ಯು ಪಿ ಎಸ್ ಸಿಗೆ ಪಾರದರ್ಶಕತೆ ಪ್ರಶ್ನೆ .
ಪ್ರಿಲಿಮ್ಸ್ ಬಳಿಕ ಕೀ ಉತ್ತರ ಕೋರಿ ಅರ್ಜಿ ಅಮಿಕಾಸ್ ಕ್ಯೂರಿ ನೇಮಿಸಿದ ಸುಪ್ರೀಂ. ಅಖಿಲ ಭಾರತ ನಾಗರೀಕ ಸೇವಾ ಹುದ್ದೆಗಳು ಸೇರಿದಂತೆ ಕೇಂದ್ರ ಸರ್ಕಾರ ಹಾಗೂ ವಿವಿಧ ಸಚಿವಾಲಯಗಳು, ಪೊಲೀಸ್ ನೇಮಕಾತಿಗೆ ಕಾಲಮಿತಿಯಲ್ಲೇ ಪರೀಕ್ಷಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪ್ರತಿ ವರ್ಷ ಹತ್ತಾರು ಸಾವಿರ ಹುದ್ದೆಗಳನ್ನು ನೇಮಕಾತಿಗೆ ಶಿಫಾರಸು ಮಾಡುವ ಕೇಂದ್ರ ಲೋಕಸೇವಾ ಆರೋಗ್ಯದಲ್ಲಿ (ಯುಪಿಎಸ್ ಸಿ) ಪಾರದರ್ಶಕತೆ ಕೊರತೆಯೇ?….. ಸಧ್ಯ ಇಂಥದೊಂದು ಪ್ರಶ್ನೆ ಸುಪ್ರೀಂ ಕೋಟ್೯ಗೂ ಕಾಡುತ್ತಿದೆ ಲಭ್ಯವಿರುವ ದತ್ತಾಂಶವನ್ನು ಬಿಡುಗಡೆ ಮಾಡಲು ಇರುವ ಅಡ್ಡಿಗಳೇನು? ಈ ಬಗ್ಗೆ ಅಫಿಡವಿಟ್ ಸಲ್ಲಿಸಿ ಎಂದು ಕೇಂದ್ರ ಸರ್ಕಾರ ಹಾಗೂ ಯುಪಿಎಸ್ ಸಿಗೆ ನಿರ್ದೇಶನ ನೀಡಿದೆ. ಜತೆಗೆ, ಈ ವಿಚಾರವಾಗಿ ಕೋರ್ಟಿಗೆ ನೆರವಾಗಲು ಅಮಿಕಸ್ ಕ್ಯೂರಿ ನೇಮಕ ಮಾಡಿದೆ.
ಅರ್ಜಿಯ ವಿಚಾರಣೆಯನ್ನು ಫೆ.4ಕ್ಕೆ ಮುಂದೂಡಿದೆ. ಪ್ರಕರಣವೇನು? : ನಾಗರಿಕ ಸೇವಾ ಹುದ್ದೆಗಳು ಭತ೯ಗಾಗಿ ಯುಪಿಎಸ್ ಸಿ ನಡೆಸುವ ಸಿವಿಲ್ ಸರ್ವಿಸ್ ಎಕ್ಸಾಮಿನೇಷನ್ ನಲ್ಲಿ (ಸಿಎಸ್ಇ) ಪೂರ್ವಭಾವಿ ಪರೀಕ್ಷೆಯ (ಪ್ರಿಲಿಮ್ಸ್) ಸರಿಯುತ್ತರಗಳು, ಮುಖ್ಯ ಪರೀಕ್ಷೆಗೆ ಆಯ್ಕೆಯಾಗಲು ನಿಗದಿ ಪಡಿಸಲಾಗುವ ಕಟ್ – ಆಫ್ ಅಂಕಗಳನ್ನು ಪ್ರಿಲಿಮ್ಸ್ ಪೂರ್ಣಗೊಂಡ ಹಂತದಲ್ಲೇ ಬಿಡುಗಡೆ ಮಾಡಬೇಕೆಂದು ಯುಪಿಎಸ್ ಸಿಗೆ ನಿರ್ದೇಶಿಸುವಂತೆ ಕೋರಿ ನಾಗರಿಕ ಸೇವಾ ಹುದ್ದೆಗಳ ಆಕಾಂಕ್ಷೆಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಯುಪಿಎಸ್ ಸಿಗೆ ನೋಟಿಸ್ ಜಾರಿ ಮಾಡಿದೆ. ಕೋರ್ಟ್ ಹೇಳಿದ್ದೇನು? ಅರ್ಜಿದಾರರ ಮನವಿಯನ್ನು ಪಾಲಿಸಿದೆ ಆದಲ್ಲಿ ಸಂಸ್ಥೆಯು ( ಯುಪಿಎಸ್ ಸಿ) ಯಾವ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ವಿವರಿಸಿ ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ಯುಪಿಎಸ್ ಸಿ ಹಾಗೂ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಕೋರ್ಟ್ ಸಹಾಯಕರಾಗಲು ಒಪ್ಪಿಕೊಂಡಿರುವ ಜಯದೀಪ್ ಗುಪ್ತಾ ಅವರಿಗೂ ಅರ್ಜಿಯ ಪ್ರತಿಯನ್ನು ನೀಡುವಂತೆ ಅರ್ಜಿದಾರರಿಗೆ ತಿಳಿಸಿದೆ . ಅರ್ಜಿದಾರರ ವಾದವೇನು? ಪ್ರಸ್ತುತ ಯುಪಿಎಸ್ಸಿ ಪರೀಕ್ಷೆಯ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಬಿಡುಗಡೆ ಬಳಿಕವಷ್ಟೇ ಸರಿಯುತ್ತರ, ಕಟ್ – ಅಫ್ ಅಂಕ ಹಾಗೂ ಇತರ ಮಾಹಿತಿ ನೀಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳ ಅಂಕಗಳನ್ನು ಕೂಡ ಫಲಿತಾಂಶ ನೀಡಿದ 1 – 2 ವಾರದ ಬಳಿಕವಷ್ಟೇ ಬಿಡುಗಡೆ ಮಾಡುತ್ತಿದೆ. ಇದರಿಂದಾಗಿ ಒಟ್ಟಾರೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಕಾಡುತ್ತಿದೆ. ಪ್ರಿಲಿಮ್ಸ್ ಬಳಿಕ ಸರಿಯುತ್ತರ, ಕಟ್ – ಆಫ್ ಅಂಕಗಳನ್ನು ಬಿಡುಗಡೆ ಮಾಡಿದೆ ಆದಲ್ಲಿ ಅಭ್ಯರ್ಥಿಗಳು ಮೌಲ್ಯಮಾಪನ ಹಂತದಲ್ಲಾದ ಲೋಪಗಳನ್ನು ತರ್ಕಬದ್ದ ಹಾಗೂ ಪುರಾವೆಗಳೊಂದಿಗೆ ಪ್ರದರ್ಶಿಸಲು ಅನುಕೂಲವಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಭಾರತದ ವೈಭವ.
ಒಟ್ಟು 17 ಅಭ್ಯರ್ಥಿಗಳು ಯುಪಿಎಸ್ ಸಿ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ವಾದ ಮಂಡಿಸುತ್ತಿದ್ದಾರೆ. ಅಮಿಕಸ್ ಕ್ಯೂರಿ : ನ್ಯಾಯಮೂರ್ತಿಗಳಾದ ಪಿ. ಎಸ್.ನರಸಿಂಹ ಹಾಗೂ ಮನೋಜ್ ಮಿಶ್ರಾ ಅವರ ನ್ನೊಳಗೊಂಡ ಪೀಠವು ಹಿರಿಯ ನ್ಯಾಯವಾದಿ ಜಯದೀಪ್ ಗುಪ್ತಾ ಅವರನ್ನು ಈ ಪ್ರಕರಣದಲ್ಲಿ ಅಮಿಕಾಸ್ ಕ್ಯೂರಿಯಾಗಿ ನೇಮಿಸಿದ್ದು, ಅರ್ಜಿ ವಿಚಾರಣಿಗೆ ಸಂಬಂಧಿಸಿದಂತೆ ನೆರವಾಗುವಂತೆ ಮನವಿ ಮಾಡಿದೆ. ಇತರ ನೇಮಕಾತಿ ಆಯೋಗಗಳಲ್ಲಿ ಹೇಗಿದೆ?
ಕೇಂದ್ರದ ಇತರ ನೇಮಕಾತಿ ಮಂಡಳಿಗಳಾದ ಸ್ಟಾಪ್ ಸೆಲೆಕ್ಷನ್ ಕಮಿಷನ್ ( ಎಸ್ ಎಸ್ ಸಿ), ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ (ಆರ್ ಆರ್ ಬಿ) , ಇನ್ ಸ್ಟಿಟ್ಯೂಟ್ ಆಪ್ ಬ್ಯಾಂಕಿಂಗ್ ಪಸೋ೯ನೆಲ್ ಸೆಲೆಕ್ಷನ್ ( ಐಬಿಪಿಎಸ್) ಹಾಗೂ ಕರ್ನಾಟಕ ಲೋಕಸೇವಾ ಆರೋಗ್ಯವು ಸೇರಿದಂತೆ ಇತರ ರಾಜ್ಯ ನೇಮಕಾತಿ ಮಂಡಳಿಗಳು ಪ್ರತಿ ಹಂತದ ಪರೀಕ್ಷಾ ಬಳಿಕ ಸರಿಯುತ್ತರಗಳನ್ನು ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸುತ್ತವೆ. ಪಟ್ಟಿ ಪ್ರಕಟಣೆಗೂ ಮುನ್ನ ಆಯಾ ಮೀಸಲಾತಿ ವರ್ಗದ ಕಟ್ – ಆಫ್ ಅಂಕಗಳನ್ನು ಬಿಡುಗಡೆ ಮಾಡುತ್ತವೆ. ಅಭ್ಯರ್ಥಿಗಳು ವ್ಯಯಕ್ತಿಕ ಅಂಕಗಳ ಬಳಿಕವೂ ಆಕ್ಷೇಪಣೆ ಕರೆದು, ಅಂತಿಮ ಪಟ್ಟಿ ಪ್ರಕಟಿಸುತ್ತವೆ. ಆದರೆ, ಯು ಪಿ ಎಸ್ ಸಿ ಫಲಿತಾಂಶ ಬಿಡುಗಡೆ ಮಾಡುತ್ತದೆ. ನಂತರ ಆಯ್ಕೆಯಾದವರ ಅಂಕ ತಿಳಿಸುತ್ತದೆ. ಆಯ್ಕೆಯಾದವರ ಅಂಕಗಳನ್ನು ಬಿಡುಗಡೆ ಮಾಡುತ್ತದೆ. ಅದರಲ್ಲೂ ಅಂಕಗಳನ್ನು ಬಹಿರಂಗಪಡಿಸಲು ಒಪ್ಪಿದ ಅಭ್ಯರ್ಥಿಗಳ ವಿವರವನ್ನಷ್ಟೇ ನೀಡುತ್ತದೆ. ತಾನು ನಡೆಸುವ ಎಲ್ಲಾ ಪರೀಕ್ಷೆಗಳಲ್ಲೂ ಯುಪಿಎಸ್ ಸಿ ಇದೆ ವಿಧಾನ ಪಾಲಿಸುತ್ತದೆ.