ ಎಂಬುದನ್ನು ಜಗತ್ತು ಒಪ್ಪಿಕೊಂಡಿತ್ತು.
ಇದನ್ನೂ ಓದಿ:- ಮೂರು ತಾಸು ಅಲ್ಲು ಅರ್ಜುನ್ ವಿಚಾರಣೆ
ಯೇಸುಕ್ರಿಸ್ತನ ನಾಡಿನಲ್ಲಿದ್ದ ಯೆಹೂದ್ಯ ಜನಾಂಗವು ತಮ್ಮ ಇತಿಹಾಸದುದ್ದಕ್ಕೂ ಫರೋಹ,ಹಮ್ಮುರಾಬಿ,ನೆಬುಕದ್ನೆಜರ್ ಮುಂತಾದವರ ಆಧೀನದಲ್ಲಿ ನಲುಗಿ ಯೇಸು ಕ್ರಿಸ್ತರ ಕಾಲಕ್ಕಾಗಲೇ ರೋಮನ್ ಚಕ್ರಾಧಿ ಪತ್ಯದ ಆಧೀನಕ್ಕೆ ಒಳಗಾಗಿದ್ದರು. ಅಲ್ಲದೆ ಅವರು ತಮ್ಮ ಶತ್ರುಗಳನ್ನು ಹೊಡೆದೋಡಿಸ ಬಲ್ಲ ಸಮರ್ಥ ನಾಯಕನ ನಿರೀಕ್ಷೆಯಲ್ಲಿದ್ದರೂ.
ಈ ಸಂದರ್ಭದಲ್ಲಿ ಮಾರಿಯಾ ಮತ್ತು ಜೋಸೆಫರು ಚಕ್ರವರ್ತಿ ಆಗಸ್ತುಸನ ಆದೇಶಕ್ಕೆ ತಲೆಬಾಗಿ ಜನಗಣ ತಿಯಲ್ಲಿ ತಮ್ಮ ಹೆಸರು ದಾಖಲಿಸಲು ಹುಟ್ಟೂರು ಬೆತ್ಲೆ ಹೋಮ್ ಗ್ರಾಮವನ್ನು ತಲುಪಿ ಮನೆಮನೆಯ ಬಾಗಿಲು ಬಡಿದು ನಿರಾಶರಾಗಿ ಕೊನೆಗೆ ದನಗಳ ಕೋಟ್ಟಿಗೆಯಲ್ಲಿ ತಂಗುತ್ತಾರೆ. ಆ ರಾತ್ರಿ ತುಂಬು ಗರ್ಭಿಣಿ ಮರಿಯಳು ದೈವೀ ಕಂದನನ್ನು ಹಡೆಯುತ್ತಾಳೆ. ಕರುಗಳು ಹುಲ್ಲು ತಿನ್ನುವ ಬೋಗುಣಿಯಾಕಾರದ ಮರದ ಗೋದಲಿಯಲ್ಲಿ ಹುಲ್ಲು ಹಾಸಿನ ನಡುವೆ ಬೆಚ್ಚಗಿನ ಬಟ್ಟೆಗಳನ್ನು ಸುತ್ತ ಮಗುವನ್ನು ಮಲಗಿಸಲಾಗುತ್ತದೆ.
ಅಜ್ಞಾತನಾಗಿಯೇ ಬೆಳೆಯುವ ಯೇಸು ವು 30 ವರ್ಷ ಪ್ರಾಯಸ್ತನಾಗುತ್ತಿದ್ದಂತೆಯೇ ಕಾಂತ್ರಿಪುರುಷನಾಗಿ ಕಣ್ಣಿಗೆ ಕಣ್ಣು, ಹುಲಿಗೆ ಹುಲ್ಲು ಅಲ್ಲ’,’ನಿನ್ನ ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು’ಎಂದು ಸಾರುತ್ತಾರೆ. ಹಾದರಗಿತ್ತಿ ಹೆಣ್ಣನ್ನು ಸರ್ವಜನಿಕವಾಗಿ ಹೊಡೆದು ಕೊಲ್ಲಬೇಕೆಂಬ ನೀತಿಗೆ ಅವರ ಪ್ರತಿಕ್ರಿಯೆ ವಿನೂತನವಾಗಿತ್ತು. ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನು ಸಮಾನ ತಪ್ಪಿತಸ್ಥನಲ್ಲವೇ? ಎಂಬುದನ್ನು ಸೂಚ್ಯವಾಗಿ ತಿಳಿಸಿ ಮಹಿಳೆಗೆ ಕ್ಷಮಾದಾನದೊಂದಿಗೆ ಜೀವದಾನವನ್ನೊ ಮಾಡಿದ್ದರು .
ಇಡಕು ಮಾಡುವವರನ್ನು ಕ್ಷಮಿಸು; ಇತರರ ತಪ್ಪನ್ನು ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ; ಹೃದಯವನ್ನು ಪವಿತ್ರವಾಗಿಸಿಕೊಂಡ ವನು ದೇವರನ್ನು ಕಾಣುವನು -ಎಂಬುದೇ ಯೇಸು ಕ್ರಿಸ್ತರ ಬೋಧನೆಯ ಸಾರ.