ರಾಜ್ಯದ 10 ನದಿಗಳು ಕಲುಷಿತ.

ರಾಜ್ಯದ 10 ನದಿಗಳು ಕಲುಷಿತ.

ರಾಜ್ಯದ 10 ಪ್ರಮುಖ ನದಿಗಳಲ್ಲಿ 10 ಕಲುಷಿತ ಪ್ರದೇಶಗಳನ್ನು ಗುರುತಿಸಿದ್ದು, ಈ ನದಿಗಳಿಗೆ ಸಮೀಪದ ನಗರ, ಪಟ್ಟಣ ಪ್ರದೇಶಗಳ ಒಳಚರಂಡಿ ನೀರು ಮತ್ತು ಕೈಗಾರಿಕಾ ತ್ಯಾಜ್ಯ ಸೇರುತ್ತಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ( ಎನ್‌ಜಿಟಿ) ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು( ಕೆ ಎಸ್ ಪಿ ಸಿ ಬಿ) ಮಾಹಿತಿ ನೀಡಿದೆ. ಕಲುಷಿತ ನದಿಗಳ ದಡದಲ್ಲಿರುವ ಎಲ್ಲಾ ನಗರಗಳಿಗೆ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ( ಎನ್ ಟಿ ಪಿ) ಒದಗಿಸಲು ಕ್ರಿಯಾಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಎನ್‌ಜಿಟಿಗೆ ಕೆ ಎಸ್ ಪಿ ಸಿ ಬಿ ನೀಡಿದೆ ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಒಳಚರಂಡಿ ನೀರು ಸೇರುವುದರಿಂದ ರಾಜ್ಯದ ನದಿಗಳ ನೀರು ಮಲಿನವಾಗುತ್ತಿರುವ ಕುರಿತ ಪ್ರಕರಣದ ವಿಚಾರಣೆಯನ್ನು ಎನ್‌ಜಿಟಿ ನಡೆಸುತ್ತಿದೆ.

ನದಿಗಳು ಕಲುಷಿತಗೊಳ್ಳುತ್ತಿರುವ ವ್ಯಾಪ್ತಿಯಲ್ಲಿ ಪಾಲಿಕೆಗಳು, ನಗರಸಭೆಗಳು ಕೊಳಚೆ ನೀರು ಸಂಸ್ಕರಣ ಘಟಕಗಳನ್ನು ನಿರ್ಮಿಸುತ್ತಿವೆ ಮತ್ತು 2024ರ ಡಿಸೆಂಬರ್ ಒಳಗೆ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಿವೆ ಎಂದು ಕೆ ಎಸ್ ಪಿ ಸಿ ಬಿ ತಿಳಿಸಿದೆ. ನದಿ ನೀರಿನ ಗುಣಮಟ್ಟವನ್ನು ಪ್ರತಿ ತಿಂಗಳು ವಿಶ್ಲೇಷಿಸಲಾಗುತ್ತಿದೆ, ನೈಜ ಸಮಯದ ಆಧಾರದ ಮೇಲೆ ನೀರಿನ ಗುಣಮಟ್ಟದ ನಿರಂತರ ಮೇಲ್ವಿಚಾರಣೆಗೆ 68 ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೆ ಎಸ್ ಪಿ ಸಿ ಬಿ ಪಾತ್ರದಲ್ಲಿ ಈ ಹಿಂದೆ 2022ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ( ಸಿಪಿಸಿಬಿ) ಜಲ ಶಕ್ತಿ ಸಚಿವಾಲಯಕ್ಕೆ ಕರ್ನಾಟಕದ 17 ನದಿಗಳು ಕಲುಷಿತಗೊಂಡಿದೆ ಎಂದು ವರದಿ ಸಲ್ಲಿಸಿತು.

ಇದನ್ನೂ ಓದಿ: ಹೊಸಬರಿಗೆ ಹೆಚ್ಚಿದ ಅವಕಾಶ ಟೀಮ್ ಲೀಸ್.

ಆದರೆ ನದಿಗಳು ಕಲುಷಿತಗೊಳ್ಳುವುದನ್ನು ತಡೆಯಲು ಕೈಗೊಂಡ ಕ್ರಮಗಳು ಮತ್ತು ಅದರ ಫಲಿತಾಂಶಗಳ ಬಗ್ಗೆ ವಿವರಿಸಿ, ಏಳು ನದಿಗಳನ್ನು ಕಲುಷಿತ ನದಿಗಳ ಪಟ್ಟಿಯಿಂದ ಕೈ ಬಿಡಲು ಕೆ ಎಸ್ ಪಿ ಸಿ ಬಿ ಸಿ ಪಿ ಸಿ ಪಿ ಗೆ ಮನವಿ ‘ಶರಾವತಿ, ಗಂಗಾವಳಿ, ಅಘನಾಶಿನಿ, ಕೃಷ್ಣ, ಕಾಗಿನ, ನೇತ್ರಾವತಿ ನದಿಗಳಲ್ಲಿ ಕರಗಿದ ಆಮ್ಲಜನಕದ(ಬಿ ಒ ಡಿ) ಪ್ರಮಾಣ 3 ಮಿಲಿಗ್ರಾಂ ಲೀಟರ್ ದಾಟಿಲ್ಲ. ಹೀಗಾಗಿ, ಈ ನದಿಗಳನ್ನು ಕಲುಷಿತ ನದಿಗಳ ಪಟ್ಟಿಯಿಂದ ಕೈ ಬಿಡಬೇಕು ಎಂದು ಪಾತ್ರದಲ್ಲಿ ವಿವರಿಸಿದೆ. ನದಿಗಳು ಕಲುಷಿತಗೊಳ್ಳುವ ಪ್ರದೇಶ. ರಾಜ್ಯದ ಯಾವ ನದಿಗಳು ಯಾವ ಪ್ರದೇಶಾದಾದ್ಯಂತ ಕಲುಷಿತಗೊಳ್ಳುತ್ತಿವೆ ಎಂಬುದನ್ನು ಕೆ ಎಸ್ ಪಿ ಸಿ ಬಿ ವಿವರವಾಗಿ ಪಟ್ಟಿ ಮಾಡಿದೆ. ಇದರ ಪ್ರಕಾರ ಬೆಂಗಳೂರು ಭಾಗದಲ್ಲಿ ಹರಿಯುವ ಆರ್ಕವತಿ ನದಿ ಹೆಸರ್ಗಟ್ಟದಿಂದ ಕನಕಪುರ ವ್ಯಾಕ್ತಿಯಲ್ಲಿ,ಭಧ್ರಾ ವತಿಯಿಂದ ಹೂಳ್ಳೆಹೊನ್ನೂರು, ಭೀಮ ಘನ್ನಾಪುರದಿಂದ ಯಾದಗಿರಿ, ಕಾವೇರಿ ಶ್ರೀರಂಗಪಟ್ಟಣ, ದಕ್ಷಿಣ ಪಿನಾಕಿನಿ ಮೂಗಳೂರು, ಕಬಿನಿ ನಂಜನಗೂಡು, ಲಕ್ಷ್ಮಣ ತೀರ್ಥ ಹುಣಸೂರು, ಶಿಂಷಾ ಯಡ್ಡ, ತುಂಗಾ ಶಿವಮೊಗ್ಗ ನಗರ ಮತ್ತು ತುಂಗಭದ್ರ ಕೂಡ್ಲಿಯಿಂದ ಮೈಲಾರ ವ್ಯಾಕ್ತಿಯಲ್ಲಿ ಕಲುಷಿತಗೊಳ್ಳುತ್ತಿವೆ.

Leave a Comment