ದೇಶದ ಅರಣ್ಯ ಸ್ಥಿತಿಗತಿ: ಅಂಕಿಅಂಶದಡಿ ವಸ್ತುಸ್ಥಿತಿ ಮರೆಮಾಚಿದರೆ ಪ್ರಯೋಜನ ಇಲ್ಲ
ಭಾರತದ ಅರಣ್ಯ ಸ್ಥಿತಿಗತಿಯ ವಾರ್ಷಿಕ ವರದಿ ಬಸ್ (ಐಎಎಸ್ಎಫ್ಆರ್) ಈಚೆಗೆ ಬಿಡುಗಡೆಯಾಗಿದೆ .ಅದರಲ್ಲಿರುವ ಅಂಕಗಳು ಸಂಭ್ರಮಕ್ಕೆ ಅಲ್ಲ, ಕಣವಳಕ್ಕೆ ಕಾರಣವಾಗಿವೆ .ದೇಶದ ಒಟ್ಟು ಭೂಭಾಗದ ಶೇಕಡ.25ರಷ್ಟು ಪ್ರದೇಶವು ಅರಣ್ಯದಿಂದ ಆವೃತವಾಗಿದೆ, ಒಂದು ವರ್ಷದಲ್ಲಿ1,445 ಚದರ ಕಿಲೋಮೀಟರ್ ಅರಣ್ಯಹೆಚ್ಚಳವಾಗಿದೆ ಎಂದು ವರದಿಯಲ್ಲಿ ಇದೆ. ಅರಣ್ಯ ಪ್ರದೇಶ ಹೆಚ್ಚಳವಾಗಿ ರುವುದು ಸ್ವಾಗತಾರ್ಹ. ಆದರೆ, ಅರಣ್ಯದ ವ್ಯಾಖ್ಯಾನವನ್ನುಬದಲಾಯಿಸಿದ್ದರಿಂದಾಗಿಯೇ ಅರಣ್ಯ ಪ್ರದೇಶ ಹೆಚ್ಚಳವಾಗಿದೆ. ಹಾಗಾಗಿ, ಈ ಹೆಚ್ಚಳ ವಾಸ್ತವಿಕಾನವನ್ನು ಅಲ್ಲ ಒಂದು ಹೆಕ್ಟರ್ ಪ್ರದೇಶದ ಶೇ 10ರಷ್ಟು ಭಾಗದಲ್ಲಿ ಮರಗಳಿದ್ದರೆ ಆ ಇಡೀ ಪ್ರದೇಶವನ್ನವೇನೂ ಅಲ್ಲು ಒಂದು ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (ಎಫ್ಎಸ್ಐ) ವ್ಯಾಖ್ಯಾನಿಸುತ್ತದೆ. ಇದು ಬಹು ಆರಾಮಾದ ವ್ಯಾಖ್ಯಾನ, ಈ ವ್ಯಾಖ್ಯಾನದಿಂದಾಗಿ ತೋಟಗಳು ಕೂಡ ಅರಣ್ಯ ಎಂದು ಪರಿಗಣಿತವಾಗುತ್ತವೆ.
ಒಂದು ಹೆಕ್ಟೇರ್ಗಿಂತ ಕಡಿಮೆ ಪ್ರದೇಶದಲ್ಲಿ ಮರಗಳಿದ್ದರೆ ಕೂಡ ಆ ಇಡೀ ಪ್ರದೇಶವನ್ನು ಮರಗಳಿರುವ ಪ್ರದೇಶ ಎಂದು ಪರಿಗಣಿಸಲಾಗಿದೆ. ಬಿದಿರು ಮಳೆಗಳನ್ನು ಸಹ ಮರಗಳಿರುವ ಪ್ರದೇಶ ಎಂದು ವರ್ಗೀಕರಿಸಲಾಗಿದೆ.
ತೋಟಗಳನ್ನು ಅರಣ್ಯ ಎಂದು ಪರಿಗಣಿಸುವುದು ವಿವಾದಾತ್ಮಕವಾಗಿದೆ. ಏಕೆಂದರೆ, ತೋಟಗಳಲ್ಲಿ ಒಣಮರಗಳು ಇರುವುದಿಲ್ಲ ಮತ್ತು ನಿಜವಾದ ಅರಣ್ಯದ ವೈವಿಧ್ಯ ಕೂಡ ಅಲ್ಲಿ ಕಾಣಸಿಗುವುದಿಲ್ಲ. ಹಾಗಾಗಿ, ವರದಿಯಲ್ಲಿ ಹೇಳಿರುವ ಪ್ರದೇಶಗಳೆಲ್ಲವೂ ಅರಣ್ಯ ಅಲ್ಲ. ಅರಣ್ಯ ಪ್ರದೇಶ ಹೆಚ್ಚಳವಾಗಿದೆ ಎಂಬುದು ಕೂಡ ನಿಜವಲ್ಲ. ಪ್ಯಾರಿಸ್ ಹವಾಮಾನ ಒಪ್ಪಂದದ ಅನ್ವಯ ಇಂಗಾಲ ಹೀರುವಿಕೆಗೆ ಮಾಡಬೇಕಿದ್ದ ಹೆಚ್ಚುವರಿ ವ್ಯವಸ್ಥೆ ಸೃಷ್ಟಿಯ ಬದ್ಧತೆಯನ್ನು ಈಡೇರಿಸಲಾಗಿದೆ ಎಂಬುದನ್ನು ತೋರಿ ಸುವುದಕ್ಕಾಗಿ ಅರಣ್ಯ ಹೆಚ್ಚಳವಾಗಿದೆ ಎಂದು ಉತ್ಪಕ್ಷೆ ಮಾಡಿರಬಹುದು.
ಇದನ್ನೂ ಓದಿ: ಪಾಸು-ಫೇಲು: ಯಾವುದು ಮೇಲು?
ಆದರೆ, ಹವಾಮಾನ ಬದಲಾವಣೆ ನಿಗ್ರಹದ ಪ್ರಯತ್ನಕ್ಕೆ ಇದರಿಂದ ಸಿಗುವ ಪ್ರಯೋಜನ ವಾದರೂ ಏನು?
ದೇಶದ ಹಲವು ಭಾಗಗಳಲ್ಲಿ ಅರಣ್ಯ ಪ್ರದೇಶದ ವಿಸ್ತಾರವು ಕುಗ್ಗಿದೆ ಎಂಬುದರತ್ತ ವರದಿಯು ಬೆಳಕು ಚೆಲ್ಲಿದೆ. ಕಾಳಿಚ್ಚು ಹೆಚ್ಚಳ, ಅರಣೇತರ ಉದ್ದೇಶಕ್ಕೆ ಅರಣ್ಯಗಳ ಬಳಕೆಯಿಂದಾಗಿ ಇಂಗಾಲ ಹೀರುವಿಕೆಯ ಪ್ರಮಾಣವು ಕಡಿಮೆಯಾಗಿದೆ. ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯ ಭಾರತದಲ್ಲಿ ಅರಣ್ಯ ಪ್ರದೇಶವು ಭಾರಿ ಪ್ರಮಾಣದಲ್ಲಿ ಕುಗ್ಗಿದೆ. ಕರ್ನಾಟಕ ದಲ್ಲಿ ಕಳೆದ ಎರಡು ವರ್ಷಗಳಲ್ಲಿ 459 ಚದರ ಕಿ.ಮೀ. ಅರಣ್ಯ ನಾಶವಾಗಿದೆ. ಪಶ್ಚಿಮ ಘಟ್ಟ ಪ್ರದೇಶ ದಲ್ಲಿನ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅರಣ್ಯ ನಾಶವಾಗಿದೆ. ಜೀವವೈವಿಧ್ಯ ಸಮೃದ್ಧ ತಾಣವಾದ ಪಶ್ಚಿಮ ಘಟ್ಟಗಳಲ್ಲಿ ನಾಶವಾದ ಅರಣ್ಯದ ಮರುಸೃಷ್ಟಿ ಅಸಾಧ್ಯ.
ತೋಟಗಳನ್ನು ಅರಣ್ಯ ಎಂದು ಕರೆದರೂ ಅವು ಅರಣ್ಯಕ್ಕೆ ಪರ್ಯಾಯವಾಗುವುದು ಸಾಧ್ಯವಿಲ್ಲ. ವಿಸ್ತಾರವಾದ ಮತ್ತು ಜೀವವೈವಿಧ್ಯ ಸಮೃದ್ಧವಾದ ಅರಣ್ಯ ಪ್ರದೇಶಗಳಿಗೆ ಹೆಸರಾಗಿದ್ದ ಈಶಾನ್ಯ ರಾಜ್ಯಗಳಲ್ಲಿಯೂ ಭಾರಿ ಪ್ರಮಾಣ ದಲ್ಲಿ ಅರಣ್ಯ ನಾಶವಾಗಿದೆ. ಒತ್ತುವರಿ, ರಬ್ಬರ್ ಮತ್ತು ತಾಳೆ ತೋಟಗಳು, ಮೂಲಸೌಕರ್ಯ ಅಭಿವೃದ್ಧಿಯು ಅರಣ್ಯ ನಾಶಕ್ಕೆ ಮುಖ್ಯ ಕಾರಣಗಳಾಗಿವೆ. ‘ಅರಣ್ಯ ಸಂರಕ್ಷಣೆ ಕಾಯ್ದೆ- 1980’ಕ್ಕೆ ಕಳೆದ ವರ್ಷ ತಂದ ತಿದ್ದುಪಡಿಯು ಅರಣ್ಯ ನಾಶ ಮತ್ತು ಮರಗಳಿರುವ ಪ್ರದೇಶಗಳಲ್ಲಿನ ಮರಗಳನ್ನು ಕಡಿಯಲು ಅವಕಾಶ ಮಾಡಿಕೊಡುತ್ತದೆ. ಕರಾವಳಿಯಲ್ಲಿ ಇರುವ ಕಾಂಡ್ತಾ ಕಾಡುಗಳ ವ್ಯಾಪ್ತಿ ಕೂಡ ಕುಗ್ಗುತ್ತಿದೆ. ಹಲವು ಭಾಗಗಳಲ್ಲಿ ಹಸಿರು ಪ್ರದೇಶ ಕಡಿಮೆಯಾಗಿದೆ. ಅರಣ್ಯ ನಾಶದ ಜೊತೆಗೆ, ಮರಗಳ ದಟ್ಟಣೆ ಕಡಿಮೆಯಾಗಿರುವ ಸಮಸ್ಯೆಯೂ ಇದೆ. ಹಲವೆಡೆಗಳಲ್ಲಿ ದಟ್ಟ ಅರಣ್ಯ ಪ್ರದೇಶವು ಕುರುಚಲು ಕಾಡು ಪ್ರದೇಶವಾಗಿ ಮಾರ್ಪಾಟಾಗಿದೆ. ನೈಸರ್ಗಿಕ ಕಾರಣವಾದ ಕಾಳಿಚ್ಚು, ಮನುಷ್ಯರಿಂದಾಗುವ ಒತ್ತುವರಿಯು ಅರಣ್ಯಕ್ಕೆ ಅಪಾಯಕಾರಿಯಾಗಿ ಪರಿಣಮಿಸಿವೆ. ವರದಿಯಲ್ಲಿ ವಿವರಿಸಿರುವಂತೆ ವಾಸ್ತವವು ಇಲ್ಲ. ಅರಣ್ಯದ ಪರಿಸ್ಥಿತಿಯು ಎಲ್ಲರ ಚಿಂತೆಗೆ ಕಾರಣವಾಗುವ ರೀತಿಯಲ್ಲಿ ಇದೆ.