‘ಬಿ’ ಖಾತೆ; ನಗರಸಭೆಯಲ್ಲಿ ಕಾವೇರಿದ ಚರ್ಚೆ
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ನಾಗರಿಕರಿಗೆ ‘ಬಿ’ ಖಾತೆ ನೀಡುವ ವಿಚಾರವಾಗಿ ಬುಧವಾರ ನಗರಸಭೆ ಅಧ್ಯಕ್ಷ ಗಜೇಂದ್ರ ಅಧ್ಯಕ್ಷತೆಯಲ್ಲಿ ಸದಸ್ಯರ ಸಭೆ ನಡೆಯಿತು.ಅಧಿಕೃತ ಅನಧಿಕೃತ ಸ್ವತ್ತುಗಳು, ಕರಪತ್ರಗಳ ಹಂಚಿಕೆ, ವಾರ್ಡ್ವಾರು ಸಭೆ ಸೇರಿದಂತೆ ವಿವಿಧ ಚರ್ಚೆಗಳು ಸಭೆಯಲ್ಲಿ ನಡೆದವು. ಸದಸ್ಯರ ನಡುವೆ ವಾಗ್ವಾದಗಳು ಜರುಗಿದವು. ಆಯುಕ್ತರನ್ನು ‘ಬಿ’ ಖಾತೆ ವಿಚಾರವಾಗಿ ಸದಸ್ಯರು ಹಲವು ಪ್ರಶ್ನೆಗಳನ್ನು ಕೇಳಿದರು. ಆಯುಕ್ತ ಮನ್ಸೂರ್ ಅಲಿ ಮಾತನಾಡಿ, ‘ನಮ್ಮ ಹಂತದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಲಾ ಗುವುದು. ಎಲ್ಲ ವಾರ್ಡ್ಗಳಲ್ಲಿಯೂ ಸಭೆ ಮಾಡಿ ಅರ್ಜಿ ಸ್ವೀಕರಿಸುತ್ತೇವೆ. ನಗರಸಭೆಯಲ್ಲಿ ಆ ಅರ್ಜಿಗಳ ಪರಿಶೀಲನೆ ನಡೆಯಲಿದೆ’ ಎಂದು ಹೇಳಿದರು.
ಸದಸ್ಯ ಕಣಿತಹಳ್ಳಿ ವೆಂಕಟೇಶ್, ‘ಈ ಹಿಂದೆ ಅನಧಿಕೃತ ಬಡಾವಣೆಗಳಿಗೂ ಅಧಿಕೃತ ಎಂದು ಖಾತೆ ನೀಡಿದ್ದಾರೆ. ಈಗ ಅದೇ ಸ್ವತ್ತಿನ ಪಕ್ಕದ ನಿವೇಶನಕ್ಕೆ ಅನಧಿಕೃತ ಎನ್ನುತ್ತಿದ್ದಾರೆ. ಹೀಗೆ ಅಧಿಕೃತ ಮತ್ತು ಅನಧಿಕೃತ ಖಾತೆಯ ವಿಚಾರವಾಗಿ ಗೊಂದಲಗಳು ಇವೆ’ ಎಂದು ಗಮನ ಸೆಳೆದರು. ಆಗ ಆಯುಕ್ತ ಮನ್ಸೂರ್ ಅಲಿ, ಸರ್ಕಾರದ ಆದೇಶವನ್ನು ಉಲ್ಲೇಖಿಸಿ ಅಧಿಕೃತ, ಅನಧಿಕೃತ ಖಾತೆಯ ಬಗ್ಗೆ ಮಾಹಿತಿ ನೀಡಿದರು.ಖಾತೆ ವಿಚಾರವಾಗಿ ಸರ್ಕಾರದ ಆದೇಶ ಮತ್ತು ವಾಸ್ತವವಾಗಿ ಇರುವ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ:ಅಲ್ಲಿ ಡಿಕೆಶಿ, ಇಲ್ಲಿ ಬಿವೈವಿ ಗುರಿ
‘ಬಿ’ ಖಾತೆ ವಿಚಾರವಾಗಿ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು ಮಧ್ಯವರ್ತಿಗಳು ಮತ್ತು ಸದಸ್ಯರ ಜೊತೆ ಯಾವ ರೀತಿಯಲ್ಲಿ ವರ್ತಿಸಬೇಕು ಎನ್ನುವ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿ ಎಂದು ಸದಸ್ಯ ನರಸಿಂಹಮೂರ್ತಿ ತಿಳಿಸಿದರು.ವಾರ್ಡ್ ವಾರು ದಾಖಲೆಗಳ ಸಂಗ್ರಹ, ಅವುಗಳ ಪರಿಶೀಲನೆಯ ಬಗ್ಗೆ ಚರ್ಚೆಗಳು ನಡೆದವು. ‘ಬಿ’ ಖಾತೆ ಅದಾಲತ್ನಲ್ಲಿ ಬ್ಯಾನರ್ ಅಳವಡಿಸುವುದು, ಸ್ಥಳದಲ್ಲಿ ಯಾರು ಹಾಜರಿ ಇರಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಕಾವೇರಿದ ಮಾತುಕತೆ ನಡೆಯಿತು.ಅಧ್ಯಕ್ಷ ಗಜೇಂದ್ರ ಮಾತನಾಡಿ, ನಗರಸಭೆ ಆವರಣದಲ್ಲಿಯೂ ಕೌಂಟರ್ಗಳನ್ನು ತೆರೆಯಲಾಗುತ್ತದೆ. ಇಲ್ಲಿಯೂ ಅರ್ಜಿಗಳನ್ನು ಸಲ್ಲಿಸಬಹುದು ಎಂದರು.
ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಈಗಾಗಲೇ ಖಾತೆ ಆಗಿರುವ ವ್ಯಕ್ತಿಗಳು ಮತ್ತೆ ಅರ್ಜಿ ಸಲ್ಲಿಸುವ ಬಗ್ಗೆ ಗೊಂದಲ ಮೂಡಿದೆ. ಗ್ರಾಮ ಠಾಣೆಯಿಂದ ಹಸ್ತಾಂತರವಾಗಿದ್ದ ನಿವೇಶನಗಳಿಗೆ ದಾಖಲೆ ಇರಲಿಲ್ಲ. ಅದರೂ ನಗರಸಭೆಯಿಂದ ಮೂಲ ಸೌಕರ್ಯ ಕೀಡಲಾಗಿದೆ. ಅವರು ಕಂದಾಯ ಕಟ್ಟಲು ಸಿದ್ಧರಿದ್ದರೂ ಅವರಿಗೆ ಖಾತೆ ಮಾಡಿರಲಿಲ್ಲ. ಈ ಅವಕಾಶ ಅದರು ಸದುಪಯೋಗ ಪಡಿಸಿಕೊಳ್ಳಬೆಕು ಎಂದು ಮನವಿ ಮಾಡಿದರು.
ಹಸೆ ವಿಚಾರದಲ್ಲಿ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಇರಬೇಕು ಎಂಬುದು ಎಲ್ಲರ ಆಶಯವಾಗಿದೆ ನಗರ ಜನರು ಅವರ ಆಸ್ತಿಗಳಿಗೆ ಅವರನ್ನು ಮಾಲೀಕರು ಮಾಡುವುದು ಈ ಖಾತೆ ಆಂದೋಲನದ ಮುಖ್ಯಉದ್ದೇಶವಾಗಿದೆ. ರಾಜ್ಯದ 224 ಕ್ಷೇತ್ರಗಳಿಗೂ ಒಂದೇ ಸರ್ಕಾರದ ಅದೇಶ ಆಗಿದೆ, ಅದಕ್ಕೆ ಹೆಚ್ಚು ಪ್ರಚಾರದ ಅಗತ್ಯವಿಲ್ಲ ಎಂದು ಹೆಸರು ಹೇಳದೆ ಪರೋಕ್ಷವಾಗಿ ಶಾಸಕರಿಗೆ ಉಪಾಧ್ಯಕ್ಷರು ತಿರುಗೇಟು ನೀಡಿದರು. ಸದಸ್ಯರಾದ ರಫೀಕ್, ರುಕ್ಮಿಣಿ ಮುನಿರಾಜು ಸ್ವಾತಿ ಮಂಜುನಾಥ್, ಯತೀಶ್, ಸತೀಶ್ ಮಂಜುನಾಥಾಚಾರಿ, ಅಂಬರೀಶ್ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.