ನದಿಸ್ನಾನವು ಪ್ರಕೃತಿ ಜತೆ ಬೆಸೆಯುವ ಕ್ರಿಯೆ

ನದಿಸ್ನಾನವು ಪ್ರಕೃತಿ ಜತೆ ಬೆಸೆಯುವ ಕ್ರಿಯೆ

ಪರಮಾತ್ಮನು ಪಂಚಭೂತಾತ್ಮಕ ಪ್ರಕೃತಿಯಾಗಿ ಆವಿರ್ಭವಿಸಿದ್ದಾನೆ ಎನ್ನುವುದು ಸನಾತನ ದರ್ಶನ, ಧರಿಸುವ ಭೂಮಿಯು ತಾಯಿ, ಅನ್ನ-ಇಂಧನಗಳನ್ನೀವ ವನಸ್ಪತಿಗಳು ಅನ್ನಲಕ್ಷ್ಮೀ, ಅಮೃತಜಲವನ್ನೂಡುವಂಥ ನದಿಗಳು ಮಾತೆಯರು, ಸಮಸ್ತ ಜೀವಗಳ ಒಳಗಿರುವ ಚೈತನ್ಯವು ಪರಮಾತ್ಮನೇ ಇದು ಆರ್ಷದರ್ಶನ.

ಸನಾತನಿಯರ ಉತ್ಕಟ ಪ್ರಕೃತಿಪ್ರೇಮಿಗಳು. ಹಾಗಾಗಿ ನಿಸರ್ಗವು ತನ್ನ ಎಷ್ಟೋ ಸ್ಕೂಲಸೂಕ್ಷ ರಹಸ್ಯಗಳನ್ನು ಅವರಿಗೆ ಅರುಹಿದೆ. ಗೃಹನಕಾದಿಗಳ ಪ್ರಭಾವವು ಭೂಮಿಯಮೇಲಿನ ಜಲಮೂಲಗಳನ್ನೂ, ವನಸ್ಪತಿಗಳನ್ನೂ ಜೀವಕೋಟಿಯ ಉಳಿವು ಬೆಳವುಗಳನ್ನು ಪ್ರಭಾವಗೊಳಿಸುತ್ತವೆ ಎನ್ನುವ ತಥ್ಯವನ್ನು ವಿಶ್ವಾಸಿಸುತ್ತ ಬದುಕಿದ್ದಾರೆ. ‘ನಾವು ಅನಂತ ಬ್ರಹ್ಮಾಂಡದ ತುಣುಕುಗಳು’ ಎನ್ನುವ ಸಮಷ್ಟಿಭಾವ! ಈ ಹಿನ್ನೆಲೆಯಲ್ಲಿ ನಮ್ಮವರು ಜಲಮೂಲಗಳನ್ನು ಪರಮಭಕ್ತಿಯಿಂದ ಕಂಡಿದ್ದಾರೆ. ಜಲಾಶಯ ಮೂಲಗಳು, ಅವುಗಳ ವಿವಿಧ ಪ್ರಭಾವಗಳು, ಪ್ರಯೋಜನಗಳು ಮತ್ತು ತತ್ಸಂಬಂಧಿತ ಪ್ರಯೋಗಗಳನ್ನು ಕಲಿತಿದ್ದಾರೆ. ಸಮುದ್ರ, ಸಮುದ್ರಗಾ: (ಸಮುದ್ರವನ್ನು ಸೇರುವ ದೊಡ್ಡನದಿಗಳು), ಸ್ರವಂತೀ (ಚಿಕ್ಕ ತೊರೆಗಳು) ಹಾಗೂ ಬಾವಿ (ಮನುಷ್ಯನಿರ್ಮಿತ ಬಾವಿಗಳು) ಎಂಬುದಾಗಿ ವರ್ಗೀಕರಿಸಿ ಆಯಾ ಸ್ವರೂಪ ಸ್ವಭಾವ ಸತ್ವ ಪ್ರಯೋಜನಗಳನ್ನು ಅಧ್ಯಯನ ಮಾಡಿದ್ದಾರೆ. ಇವುಗಳನ್ನು ಹೇಗೆ ಬಳಸಬೇಕು. ರಕ್ಷಿಸಬೇಕು. ಪ್ರೀತಿಸಬೇಕು ಎನ್ನುವುದನ್ನೂ ಸಂಪ್ರದಾಯದ ಮೂಲಕ ದಾಖಲಿಸಿದ್ದಾರೆ.

ಜಲವೆಲ್ಲವೂ ಗಂಗೆಯೆಂದೂ, ನದಿಯು ಹುಟ್ಟುವ ಸ್ಥಳವು ಪರಶಿವನ ಜಟೆಯೆಂದೇ ಭಾವ! ಹಾಗಾಗಿ ನದಿಯ ಉಗಮಸ್ಥಳದಲ್ಲಿ ಶಿವಲಿಂಗವನ್ನು ಕಾಣಬಹುದು. ಭೂಜಲವು (ಅಂಡರ್‌ಗೌಂಡ್ ವಾಟರ್) ಇರುವಂಥ ಸ್ಥಳಗಳಲ್ಲಿ ಶಿವಲಿಂಗಗಳು ನೆಡಲ್ಪಡುತ್ತವೆ. ಕಾಡುಬೆಟ್ಟಗಳಲ್ಲಿ ಅಲೆಯುವವರೂ ಯಾತ್ರಿಕರೂ ನೀರಿಗಾಗಿ ಆ ಪ್ರಾಂತದಲ್ಲಿ ಅಗೆದರೆ ನೀರು ಸಿಗುತ್ತಿತ್ತು. ನದಿಗಳು ಸಂಗಮಿಸುವಂಥ ಸ್ಥಳಗಳಲ್ಲಿ ಸಂಗಮೇಶ್ವರ ಲಿಂಗಗಳನ್ನು ನೆಟ್ಟು ವಿಶೇಷ ಪೂಜೆ-ಜಾತ್ರೆಗಳನ್ನು ಆರಾಧಿಸುವ ಪದ್ಧತಿಯೂ ನಮ್ಮಲ್ಲಿ ಸುಪ್ರಸಿದ್ದ.

ಚಿಕ್ಕ ತೊರೆಗಳಿಗೂ ಮನುಷ್ಯ ನಿರ್ಮಿತ ಕೆರೆ-ಬಾವಿಗಳಿಗೂ ದೈನಂದಿನ ಪ್ರಯೋಜನಕ್ಕಷ್ಟೇ ಸೀಮಿತವಾದರೆ, ಅಲ್ಲಲ್ಲಿ ಇತರ ನದಿಗಳೊಂದಿಗೆ ಸಂಗಮಿಸುವ, ಸಮುದ್ರವನ್ನು ಸೇರುವಂಥ ಬೃಹನ್ನದಿಗಳ ಹರಿವು ಸಂಗಮವೂ ಅವುಗಳ ಗುಣವಿಶೇಷಗಳು, ಸತ್ಯ, ಶಕ್ತಿ, ವೇಗಗಳು ಬೃಹತಮಾಣದ ಪ್ರಭಾವವನ್ನು ಬೀರುತ್ತವೆ. ದೂರದ ಕಣಿವೆಯಲ್ಲೆಲ್ಲೋ ಸಂಗಮಿಸುವಂಥ ನದಿಗಳಿಂದ ವನಸ್ಪತಿಗಳಿಗೂ ಹವಾಮಾನಕ್ಕೂ ವ ಜೀವಕುಲಕ್ಕೂ ಋತುಚಕ್ರವೂ, ಮಳೆ- ಬೆಳೆಗಳೂ, ಆಗುವ ಉಪಕರಣವು ಅತ್ಯಾಪರ ಕಾಡು -ಹೊಲ-ತೋಟಗಳ ಉಳಿವು- ಬೆಳೆವು ಹಾಗೂ ಆಮ್ಲಜನಕದ ಉತ್ಪಾದನೆಗೂ ದೂರದ ನದಿಗಳ ಹರಿವೂ, ಸಂಗಮವೂ ಪ್ರಭಾವಕಾರಕ!

ಇದನ್ನೂ ಓದಿ: ರೋಹಿತ್ ಪಡೆಗೆ ಶುಭಾರಂಭದ ತವಕ

ಜೀವನದಿಗಳಿಲ್ಲದಿದ್ದಲ್ಲಿ ಈ ಹೊತ್ತಿಗೆ ಜೀವಕೋಟಿಯ ಬಹುಭಾಗವು ಅಳಿದೇ ಹೋಗುತ್ತಿತ್ತು. ಇದನ್ನು ನಮ್ಮ ಪೂರ್ವಜರು ವೇದಶಾಸ್ತ್ರಗಳಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಸಾಮಾನ್ಯಜನರೂ ಮಹತ್ವವನ್ನು ಮನಗಾಣಲೆಂದು ಜಲೋಪಾಸನದ ಹಲವು ಸಂಪ್ರದಾಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ನದಿಗಳ ಹುಟ್ಟೂ, ಹರಿವು, ಜಲಪಾತ, ಸಂಗಮ, ಸಮುದ್ರಗಮನ ಮುಂತಾದ ಪ್ರಕ್ರಿಯೆಗಳಲ್ಲಿ ವಾರ್ಷಿಕವಾಗಿಯೋ, ಗ್ರಹಾನುಕೂಲಕ್ಕೆ ಅನುಗುಣವಾಗಿಯೋ, ನಿಸರ್ಗದ ವಿಶಿಷ್ಟ ಪ್ರಭಾವಗಳು ಚಕ್ರವತ್ ಮರುಕಳಿಸಿ ಊರ್ಜಿತ ಸತ್ವವನ್ನು ಹೆಚ್ಚಿಸುತ್ತವೆ ಎನ್ನುವುದು ಸನಾತನದರ್ಶನ. ಈ ಸಂದರ್ಭಗಳಲ್ಲಿ ಸಾರ್ವಜನಿಕ ಉತ್ಸವಗಳನ್ನಾಚರಿಸಿ ಎಲ್ಲರ ಗಮನಕ್ಕೂ ಇದು ಬರುವಂತೆ, ದಾಖಲಾಗುವಂತೆ ಮಾಡಲಾಗಿದೆ. ಇದೇ ಋಷಿಸಂಸ್ಕೃತಿಯ ಜಾಣ್ಮೆ ಕಾಣ್ಕೆ.

ಶುಭಕಾರಕವಾದ ತಿಥಿ, ನಕ್ಷತ್ರ ಗ್ರಹಯೋಗಗಳಲ್ಲಿ ಪ್ರ ಹೇಗೆ ನಿಸರ್ಗಶಕ್ತಿಗಳು ನದಿಸಮುದ್ರಾದಿ ಸದ ಜಲಾಶಯಗಳಲ್ಲಿ ಜೀವಕುಲಕ್ಕೆ ಉ ಅನುಗ್ರಹವನ್ನೀಯುತ್ತವೆ ಎಂಬುದು ನಮ್ಮ ರಾ ಪೂರ್ವಜರ ಬೋಧೆ. ಈ ಸಂದರ್ಭಗಳನ್ನು ಇ ಸ್ನಾನಯಾತ್ರೆ, ಅರ್ಧಕುಂಭಮೇಳ, ಪೂರ್ಣಕುಂಭ -ಮೇಳ, ಮಹಾಕುಂಭಮೇಳ ಮುಂತಾದ ಆಚರಣೆಗಳಲ್ಲಿ ಸ್ಥಾಯಿಗೊಳಿಸಿದ್ದಾರೆ. ಉದಾ-ಭವ್ಯ ಮಹಾಕುಂಭಮೇಳವು ಈಗ ವ ನಡೆಯುತ್ತಿದೆಯಷ್ಟೆ?

ಪ್ರತಿದಿನವೂ ಅರುಣೋದಯದಲ್ಲಿ ನದಿ ಸಂಗಮ ಸಮುದ್ರಾದಿಗಳಲ್ಲಿ ಮೀಯುವುದರಿಂದ ನಿಸರ್ಗದ ಉತ್ತಮ ಪ್ರಭಾವವು ನಮ್ಮ ದೇಹ-ಮನ- ಮತಿಗಳಲ್ಲಿ ಊರ್ಜಿತಸತ್ವವನ್ನುತುಂಬುತ್ತವೆ. ಎಳೆಯರ ದೇಹ-ಮನಸ್ಸು-ಮತಿಗಳ
ಆರೋಗ್ಯಕ್ಕೆ ಉತ್ತಮವೆನಿಸುವಂಥ ಕೆರೆನದಿಗಳಲ್ಲಿ ತ್ರಿಕಾಲಾನವನ್ನೇ ಬ್ರಹ್ಮಚಾರಿಗಳಿಗೆ ಇಂಥ ಸೂಚಿಸಲಾಗಿದೆ. ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಮಾಘಮಾಸ-ಜೇಷ್ಠಮಾಸಗಳಲ್ಲಿ ಹಾಗೂ ಸೂರ್ಯಗ್ರಹಣಾದಿ ಪಕ್ಷಮಾಸ-ಸಂದರ್ಭಗಳಲ್ಲಿ ನಿರ್ದಿಷ್ಟ ನದಿಸಂಗಮ ಸಮುದ್ರ ಪುಷ್ಕರಿಣಿಗಳಲ್ಲಿ ಮೀಯುವುದು ಅಸಾಧಾರಣ ಸತ್ತಭಾವಗಳನ್ನು ಬೀರುತ್ತವೆ ಎನ್ನುವುದು ವಿಶ್ವಾಸ.

ಕಾವೇರಿ ತುಲಾ ಸಂಕ್ರಮಣ, ನರ್ಮದಾ ಜಯಂತಿ, ಸಪ್ತಧಾರಗರಿಗೆ ಮತ್ತು ಸಮುದ್ರಗಳ ವಿವಾಹೋತ್ಸವ,ದಾರಗರಾವರಿ ಪುಷ್ಕರಾಲು, ಯಮುನಾ ಜಯಂತಿ, ಸಿಂಧು ಉತ್ಸವ ಮುಂತಾದ ಅನಾದಿಯ ಆಚರಣೆಗಳು ನಮ್ಮನ್ನು ಪ್ರಕೃತಿಯ ಆಶೀರ್ವಾದಕ್ಕೆ ಪಾತ್ರರನ್ನಾಗಿಸುವ ತಂತ್ರಗಳೇ ಸರಿ. ಇದಲ್ಲದೆ ಶ್ರಾದ್ದ ಪಿತ್ತತರ್ಪಣ, ಪ್ರಾಯಶ್ಚಿತ್ತ, ತೀರ್ಥಾಟನ, ತಪಶ್ಚರ್ಯಗಳ ನಿಮಿತ್ತವಾಗಿಯೂ ಪುಣ್ಯನದಿ ಸ್ನಾನಗಳನ್ನಾಚರಿಸುವುದು ಪದ್ಧತಿ. ಇದುಸಾಧ್ಯವಾಗದೇ ಹೋದವರಿಗೂ ಅನುಕೂಲವಾಗಲೆಂದು, ಜಗತ್ತಿನ ಹಲವು ಕೆರೆ-ನದಿ- ಸಮುದ್ರಗಳ ಜಲಗಳನ್ನು ಸಂಗ್ರಹಿಸಿ ತಂದು ಪ್ರಶಸ್ತ ತೀರ್ಥಗಳಲ್ಲೋ, ಗ್ರಾಮನಗರಗಳ ಸರೋವರಗಳಲ್ಲೋ ಬೆರೆಸಿಕೊಡುವುದುಂಟು. ಉದಾ: ಕುರುಕ್ಷೇತ್ರದ ಸನ್ನಿಧಿ ಸರೋವರ, ರಾಮೇಶ್ವರದ ನೂರೆಂಟು ತೀರ್ಥಗಳ ಬಾವಿಗಳು ಇತ್ಯಾದಿ. ಇಲ್ಲಿ ಮಿಂದರೆ ಕೋಟಿತೀರ್ಥಗಳ ಸ್ನಾನದ ಫಲ ಎನ್ನುವ ಭಾವ! ಸಪ್ತನದಿಗಳ ಸ್ನಾನಕ್ಕಾಗಿ ದೂರದ ಯಾತ್ರೆ ಹೊರಡಲಾಗದ ತನ್ನ ವೃದ್ಧ ತಂದೆ ನಂದಗೋಪನಿಗಾಗಿ ಶ್ರೀಕೃಷ್ಣನು ನಿರ್ಮಿಸಿದನು ಎನ್ನುವಂಥ ಮಾನಸಿಗಂಗಾ ತೀರ್ಥವನ್ನು ಬೃಂದಾವನದಲ್ಲಿ ಇಂದಿಗೂ ಕಾಣಬಹುದು.

ಗಂಗೆಯ ನೀರನ್ನು ತಂದು ಮನೆಯ ಬಾವಿಯಲ್ಲೂ ಊರ ಕೆರೆಯಲ್ಲೂ ಬೆರೆಸಿ, ಪಕ್ಕದಲ್ಲಿ ಕಾಶಿಯ ಲಿಂಗವನ್ನು ಪ್ರತಿಷ್ಠಾಪಿಸಿ ಕಾಶಿವಿಶ್ವೇಶ್ವರ ದೇವಾಲಯವನ್ನು ಕಟ್ಟಿದಕ್ಷಿಣಕಾಶಿಯ ವರ್ಚಸ್ಸನ್ನು ನಿರ್ಮಿಸುವ ಪದ್ದತಿಯು ದಕ್ಷಿಣ ಭಾರತದಾದ್ಯಂತ ಕಾಣಬರುತ್ತದೆ. ಕಾಶಿ ,ಹರಿದ್ವಾರ, ಹಿಮಾಲಯ ಗಳಿಗೆ ಯಾತ್ರೆ ಹೋದವರು ಗಂಗಾಜಲವನ್ನು ಹೊತ್ತು ತಂದು ಊರವರಿಗೆಲ್ಲ ಹಂಚಿ ಗಂಗಾಸಮಾರಾಧನೆ ಮಾಡಿ ಔತಣವನ್ನೀಯುವ ಪದ್ಧತಿಯೂ ಇದೆ.

ಒಂದು ನದಿಯ ನೀರನ್ನು ಮತ್ತೊಂದು ನದಿ ತೀರಕ್ಕೆ ಹೊತ್ತೊಯ್ದು ಅಲ್ಲಿನ ಶಿವನಿಗೆ ಅಭಿಷೇಕ ಗೈವ ‘ಕಾವಡಿಯ’ ಪದ್ಧತಿಯು ಇಂದಿಗೂ ಉತ್ತರಭಾರತದ ಜನಪ್ರಿಯ ಸಂಪ್ರದಾಯ. ಜೀವ ತೊರೆಯುವವರ ಬಾಯಿಗೂ ತೊಟ್ಟು ಗಂಗೆಯನ್ನು ಹಾಕಿ ಪುಣ್ಯವನ್ನು ಆವಾಹಿಸುತ್ತೇವೆ. ವರಮಹಾಲಕ್ಷ್ಮೀ ಪೂಜೆ ಮಾಡುವಾಗಲೂ ಯಮುನಾಪೂಜೆಯೇ ಮೊದಲು. ನಿತ್ಯಪೂಜೆ ವಿಶೇಷಪೂಜೆಗಳೆಲ್ಲವೂ ಪ್ರಾರಂಭವಾಗುವುದೇ ಕಲಶದಲ್ಲಿ ‘ಗಂಗೆ ಚ ಯಮುನೇ ಚೈವ’ ಎನ್ನುತ್ತ ಸಪ್ತನದಿ ಗಳನ್ನಾವಾಹಿಸಿ, ಆ ಕಲಶಜಲದಿಂದ ದೇವತೆ-ಭೂಮಿ- ಪೂಜಾದ್ರವ್ಯಗಳು ಹಾಗೂ ಪೂಜಕರ ಮೇಲೆ ಪ್ರೋಕ್ಷಣೆ ಮಾಡುವುದರ ಮೂಲಕ.

ನದಿ, ಕೆರೆ, ಬಾವಿಗಳಲ್ಲಿ ಮಲಮೂತ್ರ ವಿಸರ್ಜನೆ, ಉಗುಳು, ವಾಂತಿಗಳನ್ನು ಮಾಡಬಾರದು, ಗಾಯ, ಚರ್ಮರೋಗ-ಜ್ವರಗಳಿದ್ದವರು ಜಲಾಶಯಗಳನ್ನು ಆ ಸ್ಥಿತಿಯಲ್ಲಿ ಪ್ರವೇಶಿಸಬಾರದು ಎನ್ನುವ ಹಲವು ವಿಧಿನಿಷೇಧಗಳಿದ್ದು, ನಮ್ಮ ಪೂರ್ವಜರ ಎಚ್ಚರವನ್ನೂ ನಿಸರ್ಗಭಕ್ತಿಯನ್ನೂ ತೋರುತ್ತವೆ. ಸಾರ್ವಜನಿಕ ಜಲಾಶಯಗಳಲ್ಲಿ ಬಾವಿ, ನದಿಘಟ್ಟ, ಸೇತುವೆ, ಕಲ್ಯಾಣಿಗಳಲ್ಲಿ ತಾಮ್ರದ ನಾಣ್ಯ, ಪಾತ್ರೆಗಳನ್ನು ಹಾಕಿ ಅವನ್ನು ಶುದ್ಧವಾಗಿಡುವುದು, ಸೋಂಕುಗಳನ್ನು ನಿವಾರಿಸುವ ಆಶಯವೂ ಅನಾದಿಯ ಪದ್ಧತಿ. ‘ಮನೋಕಾಮನೆಗಳು ಈಡೇರುತ್ತವೆ’ ಎಂಬ ಆಸೆಯಿಂದ ಉಕ್ಕು ಕಬ್ಬಿಣ ಕಾಗದದ ಹಣವನ್ನು ಎಸೆದು ನೀರನ್ನು ಮಲಿನಗೊಳಿಸುವಂಥ ಮೌಡ್ಯವು ಈಗ ಮೆಕಾಲೆ ಶಿಕ್ಷಣದ ನಂತರ ಉದಿಸಿದೆ.

ಒಟ್ಟಿನಲ್ಲಿ ತೀರ್ಥಸ್ನಾನ ಸಂಗಮೋತ್ಸವ ಕುಂಭಮೇಳ ನದಿ ಜಯಂತಿ ಮುಂತಾದವು ಕೇವಲ ನಂಬಿಕೆಗಳಲ್ಲ. ಅವು ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುವ ಸುಂದರ ಸಾರ್ಥಕ ಪ್ರಕ್ರಿಯೆಗಳು. ನಿಸರ್ಗವನ್ನು ಸೂಕ್ಷ್ಮವಾಗಿ ಗಮನಿಸುವವರಿಗೂ, ಸಮಷ್ಟಿಭಾವದಿಂದ ನೋಡುವವರಿಗೂ, ಇವೆಲ್ಲವೂ ಗ್ರಾಹ್ಯ. ಇದು ಶುಭ ತರುವಂಥ ಸಂಗತಿ. ಜೀವಲೋಕವನ್ನು ನೋಡುವವರೆಗೂಸರಳಶ್ರದ್ಧೆಯವರಿಗೂ ಇವೆಲ್ಲವೂ ಗ್ರಹ್ಯ.ಇದು ಸಕಲ ಜೀವಕೋಟಿಗೂ ಶುಭ ತರುವಂತ ಸಂಗತಿ.

Leave a Comment