ಮೈಗ್ರೇನ್ ಕಿರಿಕಿರಿ ತಪ್ಪಲು ಬೇಕು ಒಳ್ಳೆಯ ಚಿಕಿತ್ಸೆ
ಕೆಲವು ಸಮಸ್ಯೆಗಳಿಗೆ ಪರಿಹಾರವೇ ಇಲ್ಲ ಎಂದು ಅಂದುಕೊಂಡು ತುಂಬಾ ಜನ ಅವನ್ನು ಅನುಭವಿಸುತ್ತಿರುತ್ತಾರೆ. ಅಂಥವುಗಳಲ್ಲಿ ಒಂದು ಮೈಗ್ರೇನ್ ಅಥವಾ ಅರೆತಲೆನೋವು ಬಿಸಿಲಿಗೆ ಹೋದಾಗ, ಟೆನ್ಸನ್ ಆದಾಗ, ಊಟ ತಡವಾದಾಗ, ನಿದ್ದೆಗೆಟ್ಟಾಗ, ಜನಜಂಗುಳಿಯಲ್ಲಿದ್ದಾಗ, ಹೊರಗೆ ಅಡ್ಡಾಡಿದಾಗ, ಹಠಾತ್ತಾಗಿ ದೊಡ್ಡ ಬೆಳಕು, ದೊಡ್ಡ ಶಬ್ದ ಅಥವಾ ಸುಗಂಧ ದ್ರವ್ಯಗಳಿಂದ ನಮ್ಮ ಜ್ಞಾನೇಂದ್ರಿಯಗಳು ಪ್ರಚೋದಿಸಲ್ಪಟ್ಟಾಗ ತಲೆನೋವು, ಅರ್ಧ ತಲೆನೋವು ಅಥವಾ ಮೈಗ್ರೇನ್ ಬಹಳಷ್ಟು ಜನರನ್ನು ಕಾಡುತ್ತದೆ. ಕೆಲವರಿಗೆ ಯಾವುದಾದರೂ ಒಂದು ಭಾಗದಲ್ಲಿ ಮಾತ್ರ ನೋವು ಕಾಣಿಸಿಕೊಂಡರೆ, ಇನ್ನೂ ಕೆಲವರಿಗೆ ಇಡೀ ತಲೆಯಲ್ಲಿಯೂ ನೋವುಂಟಾಗಬಹುದು. ಮೈಗ್ರೇನ್ ಅಂದರೆ ತಲೆನೋವಷ್ಟೇ ಅಲ್ಲ, ವಾಂತಿ ಬಂದಂತೆನಿಸುವುದು, ವಾಂತಿ ಆಗುವುದು, ಗೊಂದಲವಾದಂತೆನಿಸುವುದು, ಕಣ್ಣುನೋವು ಮುಂತಾದ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಅತಿಯಾದ ಮಾನಸಿಕ ಕಿರಿಕಿರಿ ಉಂಟುಮಾಡುತ್ತದೆ.
ಮಲಮೂತ್ರಾದಿ ನೈಸರ್ಗಿಕ ಕರೆಗಳನ್ನು ತಡೆಹಿಡಿಯುವುದು, ಮನಸ್ಸಿಗೆ ಬಂದ ಸಮಯದಲ್ಲಿ ಊಟ-ನಿದ್ದೆ ಮಾಡುವುದು, ಸದಾ ಸಿಟ್ಟು, ಆಸೂಯೆ, ಒತ್ತಡ, ಚಿಂತೆ, ಉದ್ವೇಗದಲ್ಲಿರುವುದು, ಕಲುಷಿತ ಆಹಾರ ಮತ್ತು ರಾಸಾಯನಿಕ ಭರಿತ ಆಹಾರ ಸೇವಿಸುವುದು, ಅತಿಯಾಗಿ ಉಪ್ಪು, ಹುಳಿ, ಖಾರವಿರುವ ಮತ್ತು ಕರಿದ ಆಹಾರ ಸೇವಿಸುವುದು, ತುಂಬಾ ಸಮಯ ಮೊಬೈಲ್, ಕಂಪ್ಯೂಟರ್, ಟಿವಿ ನೋಡುತ್ತಾ ಕಳೆಯುವುದು ಮೈಗ್ರೇನ್ ಸಮಸ್ಯೆಪ್ರಾರಂಭವಾಗಲು ಕಾರಣಗಳಾಗುತ್ತವೆ. ಬಿಸಿಲಿಗೆ ಹೋಗುವುದು, ಊಟ ತಡವಾಗಿ ಮಾಡುವುದು ಮುಂತಾದ ಮೇಲೆ. ಹೇಳಿದ ಅಂಶಗಳು ಕಾರಣಗಳಲ್ಲ; ಅವು ಪ್ರಚೋದಕ ಅಂಶಗಳು, ಅಂದರೆ ಆ ಕ್ಷಣಕ್ಕೆ ತಲೆನೋವು ಅವುಗಳಿಂದ ತುಂಬಾ ಆಳದಲ್ಲಿರುತ್ತದೆ.
ಆದರೆ ಅದೆಷ್ಟೇ ಆಳದಲ್ಲಿದ್ದರೂ ಮೈಗ್ರೇನ್ಗೆ ಒಳ್ಳೆಯ ಚಿಕಿತ್ಸೆ ಪಡೆದು ಗುಣಪಡಿಸಿಕೊಳ್ಳಲು ಸಾಧ್ಯವಿದೆ. ‘ಕಾರಣಗಳನ್ನು ಬಿಡುವುದು ಮೊದಲ ಚಿಕಿತ್ಸೆಯಾಗಿರುತ್ತದೆ. ಅಣಲೆಕಾಯಿ, ನೆಲ್ಲಿಕಾಯಿ, ತಾರೆ ಕಾಯಿ, ಕಿರಾತಕಡ್ಡಿ, ಅರಿಶಿನ ಕಹಿಬೇವು ಅಮೃತಬಳ್ಳಿ ಈ ಏಳು ದ್ರವ್ಯಗಳನ್ನು ಗ್ರಂಧಿಗೆ ಅಂಗಡಿಯಿಂದ ತಂದು ಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಂಡು ಪ್ರತಿಯೊಂದನ್ನೂ ಅರ್ಧಧ್ರ ಚಮಚ ಅಂದರೆ ಒಂದು ಗ್ರಾಂನಷ್ಟು ಹಾಕಿ ಎಲ್ಲವನ್ನೂ ಸೇರಿಸಿ ಅದಕ್ಕೆ 4 ಲೋಟ ನೀರು ಹಾಕಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ಸಿಕ್ಕ ಕಷಾಯವನ್ನು ಎರಡು ಪಾಲು ಮಾಡಬೇಕು. ಬೆಳಗ್ಗೆ ಅರ್ಧ ಲೋಟ, ರಾತ್ರಿ ಅರ್ಧ ಲೋಟ ಕಷಾಯವನ್ನು ಆಹಾರ ಸೇವಿಸುವ ಹತ್ತು ನಿಮಿಷ ಮೊದಲು ಸೇವಿಸಬೇಕು. ಇದರಿಂದ ಮೈಗ್ರೇನ್ನಲ್ಲಿ ತುಂಬಾ ಅನುಕೂಲವಾಗುತ್ತದೆ.ತಿಂಗಳು ಈ ಕಷಾಯವನ್ನು ಸೇವಿಸಬಹುದು.
ಒಂದು ವೇಳೆ ಈ ಏಳು ದ್ರವ್ಯಗಳು ಸಿಗದಿದ್ದರೆ ಶ್ರೇಷ್ಠಮಧು, ನೆಲ್ಲಿಕಾಯಿ, ಶುಂಠಿ ,ಅಣಲಕಾಯಿ, ಸೊಗದೆ ಬೇರುಗಳ ಕಷಾಯಮಾಡಿ ಕುಡಿಯ ಬಹುದು. ಸುಮಾರು 100 ಮಿ.ಲೀ. ಗರಿಕೆ ಹುಲ್ಲಿನ ಜ್ಯೂಸ್ ಗೆ ನಾಲ್ಕು ಚಿಟಿಕೆ ಅಣಲೆಕಾಯಿಯ ಪುಡಿಯನ್ನು ಹಾಕಿ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಕುಡಿಯ ಬೇಕು. ಈ ರೀತಿ 45 ದಿನ ಕುಡಿದರೆ ಮೈಗ್ರೇನ್ ಹತೋಟಿಗೆ ಬರುತ್ತದೆ. ಇದನ್ನು ಸೇವಿಸುವಾಗ ನೆಗಡಿಯಾಗದಂತೆ ನೋಡಿ ಕೊಳ್ಳಲು ಫ್ರಿಜ್ ನಲ್ಲಿಟ್ಟ ವಸ್ತು ಸೇವನೆ ಮಾಡ ಬಾರದು. ಭೇದಿಯಾದರೆ ಅಣಲೆಕಾಯಿಯ ಪ್ರಮಾಣವನ್ನು ಕಡಿಮೆ ಮಾಡಬೇಕುಪ್ರಕೃತಿ ಚಿಕಿತ್ಸೆ: ವಮನದೌತಿ, ಜಲನೇತಿ, ಸೂತ್ರನೇತಿಯಂತಹ ಪ್ರಕೃತಿ ಚಿಕಿತ್ಸೆಗಳು ಮೈಗ್ರೇನ್ ಅನ್ನು ಬೇರು ಸಮೇತ ತೆಗೆಯಲು ಸಹಕಾರಿ. ಆಕ್ಯುಪಂಕ್ಚರ್, ಅಕ್ಯುಪ್ರೆಶರ್ಗಳೂ ಈ ಸಮಸ್ಯೆಯನ್ನು ಸರಿಪಡಿಸುತ್ತವೆ. ಅನುಲೋಮ ವಿಲೋಮ, ಶೀತಲೀ, ಶೀತ್ಕಾರಿಯಂತಹ ಪ್ರಾಣಾಯಾಮಗಳನ್ನು ಮಾಡುವ ವರಿಗೆ ಈ ಸಮಸ್ಯೆ ಬರುವುದಿಲ್ಲ; ಬಂದರೆ ಬಹುಬೇಗ ಗುಣವಾಗುತ್ತವೆ. ವಮನ, ವಿರೇಚನ, ನನ್ನ, ಶಿರೋಧಾರಾದಂತಹ ಪಂಚಕರ್ಮ ಚಿಕಿತ್ಸೆಗಳು ತೀವ್ರಾವಸ್ಥೆಯಲ್ಲಿರುವ ಮೈಗ್ರೇನ್ ಅನ್ನೂ ಗುಣಮಾಡುತ್ತವೆ. ಸುಮಾರು ಹತ್ತು ದಿನದ ಚಿಕಿತ್ಸೆಯಿಂದ ಮೈಗ್ರೇನ್ ಅನ್ನೋ ಚೆನ್ನಾಗಿ ಗುಣಪಡಿಸಲು ಸಾಧ್ಯವಿದೆ.