ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:-

 ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಭಾರತ್‌ ಅಕ್ಕಿಯನ್ನು ಎಲ್ಲೆಲ್ಲಿ ಖರೀದಿಸಬಹುದು, ದರ ಎಷ್ಟು, ಎಷ್ಟು ಕೆಜಿ ಸಿಗುತ್ತೆ? – ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:
     ದೇಶದಲ್ಲಿ ಚಿಲ್ಲರೆ  ಅಂಗಡಿಗಳಲ್ಲಿ ಅಕ್ಕಿಯ ಬೆಲೆಯು ಶೇ 15ರಷ್ಟು ಹೆಚ್ಚಳವಾಗಿದ್ದು, ಇದು ಜನ ಸಾಮಾನ್ಯರ ಬದುಕಿಗೆ ಹೊಡೆತ ಬಿದ್ದಿದೆ. ಈ ಬಗ್ಗೆ ಗಮನ ಹರಿಸಿರುವ ಕೇಂದ್ರ ಸರ್ಕಾರವು ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ನೀಡಲು ಸಿದ್ಧವಾಗಿದೆ. ಅದಕ್ಕಾಗಿ ಕೆಜಿ 29 ರೂ ದರ ಭಾರತ್‌ ಅಕ್ಕಿಯನ್ನು ಸಾಮಾನ್ಯ ಜನರಿಗೆ ಪರಿಚಯಿಸಿದೆ. ಭಾರತ್‌ ಅಕ್ಕಿಯು 5 ಕೆಜಿ ಹಾಗೂ 10 ಕೆಜಿ ಬ್ಯಾಗ್‌ಗಳಲ್ಲಿ ಸಿಗಲಿದೆ. ಚಿಲ್ಲರೆ ಮಾರಾಟದ ಉದ್ದೇಶದಿಂದ ಭಾರತ್‌ ರೈಸ್‌ ಅನ್ನು ಪರಿಚಯಿಸಿರುವ ಸರ್ಕಾರವು ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆ ಪೂರೈಕೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹಾಗಾದರೆ ಈ ಭಾರತ್‌ ಅಕ್ಕಿ ಎಲ್ಲಿ ದೊರೆಯುತ್ತದೆ,  ಯಾರಿಗೆಲ್ಲಾ ಇದರಿಂದ ಲಾಭವಾಗಲಿದೆ ಎಂದು ತಿಳಿಯುವ ಬನ್ನಿ.
ಪ್ರೆಸ್‌ ಇನ್‌ರ್ಫಾಮೇಶನ್‌ ಬ್ಯೂರೊದ ಮಾಹಿತಿ ಪ್ರಕಾರ ಆಹಾರ ಸಚಿವ ಪಿಯೂಷ್‌ ಗೋಯಲ್‌ ಭಾರತ್‌ ಅಕ್ಕಿ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಅಲ್ಲದೆ ಇದರ ಮಾರಾಟಕ್ಕಾಗಿ ಮೊಬೈಲ್‌ ವ್ಯಾನ್‌ಗಳನ್ನು ಪರಿಚಯಿಸಿದ್ದಾರೆ ಎಂದು ಟೈಮ್ಸ್‌ ಆಫ್‌ ಇಂಡಿಯಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ :-ಹನುಮಾನ್ ಬ್ಲಾಕ್ ಬಾಸ್ಟರ್ ಸಿನಿಮಾ ಒಟಿಟಿಗೆ ಬರಲು ಸಿದ್ಧ; ಯಾವಾಗ ವೀಕ್ಷಣೆ? ಸಿನಿ ಪ್ರೇಕ್ಷರಿಗೆ ಸಿಹಿ ಸುದ್ದಿ.

ಪ್ರಧಾನ ಮಂತ್ರಿ ಭಾರತ್‌ ಅಕ್ಕಿಯ ಬಗ್ಗೆ ತಿಳಿಯಬೇಕೆಂದರೆ:-

ಹೆಚ್ಚುತ್ತಿರುವ ಆಹಾರ ಬೆಲೆಗಳನ್ನು ಪರಿಹರಿಸಲು, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಸಾರ್ವಜನಿಕರಿಗೆ ʼಭಾರತ್ ರೈಸ್ʼ  ಮಾರಾಟವನ್ನು ಪ್ರಾರಂಭಿಸಿದೆ. ಎನ್‌ಎಫ್‌ಇಡಿ, ಎನ್‌ಸಿಸಿಎಫ್‌ ಮತ್ತು ಕೇಂದ್ರೀಯ ಭಂಡಾರ್ ಈ ಮೂರು ಏಜೆನ್ಸಿಗಳ ಮೂಲಕ ಈ ಬ್ರ್ಯಾಂಡ್ ಅಡಿಯಲ್ಲಿ 5 ಎಲ್‌ಎಮ್‌ಟಿ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ.

ಅನುಕೂಲಕರ ಬೆಳೆ ಇಳುವರಿ ಮತ್ತು ಎಫ್‌ಸಿಐನೊಂದಿಗೆ ಸಾಕಷ್ಟು ದಾಸ್ತಾನುಗಳ ಹೊರತಾಗಿಯೂ, ದೇಶೀಯ ಅಕ್ಕಿ ಬೆಲೆಗಳು ಏರಿಕೆಯಾಗುತ್ತಲೇ ಇವೆ, ಅಕ್ಕಿ ರಫ್ತಿನ ಮೇಲೆ ಅಸ್ತಿತ್ವದಲ್ಲಿರುವ ನಿಯಮಗಳ ಹೊರತಾಗಿಯೂ ಈ ಕ್ರಮದ ಅಗತ್ಯವಿದೆ.


ಇದನ್ನೂ ಓದಿ :
ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ

ಪ್ರಧಾನ ಮಂತ್ರಿ ಭಾರತ್‌ ಅಕ್ಕಿಯನ್ನು ಎಲ್ಲಿ ಖರೀದಿಸಬಹುದು?

ಬೆಂಗಳೂರು ಅಂತಹ ಮುಂತಾದ ಸಿಟಿಗಳಲ್ಲಿ ಭಾರತ್ ಅಕ್ಕಿಯನ್ನು ಖರೀದಿಸಬೇಕೆಂದರೆ ನಿಮ್ಮ ಹತ್ತಿರದ ಇನ್ಸ್ಟಾಮಾರ್ಟ್ ನಲ್ಲಿ ಖರೀದಿಸಬಹುದು ಆರಂಭದಲ್ಲಿ, ಮೊಬೈಲ್ ವ್ಯಾನ್‌ಗಳು ಸೇರಿದಂತೆ ಕೇಂದ್ರೀಯ ಭಂಡಾರ್, ಎನ್‌ಎಎಫ್‌ಇಡಿ ಮತ್ತು ಎನ್‌ಸಿಸಿಎಫ್‌ ಔಟ್‌ಲೆಟ್‌ಗಳ ಮೂಲಕ ಭಾರತ್ ಅಕ್ಕಿಯನ್ನು ಖರೀದಿಸಲು ಪ್ರವೇಶಿಸಬಹುದು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ‘ಭಾರತ್’ ಅಕ್ಕಿಯನ್ನು ಗ್ರಾಹಕರಿಗೆ ಹೆಚ್ಚು ಪ್ರವೇಶಿಸಲು 100 ಮೊಬೈಲ್ ವ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲೂ ಇದು ಲಭ್ಯವಾಗುತ್ತದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಸ್ವೀಗ್ಗಿ, ಜೊಮಾಟೊ, ಇನ್ಸ್ಟಾಮಾರ್ಟ್, ಅಮೆಜಾನ್ ಮುಂತಾದ ಕಡೆಯೂ ನೀವು ಖರೀದಿಸಬಹುದು.
ನಿಮಗೆ ರಿಯಾಯಿತಿ ದರದಲ್ಲಿ ಇತರ ವಸ್ತುಗಳು ಖರೀದಿಸಲು ಸಿಗುತ್ತವೆ.

ಇನ್ನು ಸರ್ಕಾರವು ಭಾರತ್‌ ಅಕ್ಕಿ ಜೊತೆಗೆ ಇತರ ಕೆಲವು ಉತ್ಪನ್ನಗಳನ್ನೂ ಸಬ್ಬಿಡಿ ದರದಲ್ಲಿ ನೀಡುತ್ತಿದೆ. ಈ ಮೊದಲು ʼಭಾರತ್ ಅಟ್ಟಾʼ ಎಂಬ ಸಬ್ಸಿಡಿ ಗೋಧಿಯನ್ನು ಜನರಿಗೆ ಪರಿಚಯಿಸಿತು. ಇದು 800 ಮೊಬೈಲ್ ವ್ಯಾನ್‌ಗಳು ಮತ್ತು ರಾಷ್ಟ್ರವ್ಯಾಪಿ 2,000 ಔಟ್‌ಲೆಟ್‌ಗಳಲ್ಲಿ ಲಭ್ಯವಿದೆ. ಹೆಚ್ಚುವರಿಯಾಗಿ, ಈ ಸಹಕಾರಿ ಚಾನೆಲ್‌ಗಳ ಮೂಲಕ ಭಾರತ್ ದಾಲ್ ಅನ್ನು ಕೆಜಿಗೆ 60 ರೂ. ಮತ್ತು ಈರುಳ್ಳಿ ಕೆಜಿಗೆ 25 ರೂ.ಗೆ ನೀಡಲಾಗುತ್ತಿದೆ.

Leave a Comment