ಮರಳುನಾಡಿನಲ್ಲಿ ರೋಹಿತ್ ಬಳಗಕ್ಕೆ ಕಿರೀಟ
ದುಬೈ(ಪಿಟಿಐ): ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಸ್ಪಿನ್ನರ್ಗಳ ಮೋಡಿ, ರೋಹಿತ್ಶರ್ಮಾ-ಶುಭಮನ್ ಗಿಲ್ ಜೋಡಿಯ ಅಂದದ ಬ್ಯಾಟಿಂಗ್, ಶ್ರೇಯಸ್ ಅಯ್ಯರ್-ಅಕ್ಷರ್ ಪಟೇಲ್ ಜವಾಬ್ದಾರಿಯುತ ಜೊತೆಯಾಟಗಳನ್ನು ವ್ಯರ್ಥವಾಗಲು ಬಿಡಲಿಲ್ಲ ಕನ್ನಡಿಗ. ಕೆ.ಎಲ್. ರಾಹುಲ್.
12 ವರ್ಷಗಳ ನಂತರ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ಒಲಿಯಲು ಭಾರತದ ಆಟಗಾರರ ಸಂಘಟಿತ ಆಟವೇ ಕಾರಣವಾಯಿತು. ಮರಳುನಾಡಿನ ಅಂಗಳದಲ್ಲಿ ಕಠಿಣ ಪೈಪೋಟಿಯೊಡ್ಡಿದ ಮಿಚೆಲ್ ಸ್ಯಾಂಟನರ್ ನಾಯಕತ್ವದ ನ್ಯೂಜಿಲೆಂಡ್ ತಂಡವು 4 ವಿಕೆಟ್ಗಳಿಂದ ಸೋಲಿಸುವಲ್ಲಿ ರಾಹುಲ್ ಆಟ ಮತ್ತೊಮ್ಮೆ ಪ್ರಮುಖವಾಯಿತು. ರವೀಂದ್ರ ಜಡೇಜ ವಿಜಯದ ಬೌಂಡರಿ ಹೊಡೆಯುವ ಮುನ್ನ ತಂಡವನ್ನು ಏರಿಳಿತಗಳ ಹಾದಿಯಲ್ಲಿ ಸುರಕ್ಷಿತವಾಗಿ ಗೆಲುವಿನ ದಡ ಮುಟ್ಟಿಸುವಲ್ಲಿ ರಾಹುಲ್ ಪಾತ್ರ ಮಹತ್ವದ್ದಾಯಿತು. ಅದಕ್ಕಾಗಿಯೇ ಜಡೇಜ ಓಡಿ ಬಂದು ರಾಹುಲ್ನನ್ನು ಬಿಗಿದಪ್ಪಿ ಸಂಭ್ರಮಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ಬಳಗವು ಡ್ಯಾರಿಲ್ ಮಿಚೆಲ್ ಮತ್ತು ಮಿಚೆಲ್ ಬ್ರೆಸ್ವಲ್ ಅವರ ಅರ್ಧಶತಕಗಳ ಬಲದಿಂದ 50 ಓವರ್ಗಳಲ್ಲಿ 7 ವಿಕೆಟ್ಗಳಿಗೆ 251 ರನ್ ಗಳಿಸಿತು.ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ (45ಕ್ಕೆ2) ಮತ್ತು ಕುಲದೀಪ್ ಯಾದವ್ (40ಕ್ಕೆ2) ಅವರ ಮೋಡಿಯಿಂದಾಗಿ ಕಿವೀಸ್ ಬಳಗಕ್ಕೆ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಗೆಲುವು ಅತ್ಯಂತ ಸುಲಭವಾಗಿ ಒಲಿಯುವಂತೆ ಭಾಸವಾಗಲು ರೋಹಿತ್ ಮತ್ತು ಶುಭಮನ್ ಗಿಲ್ ಬ್ಯಾಟಿಂಗ್ ಕಾರಣವಾಯಿತು. ಅದರಲ್ಲೂ ರೋಹಿತ್ ಅವರ ಆಟಕ್ಕೆ ಬೌಲರ್ಗಳು ನಿರುತ್ತರರಾದ. ರು. ಇನಿಂಗ್ಸ್ ಎರಡನೇ ಎಸೆತವನ್ನೇ ಸಿಕ್ಸರ್ಗೆ ಎತ್ತುವ ಮೂಲಕ ತಮ್ಮ ಹಾಗೂ ತಂಡದ ಖಾತೆ ತೆರೆದ ರೋಹಿತ್ ಅವರನ್ನು ತಡೆಯುವುದು ಅಸಾಧ್ಯವಾಯಿತು. ಗಿಲ್ ಕೂಡ ತಮ್ಮ ನಾಯಕನ ಆಟಕ್ಕೆ ಪ್ರೇಕ್ಷಕನಾದರು. ತಮಗೆ ಸಿಕ್ಕ ಅವಕಾಶಗಳಲ್ಲಿ ದೊಡ್ಡ ಹೊಡೆತ ಆಡಲಿಲ್ಲ. ಒಂದು, ಎರಡು ರನ್ ಹೊಡೆದು ಆಡಿದರು. ಒಂದು ಬಾರಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಗಿಲ್ ಜೀವದಾನ ಪಡೆದರು.ಆದರೆ ರೋಹಿತ್ ಅವರ ಪುಲ್, ಪ್ಟಿಕ್, ಫ್ರಂಟ್ಪುಟ್ ಶಾಟ್ಗಳು ಮತ್ತುಬೌಲರ್ಗಳು ಚೆಂಡನ್ನು ರಿಲೀಸ್ ಮಾಡುವ ಮುನ್ನವೇ ಕ್ರೀಸ್ನಲ್ಲಿ ತೋರಿದ ಪಾದಚಲನೆಯು ಗಮನ ಸೆಳೆಯು ವಂತಿತ್ತು. 41 ಎಸೆತಗಳಲ್ಲಿ ಅರ್ಧಶತಕ ಹೊಡೆದರು. ಅದರಲ್ಲಿ 3 ಸಿಕ್ಸರ್ಗಳು, 5 ಬೌಂಡರಿಗಳು ಇದ್ದವು. ರನ್ ರೇಟ್ ಕೂಡ ಕುದುರೆಯಂತೆ ವೇಗವಾಗಿ ಓಡುತ್ತಿತ್ತು. ಆದರೆ 19ನೇ ಓವರ್ನಲ್ಲಿ ಗಿಲ್ ವಿಕೆಟ್ ಪಡೆದ ಮಿಚೆಲ್ ಸ್ಯಾಂಟರ್ನ ಜೊತೆಯಾಟ ಮುರಿದರು.
ಇದನ್ನೂ ಓದಿ:ಸೆಬಿ ‘ಮಿತ್ರ’ ಹೂಡಿಕೆದಾರರಿಗೆ ಆಪ್ತ
ನಂತರದ ಓವರ್ನಲ್ಲಿ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ 1 ರನ್ ಗಳಿಸಿದ್ದರು. ಆದರೆ ಮೈಕೆಲ್ ಬ್ರೇಸ್ವೆಲ್ ಅವರ ಕೆಳಮಟ್ಟದ ಸ್ಪಿನ್ ಎಸೆತವನ್ನು ಸ್ವೀಪ್ ಮಾಡುವ ಪ್ರಯತ್ನದಲ್ಲಿಕೊಹ್ಲಿಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಇದರಿಂದ ಕಿವೀಸ್ ಬಳಗದ ಆತ್ಮವಿಶ್ವಾಸ ಇಮ್ಮಡಿಸಿತು. ರೋಹಿತ್ ಅಬ್ಬರವೂ ತಗ್ಗತೊಡಗಿತು. 27ನೇ ಓವರ್ನಲ್ಲಿ ರಚಿನ್ ರವೀಂದ್ರ ಎಸೆತವನ್ನು ಎರಡೆಜ್ಜೆ ಮುಂದೆ ಜಿಗಿದು ಅಡಲು ಯತ್ನಿಸಿದ ರೋಹಿತ್ ಅವರನ್ನು ವಿಕೆಟ್ ಕೀಪರ್ ಟಾಮ್ ಲೇಥಮ್ ಸ್ಟಂಪಿಂಗ್ ಮಾಡಿದರು. ಇಲ್ಲಿಂದ ಇನಿಂಗ್ಸ್ ಮೇಲೆ ಹಿಡಿತ ಸಾಧಿಸಲು ಕಿವೀಸ್ ಪಡೆಯತ್ನಿಸಿತು. ಕೊನೆಯ ಓವರ್ನವರೆಗೂ ಹಗ್ಗಜಗ್ಗಾಟ ಸಾಗಿತು. ಇದರಿಂದಾಗಿ ರೋಚಕತೆ ಮೂಡಿಸಿತು.
ಶ್ರೇಯಸ್ ಅಯ್ಯರ್ (48 ರನ್)ಮತ್ತೊಂದು ಉಪಯುಕ್ತ ಇನಿಂಗ್ಸ್ ಆಡಿದರು. ಅವರಿಗೆ ಅಕ್ಷರ್ (29 ರನ್) ಜೊತೆ ನೀಡಿದರು. ಅವರಿಬ್ಬರನ್ನೂ ಕಟ್ಟಿಹಾಕುವಲ್ಲಿ ಕಿವೀಸ್ ಸ್ಪಿನ್ನರ್ಗಳು ಯಶಸ್ವಿಯಾದರು.ಆಗ ಮತ್ತೆ ಆಸರೆಯಾದವರು 6ನೇ ಕ್ರಮಾಂಕದ ರಾಹುಲ್ ಯೋಜನಾ ಬದ್ಧವಾಗಿ ಆಡಿದ ಅವರಿಗೆ ಹಾರ್ದಿಕ್ ಕೂಡ ಜೊತೆಗೂಡಿದರು. ಆದರೆ ಎಂದಿನಂತೆ ಕೊನೆಯ ಹಂತದಲ್ಲಿ ಹಾರ್ದಿಕ್ ಅವಸರಕ್ಕೆ ಈಡಾಗಿ ವಿಕೆಟ್ ಕೊಟ್ಟರು. ಜಡೇಜ (ಅಜೇಯ 9) ಮಾತ್ರ ತಾಳ್ಮೆಯಿಂದ ರಾಹುಲ್ ಜೊತೆಗೂಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಡ್ಯಾರಿಲ್, ಮಿಂಚರ್ ಬ್ಯಾಟಿಂಗ್: ನ್ಯೂಜಿಲೆಂಡ್ ತಂಡದ ಆರಂಭಿಕ ಜೋಡಿ ರಚಿನ್ ರವೀಂದ್ರ ಮತ್ತು ವಿಲ್ ಯಂಗ್ ಅವರುಮೊದಲ ವಿಕೆಟ್ ಜೊತೆಯಾಟದಲ್ಲಿ 57 ರನ್ ಸೇರಿಸಿದರು. ವೇಗಿ ಮೊಹಮ್ಮದ್ ಶಮಿ ಎಸೆತಗಳನ್ನು ರವೀಂದ್ರ ಲೀಲಾಜಾಲವಾಗಿ ಆಡಿದರು. ಅವರ ಒಂದೇ ಓವರ್ನಲ್ಲಿ 3 ಬೌಂಡರಿ ಹೊಡೆದರು. ಆದರೆ ಭಾರತದ ಸ್ಪಿನ್ನರ್ಗಳು ದಾಳಿಗಿಳಿದ ನಂತರ 21 ರನ್ಗಳ ಅಂತರದಲ್ಲಿ ಕಿವೀಸ್ ಬಳಗದ 3 ವಿಕೆಟ್ಗಳು ಪತನವಾದವು. ಈ ಸಂದರ್ಭದಲ್ಲಿ ಡ್ಯಾರಿಲ್ ಮಿಚೆಲ್ (63; 101ಎ) ಮತ್ತು ಕೊನೆಯ ಹಂತದಲ್ಲಿ ಮಿಚೆಲ್ ಬ್ರೇಸ್ ವೆಲ್ (53; 40ಎ) ಅವರು ಮಿಂಚಿದರು. ಅರ್ಧಶತಕ ದಾಖಲಿಸಿದರು. ಅದರಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಲು ಸಾಧ್ಯವಾಯಿತು.