ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ

ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ

ದೇವನಹಳ್ಳಿ: ದೇಶದ ಬೆನ್ನೆಲುಬಾದ ನಮ್ಮ ರೈತರು ಈ ಪ್ರಗತಿಯ ಮುಂಚೂಣಿಯಲ್ಲಿದಾಗ ಮಾತ್ರ ವಿಕಸಿತ ಭಾರತದ ಉದ್ದೇಶವನ್ನು ಸಾಧಿಸಬಹುದು. ಸದಾ ವಿಕಾಸನಗೊಳ್ಳಿತ್ತಿರುವ ಕೃಷಿ ಕ್ಷೇತ್ರದಲ್ಲಿ ಯಶಸ್ವಿಯಾಗಲು ರೈತರಿಗೆ ಅವಶ್ಯವಿರುವ ಸಂಪನ್ಮೂಲ, ತಂತ್ರಜ್ಞಾನ ಮತ್ತು ಬೆಂಬಲವನ್ನು ನೀಡಲು ನಾವು ಒಟ್ಟಾಗಿ ದುಡಿಯೋಣ ಎಂದು ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ರತನ್ ಕುಮಾರ್ ತಿಳಿಸಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಸ್ಟೇಟ್ ಆಫ್ ಇಂಡಿಯಾ ಪ್ರದೇಶಿಕ ವ್ಯವಹಾರಿಕ ಕಚೇರಿಯಲ್ಲಿ ಎಸ್ ಬಿ ಐ ಬ್ಯಾಂಕ್ ವತಿಯಿಂದ ನಡೆದ ರೈತರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ರೈತರಿಗೆ ಬೆಳೆ ಬೆಳೆಯಲು ಸಾಲಗಳ ಅವಶ್ಯವಿದೆ ಎಂಬುದಕ್ಕಿಂತ ಹೆಚ್ಚಿನದನ್ನು ಗುರುತಿಸಲು ಕೃಷಿ ಮತ್ತು ಆಹಾರ ಉದ್ಯಮ ಸಾಲುವನ್ನು ನೀಡುತ್ತಿದೆ. ವಿವಿಧ ಯೋಜನೆಗಳನ್ನು ಒದಗಿಸುತ್ತಿದೆ. ಈ ಮೂಲಕ ರೈತರು ಅತ್ಯಂತ ಕಡಿಮೆ ಬಡ್ಡಿಯಲ್ಲಿ ಬ್ಯಾಂಕ್ ಸಾಲವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.

ಉದ್ಯಮ ಸ್ಥಾಪನೆಗೆ ಸಾಲ: ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಒಂದು ಪ್ರಮುಖ ಸಾಧನವಾಗಿದೆ. ಅವರಿಗೆ ಸಾಲಗಳಿಗೆ ಹಾಗೂ ಭಾರತ ಸರ್ಕಾರದಿಂದ ಬಡ್ಡಿ ಸಹಾಯಧನಕ್ಕಾಗಿ ಸುಲಭವಾಗಿ ಪ್ರವೇಶವನ್ನು ಒದಗಿಸಿಕೊಡುತ್ತದೆ. ಎಸ್ ಬಿ ಐ ಕಿಸಾನ್ ಸಮೃದ್ಧಿ ರಿನ್ ಅನ್ನು ಕೂಡ ಪರಿಚಯಿಸಿದೆ. ರೈತರು ಬ್ಯಾಂಕಿನ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕ ರೈತರಿಗಿ ಕುರಿ, ಹಂದಿ ಸಾಕಾಣಿಕೆ, ಕೃಷಿ ಚಟುವಟಿಕೆ, ಕೃಷಿ ಉದ್ಯಮಗಳ ಸ್ಥಾಪನೆಗೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:- ಎಲ್ಲಾ ಕ್ಷೇತ್ರದಲ್ಲೂ ಕನ್ನಡಕ್ಕೆ ಆದ್ಯತೆ ನೀಡಿ

ಶೇ.50 ರಷ್ಟು ಸಹಾಯಧನ: ಚಿಕ್ಕಬಳ್ಳಾಪುರ ಪಶು ಪಾಲನೆ ಇಲಾಖೆಯ ತಾಂತ್ರಿಕ ಸಹಾಯಕ ನಿರ್ದೇಶಕಿ ಬಾ. ಶಿಲಾ ಮಾತನಾಡಿ, ಎನ್ಎಲ್ ಎಂ ಯೋಜನೆ ಮಾಧ್ಯಮ ವರ್ಗದ ಜನರನ್ನು ಉದ್ಯಮದಾರರನ್ನಾಗಿ ಬದಲಿಸಲು ಕೇಂದ್ರ ಸರ್ಕಾರ ಶೇ. 50ರಷ್ಟು ಸಹಾಯಧನ ನೀಡುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಒಬ್ಬ ಮಹಿಳೆ ಹಂದಿ ಸಾಕಾಣಿಕೆ ಮಾಡಿ ಪ್ರಶಸ್ತಿಗಳಿಸಿದ್ದಾರೆ. ಹೊಸ ತಂತ್ರಜ್ಞಾನ ನ ಬಳಸಿಕೊಂಡು ಶೆಡ್ ನಿರ್ವಸಿ ಉತ್ತಮ ಲಾಭಗಳಿಸಿದ್ದಾರೆ. ರೈತರು ಸಣ್ಣ ಸಣ್ಣ ಉದ್ಯಮೆಗಳನ್ನು ಪ್ರಾರಂಭಿಸಬೇಕು. ಸಾಲ ಸೌಲಭ್ಯಗಳನ್ನು ಬ್ಯಾಂಕ್ ನೀಡುತ್ತದೆ ಎಂದು ಹೇಳಿದರು.

ಉದ್ದಿಮೆ ಆರಂಭ ಮಾಡಿ: ರೈತ ಗೋವಿಂದರಾಜು ಮಾತನಾಡಿ, ರೈತರು ಮತ್ತು ಕೃಷಿ ಉದ್ದಿಮೆದಾರರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದ್ದಾರೆ, ಎಲ್ಲಾ ರೈತರಿಗೆ ಮತ್ತೆ ಸಾಲ ಕೊಡಲು ಸಾಧ್ಯವಾಗುತ್ತದೆ. ರೈತರು ವ್ಯವಸಾಯದ ಜೊತೆಗೆ ಸಣ್ಣ ಕೃಷಿ ಉದ್ದಿಮೆಗಳನ್ನು ಆರಂಭ ಮಾಡಿದರೆ, ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಹೇಳಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಧುಕರ್, ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಯೋಗಾನಂದ, ಬ್ಯಾಂಕಿನ ನರೇಶ್, ವಿನಯ್, ಹರಿಪ್ರಸಾದ್ ರೆಡ್ಡಿ, ಬಿ ಎಂ ,ವಿ ಪ್ರಸಾದ್ ಹಾಜರಿದ್ದರು.

Leave a Comment