ನರೇಗಾ ಅನುಷ್ಠಾನ: ಶಾಸಕ ಅತೃಪ್ತಿ
ಬಾಗೇಪಲ್ಲಿ ,ಚೇಳೂರು ತಾಲೂಕುಗಳಲ್ಲಿ ಚುರುಕು ಪಡೆಯದ ಕಾಮಗಾರಿ
ಬಾಗೇಪಲ್ಲಿ: ಬಾಗೇಪಲ್ಲಿ ಹಾಗೂ ಚೇಳೂರು ತಾಲೂಕುಗಳಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗದಿರುವುದು ನೋವು ತಂದಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.
ತಾಲೂಕಿನ ಉಗಲನಾಗೇಪಲ್ಲಿ ಗ್ರಾಮದ ಬಳಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ತಾಲೂಕು ಪಂಚಾಯಿತಿ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಗೇಪಲ್ಲಿ ಹಾಗೂ ಚೇಳೂರು ತಾಲೂಕುಗಳ ಮಹಾತ್ಮ ಗಾಂಧಿ ನರೇಗಾ ದಿನಾಚರಣೆಯಲ್ಲಿ ಮಾತನಾಡಿದರು.
ಬೇರೆ ತಾಲೂಕುಗಳಿಗೆ ಹೋಲಿಸಿದರೆ ಬಾಗೇಪಲ್ಲಿ,ಚೇಳೂರು ತಾಲೂಕುಗಳಲ್ಲಿ ಮನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಿಲ್ಲ. ಶಿಡ್ಲಘಟ್ಟದಲ್ಲಿ ನಡೆದ ನರೇಗಾ ಕಾಮಗಾರಿಯಿಂದ ಕೆರೆಗಳಲ್ಲಿ ನೀರು ತುಂಬಿದೆ. ಆದರೆ ತಾಲೂಕಿನ ಕೆಲ
ಕೆರೆಗಳಲ್ಲಿ ನರೇಗಾ ಕಾಮಗಾರಿ ಆಗಿಲ್ಲ ಸರ್ಕಾರ ಕೊಟ್ಯಂತರ ಅನುದಾನ ನೀಡುತ್ತಿದೆ . ಆದರೆ ನಿರೀಕ್ಷಿತ ಮಟ್ಟದಲ್ಲಿ ನರೇಗಾ ಯೋಜನೆ ಜಾರಿ ಆಗಿಲ್ಲ ಎಂದರು.
ಇದನ್ನೂ ಓದಿ: ಸೋಮೇನಹಳ್ಳಿ ಶಾಲೆಯಲ್ಲಿ ಮಕ್ಕಳ ಸಂತೆ
ಮುಂದಿನ ದಿನಗಳಲ್ಲಿ ಒಂದೊಂದು ಪಂಚಾಯಿತಿಯ ಅಧಿಕಾರಿ ಆಡಳಿತ ಮಂಡಳಿ ಮುಖಂಡರ ಸಭೆ ಹಮ್ಮಿಕೊಂಡು ನರೇಗಾ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದರು.
ಬಾಗೇಪಲ್ಲಿ ಚೇಳೂರು ತಾಲೂಕುಗಳಲ್ಲಿ ರೂ 5 ಕೋಟಿ ವೆಚ್ಚದ ನರೇಗಾ ಕಾಮಗಾರಿ ನಡೆಯಬೇಕಾಗಿತ್ತು. ಆದರೆ ರೂ 80 ಲಕ್ಷ ಕೆಲಸ ಮಾಡಿಲ್ಲ. ಯಾವ ಪಂಚಾಯಿತಿಯವರು ಒಂದು ಕೋಟಿ ರೂಪಾಯಿ ಖರ್ಚು ಮಾಡಿಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ರೂ1 ಕೋಟಿ ಅನುದಾನದ ನಂತರ ಎರಡನೇ ಕಂತಿನ ಒಂದು ಕೋಟಿ ಜೊತೆಗೆ ತಲಾ ರೂ 20 ಲಕ್ಷ ವೈಯಕ್ತಿಕವಾಗಿ ನೀಡುತ್ತೇನೆ ಎಂದರು .
ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಅತಿಕ್ ಭಾಷಾ ಮಾತನಾಡಿ ಮನರೇಗಾ ಯೋಜನೆಯಿಂದ ಗ್ರಾಮದ ಸರ್ಕಾರಿ ಶಾಲಾ ಕೊಠಡಿ, ಅಂಗನವಾಡಿ ಕೇಂದ್ರ, ಆಟದ ಮೈದಾನ, ಕಾಂಪೌಂಡು, ಕೃಷಿ ,ತರಕಾರಿ ಬೆಳೆಗಳು ಬೆಳೆಯುವ ರೈತರು ಉಪಯೋಗಿಸಿಕೊಳ್ಳಬೇಕು ಎಂದರು.
ಇ ಓ ಜಿ. ವಿ. ರಮೇಶ್ ಮಾತನಾಡಿ ಪ್ರತಿವರ್ಷ ಫೆಬ್ರುವರಿ ಐದರಂದು ನರೇಗಾ ದಿನಾಚರಣೆ ನಡೆಯುತ್ತದೆ. ಪಂಚಾಯಿತಿಗಳ ಮಟ್ಟದಲ್ಲಿ ಯೋಜನಾ ಪಟ್ಟಿ, ಅನುದಾನದ ವೆಚ್ಚದ ವಿವರದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದರು .
ನರೇಗಾ ಯೋಜನೆ ಉತ್ತಮವಾಗಿ ಜಾರಿ ಮಾಡಿದ ಪಂಚಾಯಿತಿ ,ಅಧಿಕಾರಿ ,ಆಡಳಿತ ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ, ಸಿಬ್ಬಂದಿಯನ್ನು ಗೌರವಿಸಲಾಯಿತು.
ಮನರೇಗಾ ತಾಲೂಕು ಅಧಿಕಾರಿ ಹಾಡು ಹಾಡಿದರು. ಚಿಂತಾಮಣಿಯ ಜಿ. ಮುನಿರೆಡ್ಡಿ ಹಾಗೂ ತಂಡದವರಿಂದ ಪರಿಸರ, ನೀರಿನ ಜಾಗೃತಿ ಹಾಡು ಹಾಡಿದರು.
ಕ್ಷೇತ್ರ ಶಿಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ವೆಂಕಟೇಶಪ್ಪ, ತಾಲೂಕು ಸಮನ್ವಯಾಧಿಕಾರಿ ವೆಂಕಟರಾಮಪ್ಪ, ನಾರಾಯಣ, ಡಾ. ಸಿ .ಎನ್ ಸತ್ಯನಾರಾಯಣ ರೆಡ್ಡಿ, ಜಿ. ಲಕ್ಷ್ಮಿ, ಆರ್. ಹನುಮಂತರೆಡ್ಡಿ, ಸುಜಾತಮ್ಮ, ಏನ್. ಶಿವಪ್ಪ ಇದ್ದರು .