ರಮೇಶ್ ಕುಮಾರ್ ಜಮೀನು ಸರ್ವೆಗೆ ಡೆಡ್ ಲೈನ್
ಪ್ರಾದೇಶಿಕ ಆಯುಕ್ತರ ಆದೇಶ ರದ್ದುಪಡಿಸಿದ ಹೈಕೋರ್ಟ್
ಸಂ.ಕ ಸಮಾಚಾರ, ಕೋಲಾರ ಮಾಜಿ ಸ್ಪೀಕರ್ ರಮೇಶ್ಕುಮಾರ್ಗೆ ಸೇರಿದ ಶ್ರೀನಿವಾಸಪುರ ತಾಲ್ಲೂಕು ಅಡ್ಡಗಲ್ ಸಮೀಪದ ಜಿನಗಲಕುಂಟೆ ಅರಣ್ಯ ಪ್ರದೇಶದ ಹೊಸಹುಡ್ಯ ಸ.ನಂ 1 ಮತ್ತು 2ರ ಅರಣ್ಯ ಜಮೀನು ಒತ್ತುವರಿ ಸರ್ವೆ ವಿಚಾರದಲ್ಲಿ ಮಂಗಳವಾರ ರಾಜ್ಯ ಹೈಕೋರ್ಟ್ ಜನವರಿ 15ರ ಡೆಡ್ ಲೈನ್ ನೀಡಿದೆ.
ಸದರಿ ಜಮೀನಿನ ಜಂಟಿ ಸರ್ವೆ ವಿಚಾರದಲ್ಲಿ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಡಿಸೆಂಬರ್ 7, 19 ಮತ್ತು 26ರಂದು ಹೊರಡಿಸಿದ್ದ ಆದೇಶಗಳ ಸಿಂಧುತ್ವ ಪ್ರಶ್ನಿಸಿ ವಕೀಲ ಕುಂದಿಟವಾರಿಪಲ್ಲಿ ಶಿವಾರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು ಜನವರಿ 15ರಂದು ಜಮೀನಿನ ಜಂಟಿ ಸರ್ವೆ ನಡೆಸಬೇಕು ಮತ್ತು ಜನವರಿ 30ರೊಳಗೆ ಅದನ್ನು ಹೈಕೋರ್ಟ್ಗೆ ಸಲ್ಲಿಸಬೇಕು ಎಂದು ಕಟ್ಟಪ್ಪಣೆ ಮಾಡಿ ವಿಚಾರಣೆಯ ಮುಂದಿನ ದಿನಾಂಕವನ್ನು ಫೆಬ್ರವರಿ 6ಕ್ಕೆ ಮುಂದೂಡಿದೆ.
ನಮ್ಮ ಭೂಮಿ ಒತ್ತುವರಿ ಆಗಿದೆ ಎಂದು ಅರಣ್ಯ ಇಲಾಖೆ 2010ರಲ್ಲಿ ನೀಡಿದ್ದ ನೋಟೀಸಿನ ವಿರುದ್ಧ ರಮೇಶ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ನ್ಯಾಯಾಲಯವು 2014 ರಲ್ಲಿ ಆದೇಶ ಹೊರಡಿಸಿ ರಮೇಶ್ ಕುಮಾರ್ ಉಪಸ್ಥಿತಿಯಲ್ಲೇ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರು ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು.
ಇದನ್ನೂ ಓದಿ: ಪ್ರಶಸ್ತಿ ಡಬಲ್ ಮೇಲೆ ಹಂಪಿ ಕಣ್ಣು
ಈ ಪ್ರಕಾರ ಡಿಎಫ್ಒ ಏಡುಕೊಂಡಲು ನವೆಂಬರ್ 7ರಂದು ಜಂಟಿ ಸರ್ವೆಗೆ ಮೊದಲ ದಿನಾಂಕ ಗೊತ್ತು ಮಾಡಿದ್ದರು. ಅದರ ಹಿಂದಿನ ದಿನ ಭೂದಾಖಲೆಗಳ ಉಪನಿರ್ದೇಶಕರುಶಾಂತಿಕ ಸಮಸ್ಯೆ ಮುಂದೊಡ್ಡಿ ಜಂಟಿ ಸರ್ವೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದಾದ ನಂತರ ಡಿ.20ರಂದು ಮತ್ತೊಮ್ಮೆ ಜಂಟಿ ಸರ್ವೆಗೆ ಆಡಿಎಫ್ಒ ದಿನಾಂಕ ನಿಗಧಿಪಡಿಸಿದ್ದರು. ಆದರೆ ಡಿ.17ರಂದು ಆದೇಶ ಹೊರಡಿಸಿದ ಕಂದಾಯ ಇಲಾಖೆ ಬೆಂಗಳೂರು -ವಿಭಾಗದ ಪ್ರಾದೇಶಿಕ ಆಯುಕ್ತರು ಈ ರೀತಿಯ ಸರ್ವೆಗೆ ನೋಟೀಸು ಹೊರಡಿಸುವ ಅಧಿಕಾರ ಡಿಎಫ್ಗೆ ಇಲ್ಲ. ಹಾಗಾಗಿ ಕಂದಾಯ ಇಲಾಖೆಯ ಯಾವುದೇ ಸಿಬ್ಬಂದಿ ಭಾಗವಹಿಸಬಾರದು ಎಂದು ಸೂಚಿಸಿದ್ದರು.
ಅಲ್ಲದೇ ಜಂಟಿ ಸರ್ವೆ ನಡೆಸಲು ಕೋಲಾರ ಉಪವಿಭಾಗಾಧಿಕಾರಿ. ಭೂದಾಖಲೆಗಳ ಉಪನಿರ್ದೇಶಕರ ಹೊಸ ಸಮಿತಿ ರಚಿಸಿ ಈ ಮೂವರು ನಡೆಸಿದ ಜಂಟಿ ಸರ್ವೆ ವರದಿಯನ್ನು ಜಿಲ್ಲಾಧಿಕಾರಿ “ಹಾಗೂ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಪರಿಶೀಲಿಸಿ ಸಲ್ಲಿಸುವಂತೆ ಸೂಚಿಸಿದ್ದರು.
ಕಳೆದ ವಾರ ಮತ್ತೊಂದು ಆದೇಶ ಹೊರಡಿಸಿ ಜಂಟಿ ಸರ್ವೆಯನ್ನು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ, -ಜಿಲ್ಲಾಧಿಕಾರಿ ಹಾಗೂ ಭೂದಾಖಲೆಗಳ ಉಪನಿರ್ದೇಶಕರೇ ಜನವರಿ 15ರಂದು ನಡೆಸುವಂತೆ ಪ್ರಾದೇಶಿಕ ಆಯುಕ್ತರು ತಿಳಿಸಿದ್ದರು.
ಅಆರ್ ಸಿಎಸ್ ಹೊರಡಿಸಿರುವ ಆದೇಶಗಳು ಹೈಕೋರ್ಟ್ ರಮೇಶ್ ಕುಮಾರ್ ಸಹ ಪದೇಪದೇ ಜಂಟಿ ಸರ್ವೆಗೆ ಬಾರದೇ ದೂರ ಉಳಿಯುತ್ತಿದ್ದಾರೆ ಎಂದು ವಕೀಲ ಕೆ.ವಿ.ಶಿವಾರೆಡ್ಡಿ ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು.
ಮಂಗಳವಾರ ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಎರಡೂ ಕಡೆಯ ವಾದ ಆಲಿಸಿದರು. ಹೈಕೋರ್ಟ್ ನಿರ್ದೇಶನ ನೀಡಿ 14 ವರ್ಷ ಇರುವುದು ಸೋಜಿಗದ ಸಂಗತಿ ಅಲ್ಲದೇ ಇದೇ ಪ್ರಕರಣದಲ್ಲಿ ತಮಗೆ ಅಧಿಕಾರ ಇಲ್ಲದಿದ್ದರೂ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿರುವುದು ಅಸಿಂಧು ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಆಯುಕ್ತರ ಆದೇಶಗಳನ್ನೆಲ್ಲ ರದ್ದು ಮಾಡಿದ ನ್ಯಾಯಾಲಯವು ಜನವರಿ 15ರಂದು ಜಂಟಿ ಸರ್ವೆಯನ್ನು 2014ರಲ್ಲಿ ಹೈಕೋರ್ಟ್ ನೀಡಿದ್ದೆ ನಿರ್ದೇಶನದಂತೆಯೇ? ನಡೆಸಬೇಕು. ಅಂದು ಮೂಲ ಅರ್ಜಿದಾರ ರಮೇಶ್ ಕುಮಾರ್ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಜನವರಿ 15ರಂದು ನಡೆಯುವ ಜಂಟಿ ಸರ್ವೆಯಲ್ಲಿ ರಮೇಶ್ ಕುಮಾರ್ ಅಥವಾ ಅವರ ಪ್ರತಿನಿಧಿ ಹಾಜರಾಗಬೇಕು.ಅವರು ಹಾಜರಾಗದಿದ್ದರೂ ಕಡ್ಡಾಯವಾಗಿ ಸರ್ವೆಯನ್ನು ಅರಣ್ಯ ಇಲಾಖೆ ಡಿಎಫ್ಒ, ಜಿಲ್ಲಾಧಿಕಾರಿ ಹಾಗೂ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರು ನಡೆಸಿ ಜನವರಿ 30ರೊಳಗೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯವು ತಿಳಿಸಿತು.
ಜಂಟಿ ಸರ್ವೆ ವೇಳೆ ರಮೇಶ್ ಕುಮಾರ್ ಅಥವಾ ಅವರ ಪ್ರತಿನಿಧಿ ಹಾಜರಾಗದೇ ಇದ್ದಲ್ಲಿ ಅಧಿಕಾರಿಗಳು ನೀಡುವ ಭವಿಷ್ಯದಲ್ಲಿ ಅವಕಾಶ ಇರುವುದಿಲ್ಲ ಎಂಬ ಕಟ್ಟಪ್ಪಣೆಯನ್ನೂ ನ್ಯಾಯಾಧೀಶರು ನೀಡಿದ್ದಾರೆ.
ಹಾಗಾಗಿ ಜಂಟಿ ಸರ್ವೆ ಕಾರ್ಯ ಜನವರಿ 15ರಂದು 2014ರ ಹೈಕೋರ್ಟಿನ ಆದೇಶದ ಪ್ರಕಾರವೇ ನಡೆಯುವುದು ನಿಶ್ಚಿತ ಎಂಬಂತಾಗಿದೆ.