ಬ್ಯಾಟಿಂಗ್ ವೈಫಲ್ಯಕ್ಕೆ ದಂಡ ತೆತ್ತ ರೋಹಿತ್ ಪಡೆ
ಮೆಲ್ಬರ್ನ್: ಪಂದ್ಯದ ನಿರ್ಣಾಯಕ ಘಟ್ಟದಲ್ಲಿ ಹೊರಹೊಮ್ಮಿದ ವಿವಾದಾತ್ಮಕ ತೀರ್ಪು ‘ಶವಪೆಟ್ಟಿಗೆ’ಗೆ ಕೊನೆಯ ಮೊಳೆಯನ್ನು ಹೊಡೆದಂತಾಗಿರಬಹುದು. ಆದರೆ ಸ್ಪಷ್ಟ ಸಾಕ್ಷ್ಯವನ್ನು ದುರ್ಬಲಗೊಳಿಸುವ ಮತ್ತು ಅನ್ಫೀಲ್ಡ್ ಅಂಪೈರ್ಗಳು ನೀಡಿದ್ದ ನಾಟ್ಔಟ್ ತೀರ್ಪನ್ನು ಮೂರನೇ ಅಂಪೈರ್ ರದ್ದುಗೊಳಿಸಿದ್ದು ಕೂಡ ಭಾರತದ ಬ್ಯಾಟಿಂಗ್ ಪಡೆಯ ಸಾಮೂಹಿಕ ವೈಫಲ್ಯವನ್ನು ಮರೆಮಾಚಲು ಸಾಧ್ಯವಾಗಲಿಲ್ಲ.
ಮೆಲ್ಬರ್ನ್ ಕ್ರೀಡಾಂಗಣದ ಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ಅನುಭವಿಸಿದ ಬೃಹತ್ ಸೋಲಿನಲ್ಲಿ ಇಬ್ಬರು ಅನುಭವಿ ಬ್ಯಾಟರ್ಗಳು ತಮಗೆ ಮರಳಿ ಅರಳಲು ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ. ತಮ್ಮ ಹಿಂದಿನ ತಪ್ಪುಗಳಿಂದ ಕಲಿಯಲಿಲ್ಲ.
ಇನಿಂಗ್ಸ್ ಆರಂಭಿಸುವ ‘ಅಪ್ರಿಯ ಆಯ್ಕೆ’ ಮಾಡಿಕೊಂಡು ಕೆ.ಎಲ್. ರಾಹುಲ್ ಅವರನ್ನು 3ನೇ ಕ್ರಮಾಂಕಕ್ಕೆ ತಳ್ಳಿದ್ದು ಮತ್ತು ಪರಿಣತ ಬ್ಯಾಟರ್ ಶುಭಮನ್ ಗಿಲ್ ಅವರನ್ನು 11ರ ಬಳಗದಿಂದ ಹೊರಗಿರಿಸಲಾಯಿತು. ರೋಹಿತ್ ಶರ್ಮಾ ಪಂದ್ಯದಲ್ಲಿ ಎರಡನೇ ಬಾರಿಯೂ ವಿಫಲರಾದರು. ಇದರಿಂದಾಗಿ ಗುರಿ ಬೆನ್ನಟ್ಟಿದ್ದ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ವಿರಾಟ್ ಕೊಹ್ಲಿ ಮತ್ತೊಮ್ಮೆ ಅಫ್ಸ್ಪಂಪ್ ಹೊರಗಿದ್ದ ಎಸೆತವನ್ನು ಕೆಣಕಿ ದಂಡ ತೆತ್ತರು. ಊಟಕ್ಕೂ ಮುಂಚಿನ ಓವರ್ನಲ್ಲಿ ಪೆವಿಲಿಯನ್ ಸೇರಿಕೊಂಡರು. ತಂಡದ ಮೊತ್ತ 3 ವಿಕೆಟ್ಗಳಿಗೆ 33 ಆಗಿತ್ತು. ಆಸ್ಟ್ರೇಲಿಯಾ ಗೆಲುವಿನ ಹಾದಿ ಸುಲಭವೆಂದೂ ಅನಿಸಿತ್ತು.
ಇದನ್ನೂ ಓದಿ: ಪೊಲೀಸರ ಕೈಕಟ್ಟಿ ಕೆಲಸ ಮಾಡಿ ಎಂದರೆ ಹೇಗೆ?
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (84: 2082, 4X8) ಮತ್ತು ರಿಷಭ್ ಪಂತ್ (30; 104ಎ, 4X3) ಆಸ್ಟ್ರೇಲಿಯಾ ದಾಳಿಯನ್ನು ಮೆಟ್ಟಿ ನಿಂತರು. ರಕ್ಷಣಾತ್ಮಕವಾಗಿ ಆಡಿದರು. ಸ್ಪಂಪ್ಲೈನ್ ಹೊರಗಿದ್ದ ಎಸೆತಗಳನ್ನು ತಡವದೇ ಬಿಟ್ಟರು ಮತ್ತು ಒಂಟಿ, ಎರಡು ರನ್ ಪಡೆಯುತ್ತ ಸೈಕ್ ರೊಟೇಟ್ ಮಾಡಿದರು. ಚಂದದ ಹೊಂದಾಣಿಕೆಯ ಆಟದಿಂದ ಆಸ್ಟ್ರೇಲಿಯಾ ತಂಡದಿಂದ ಗೆಲುವನ್ನು ದೂರ ಒಯ್ಯುವ ಪ್ರಯತ್ನ ಮಾಡಿದರು. ಇದೇ ಹಗ್ಗಜಗ್ಗಾಟದಲ್ಲಿ ಎರಡನೇ ಅವಧಿ ಮುಗಿದು ಚಹಾ ವಿರಾಮವೂ ಆಯಿತು.
ತಮ್ಮ ఆಟ ಮುಂದುವರಿಸಿ ಎಡಗೈ ಬ್ಯಾಟಿಂಗ್ ಜೋಡಿಯು ಕಡೆ ಪಕ್ಷ ಡ್ರಾದತ್ತ ತಂಡವನ್ನು ಕೊನೆಯ ಅವಧಿಯಲ್ಲಿಯೂ ಮುನ್ನಡೆಸಿ, ಸೋಲು ತಪ್ಪಿಸುತ್ತಾರೆಂಬ ಭರವಸೆ ಮೂಡಿತ್ತು. ಈ ಹೊತ್ತಿನಲ್ಲಿ ಅತಿಥೇಯ ತಂಡದ ನಾಯಕ ಅವರು ಟ್ರಾವಿಸ್ ಪ್ಯಾಟ್ ಪಾರ್ಟ್ ಟೈಂ ಹೆಡ್ ಕೈಗೆ ಕಮಿನ್ಸ್ ಸ್ಪಿನ್ನರ್ ಚೆಂಡು ಕೊಟ್ಟರು. ಈ ತಂತ್ರಕ್ಕೆ ಪಂತ್ ಬಲಿ ಯಾದರು. ಆಫ್ಸ್ಟಂಪ್ ಹೊರಗಿದ್ದ ಎಸೆತವನ್ನು ಎಡಗೈ ಬ್ಯಾಟರ್ ಪುಲ್ ಮಾಡಿದರು. ಲಾಂಗ್ ಲೆಗ್ ಬಳಿ ಫೀಲ್ಡರ್ ಮಿಚೆಲ್ ಮಾರ್ಷ್ ಓಡಿ ಹೋಗಿ ಕ್ಯಾಚ್ ಪಡೆದರು. ಇದರೊಂದಿಗೆ ಕೇವಲ 34 ರನ್ಗಳ ಅಂತರದಲ್ಲಿ 7 ವಿಕೆಟ್ಗಳನ್ನು ಉರು ಳಿಸಿದ ಬೌಲರ್ಗಳು ಕೇಕೆ ಹಾಕಿದರು. ಎಂಸಿಜಿಯಲ್ಲಿ ಕಳೆದ 10 ವರ್ಷಗಳಲ್ಲಿ ಭಾರತ ಮೊದಲ ಬಾರಿ ಸೋಲಿನ ಕಹಿಯುಂಡಿತು.
340 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಭಾರತ ತಂಡದ ಇನಿಂಗ್ಸ್ 155 (79.1 ಓವರ್ಗಳಲ್ಲಿ) ರನ್ಗಳ ಮೊತ್ತಕ್ಕೆ ಅಂತ್ಯವಾಯಿತು. ಕೊನೆಯ 13 ಓವರ್ಗಳು ಬಾಕಿ ಇದ್ದವು. ಬ್ಯಾಟರ್ಗಳು ಇನ್ನಷ್ಟು ಜಿಗುಟುತನದ ಆಟವಾಡಿದ್ದರೆ ಈ ಓವರ್ಗಳನ್ನು ದಾಟುವುದು ಸಾಧ್ಯವಿತ್ತು. ಆದರೆ ಆಸ್ಟ್ರೇಲಿಯಾ 184 ರನ್ಗಳ ಜಯ ಸಾಧಿಸಿತು. ಸರಣಿಯಲ್ಲಿ 2-18 ಮುನ್ನಡೆ ಗಳಿಸಿತು. ಮುಂದಿನ ತಿಂಗಳುಸಿಡ್ನಿಯಲ್ಲಿ ಸರಣಿಯ ಪಂದ್ಯ ನಡೆಯಲಿದೆ. ಕೊನೆಯ
ಇನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ಜೈಸ್ವಾಲ್ ಎಚ್ಚರಿಕೆ ಮತ್ತು ಏಕಾಗ್ರತೆಯಿಂದ ಬ್ಯಾಟಿಂಗ್ ಮಾಡಿ ದರು. ಮೊದಲ ಅವಧಿಯಲ್ಲಿ ಕಮಿನ್ಸ್ (283) ಮತ್ತು ಮಿಚೆಲ್ ಸ್ಟಾರ್ಕ್ ದಾಳಿ ತೀಕ್ಷ್ಮವಾಗಿ- ತ್ತು. 40 ಎಸೆತಗಳಲ್ಲಿ 9 ರನ್ ಗಳಿಸಿದ್ದ ರೋಹಿತ್ ವಿಕೆಟ್ ಉರುಳಿಸಿದ ಕಮಿನ್ಸ್ ಅವರು ಕೆ.ಎಲ್. ರಾಹುಲ್ ಅವರಿಗೆ ಖಾತೆ ತೆರೆಯಲೂ ಬಿಡಲಿಲ್ಲ.
ಗಾವಸ್ಕರ್ ಶೈಲಿ ಮತ್ತು ದ್ರಾವಿಡ್ ಶೈಲಿಯ ಬ್ಯಾಟಿಂಗ್ ಅಗತ್ಯವಿದ್ದಸಂದರ್ಭ ಇದಾಗಿತ್ತು. ಆದರೆ ಸದ್ಯ ಶ್ವೇತವರ್ಣದ ಚೆಂಡಿನ ಕ್ರಿಕೆಟ್ ಮೇಲೆ ಹೆಚ್ಚು ಒಲವು ಇರುವವರಿದ್ದಾರೆ. ಟೆಸ್ಟ್ ಶೈಲಿಯ ಆಟಗಾರರ ಕೊರತೆ ಇರುವುದು ಇಲ್ಲಿ ಬಹಿರಂಗವಾಗಿದೆ.
ಆತಿಥೇಯ ತಂಡದ ನಾಯಕ ಕಮಿನ್ಸ್ ಬೌಲಿಂಗ್ನಲ್ಲಿ ಜೊತೆ ಯಾಟಗಳಿಗೆ ತಡೆಯೊಡ್ಡಿದರು. ಬ್ಯಾಟಿಂಗ್ನಲ್ಲಿಯೂ (49 ಮತ್ತು 41 ರನ್) ಕಾಣಿಕೆ ನೀಡಿದರು. ಆಕ್ರಮಣಕಾರಿ ಫೀಲ್ಡಿಂಗ್ ನಿಯೋಜನೆ ಮತ್ತು ಸರಿಯಾದ ಸಂದರ್ಭದಲ್ಲಿ ಬೌಲರ್ ಬದಲಾವಣೆಗಳನ್ನು ನಿರ್ವಹಿಸಿದರು. ಪಂದ್ಯಶ್ರೇಷ್ಠರೂ ಆದರು.