ಬೆಳ್ಳಿತೆರೆಯಲ್ಲಿ ಲೀನವಾದ ಸಿನಿಮಾ ದಿಗ್ಗಜ ಶ್ಯಾಮ್ ಬೆನಗಲ್

ಬೆಳ್ಳಿತೆರೆಯಲ್ಲಿ ಲೀನವಾದ ಸಿನಿಮಾ ದಿಗ್ಗಜ ಶ್ಯಾಮ್ ಬೆನಗಲ್

ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಸಿನಿಮಾ ನಿಮ್ಮಾತ,! ಮುಂಬೈನಲ್ಲಿ ಕೊನೆಯ ಉಸಿರು
ನವದೆಹಲಿ :ಭಾರತದಲ್ಲಿ ಸಾಮಾಜಿಕ ಕಳಕಳಿ ಯುಳ್ಳ ಸಿನಿಮಾಗಳ ಪ್ರವರ್ತಕ ಎಂದೇ ಖ್ಯಾತಿ ಪಡೆದುಕೊಂಡಿದ್ದ ಖ್ಯಾತ ಸಿನಿಮಾ ನಿರ್ದೇಶಕ ಶಕ ಶ್ಯಃಬೆನಗಲ್ (90 )
ಅವರು ಸೋಮವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಮೂತ್ರಪಿಂಡ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಮುಂಬೈನ ವೋಕಾಢ್ರ್ಆಸ್ಪತ್ರೆಗೆ ದಾಖಲಿಸಲಾಯಿತು ಡಿ 14ರಂದು ಅವರು ತಮ್ಮ 90ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದರು ಎಂದು ಅವರ ಪುತ್ರಿ ಪ್ರಿಯ ಬೆನೆಗಲ್ ಅವರು ಹೇಳಿದ್ದಾರೆ. 1934ರಲ್ಲಿ ಅಂದಿನ ಹೈದರಾಬಾದ್ ಪ್ರಾಂತ್ಯದ ತಿರುಮಲಗಿರಿಯಲ್ಲಿ ಅವರು ಜನಿಸಿದ್ದರು. ಕಾಪಿ ರೈಟರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು, ಗುಜರಾತಿಯಲ್ಲಿ ಮೊದಲ ಸಾಕ್ಷ್ಮ ಚಿತ್ರ ಘೇರ್ ಬೇತಾ ಗಂಗ’ವನ್ನು 1962 ರಲ್ಲಿ ನಿರ್ಮಿಸಿದರು. ಅಲ್ಲದೆ 1980 ರಿಂದ 1986 ರವರೆಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ಮಂಡಳಿ ನಿರ್ದೇಶಕರ ಕಗಿಯೂ ಸೇವೆ ಸಲ್ಲಿಸಿದ್ದಾರೆ.

ಅವರ ಮಂಡಿ ಸಿನಿಮಾ ರಾಜಕೀಯ ಮತ್ತು ವೇಶ್ಯಾವಾಟಿಕೆ ವಿಷಯಗಳಿಗೆ ಸಂಬಂಧಿಸಿದ ಕಥಾ ಹಂದರವನ್ನು ಒಳಗೊಂಡಿದೆ .18 ರಾಷ್ಟ್ರೀಯ ಪ್ರಶಸ್ತಿಗಳು :ನೈತಿಕವಾಗಿ ಕಥೆ ಹೇಳುವಿಕೆ ಮತ್ತು ಸಾಮಾಜಿಕ ಒಳನೋಟಗಳನ್ನೊಳಗೊಂಡ ಸಿನಿಮಾಗಳನ್ನುನಿರ್ಮಾಣ ಮಾಡುವ ಮೂಲಕ ಶ್ಯಾಂ ಬೆನೆಗಲ್ ಅವರು ಹೆಸರುವಾಸಿಯಾಗಿದ್ದಾರು. ಇದಕ್ಕಾಗಿ ಇವರು 18 ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ .ಅಲ್ಲದೇ 1976ರಲ್ಲಿ ಪದ್ಮಶ್ರೀ, 1991ರಲ್ಲಿ ಪದ್ಮಭೂಷಣ ,ಪ್ರಶಸ್ತಿಗಳನ್ನು ನೀಡಿ ಭಾರತ ಸರ್ಕಾರ ಅವರನ್ನು ಗೌರವಿಸಿದೆ. 2005ರಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿ: ಅಂತಿಮ ಅಧಿ ಸೂಚನೆ ಹಿಂಪಡೆಯಲು ಅಸಾಧ್ಯ

ಶ್ಯಾಂ ಬೆನೆಗಲ್ ಅವರು ಅಂಕುರ್ ,ನಿಶಾಂತ್, ಮಂಥನ್, ಭೂಮಿಕಾ ,ಮಮ್ಮೋ, ಸಾದ್ದಾರಿ ಬೇಗಂ ಮತ್ತು ಜುಬೇದಾ ಸಿನಿಮಾಗಳಿಗಾಗಿ ಅವರು ಹೆಸರುವಾಸಿಯಾಗಿದ್ದಾರೆ. ಗಣ್ಯರ ಕಂಬನಿ: ಶ್ಯಾಂ ಬೆನೆಗಲ್ ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ,ಪಕ್ಷಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನವೀನ್ ಪಟ್ನಾಯಕ್ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಪಂಡಿತ್ ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾ ಆದರಿತ ಭಾರತ್ ಏಕ್ ಕೋರ್ ಮತ್ತು ಸಂವಿಧಾನ್ ನಂತಹ ಚಿತ್ರಗಳ ಮೂಲಕ ಅವರುಅಜರಾಗಿದ್ದಾರೆ ಎಂದು ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ಅನಂತ ನಾಗ್ ರನ್ನು ಹಿಂದಿಗೆ ಹಿಂದಿಗೆ ಪರಿಚಯಿಸಿದ್ರು ಕನ್ನಡದ ಹಿರಿಯ ನಟ ಅನಂತ್ ನಾಗ್ ಅಭಿನಯದಲ್ಲಿ ಹಲವು ಚಿತ್ರಗಳ ನಿರ್ದೇಶಕ ಮಾಡುವ ಮೂಲಕ ಅನಂತ್ ನಾಗ್ ಅವರನ್ನು ಹಿಂದಿಗೆ ಪರಿಚಯಿಸಿದ ಜಾ
ಖ್ಯಾತಿ ಕೂಡಾ ಬೆನಗಲ್ ಅವರದ್ದು. ಅಂಕುರ್, ನಿಶಾಂತ್, ಮಂಥನ್, ಭೂಮಿಕಾ, ಕೊಂಡೂರಾ, ಕಲಿಯುಗ್ ಮುಂತಾದ ಶ್ಯಾಮ್ ಬೆನೆಗಲ್ ನಿರ್ದೇಶನದ ಚಿತ್ರಗಳಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ. ಅನಂತ್ ನಾಗ್ ಅವರ ಮೊದಲ ಹಿಂದಿ ಚಿತ್ರ ಅಂದಿನ ಕಾಲಕ್ಕೆ ಸಾಕಷ್ಟು ಬೋಲ್ಡ್ ದೃಶ್ಯಗಳನ್ನು ಹೊಂದಿ. ಆ ಕಾಲಕ್ಕೆ ‘ಮುಂದುವರಿದ ಚಿತ್ರ ‘ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಚಿತ್ರ ಮೂರು ರಾಷ್ಟ್ರಪ್ರಶಸ್ತಿಯನ್ನು ಪಡೆದಿದೆ ಅನಂತ್ ನಾಗ್ ಹಾಗೂ ಬೆನೆಗಲ್ ಜೋಡಿಯ ಕೊನೆಯ ಚಿತ್ರ ‘ಕಲಿಯುಗ್’ ಈ ಸಿನಿಮಾ ಮಹಾಭಾರತದ ಆಧುನಿಕ ರೂಪವಾಗಿತ್ತು .ಹಾಲಿನ ಕ್ರಾಂತಿ ಕುರಿತಾದ ಮಂಥನ ಚಿತ್ರ ಮೊದಲ ಸಾಕ್ಷ್ಯ ಚಿತ್ರವಾಗಿತ್ತು .ಗುಜರಾತ್ ಹಾಲು ಉತ್ಪಾದಕರ ಸಂಘದ 5 ಲಕ್ಷ ಮಂದಿ ಸದಸ್ಯರು ಈ ಎರಡು ರೂಪಾಯಿಯಂತೆ ಹಾಕುವ ಮೂಲಕ ನಿರ್ಮಾಣಕ್ಕೆ ಸಾಥ್ ನೀಡಿದರು.
ಶ್ಯಾಮ್ ಬೆನಗಲ್ ಅವರ ನಿಧನದಿಂದಾಗಿ ,ಒಬ್ಬ ಸೃಜನಶೀಲ ಕಲಾವಿದರ ಅಂತ್ಯವಾಗಿದೆ .ನಾನು ಅವರ ಸ್ಮೈತಿಗೆ ಗೌರವ ಸಲ್ಲಿಸುತ್ತೇನೆ ಮತ್ತು ಅವರ ಕುಟುಂಬ ಮತ್ತು ಪ್ರಿಯ ಜನರಿಗೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಆಗಲಿದ ಆತ್ಮಕ್ಕೆ ದೇವರು ಮೋಕ್ಷ ನೀಡಲಿ ಎಂದು ಪ್ರಾರ್ಥನೆ. ದತ್ತಾತ್ರೇಯ ಹೊಸಬಾಳ್ವೆ , ಆರೆಸ್ಸೆಸ್

Leave a Comment