ಭಾರತೀಯರು ಎಂದೂ ಮರೆಯದ ಆ ಕರಾಳ ನಸುಕು
14 ಫೆಬ್ರವರಿ 2019. ಬೆಳಗಿನ ಜಾವ 3.30 ಜಮ್ಮು ಸೈನಿಕ ಶಿಬಿರದಲ್ಲಿ ಇನ್ನೂ ಕತ್ತಲು ಕವಿದವಾ ವಾತಾವರಣದಲ್ಲಿಯೇ ಯೋಧರು ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದವು. ಚಳಿಯಲ್ಲಿ ನಡುಗುತ್ತಲೇ ತಮ್ಮತಮ್ಮ “ಸಾಮಾನುಗಳೊಂದಿಗೆ ಸಾಲಾಗಿ ನಿಂತಿದ್ದ ವಾಹನಗಳನ್ನು ಏರಿದರು. 2547 ಸಿಆರ್.ಪಿ.ಎಫ್ ಯೋರಿಗೆ 78ವಾಹನಗಳ ಬೃಹತ್ convoy ಜಮ್ಮುವಿನ ಕ್ಯಾಂಪಿನಿಂದ ಶ್ರೀನಗರದತ್ತ ಹೊರಟಿತು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದ ಎಚ್. ಗುರು ಎನ್ನುವ ಸಿಆರ್ಪಿಎಫ್ ಯೋಧ ತನ್ನ ವರ್ಷಕ ರಜೆ ಮುಗಿಸಿಕೊಂಡು ಕಾಶ್ಮೀರದ ತಮ್ಮ ಘಟಕಕ್ಕೆ ತೆರಳಲು’ ಇದೇ ವಾಹನದಲ್ಲೇ ಕುಳಿತಿದ್ದರು. ಕೇವಲ 6 ತಿಂಗಳ ಹಿಂದೆಯೇ ಕಲಾವತಿಯವರೊಂದಿಗೆ ಇವರ ವಿವಾಹವಾಗಿತ್ತು.
ಮಾರ್ಗಮಧ್ಯದಲ್ಲಿ ರಾಮಬಾಗ್ ಎನ್ನುವಲ್ಲಿ ಮಧ್ಯಾಹ್ನದ ಊಟಕ್ಕೆ ನಿಲ್ಲಿಸಿ, ಪುನಃ ಈ ವಾಹನಗಳು ಶ್ರೀನಗರದತ್ತ ತಮ್ಮ ಪ್ರಯಾಣವನ್ನು ಮುಂದುವರಿಸಿದವು. ಭಯೋತ್ಪಾದಕರ ದಾಳಿಯ ಸಂದೇಹವಿದ್ದುದರಿಂದ ಕತ್ತಲಾಗುವುದರೊಳಗೆ ಶ್ರೀನಗರ ತಲುಪಬೇಕೆಂಬ ಸೂಚನೆಯೂ ಇತ್ತು.
ಇತ್ತ ಜಮ್ಮು ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುಲ್ವಾಮ ಜಿಲ್ಲೆಯ ಲೇತ್ಪುರ ಎನ್ನುವ ಗ್ರಾಮದ ಬಳಿ ಭಯೋತ್ಪಾದಕರ ತಂಡಕ್ಕೆ ಜಮ್ಮುವಿನಿಂದ ಹೊರಟ ಸೈನ್ಯದ 78 ವಾಹನಗಳ ಬಗ್ಗೆ ಮಾಹಿತಿ ಸಿಕ್ಕಿತು. ಮಧ್ಯಾಹ್ನದ 3 ಗಂಟೆಹೊತ್ತಿಗೆ ಆ ವಾಹನಗಳು ಪುಲ್ವಾಮವನ್ನು ಹಾದುಹೋಗುವ ಅಂದಾಜು ಇರುತ್ತದೆ. ತಾವು ತಯಾರಿಸಿದ ಸುಮಾರು 200 ಕೆಜಿಯಷ್ಟು ಸ್ಫೋಟಕಗಳನ್ನು ಒಂದು ವಾಹನಕ್ಕೆ ತುಂಬಿ, ವಾಹನದ ಕೀಲಿಯನ್ನು ಅದಿಲ್ ಅಹ್ಮದ್ ದರ್ ಎನ್ನುವ ಭಯೋತ್ಪಾದಕನಿಗೆ ಕೊಟ್ಟು ಉಳಿದವರು ಕಣ್ಮರೆಯಾದರು. ಈ ಹಂತಕ ಲಡೂರ್ ಕ್ರಾಸಿನ ಒಂದು ಹಳ್ಳಿಯ ಬಳಿ ಸೈನ್ಯದ ವಾಹನಗಳು ಬರುವುದನ್ನೇ ಕಾಯುತ್ತಿದ್ದ. ಮಧ್ಯಾಹ್ನ ಸೈನ್ಯದ ವಾಹನಗಳು ದೂರದಿಂದಕಾಣಿಸಿಕೊಳ್ಳುತ್ತಲೇ ನಿಧಾನವಾಗಿ ಹೆದ್ದಾರಿಯ ಕಡೆಗೆ ವಾಹನ ಚಲಾಯಿಸಲು ಪ್ರಾರಂಭಿಸಿದ. ಸುಮಾರು 25- 30 ವಾಹನಗಳು ಹಾದು ಹೋದ ನಂತರ ತನ್ನ ವಾಹನವನ್ನು ಜೋರಾಗಿ ಚಲಾಯಿಸಿ ಒಂದು ಬಸ್ಸಿಗೆ ಡಿಕ್ಕಿ ಹೊಡೆದ. ಕ್ಷಣಾರ್ಧದಲ್ಲಿಭೀಕರ ಸ್ಪೋಟ ಸಂಭವಿಸಿ ಸೇನಾ ವಾಹನ ಮತ್ತು ಭಯೋತ್ಪಾದಕನ ವಾಹನ ಛಿರಂದ್ರವಾಯಿತು.
ಬಸ್ಸಿನಿಂದ ಹೊರಚಿಮ್ಮಿದ ದೇಹಗಳು ಹೆದ್ದಾರಿಯ ಸುತ್ತಲೂ ಚೆಲ್ಲಾಪಿಲ್ಲಿಯಾದವು. ಘಟನೆಯಲ್ಲಿ ಕನ್ನಡಿಗ ಯೋಧ ಗುರು ಅವರೂ ಸೇರಿದಂತೆ 40 ವೀರ ಬೋಧರು ಹುತಾತ್ಮರಾದರು. ಇಡೀ ದೇಶಕ್ಕೆ ದೇಶವೇ ಈ ಭಯೋತ್ಪಾದಕನ ಆತ್ಮಾಹುತಿಯ ದಾಳಿಗೆ ಬೆಚ್ಚಿ ಬಿತ್ತು. ಕಣ್ಣೀರಾಯಿತು. ಹುತಾತ್ಮರಾದ ಸೈನಿಕರಿಗೆ ಅಶ್ರುತರ್ಪಣೆ ಕಾಶ್ಮೀರದಿಂದ ಕನ್ಯಾಮಾರಿ ತನಕವೂ ನಡೆಯಿತು. ಈ ದಾಳಿಯಲ್ಲಿ ತ್ಮಾಹುತಿ ಆಕ್ರಮಣಕಾರ ಅದಿಲ್ ದಾರ್ಕೋಡ ಹತನಾದ ಪಾಕಿಸ್ತನದಲ್ಲಿ ನೆಲಸಿರುವ ಜೈಷೆ ಮೊಹಮ್ಮದ್ ಎನ್ನುವ ಉಗ್ರ ಸಂಘಟನೆ ಈ ದಾಳಿಯನ್ನು ನಾವೇ ಮಾಡಿಸಿದ್ದು ಎನ್ನುವ ವಿಡಿಯೊವನ್ನು ದಾಳಿಯಾದ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಿತ್ತು. ಪಾಕಿಸ್ತಾನವೂ ಕೂಡಲೇ ಪ್ರತಿಕ್ರಿಯಿಸಿ, ‘ನಮ್ಮ ದೇಶಕ್ಕೂ ಈ ದಾಳಿಗೂ ಸಂಬಂಧವಿಲ್ಲ, ನಾವು ಈ ದಾಳಿಯನ್ನು ಖಂಡಿಸುತ್ತೇವೆ,” ಎನ್ನುವ ಸೋಗಲಾಡಿತನದ ಹೇಳಿಕೆ ನೀಡಿತು. ಪಾಕಿಸ್ತಾನದ ಹೇಳಿಕೆಯಲ್ಲಿ ಎಷ್ಟು ಸುಳ್ಳಿದೆ ಎಂದು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಅರಿವಿತ್ತು. ಏಕೆಂದರೆ, ಈ ಆತ್ಮಾಹುತಿಯದಾಳಿ ಮಾಡು ಮನಸ್ಥಿತಿಯ ಆತಂಕವಾದಿಗಳನ್ನು ಸೃಷ್ಟಿಸಿ, ಭಾರತವೂ ಸೇರಿದಂತೆ ಇತರೆ ದೇಶಗಳಿಗೆ ರಫ್ತು ಮಾಡುವ ಭಯೋತ್ಪಾದನೆಯ ಕಾರ್ಖಾನೆಗಳು ಪಾಕಿಸ್ತಾನದಲ್ಲಿ ನೆಲೆಸಿವೆ ಎನ್ನುವ ಸತ್ಯ ಎಲ್ಲರಿಗೂ ಗೊತ್ತಿದೆ.
ಇದನ್ನೂ ಓದಿ:ಜಗತ್ತು ಮೀನಿನ ಬಲೆಯಂತಾದರೆ ಜೀವ ಮೀನಿನಂತೆ!
ದಾಳಿಯ ಹಿನ್ನಲೆ ಏನು?: 1999ರ ಡಿಸೆಂಬರ್ 24. ನೇಪಾಳದ ಕಠ್ಮಂಡು ಏರ್ಪೋರ್ಟಿನದ ಹೊಸದಿಲ್ಲಿಗೆ ಹೊರಟ ಏರ್ ಇಂಡಿಯಾ ವಿಮಾ ಎಂಎ 814, ಪಾಕಿಸ್ತಾನದ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟು ಹಲವಾರು ಗಂಟೆಗಳ ಆತಂಕಭರಿತ ಹಾರಾಟದ ನಂತರ ಅಫಘಾನಿಸ್ತಾನದ ಕಂದಾಹಾರ್ ನಲ್ಲಿ ಬಂದಿಳಿಯಿತು. ಈ ಉಗ್ರಗಾಮಿಗಳ ಷರತ್ತು ಭಾರತದ ಸೆರೆಮನೆಗಳಲ್ಲಿರುವ ಕೆಲವು ಉಗ್ರರ ಬಿಡುಗಡೆಯಾಗಬೇಕು. ಈ ಷರತ್ತಿಗೆ ಒಪ್ಪದಿದ್ದಾಗ ಕಟಿಯಾಲ್ ಎನ್ನುವ ಪ್ರಯಾಣಿಕನ ಕತ್ತು ನಡೆದ ಸೀಳಿ ಅವನ ದೇಹವನ್ನು ಹೊರಗೆಸೆದರು. ಭಾರತದ ಮಾಧ್ಯಮಗಳಲ್ಲಿ ಈ ವಿಷಯ ಹೊರಬಂದು ಸರಕಾರದ ವಿಳಂಬ ನೀತಿಯನ್ನು ವಿರೋಧಿಸಿ ಹಲವೆಡೆ ಪ್ರತಿಭಟನೆಗಳು ನಡೆದವು. ಒತ್ತಡಕ್ಕೆ ಒಳಗಾದ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರಕಾರೆ, 3 ಉಗ್ರಗಾಮಿಗಳನ್ನು ಬಿಡುಗಡೆ ಮಾಡಿ, ಬದಲಿಗೆ ವಿಮಾನದಲ್ಲಿದ್ದ 155 ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿ ಕರೆತಂದಿತು. ಹಾಗೆ ಬಿಡುಗಡೆಯಾದ ಉಗ್ರಗಾಮಿಗಳು ಕೂಡಲೇ ಪಾಕಿಸ್ತಾನದ ನೆರವು ಪಡೆದು ಭಾರತದ ವಿರುದ್ಧ ತಮ್ಮ ಭಯೋತ್ಪಾದಕ ಚಟುವಟಿಕೆಗಳನ್ನು ತೀವ್ರಗೊಳಿಸಿದರು. ಅದರಲ್ಲಿ ಪ್ರಮುಖ ಉಗ್ರ ಮಸೂದ್ ಅಜರ್.
ಭಾರತದ ಜೈಲಿನಿಂದ ಬಿಡುಗಡೆ ಹೊಂದಿ ಪಾಕಿಸ್ತಾನಕ್ಕೆ ಮರಳಿದ ಇವನಿಗೆ ಬಹಾವಲ್ಲುರದಲ್ಲಿಪಾಕಿಸ್ತಾನ ಕೊಟ್ಟ 7 ಎಕರೆ ಜಮೀನಿನಲ್ಲಿ ಒಂದು ಮದರಸಾದ ಹೆಸರಿನಲ್ಲಿ ಭಯೋತ್ಪಾದನೆಯ ಕಾರ್ಖಾನೆಯನ್ನೇ ನಿರ್ಮಿಸಿದ. ಬಹವಾಲ್ಪುರ ಮತ್ತು ಬಾಲಾಕೋಟ್ ಭಯೋತ್ಪಾದನೆಯ ಪ್ರಮುಖ ತರಬೇತಿ ಕೇಂದ್ರಗಳಾಗಿ ಬೆಳೆದಿವೆ. ಜೈಷೆ ಮಹಮ್ಮದ್ ಅಂದರೆ ಮಹಮ್ಮದನ ಸೇನೆ, ಪ್ರವಾದಿಯ ಸೇನೆ ಎನ್ನುವ ಜಿಹಾದಿ ಸಂಘಟನೆಯನ್ನು ಕಟ್ಟುತ್ತಾನೆ. ಈ ತಂಡದ ಸಹಾಯದಿಂದ ಭಾರತದ ಹಲವಾರು ಕಡೆ ಉಗ್ರರ ಹಲ್ಲೆ ನಡೆಸಲಾಗುತ್ತದೆ, ಅದರಲ್ಲಿ ಮುಖ್ಯವಾದವು ಎಂದರೆ; 2001ರಲ್ಲಿ ಪಾರ್ಲಿಮೆಂಟ್ ಮೇಲೆ ನಡೆದ ಆಕ್ರಮಣ, 2008ರಲ್ಲಿ ಮುಂಬಯಿ ದಾಳಿ,2016ರಲ್ಲಿ ಪಂಜಾಬಿನ ಪಠಾಣಕೋಟ್ ವಾಯುನೆಲೆಯ ಮೇಲೆ ಆಕ್ರಮಣ.
ಕೃತ್ಯಗಳಲ್ಲಿ ಕೆಲವು.2019ರಲ್ಲಿ ಪುಲ್ವಾಮಾದ ಆತ್ಮಾಹುತಿಯ ದಾಳಿ ಇವರ ಕರಾಳ ಕೃತ್ಯಗಳಲ್ಲಿ ಕೆಲವು.
ಯಾರು ಆದಿಲ್ ದರ್?: ಅಸಲಿಗೆ ಪುಲ್ವಾಮ ದಾಳಿಯ ಸಿದ್ಧತೆ ಏಪ್ರಿಲ್ 2018ನಿಂದಲೇ ಪ್ರಾರಂಭವಾಗಿ ಬಿಟ್ಟಿರುತ್ತದೆ. ಮೊದಲ ಹಂತದಲ್ಲಿ ಉಮರ್ ಫರೂಖ್ ಮತ್ತು ಇಸ್ಮಾಯಿಲ್ ಸೈಫುಲ್ಲಾ ಎಂಬ ಉಗ್ರರನ್ನು 35 ಕೆ.ಜಿ. ಆರ್.ಡಿಎಕ್ಸ್ ಸ್ಫೋಟಕದೊಂದಿಗೆ ಭಾರತದ ಗಡಿಯೊಳಗೆ ನುಸುಳಿಸಲಾಗುತ್ತದೆ. ಅದೇ ಸಮಯದಲ್ಲಿ ಬಹವಾಲ್ಟುರದಲ್ಲಿ ಅದಿಲ್ ಅಹ್ಮದ್ ದರ್ ಎನ್ನುವ 22 ವರ್ಷದ ಯುವಕನನ್ನು ಆತ್ಮಾಹುತಿ ದಾಳಿಗೆ ಅಣಿಗೊಳಿಸಲಾಯಿತು. ಇವರೆಲ್ಲಾಪುಲ್ವಾಮಾದ ಶಕಿಲ್ ಬಷೀರ್ ಎನ್ನುವವನ ಮನೆಯಲ್ಲಿ ಆಶ್ರಯ ಪಡೆದಿದ್ದರು. ಬಾಂಬುಗಳ ತಯಾರಿಕೆಗೆ ಬೇಕಾದ ಜಿಲೇಟಿನ್ ಕಡ್ಡಿಗಳು ಮತ್ತು ಅಮೋನಿಯಂ ನೈಟ್ರೇಟನ್ನು ಕಣಿವೆಯಲ್ಲಿ ಬಂಡೆಗಳನ್ನು ಸಿಡಿಸಿ ಜಲ್ಲಿಕಲ್ಲುಗಳನ್ನು ಮಾರುವವರಿಂದ ಖರೀದಿಸಲಾಗಿತ್ತು. ಶಕೀಲನ ಮನೆ ಬಾಂಬ್ ತಯಾರಿಸುವ ಕಾರ್ಖಾನೆಯಾಗಿಬಿಟ್ಟಿತ್ತು. ಒಂದು ವಾಹನದಲ್ಲಿ ಈ ಬಾಂಬುಗಳನ್ನು ತುಂಬಿ ಶ್ರೀನಗರದಿಂದ ಸುಮಾರು 35 ಕಿ.ಮೀ. ದೂರದ ಲಡೂರ ಅಡ್ಡರಸ್ತೆಯಿಂದ ಜಮ್ಮು-ಶ್ರೀನಗರದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೈನಿಕರನ್ನು ತುಂಬಿಸಿಕೊಂಡು ಸಾಲುಸಾಲಾಗಿ ಸಾಗುತ್ತಿರುವ ಸೈನ್ಯದ ಬಸ್ಸುಗಳಿಗೆ ಡಿಕ್ಕಿ ಹೊಡೆದು ಭೀಕರ ಸ್ಫೋಟವನ್ನುಂಟು ಮಾಡುವ ಕುಕೃತ್ಯದ ತಯಾರಿ ನಡೆದಿತ್ತು.
ಇದೆಲ್ಲಾ ನಡೆದು ಬರೋಬ್ಬರಿ 6 ವರ್ಷಗಳೇ ಸಂದಿವೆ. ದಾಳಿಯಲ್ಲಿ ಮಡಿದ ಹುತಾತ್ಮರಿಗೆ ಅಂತಿಮ ನಮನ ಸಲ್ಲಿಸಿದ ಭಾರತ, ತ್ವರಿತಗತಿಯಲ್ಲಿ ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುವ ವ್ಯೂಹವೊಂದನ್ನು ರಚಿಸಿತು. ಈ ಸಲದ ಕಾರ್ಯಾಚರಣೆ ಭಾರತೀಯ ವಾಯುಸೇನೆಯದ್ದು, 26 ಫೆಬ್ರವರಿ 2019 ಬೆಳಗಿನ ಜಾವ 3.30ರ ಸಮಯ. ಬಾಲಾಕೋಟ್ ಭಯೋತ್ಪಾದಕರ ತರಬೇತಿ ಕೇಂದ್ರವನ್ನು ನುಚ್ಚು ನೂರುಗೊಳಿಸಿದ ರೋಚಕ ಪ್ರಸಂಗವೊಂದು ಮುಂದೆ ನಡೆಯಿತು. ಇಷ್ಟೇ… ನಾವ್ಯಾರ ತಂಟೆಗೂ ಹೋಗುವುದಿಲ್ಲ, ತಂಟೆಗೆ ಬಂದವರನ್ನು ಸುಮ್ಮನೆ ಬಿಡುವುದಿಲ್ಲ!