ಪಾನಮತ್ತರಾಗಿ ವಾಹನ ಚಾಲನೆ ಮಾಡಿದರೆ ಚಾಲನಾ ಪರವಾನಗಿ ಅಮಾನತು
ಪಾನಮತ್ತರಾಗಿ ವಾಹನ ಚಾಲನೆ ಮಾಡಿದರೆ ಚಾಲನಾ ಪರವಾನಗಿ ಅಮಾನತು ಪಿಎಸ್ಐ ವೇಣುಗೋಪಾಲ್ ಎಂದು ಹೇಳಿದರು.
ಶಿಡ್ಲಘಟ್ಟ ನಗರದಲ್ಲಿ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 06 ಗಂಟೆಯ ತನಕ ನಿದ್ರೆಯ ವೇಳೆ ವಾಹನಗಳ ಚಾಲನೆಯನ್ನು ಮಾಡಬಾರದು ನಗರ ಠಾಣೆ ಪಿಎಸ್ಐ ಎಂ.ವೇಣುಗೋಪಾಲ್ ಚಾಲಕರಿಗೆ ಎಚ್ಚರಿಕೆ ನೀಡಿದರು.
ನಗರ ಪೋಲಿಸ್ ಠಾಣೆಯಲ್ಲಿ ಆಯೋಜಿಸಿದ್ದ ಟ್ರಕ್ ,ಕಾರು ಮತ್ತು ಇತರೆ ವಾಹನಗಳ ಚಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾವು ವಾಹನಗಳ ಚಾಲನೆ ಮಾಡುವ ವಾಹನಗಳ ಸೂಕ್ತ ದಾಖಲೆಗಳು ಮತ್ತು ವಿಮೆ ಹಾಗೂ ವಾಹನ ಚಾಲನಾ ಪರವಾನಗಿ ಕಡ್ಡಾಯವಾಗಿ ತಮ್ಮ ಬಳಿ ಇಟ್ಟುಕೊಳ್ಳಬೇಕು ವಾಹನಗಳ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಸಿಬೇಕು ರಸ್ತೆ ಮತ್ತು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು ವಿಶೇಷವಾಗಿ ಕ್ಯಾಬ್ ಚಾಲಕರು ಸಮವಸ್ತ್ರಗಳನ್ನು ಧರಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಹಿಳೆಯರ ಮತ್ತು ಮಕ್ಕಳ ಕಾನೂನು ಮತ್ತು ಹಕ್ಕುಗಳು! ಶಿಡ್ಲಘಟ್ಟ
ಪಾನಮತ್ತರಾಗಿ ವಾಹನ ಚಾಲನೆ ಮಾಡಿದರೆ ಚಾಲನಾ ಪರವಾನಗಿ ಅಮಾನತು
ಅತೀ ವೇಗವಾಗಿ ಚಲಿಸುವುದು ಅಪಘಾತಕ್ಕೆ ಕಾರಣ ವೇಗದ ಮೀತಿಯನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡು ತಾವು ನಿಧಾನವಾಗಿ ಚಲಿಸಿದರೆ ನಿಮಗೂ ಮತ್ತು ತಮ್ಮ ಜೊತೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೂ ಒಳ್ಳೆಯದು ಎಂದರು. ತಾವು ವಾಹನಗಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು ತಮ್ಮಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಇನ್ನೂ ಇದೇ ಸಂಚಾರಿ ನಿಯಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಪಾನಮತ್ತರಾಗಿ ವಾಹನ ಚಾಲನೆ ಮಾಡಿದರೆ ಚಾಲನಾ ಪರವಾನಗಿ ಅಮಾನತು ಕಾರ್ಯಕ್ರಮದಲ್ಲಿ ಉಪಸ್ಥಿತರು:-
ಈ ಸಂದರ್ಭದಲ್ಲಿ ನಗರ ಠಾಣೆ ಅಪರಾಧ ವಿಭಾಗದ ಪಿಎಸ್ಐ ಟಿ.ವೆಂಕಟರಮಣ ,ಮುಖ್ಯ ಪೇದೆ ಅಶ್ವಥ್ ,ಕೃಷ್ಣ ,ಅಂಬರೀಶ್ ,ಶಶಿಕುಮಾರ್ ,ಠಾಣೆ ಬರಹಗಾರರಾದ ಶಿವಕುಮಾರ್ ಸೇರಿದಂತೆ ತಾಲ್ಲೂಕಿನ ಟ್ರಕ್ ಮತ್ತು ಕಾರು ಹಾಗೂ ಇತರೆ ವಾಹನಗಳ ಚಾಲಕರು ಮುಂತಾದವರು ಹಾಜರಿದ್ದರು.