ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು

ನಾಟ್ಯ ನಿಲ್ಲಿಸಿದ ಉಸ್ತಾದರ ಕೈಬೆರಳುಗಳು

ಉಸ್ತಾದ್ ಜಾಕಿರ್ ಹುಸೇನ್ ಹೆಸರು ಕೇಳಿದರೆ ಸಾಕು ನಮಗರಿಯದೆ “ಧಾ ತರಿಕಿಟ ಗಿನ್ನಧಿನ್ನಾ” ಎಂದು ಲಯವಾದ ತಬಲಾ ಸದ್ದು ಕೇಳಿದ ಅನುಭವ ಆಗುತ್ತದೆ, ಅಂದರೆ ಉಸ್ತಾದರೆ ತಬಲಾ ವಾದನ ನಮ್ಮ ನಿಮ್ಮೆಲ್ಲರ ಮೇಲೆ ಅಷ್ಟೊಂದು ಪ್ರಭಾವ ಮಾಡಿದೆ ಎಂದರ್ಥ ಏಳನೇ ವರ್ಷಕ್ಕೆ ತಬಲ ಅಭ್ಯಾಸ ಆರಂಭಿಸಿದ ಜಾಕಿರ್ ಹುಸೇನ್ ಕೇವಲ ಹನ್ನೆರಡನೇ ವರ್ಷಕ್ಕೆ ಜನ ಮೆಚ್ಚುವ ತಬಲ ಕಾರ್ಯಕ್ರಮವನ್ನು ಸಾದರಪಡಿಸಿದ್ದರು. ಆ ವಯಸ್ಸೇ ಹಾಗೆ ಕ್ರಿಕೆಟ್, ಫುಟ್‌ಬಾಲ್ ಎಂದು ಮನಸು ಆಟವಾಡಲು ಹಾತೊರೆಯುವ ವಯಸ್ಸು ಆದು ಜಾಕಿರ್‌ರನ್ನು ಬಿಟ್ಟಿರಲಿಲ್ಲ. ಬಾಲಕ ಜಾರ್ಕಿಗೆ ತಬಲಾದೊಂದಿಗೆ ಕ್ರಿಕೆಟ್‌ನಲ್ಲೂ ಅಪಾರ ಆಸಕ್ತಿ, ಆದರದು ಅಲ್ಲಾ ರಾಖರಿಗೆ ಇಷ್ಟವಿರಲಿಲ್ಲ. ಉಸ್ತಾದ್ ಜಾಕೀರ್ ಹುಸೇನ್ ಅವರ ತಂದೆ ಉಸ್ತಾದ್ ಅಲ್ಲಾ ರಾಖರು ಕೂಡ ಒಬ್ಬ ಉತ್ತಮ ತಬಲಾವಾದಕರಾಗಿದ್ದರು ಹಾಗೂ ಮಗನೂ ತನ್ನನ್ನು ಮೀರಿಸುವ ತಬಲಾ ವಾದಕನಾಗಿ ತಬಲಾ ವಾವನದಲ್ಲಿ ಉತ್ತುಂಗಕ್ಕೇರಬೇಕೆಂದು ಬಯಸಿದ್ದರು. ಆದರೆ ಅವರ ತಾಯಿಗೆ ಜಾಕಿರ್ ತಬಲಾ ಬೆನ್ನು. ಹತ್ತುವುದು ಅಷ್ಟು ಇಷ್ಟವಿರಲಿಲ್ಲ. ಒಮ್ಮೆ ಜಾಕಿರ್ ಕ್ರಿಕೆಟ್ ಆಡುವಾಗ ಅವರ ಬೆರಳಿಗೆ ಪೆಟ್ಟು‌ ಮಾಡಿಕೊಂಡರಂತೆ ಅಂದಿನಿಂದ ಅಲ್ಲಾ ರಾಖರಿಗೆ ಮಗ ತಬಲಾ ವಾದಕನೇ ಆಗಬೇಕೆಂಬ ಸಂಕಲ್ಪ ಎಷ್ಟರಮಟ್ಟಿಗಿತ್ತೆಂದರೆ ಜಾಕಿರ್ ಹುಟ್ಟಿದ ಮೇಲೆ ಅವರ ಮನೆಯ ಸಂಪ್ರದಾಯದಂತೆ ಮಗನನ್ನು ಅವರ ತಂದೆ ಅಲ್ಲಾ ರಾಜಿನ ಮಡಿಲಲ್ಲಿ ಮಲಗಿಸಿದರು.

ಹಾಗೆ ಮಲಗಿಸಿದಾಗ ತಂದೆಯಾದವನು ಒಂದೆರಡು ಒಳ್ಳೆಯ ನುಡಿಗಳನ್ನು ಕಿವಿಯಲ್ಲಿ ಹೇಳಬೇಕೆಂಬುದು ಸಂಪ್ರದಾಯ ಬಹುಶಃ ಅದನ್ನು “ಆಯತ್’ ಎಂದು ಕರೆಯುತ್ತಾರೆ. ಆದರೆ ಅಲ್ಲಾ ರಾಖರು ಜಾಕಿರ್ ಕಿವಿಯಲ್ಲಿ ತಬಲಾದ ಬೋಲ್‌ಗಳನ್ನೂ ಹೇಳಿದ್ದರಂತೆ, ಅಂದರೆ ನೀವೇ ಊಹಿಸಿ ಅಲ್ಲಾ ರಾಜ್‌ರಿಗೆ ಮಗ ತಬಲಾವಾದಕನೇ ಆಗಬೇಕೆಂಬ ಸಂಕಲ್ಪ ಯಾವ ಪರಿಯದಾಗಿತ್ತು. ಆ ಎಳೆಯ ವಯಸ್ಸಿನ ತಬಲಾ ಕೇಂದ್ರಿತ ಲಾಲನೆ ಪಾಲನೆಗಳೇ ಚಾಕಿರ್ ಹಾಸೇನ್‌ರನ್ನು ಜಗದೇ ಮೆಚ್ಚುವ ಭಾರತದ ತಬಲಾ ಉತ್ಪಾದನನ್ನಾಗಿ ಮಾಡಿ ನಿಲ್ಲಿಸಿರಬೇಕು. ಅವರು ತಬಲಾ ನುಡಿಸುವುದು ನೋಡುವುದೇ ಒಂದು ಚಂದ. ಬೆರಳುಗಳು ತಬಲವನ್ನು ಸೋಕಿದರೆ ಸಾಕು ಬೆರಳುಗಳು ಒಂದಕ್ಕೊಂದು ಪೈಪೋಟಿಗೆ ಬಿದ್ದಂತೆ ತಬಲಾ ವಾದನ ಮಾಡುತ್ತ ತಮ್ಮ ತಮ್ಮಲೇ ಸ್ಪರ್ಧೆಗೆ ಬಿದ್ದವರಂತೆ ನಾಟ್ಯವಾಡುತ್ತಿದ್ದವು ಕ್ಷಣಮಾತ್ರದಲ್ಲಿ ಆ ಬೆರಳುಗಳು ಅಧ್ಯಕ್ಷೆಗೊಂಡು ಮತ್ತೆ ಗೋಚರಿಸುವಂತೆ ಭಾಸವಾಗುವಂತೆ ಚಲಿಸುತ್ತಿದ್ದವು

ಜಾಕಿರ್ ಅವರ ಸಂಗೀತ ಪಯಣ ತಿಳಿಯದವರಿಲ್ಲ, ಅದರೆ ಜಾಕಿರ್ ಕೆಲವು ಚಲನಚಿತ್ರಗಳಲ್ಲಿ ಅಭಿನಯ ಹಾಗೂ ಸಂಗೀತದ ಮೂಲಕವೂ ತಮ್ಮ ಕೈಚಳಕವನ್ನು ತೋರಿದ್ದರು ಭಾವರ್ಚೆ, ಸತ್ಯಂ ಶಿವಂ ಸುಂದರಂ.ಹೀರ ರಂಚಾ ಚಿತ್ರಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿದ್ದರು, ಅಲ್ಲದೆ ಸಾಜ್ ಎಂಬ ಚಿತ್ರದಲ್ಲಿ ಸಂಗೀತ ನೀಡಿದ್ದಲ್ಲದೆ ನಟನೆಯನ್ನು ಮಾಡಿದ್ದರು. ಅಲ್ಲದೆ ಶಶಿ ಕಪೂ‌ರ್ ರೊಂದಿಗ ಹೀಟ್ ಅಂಡ್ ಡಸ್ಟ್ ಎಂಬ ಚಿತ್ರದಲ್ಲೂ ತಮ್ಮ ನಟನಾ ಕೌಶಲ್ಯವನ್ನು ತೋರ್ಪಡಿಸಿದ್ದರು. ಯುವಕರಾಗಿದ್ದಾಗಲೇ ಮುಘಲ್ ಏ ಆಜಮ್ ಚಲನ ಚಿತ್ರದಲ್ಲಿ ಯುವ ಪ್ರೇಮಿ ಸಲೀಮ್‌ನ ಪಾತ್ರವು ಒಲಿದು ಬಂದಿತ್ತಂತೆ. ಆದರೆ ಅಲ್ಲಾ ರಾಖರು ನನ್ನ ಮಗ ಬಹಾ ದೊಡ್ಡ ತಬಲಾ ವಾದಕನಾಗಬೇಕು ಅಂದರಂತೆ ಅದು ಅಲ್ಲಾ ರಾಖರ ಸಂಕಲ್ಪ. ಅವರ ಸಂಕಲ್ಪದ ಫಲವಾಗಿ ಭಾರತಕ್ಕೊಬ್ಬ ಜಾಕಿರ್ ಎಂಬ ತಬಲಾ ಉಸ್ತಾದ ದೊರೆತಂತಾಯಿತು ತಬಲಾಕ್ಕೊಂದು ತನ್ನದೇ ಆದ ಸ್ಥಾನಮಾನವನ್ನು ಕಲ್ಲಿಸಿಕೊಟ್ಟ ಶ್ರೇಯಸ್ಸು ಜಾಕಿರ್ ಹುಸೇನ್‌ರಿಗೆ ಸಲ್ಲಬೇಕು.

ಇದನ್ನೂ ಓದಿ: ಕಂಪನಿ ಷೇರಿನ ಮೇಲೆ ಹೂಡಿಕೆ ಹೇಗೆ?

ಉಸ್ತಾದರಿಗೆ ಇದು ಶಾಸ್ತ್ರೀಯ ಇದು ಶಾಸ್ತ್ರಿಯವಲ್ಲ ಎಂಬ ಭೇದ ಭಾವ ಇರಲಿಲ್ಲ, ಅವರನ್ನು ಶಾಸ್ತ್ರೀಯ ಸಂಗೀತದ ದಿಗ್ಗಜರೊಂದಿಗೆ ಘಜಲ್ ಹೇಳುವ ಗುಲಾಮ್ ಅಲಿ, ಜಗಜಿತ್ ಸಿಂಗ,ಹರಿಹರನ್ ಹಾಗೂ ಭಜನ್ ಹೇಳುವ ಅನೂಪ್ ಝಲೋಟರೊಂದಿಗೂ ತಬಲಾ ಸಾಥ್ ನಲ್ಲಿಯೂ ಕಾಣಬಹುದಾಗಿತ್ತು. ಅಂದರೆ ಅವರು ಸಂಗೀತವನ್ನು ಒಂದು ಸಾಗರ ಎಂಬಂತೆ ಕಂಡಿದ್ದರು ಈ ಸಾಗರಕ್ಕೆ ನಾನಾ ತೆರೆದ ಸಂಗೀತ ಪ್ರಕಾರಗಳು ಗಂಗೆಯಂತೆ ಹರಿದುಬರಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಈ ನಿಟ್ಟಿನಲ್ಲಿ ‘ಶಕ್ತಿ’ ಎಂಬ ಸಂಗೀತ ಬ್ಯಾಂಡ್ ಅನ್ನು ಹುಟ್ಟು ಹಾಕಿದ್ದರು. ಈ ಶಕ್ತಿ ಬ್ಯಾಂಡ್ ಇದೇ ವರುಷದಲ್ಲಿ 50 ವಸಂತಗಳನ್ನು ಪೂರೈಸಿ ಸುವರ್ಣ ಸಂಭ್ರಮವನ್ನು ಆಚರಿಸಿದ್ದನ್ನು ನಾವಿಲ್ಲಿ ಕಾಣಬಹುದು. ತಮ್ಮ ಶಕ್ತಿ ಸಂಗೀತ ತಂಡದಲ್ಲಿ ನಾನಾ ಬಗೆಯ ಸಂಗೀತ ಪ್ರಕಾರಗಳನ್ನು ಹಾಗೂ ಸಂಗೀತಕಾರರನ್ನು ಪರಿಚಯಿಸಿದ್ದರು. ಅದು ಗಿಟಾರಿಸ್ಟ್ ಚಾನ್ ಮ್ಯಾಕ್ ಲುಪ್ಲಿನ್ ಇರಬಹುದು ಘಟಕ ವಾದಕ ವಿಕು ವಿನಾಯಕ್‌ರಂತವರಿರಬಹುದು, ನಂತರದ ದಿನಗಳಲ್ಲಿ ಶಂಕರ್ ಮಹಾದೇವನ್, ಮ್ಯಾಂಡೊಲಿನ್ ಶ್ರೀನಿವಾಸ್ ಹೀಗೆ ಯುವ ಕಲಾವಿದರು ಸೇರಿಕೊಂಡರು. ಹೀಗೆ ಉಸ್ತಾದ್ ಚಾಕಿರ್ ಶಕ್ತಿಯ ಮೂಲಕ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತವನ್ನು ಬೆಸೆಯುವುದರ ಜೊತೆಗೆ ವಾಶ್ಚಾತ್ಯ ಮತ್ತು ಭಾರತೀಯ ಸಂಗೀತವನ್ನು ಬೆಸೆದು ಜಗತ್ತೇ ತಿರುಗಿ ನೋಡುವಂತೆ ಮಾಡಿತ್ತು.

ಸರಿ ಸುಮಾರು 60 ದಶಕಗಳ ಕಾಲ ಸಂಗಾತಿ ಕ್ಷೇತ್ರದಲ್ಲಿ ನಿರಂತರವಾಗಿ ಮಿನುಗಿದ ಜಾಕಿರ್ ಹುಸೇನ್ ತಮ್ಮ ವೃತ್ತಿ ಪ್ರಾರಂಭಿಸಿದಾಗ ತನಗಿಂತ
ಎರಡು ತಲೆಮಾರು ದೊಡ್ಡದರೊಂದಿಗೆ ತಬಲಾ ಸಾಣ್ ಕೊಟ್ಟು ಭೀಸ್ ಎನಿಸಿಕೊಂಡಿದ್ದರು. ಅದೇ ರೀತಿ ಮೊನ್ನೆ ಮೊನ್ನೆಯವರೆಗೂ ತನಗಿಂತ ಎರಡು ತಲೆವಾರು ಚಿಕ್ಕವರೊಂದಿಗೂ ತಟ್ಟಲಾ ಸಾಥ್ ಕೊಟ್ಟು ಕಿರಿಯರಿಗೆ ಮಾರ್ಗದರ್ಶಕರಾಗಿ ಬದುಕಿದ್ದಷ್ಟು ದಿನ ಕಬಲಾ ಲೋಕದ ಅಪ್ರತಿಮ ಸಂಗಾತಿ ಸರದಾರನಾಗಿ ಸಂಗಾತಿ ಶಾರದೆಯನ್ನು ಆರಾಧಿಸಿದರು. ಹಾಗೆಂದು ನಾನೊಬ್ಬ ಮಹಾನ್ ಕಲಾಕಾರ ಎಂದು ಯಾವ ಹಮ್ಮು ಬಿಮ್ಮು ಇರಲಿಲ್ಲ ಬಹುಶಃ ಈ ಒಂದು ಗುಣ ಎತ್ತರಕ್ಕೇರಿದೆ ಎಲ್ಲರಲ್ಲೂ ಕಾಣಬಹುದು. ಇಂದು ಉಸ್ಮಾನ್ ಅವರ ತಬಲಾ ವಾದನದಷ್ಟೇ ಅವರ ಸರಳತೆಯ ಬಗೆಗೆ ಹಾಗೂ ಎಲ್ಲರನ್ನು ಸಮನ್ವಯತೆಯಿಂದ ನೋಡುವ ಬಗೆಗೆ ಹೆಚ್ಚು ಚರ್ಚಿತರಾಗಿದ್ದರೆ ಇತ್ತೀಚೆಗೆ ಇಹಲೋಕದ ಯಾತ್ರೆ ಮುಗಿಸಿದ ರತನ್ ಟಾಟಾರ ಬಗ್ಗೆಯೂ ಹೆಚ್ಚು ಚರ್ಚೆ ಆಗಿದ್ದು ಅವರ ಸರಳತೆಯ ಕುರಿತ ಉಸ್ತಾದ್ ಅವರ ಸರಳತೆಯ ಬಗ್ಗೆ ಹೇಳಬೇಕೆಂದರೆ ಅವರ ತಬಲಾವನ್ನು ತಯಾರಿಸಿ ಕೊಡುವ ತಬಲಾ ತಯಾರಕರು ಉಸ್ತಾದ್ ಹೇಳಿದ ತಬಲಾ ತಯಾರಿಸಿ ಪುಟ್ಟ ವ್ಯಾಗನಾರ್ ಕಾರ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರಂತೆ ಇದನ್ನು ಒಂದು ದಿನ ತಮ್ಮ ಸ್ವಂತ ಟೊಯೋಟಾ ಕೊರೋಲಾ ಕಾರನು ಸಬಲಾ ತಯಾರಕರ ಹೆಸರಿಗೆ ಮಾಡಿಕೊಟ್ಟು ಇನ್ನು ನೀವು ದೊಡ್ಡ ಕಾರಿನಲ್ಲಿ ಅಡ್ಡಾಡಬೇಕು ಎಂದಿದ್ದರಂತೆ. ಇದೇ ರೀತಿ ಒಮ್ಮೆ ಆಮ್ಬರ್ ಆಲಿ ಖಾನ್ ಅವರೊಂದಿಗೆ ಸಂಗೀತ ಕಾರ್ಯಕ್ರಮ ಕೊಟ್ಟ ನಂತರ ಅಮ್ಮದ್ ಅಲಿ ಖಾನ್ ಅವರ ಪಾದರಕ್ಷೆಗಳನ್ನು ತೆಗೆದು ತಮ್ಮ ಚರಣಕ್ಕೊತ್ತಿಕೊಂಡಿದ್ದರಂತೆ ಅಂದರ ಉಸ್ತಾದ್ ಜಾ ಮನೆ ಮಾಡಿತ್ತು.

ಇನ್ನು ಅವರ ತಬಲಾದಲ್ಲಿ ಜಿಂಕೆ ಓಡುವುದು, ಶಂಖನಾದ, ಕೈಲಾಸದಲ್ಲಿ ನೆಲೆಸಿರುವ ಶಿವನ ಧಮರುಗದ ಸದ್ದನ್ನು ಕೇಳಿಸುವುದು ಇದಕ್ಕೆಲ್ಲ ಉಸ್ತಾದರಿಗೆ ಉಸ್ತಾದರೆ ಸಾಟಿ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ, ನಾಲ್ಕು ಬಾರಿ ಗ್ರಾಮಿ ಪ್ರಶಸ್ತಿ ಹೇಗೆ ಅದೆಷ್ಟೋ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿದೆಯೋ ಅದರ ಲೆಕ್ಕವಿಲ್ಲ. ಅಂತಹ ಮಹಾನ್ ಕಲಾಕಾರ ಒಮ್ಮೆಲೇ ಇನ್ನು ಸಾಕು ಎಂದು ಸಂಗಾತಿ ಲೋಕದಿಂದ ಎದ್ದು .ನಡೆದದ್ದು ಸಂಗೀತ ಲೋಕದಲ್ಲೊಂದು ಶೂನ್ನೆ ಭಾವನೆಯನ್ನುಂಟು ಮಾಡಿದೆ. ಸಂಗೀತ ಪ್ರೇಮಿಗಳು ವ್ಯಾಉಸ್ತಾದ್ ಎಂದು ಇನ್ನು ಯಾರನ್ನು ಸಂಭೋದಿಸಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ ತಬಲಾ ಇರುವವರೆಗೆ ಉಸ್ತಾರ್ ಅಮರ ಅವರ ಬೆರಳುಗಳು ನಾಟ್ಯ ನಿಲ್ಲಿಸಿರಬಹುದು. ಆದರೆ ಅವರ ನೆನಪು ಸದಾ ಜಾಗೃತ ಅವರು ನಗುಮೊಗದ ಉಸ್ತಾದರ ಚಿತ್ರ ನಮ್ಮ ಮುಂದೆ ಹಾಡು ಹೋಗದಿದ್ದರೆ ಹೇಳಿ

Leave a Comment