ಯಮುನೆ ಮಡಿಲಲ್ಲಿ ಅರಳಲಿ ದೇಶದ ಹೃದಯ

ಯಮುನೆ ಮಡಿಲಲ್ಲಿ ಅರಳಲಿ ದೇಶದ ಹೃದಯ

ಸಂಸ್ಕೃತಿ ಮತ್ತು ಶ್ರದ್ಧೆಯ ಕೇಂದ್ರಗಳ ಕುರಿತು ಕೀಳು ರಾಜಕೀಯ ಮಾಡಲು ಹೊರಟರೆ ಅದಕ್ಕೆ ಜನರು ಮಹಾಸ್ತ್ರದ ಮೂಲಕವೇ ಜೋರ್ನಾರ್ ಉತ್ತರ ಕೊಡುತ್ತಾರೆ ಎಂಬುದು ದೆಹಲಿ ವಿಧಾನಸಭೆ ಮತ್ತೊಮ್ಮೆ ಸಾಬೀತಾಗಿದೆ. ಅಮ್ ಅಡ್ಡಿ ಪಕ್ಷದ ಅರವಿಂದ ಶೇಕ್ಟಿವಾಲ್ ಸೋಳಿಗೆ ಹಲವು ಕಾರಣಗಳಿದ್ದರೂ ಅವರು ಯಮುನೆ ಬಗ್ಗೆ ಗೆ ಆಡಿದ ಮಾತು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದು ಸುಳ್ಳಲ್ಲ. ‘ಯಮಜನೆಗೆ ವಿಷ ಬೆರೆಸಲಾಗಿದೆ’ ಎಂಬ ಅವರ ಹೇಳಿಕೆ ತೀರಾ ರಾಜಕೀಯಪ್ರಬೋದಿತ ಮತ್ತು ದೇಶದ ಸಂಸ್ಕೃತಿ, ಶ್ರದ್ಧೆಯನ್ನೇ ಅವಮಾನಿಸುವಂತಿತ್ತು. ಚುನಾವಣೆ ಮುಗಿದಿದೆ. ಅಧಿಕಾರಕ್ಕೇರಲಿರುವ ಬಿಜೆಪಿ ‘ಸ್ವಚ್ಛ ಯಮುನಾ’ದ ಭರವಸೆ ನೀಡಿದೆ. ಈಗ ಯಮನೆ ಹೇಗಿದ್ದಾಳೆ, ಅವಳ ನೋವಿಗೆ ಕಾರಣವೇನು ನಮ್ಮ ಚಳುಗರ, ಜನರ ಸಂವೇದನೆ ಜಾಗೃತಗೊಂಡು ಅವಳ ಕಣ್ಣೀರನ್ನು ಒರೆಸಬಹುದೆ? ಯಮುನಮ್ಮನ ಮಡಿಲಲ್ಲಿ ಪರಂಪರೆಯ ಸೊಗಡು ಮತ್ತೆ ಅರಳಬಹುದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನ ಇಲ್ಲಿದೆ.

ಸರ್ವಪಾಪವ ತಿಂದುತೇಗುವ ಗಂಗೆಗೇ ಕೊಳೆ ಕೊರತೆಯೇ?’ ಎಂದು ಸಂನ್ಯಾಸಿ ಗೀತೆ ಮೂಲಕ ಕಣ್ಣು ತೆರೆಸಿದವರು ಸಿಡಿಲ ಸಂತ ಸ್ವಾಮಿ ವಿವೇಕಾನಂದರು. ಆದರೆ, ದೇಶದ ಹೃದಯವಾದ ದೆಹಲಿಯಲ್ಲಿ ಹರಿಯುವ ಯಮುನೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಎಂಬುದು ಕರಾಳ ವಾಸ್ತವ. ಕಳೆದ ಹತ್ತು ವರ್ಷಗಳಲ್ಲಿ ಗಂಗೆಯ ಸ್ಥಿತಿ ಬದಲಾಗಿದೆ. ಹೌದು, ಗಂಗೆ ನಿರ್ಮಲವಾಗಿದ್ದಾಳೆ, ಅವಳ ತೀರಪ್ರದೇಶ ಸೌಂದರ್ಯದಿಂದ ಕಂಗೊಳಿಸುತ್ತಿದೆ, ಶ್ರದ್ದೆಯ ನವಗಾನ ಅಲ್ಲಿ ಮಧುರವಾಗಿ ಮೊಳಗುತ್ತಿದೆ. ಗಂಗಾ ಘಾಟ್‌ಗಳಲ್ಲಿ ಓಡಾಡುವುದೆಂದರೆ ಈಗ ಪುಳಕ, ಸಂಭ್ರಮ. ನದಿಯ ನೈಸರ್ಗಿಕ ಹರಿವಿಗೆ ಅಡ್ಡಿಯಾಗಿದ್ದ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗಿದೆ. ‘ನಮಾಮಿ ಗಂಗೆ’ ಯೋಜನೆ ರಾಜಕೀಯ ಇಚ್ಛಾಶಕ್ತಿಯನ್ನು ದರ್ಶಿಸಿದೆ.

ದೇಶದ ಕೋಟ್ಯಂತರ ಜನರ ಜೀವನಾಡಿ ಗಂಗೆ ಈಗ ನಿರುಮ್ಮಳ. ಅವಳ ಮಡಿಲಲ್ಲಿ ಬದುಕು ಕಟ್ಟಿಕೊಂಡಿರುವ ಮಕ್ಕಳು ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಯಮುನೆಯ ಸ್ಥಿತಿ ಬದಲಾಗಬೇಕಿದೆ. ಏಕೆಂದರೆ, ಯಮುನೆ ಬರೀ ನದಿಯಲ್ಲ. ಈ ದೇಶದ ಹೆಗ್ಗುರುತು. ನಿರ್ಮಲ, ಸುಂದರ ಯಮುನೆ ಭಾರತದ ಗೌರವದ ಪ್ರತೀಕವೂ ಹೌದು. “ಗಂಗಾ ಮಯ್ಯಾನೇ ಮುಝೇ ಬುಲಾಯಾ ಹೈ’ (ಗಂಗಮ್ಮ ನನ್ನನ್ನು ಕರೆದಿದ್ದಾಳೆ) ಎಂದು 2014ರ ಲೋಕಸಭೆ ಚುನಾವಣೆ ವೇಳೆ ಕಾಶಿ ಲೋಕಸಭಾ ಕ್ಷೇತ್ರವನ್ನು ಆಯ್ದುಕೊಂಡ ಬಿಜೆಪಿಯ ಆಗಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಮತ್ತೆ ‘ಯಮುನಾ ಮಯ್ಯಾ ಕೀ ಜಯ್’ ಎಂದು ಹೇಳುವ ಮೂಲಕ ಮುಂದಿನ ಆದ್ಯತೆ, ಕಾಯಕಲ್ಪ ಯಮುನಾ ನದಿಯದ್ದೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಅತಿಯಾದ ಕೈಗಾರೀಕರಣ ತಂದ ಆಪತ್ತು

ರಾಜಧಾನಿ ದೆಹಲಿಯಲ್ಲಿ ಯಮುನಾ ನದಿ ಆರಂಭಗೊಳ್ಳುವುದೇ ವಜೀರಾಬಾದ್ ಪ್ರದೇಶದಿಂದ. ಇಲ್ಲಿ ಕಟ್ಟಲಾಗಿರುವ ಬ್ಯಾರೇಜ್ ಯಮುನೆಯನ್ನು ಮುಂದೆ ಹರಿಯಲು ಬಿಡುತ್ತಿಲ್ಲ. ಹೀಗಾಗಿ, ವಜೀರಾಬಾದ್ ಪ್ರದೇಶದ ಒಂದು ಭಾಗದಲ್ಲಿ ನದಿ ಸ್ವಚ್ಛವಾಗಿದ್ದರೆ, ಮತ್ತೊಂದು ಭಾಗದಲ್ಲಿ ಬರೀ ಕಪ್ಪು ಮತ್ತು ಕಲ್ಮಶ. ಇಲ್ಲಿನ ನೀರನ್ನು ಶುದ್ದೀಕರಿಸಿಯೇ ದೆಹಲಿ ಜನರಿಗೆ ಕುಡಿಯುವ ನೀರನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: ನಿಯಂತ್ರಣ ಕ್ರಮಗಳಲ್ಲಿ ಪಾರದರ್ಶಕತೆ ಮತ್ತು ಸ್ಪಷ್ಟತೆ ಕಾಯ್ದುಕೊಳ್ಳಬೇಕು


ಬ್ರಿಟಿಷರ ಕಾಲದಲ್ಲಿಯೂ ಸ್ವಚ್ಛವಾಗಿದ್ದ, ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಯಮುನಾ ನದಿ 1960ರ ದಶಕದಿಂದಲೇ ಕಲುಷಿತಗೊಳ್ಳಲಾರಂಭಿಸಿತು. ಮೊದಲಿಗೆ, ನದಿಯ ನೀರು ಸ್ವಾದ ಕಳೆದುಕೊಂಡಿತು. 1970ರ ದಶಕದಲ್ಲಿ ಇನ್ನಷ್ಟು ಮಲಿನವಾಯಿತು. 1980ರ ದಶಕದಲ್ಲಿ ದೆಹಲಿ ಕೈಗಾರೀಕರಣಕ್ಕೆ ತೆರೆದುಕೊಂಡು, ಉದ್ಯಮಗಳ ಸಂಖ್ಯೆ ಗಣನೀಯವಾಗಿ ಏರಿತು. ಅದರಿಂದ ಉದ್ಯೋಗ ಹುಡುಕಿಕೊಂಡು ಬಂದು ದೆಹಲಿಯಲ್ಲಿ ನೆಲೆಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ, ಇಲ್ಲಿಯ ಜನಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂತು. 1993ರಲ್ಲಿ ಸರ್ಕಾರ ಯಮುನಾ ಕ್ರಿಯಾ ಯೋಜನೆ ರೂಪಿಸಿ, ಜಾರಿಗೊಳಿಸುವ ಹೊತ್ತಿಗೆ ಪರಿಸ್ಥಿತಿ ತೀವ್ರ ಗಂಭೀರವಾಗಿತ್ತು. 1980ರ ದಶಕದ ಕೈಗಾರೀಕರಣ, ನಗರೀಕರಣ, ಅಸಮರ್ಪಕ ಒಳಚರಂಡಿ ವ್ಯವಸ್ಥೆಯೇ ಯುಮುನೆಗೆ ಆಪತ್ತು ಸೃಷ್ಟಿಸಿತು. ಈ ಮೂಲಕ ನದಿಯ ನೀರಿನ ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿ ಕುಸಿಯುತ್ತಲೇ ಹೋಯಿತು.

1978ರಲ್ಲಿ ಯಮುನಾದ ನೀರನ್ನು ದೆಹಲಿಯ ನಾಲ್ಕು ಪ್ರದೇಶಗಳಲ್ಲಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಅವರಲ್ಲಿ ಡಿಡಿಟಿ ಕೀಟನಾಶಕ (Dichloro-Diphenyl-Trichloroethane) ಪ್ರಮಾಣ ಗಾಬರಿಗೊಳ್ಳುವ ಮಟ್ಟದಲ್ಲಿ ಪತ್ತೆಯಾಯಿತು. ವಜೀರಾಬಾದ್ ಪ್ರದೇಶದ ನೀರಿನಲ್ಲಿ ಹೆಚ್ಚು ಡಿಡಿಟಿ ಅಂಶ ಕಂಡುಬಂತು. 1986ರಲ್ಲಿ ನಾಲ್ವರು ಸಂಶೋಧಕರು ಮಂಡಿಸಿದ ಸಂಶೋಧನಾ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಯಿತು. ನದಿನೀರಿನ ಕಲ್ಮಶ ಅಲ್ಲಿ ವಾಸಿಸುತ್ತಿರುವ ಮೀನು ಸೇರಿದಂತೆ ಇತರ ಜಲಜೀವಿಗಳಿಗೆ ಅಪಾಯ ತಂದೊಡ್ಡಿದೆ ಎಂದು 2010ರಲ್ಲಿ ಅನಿಲ್‌ ಕುಮಾರ್ ಮಿಶ್ರಾ ತಮ್ಮ ‘A River about to Die: Yamuna’ ಎಂಬ ಸಂಶೋಧನಾ ವರದಿಯಲ್ಲಿ ತಿಳಿಸಿದರು. ಇದಕ್ಕೂ ಮುಂಚೆಯೇ, 2002ರ ಜೂನ್ 13ರಂದು ಸಿಕಂದರಾ (ಆಗ್ರಾದ ತಾಜ್‌ಮಹಲ್ ಬಳಿಯ ಪ್ರದೇಶ)ದಲ್ಲಿ ಸಾವಿರಾರು ಮೀನುಗಳು ಮರಣ ಹೊಂದಿದವು.

ಇದರ ಬಳಿಕ ಬಟೇಶ್ವರ (ಆಗ್ರಾದಿಂದ 78 ಕಿ.ಮೀ)ದವರೆಗೆ ಇಂಥ ಸರಣಿ ಘಟನೆಗಳು ಸಂಭವಿಸಿದವು. ನಂತರ, ಪ್ರತಿ ವರ್ಷವೂ ಯಮುನಾ ನದಿಯಲ್ಲಿ ಮೀನುಗಳ ಮರಣದ ಸುದ್ದಿ ಬರುತ್ತಿದ್ದು, ಮಾಲಿನ್ಯ ಗಂಭೀರ ಮಟ್ಟ ತಲುಪಿರುವುದಕ್ಕೆ ಸಾಕ್ಷಿ. 2001ರ ಹೊತ್ತಲ್ಲೇ ದೆಹಲಿಯ ಶೇಕಡ 70ರಷ್ಟು ಮಾಲಿನ್ಯ ಯಮುನಾ ಸೇರಿ, ಪರಿಸ್ಥಿತಿಯನ್ನು ಬಿಗಡಾಯಿಸಿತು. ಅಲ್ಲದೆ, ನದಿಯ ಒಟ್ಟು ಮಾಲಿನ್ಯದಲ್ಲಿ ಶೇಕಡ 76ರಷ್ಟು ಕೊಡುಗೆ ವಜೀರಾಬಾದ್‌ ಪ್ರದೇಶದ್ದೇ ಆಗಿದೆ. ಕಳೆದ 20 ವರ್ಷಗಳಲ್ಲಿ ನದಿ ಎಷ್ಟು ಪ್ರಮಾಣದಲ್ಲಿ ಮಲಿನಗೊಂಡಿತ್ತೋ, 2020ರಿಂದ 2024ರವರೆಗಿನ ನಾಲ್ವೇ ವರ್ಷಗಳಲ್ಲಿ ಅದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಮಲಿನಗೊಂಡಿದ್ದು, ಯಮುನೆಯ ಉಸಿರುಗಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಅಸಂಸ್ಕರಿತ ತ್ಯಾಜ್ಯ ಮತ್ತು ನೀರು ನದಿಯ ಒಡಲಿಗೆ ಸೇರುತ್ತಿರುವ ಪ್ರಮಾಣ ಹೆಚ್ಚಿರುವುದು.

Leave a Comment