ನಬಾರ್ಡ್ ಪುನರ್ಧನ ಕಡಿತ ಪರಿಶೀಲನೆ ಸಾಧ್ಯತೆ
ಮೃತ್ಯುಂಜಯ ಕಪಗಲ್ ಬೆಂಗಳೂರು
ಅಲ್ಪಾವಧಿ ಬೆಳೆ ಸಾಲಕ್ಕೆ ನಬಾರ್ಡ್ನಿಂದ ರಿಯಾಯಿತಿ ಬಡ್ಡಿ ದರದ ಪುನರ್ಧನ ಸೌಲಭ್ಯ ಕಡಿತದ ಪರಿಣಾಮ ಪರಿಶೀಲನೆಗೆ ಕೇಂದ್ರ ಸರ್ಕಾರ ಕೊನೆಗೂ ಮುಂದಾಗಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ನಿಯೋಗದ ಮನವಿ, ಕೇಂದ್ರ ಸಚಿವ ಪಲ್ಲಾದ ಜೋಶಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ವಿವರಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಗಣಿಸಿದ್ದಾರೆ.
ಆರ್ಬಿಐ ಸಾಮಾನ್ಯ ಸಾಲದ ಮೊತ್ತ ಕಡಿಮೆ ಮಾಡಿದೆ. ಜತೆಗೆ ಆದಾಯೋತ್ಪನ್ನ ಚಟುವಟಿಕೆಗಳ ವೃದ್ಧಿ, ಲಾಭಾಂಶ ಹೆಚ್ಚಿರುವ ಕೃಷಿಯೇತರ ವಲಯದಲ್ಲಿ ಹೂಡಿಕೆಗೆ ಸಲಹೆ ನೀಡಿದೆ. ಇದರಿಂದಾಗಿ ನಬಾರ್ಡ್ ಪುನರ್ಧನ ಸೌಲಭ್ಯದ ಪ್ರಮಾಣವು ಕರ್ನಾಟಕ ಮಾತ್ರವಲ್ಲದೆ ಎಲ್ಲ ರಾಜ್ಯಗಳಿಗೆ ಅನ್ವಯಿಸಲಾಗಿದೆ. ಪರಿಣಾಮ ಡಿಸಿಸಿ ಬ್ಯಾಂಕ್ಗಳು ಹೊಸ ರೈತ ಸದಸ್ಯರಿಗೆ ಶೂನ್ಯ ಬಡ್ಡಿ ದರದ ಸಾಲ ಕೊಡಲಾಗದೆ ಕೈಚೆಲ್ಲಿವೆ. ಬೆಳೆ ಸಾಲಕ್ಕೆ ಕೇಂದ್ರ, ರಾಜ್ಯ ಸರ್ಕಾರದಿಂದ ಸೂಕ್ತ ಆರ್ಥಿಕ ನೆರವು ಸಿಗದಿದ್ದರೆ ರೈತರು ದುಬಾರಿ ಬಡ್ಡಿ ದರದ ಖಾಸಗಿ ಸಾಲಕ್ಕೆ ಮೊರೆ ಹೋಗಲಿದ್ದು, ಆಹಾರಧಾನ್ಯ ಉತ್ಪಾದನೆಯೂ ಗಣನೀಯವಾಗಿ ಕುಸಿಯಲಿದೆ ಎಂಬ ಆತಂಕವನ್ನು ಸರ್ಕಾರ ಈಗಾಗಲೇ ನಿವೇದಿಸಿಕೊಂಡಿದೆ.
ಸಭೆಯ ನಿರೀಕ್ಷೆ: ನಬಾರ್ಡ್ ರಿಯಾಯಿತಿ ಬಡ್ಡಿ ದರದ ಸಾಲ, ವಸೂಲಾತಿ ಆಧಾರದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದ್ದ ಬಡ್ಡಿ ಸಹಾಯಧನವನ್ನು ಶೇ.2 ರಿಂದ 1.50ಕ್ಕೆ ತಗ್ಗಿಸಿರುವುದು ಡಿಸಿಸಿ ಬ್ಯಾಂಕ್ಗಳ ಆರ್ಥಿಕತೆ ಕುಗ್ಗಿ ಬೆಳೆ ಸಾಲದ ಮೇಲೆ ಹೊಡೆತ ಬೀಳಲಿದೆ. ಕೇಂದ್ರ ಸರ್ಕಾರ ಕೊಟ್ಟಿಲ್ಲ, ಗುರಿಯಂತೆ ಶೂನ್ಯ ಬಡ್ಡಿ ದರದ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ. ಇದು, ರೈತರ ಮೇಲೆ ಪರಿಣಾಮ ಬೀರಿ ಕೇಂದ್ರದ ವಿರುದ್ಧ ಮುನಿಸಿಕೊಳ್ಳಲಿದ್ದಾರೆ. ಮುಂಬರುವ ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ರಾಜಕೀಯವಾಗಿ ಹಾನಿ ತಂದೊಡ್ಡಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ಕೇಂದ್ರಕ್ಕೆ ಮನವರಿಕೆ ಮಾಡಿಕೋಟ್ಟಿದ್ದಾರೆ ಹೊಸತುತಿ ಮಾಹಿತಿ ಹರಿತ ನಿರ್ಮಲ ಸೀತಾರಾಮನ್ ಫೆಬ್ರವರಿ ಮೂರನೇ ವಾರದಲ್ಲಿ ಅಪೇಕ್ಷೆ ಬ್ಯಾಂಕ್ ಉನ್ನತಾಧಿಕಾರಿಗಳು, ಪ್ರತಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಒಬ್ಬ ಹಿರಿಯ ಅಧಿಕಾರಿಯನ್ನು ಸಭೆಗೆ ಕರೆಯಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಜೆಪಿ ಬಣಗಳು ದಿಢೀರ್ ದೆಹಲಿಗೆ ದೌಡ
ಲೆಕ್ಕಾಚಾರ ತಲೆ ಕೆಳಗು: ನಬಾರ್ಡ್ ನಿಂದ ರಿಯಾಯಿತಿ ಬಡ್ಡಿ ದರ (ಶೇ.4.50)ದಲ್ಲಿ 9,200 ಕೋಟಿ ರೂ.ಗಳ ಪುನರ್ಧನ ಸೌಲಭ್ಯವನ್ನು ಸರ್ಕಾರ ನಿರೀಕ್ಷಿಸಿತ್ತು. ಆದರೆ ಕಳೆದ ವರ್ಷ (2023-24) ನೀಡಿದ್ದ 5,600 ಕೋಟಿ ರೂ. ಕೂಡ ಮುಂದುವರಿಸಿಲ್ಲ. 13,742 ಕೋಟಿ ರೂ. ಸಾಲ ಸೌಲಭ್ಯವನ್ನು ಅಪೆಕ್ಸ್ ಬ್ಯಾಂಕ್ ಕೂಡ ಅಪೇಕ್ಷಿಸಿತ್ತು. ಆದರೆ ಸಾಲದ ಮೊತ್ತವನ್ನು 2.340ಕ್ಕೆ ಕಡಿತ ಮಾಡಿ, ಹೆಚ್ಚುವರಿಯಾಗಿ ಶೇ.8ರ ಬಡ್ಡಿ ದರದಲ್ಲಿ 4,580 ಕೋಟಿ ರೂ. ಸಾಲ ಸೌಲಭ್ಯ ಮಂಜೂರು ಮಾಡಿತ್ತು.
ನಬಾರ್ಡ್ ನೆರವು, ಅಪೆಕ್ಸ್ ಬ್ಯಾಂಕ್ ಸ್ವಂತ ಬಂಡವಾಳ ಸೇರಿಸಿ ಡಿಸಿಸಿ ಬ್ಯಾಂಕ್ ಗಳಿಗೆ ನೀಡುತ್ತದೆ. ಡಿಸಿಸಿ ಬ್ಯಾಂಕ್ಗಳು ಸ್ವಂತ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸಿ ವಿವಿಧೋದ್ದೇಶ ಪ್ರಾಥಮಿಕ ಸಹಕಾರ ಸಂಘ (ಹಿಂದಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ)ಗಳು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ
ವಸೂಲಾತಿಗೆ ಕ್ಷೇತ್ರ ಕಾರ್ಯ ಡಿಸಿಸಿ ಸಿ ಬ್ಯಾಂಕ್ಗಳ ವ್ಯವಸ್ಥಾಪಕರು, ಮೇಲ್ವಿಚಾರಕರು
ಹಾಗೂ ಸಿಬ್ಬಂದಿ ಕಳುಹಿಸಿ ರೈತರಿಂದ ಸಾಲ ವಸೂಲಾತಿ ಕ್ಷೇತ್ರ ಕಾರ್ಯಕ್ಕೆ ಇಳಿಯಲು ತಯಾರಿ ಮಾಡಿಕೊಂಡಿವೆ. ಮರು ಪಾವತಿ ವಿಳಂಬವಾದರೆ ಬ್ಯಾಂಕ್ನ ಕೃಷಿಯೇತರ ವಹಿವಾಟಿಗೆ ಆರ್ಥಿಕ ಮುಗ್ಗಟ್ಟು, ನಷ್ಟದ ಕಾರಣ ದಿವಾಳಿ ಹಂಚಿಕೆ ತಲುಪಲಿದೆ ಎಂಬ ಭೀತಿ ಇದೆ ಹೀಗಾಗಿ ನೇರ ವಸೂಲಾತಿ ಕಾರ್ಯಕ್ಕೆ ಯೋಚಿಸಿವೆ ಎಂದು ತಿಳಿದಿದೆ. ಕಿರುಸಾಲ ಪಡೆದವರಿಗೆ ಕಿರುಕುಳ, ದೌರ್ಜನ್ಯ ನಡೆಯುತ್ತಿವೆ ಎಂಬ ಆರೋಪಗಳಿವೆ. ಮತ್ತೊಂದೆಡೆ ಡಿಸಿಸಿ ಬ್ಯಾಂಕ್ಗಳು ಸಾಲ ವಸೂಲಾತಿಗೆ ಇಳಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು, ಇಂತಹ ಪ್ರಯತ್ನಕ್ಕೆ ಸರ್ಕಾರ ಬ್ರೇಕ್ ಹಾಕುವ ಸಂದೇಹವಿದೆ.
ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ ಐದು ಲಕ್ಷ ರೂ.ಗಳವರೆಗೆ ಒಟ್ಟು 25 ಸಾವಿರ ಕೋಟಿ ರೂ.ಗಳು ಅಲ್ಪಾವಧಿ ಬೆಳೆ ಸಾಲದ ಗುರಿಯನ್ನು ಸರ್ಕಾರ ನಿಗದಿಪಡಿಸಿತ್ತು. ನೆರವಿನ ಪ್ರಮಾಣ ಕಡಿತ, ಸ್ವಂತ ಬಂಡವಾಳ ಲಭ್ಯತೆ ಜತೆಗೆ ಮರು ಪಾವತಿಯನ್ನು ರಾಜ್ಯದ 21 ಡಿಸಿಸಿ ಬ್ಯಾಂಕ್ಗಳು ಲಕ್ಷ್ಯದಲ್ಲಿಟ್ಟುಕೊಂಡು, ಮೂರರಿಂದ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದ ಸಾಲವನ್ನು ರೈತ ಸದಸ್ಯರಿಗೆ ನೀಡಿವೆ. ಹೊಸ ರೈತ ಸದಸ್ಯರಿಗೆ ಬಹುತೇಕ ಡಿಸಿಸಿ ಬ್ಯಾಂಕ್ ಗಳು ಕೊಕ್ ನೀಡಿವೆ. ಹಾಲಿ ರೈತ ಸದಸ್ಯರಿಗೆ ಬೆಳೆ ಸಾಲ ನವೀಕೃತವಾಗಿದ್ದು, ಒಟ್ಟು 20 ಸಾವಿರ ಕೋಟಿ ರೂ. ಆಸುಪಾಸಿನಲ್ಲಿ ವಿತರಣೆಯಾಗಿದೆ ಎಂದು ಸಹಕಾರ ವಲಯದ ಮೂಲಗಳು ತಿಳಿಸಿವೆ. ಕೆಲವೊಂದು ಡಿಸಿಸಿ ಬ್ಯಾಂಕ್ಗಳು ಮೈಚಳಿ ಬಿಟ್ಟು 5 ಲಕ್ಷರೂ.. ಉಳಿದ ಬ್ಯಾಂಕ್ಗಳು ಮರು ಪಾವತಿ ಬಗ್ಗೆ ಹಿಂಜರಿದು 3 ಲಕ್ಷ ರೂ.ವರೆಗೆ ಅಲ್ಪಾವಧಿ ಕೃಷಿ ಸಾಲ ಮಂಜೂರು ಮಾಡಿದ್ದು, ಸ್ವಂತ ಬಂಡವಾಳದ ಕೊರತೆಯೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ.