ವಾರಾಂತ್ಯದ ರಜೆ ಕಲ್ಪನೆ ಬದಲಾದರೆ ಒಳಿತು.
ಸಾರ್ಟಪ್ ಗಳಲ್ಲಿ ಉದ್ಯೋಗದಾತರಿಗೆ, ಉದ್ಯೋಗಿಗಳಿಗೆ ವಿಶ್ರಾಂತಿ ಎಂಬುವುದು ಇರುವುದಿಲ್ಲ .ಸಂಸ್ಥೆಗಳನ್ನು ಹೊಸದಾಗಿ ಆರಂಭಿಸುವುದರಿಂದ ಸಂಸ್ಥೆಯ ಏಳಿಗೆಗಾಗಿ ಪ್ರತಿಯೊಬ್ಬರು ಶ್ರಮಿಸಬೇಕಾದ ಅಗತ್ಯವಿದೆ ಎಂದು ಓಲಾ ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ ವಾಲ್ ಹೇಳಿದ್ದಾರೆ. ಇತ್ತೀಚೆಗೆ ಯುವ ಜನತೆ ವಾರದಲ್ಲಿ 70 ಗಂಟೆ ದುಡಿಯಬೇಕು ಎಂದು ಇನ್ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಹೇಳಿಕೆಗೆ ದನಿಗೂಡಿಸಿದ ಭವಿಷಶ್ ಅಗರ್ ವಾಲ್ ಅವರು ಸ್ಟಾರ್ಟಪ್ ಗಳ ಬೆಳವಣಿಗೆಯಲ್ಲಿ ಉದ್ಯೋಗಿಗಳ ಪಾತ್ರವನ್ನು ಮತ್ತೊಮ್ಮೆ ವಿವರಿಸಿದ್ದಾರೆ. ಅಲ್ಲದೆ, ವಾರವಿಡೀ ದುಡಿಯುವ ಉದ್ಯೋಗಗಳಿಗೆ ವಿಶ್ರಾಂತಿ ಪಡೆಯಲು ಶನಿವಾರ ಮತ್ತು ಭಾನುವಾರಗಳನ್ನು ಮೀಸಲಿಡಲಾಗಿದೆ. ಶನಿವಾರ ಮತ್ತು ಭಾನುವಾರದ ರಜಾ ಕಲ್ಪನೆಯು ಕೈಗಾರಿಕಾ ಕ್ರಾಂತಿಯಿಂದ ಬಂದಿರುವ ಬಳುವಳಿಯಾಗಿದ್ದು, ಈ ಸಂಪ್ರದಾಯಿಕ ರಜಾ ಪದವಿಯನ್ನು ಬದಲಿಸಬೇಕಿ.
ವೃತ್ತಿಜೀವನ ಮತ್ತು ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಹೊಸ ರಜೆ ವಿಧಾನ ಅಳವಡಿಕೆ ಅಗತ್ಯ ಎಂದು ಅಗರ್ ವಾಲ್ ಹೇಳಿದ್ದಾರೆ. ಬದಲಾಗುತ್ತಿರುವ ಜಮಾನದಲ್ಲಿ ಶನಿವಾರ ಮತ್ತು ಭಾನುವಾರ ರಜಾ ದಿನಗಳಿಗೆ ಯಾವುದೇ ಮೌಲ್ಯವಿಲ್ಲ. ಕೆಲವು ದಶಕಗಳ ಮುಂದೆ ನೋಡಿದರೆ ಐದು ದಿನಗಳ ಕೆಲಸ ಮತ್ತು ಎರಡು ದಿನ ರಜೆ ಇರುತ್ತದೆ ಎಂದು ನನಗೆ ಅನಿಸುವುದಿಲ್ಲ. ಹಾಗಾಗಿ, ವಾರಾಂತ್ಯದ ಪರಿಕಲ್ಪನೆಯನ್ನು ನಿಟ್ಟಿನಲ್ಲಿ ಕೆಲ ಕಂಪನಿಗಳು ಕ್ರಮವಹಿಸಿವೆ. ಆದರೆ, ಈ ಪದ್ಧತಿ ಸಂಪೂರ್ಣ ಬದಲಾಗುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಸಾರ್ಟಪ್ ಗಳಲ್ಲಿ ದುಡಿಯುವ ಸಿಬ್ಬಂದಿಗೆ ವೃತ್ತಿ ಮತ್ತು ಕುಟುಂಬದ ಸಮತೋಲನ ಕಾಯ್ದುಕೊಳ್ಳುವುದು ಕಷ್ಟ. ವೃತ್ತಿಪರ ಅಥವಾ ವೈಯಕ್ತಿಕ ಯಾವುದೇ ಆಗಿರಲಿ, ಎರಡರಲ್ಲೂ ಉತ್ಕೃಷ್ಟತೆ ಕಾಪಿಟ್ಟುಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿ.
ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ ಕೌಶಲ ಕಾರ್ಯಕ್ರಮ.
ಹಾಗಾಗಿ, ರಜಾ ದಿನಗಳಲ್ಲಿ ಬದಲಾವಣೆ ತರುವ ಮೂಲಕ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಅನುವು ಮಾಡಿಕೊಳ್ಳಬೇಕು ಎನ್ನುವುದು ಭವಿಷ್ ಅಭಿಮತ. ಕೆಲ ದಿನಗಳ ಹಿಂದಷ್ಟೇ ಅಗರ್ ವಾಲ್ ಅವರ ಜತೆ ಕೆಲಸ ನಿರ್ವಹಿಸುವುದು ಕಷ್ಟಕರ ಎಂದು ಆರೋಪಿಸಿ ಕೆಲ ಸಿಬ್ಬಂದಿ ಉದ್ಯೋಗ ತೊರೆದಿದ್ದರೂ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು,” ನನಗೆ ಒಂದು ನಿರ್ದಿಷ್ಟ ಉದ್ದೇಶ ಮತ್ತು ಅದರ ಈಡೇರಿಕೆಗಾಗಿ ಶ್ರಮಿಸುವ ಉತ್ಸಾಹವಿದೆ. ಕೆಲವೊಮ್ಮೆ ವ್ಯವಹಾರದಲ್ಲಿ ಜತೆಯಾಗುವವರು ನನಗೆ ಹೊಂದಾಣಿಕೆಯಾಗುವುದಿಲ್ಲ. ಅವರು ಹೊಂದಾಣಿಕೆಯಿಂದ ಕೆಲಸ ಮಾಡಲು ಉತ್ಸುಕತೆ ಕೂಡ ತೋರುವುದಿಲ್ಲ. ಹೀಗಾಗಿ, ಅಲ್ಪವಧಿಯಲ್ಲಿಯೇ ಸಿಬ್ಬಂದಿಯಾಗಲಿ, ವ್ಯವಹಾರದಲ್ಲಿ ಜತೆಯಾಗುವವರಾಗಲಿ ನಮ್ಮನ್ನು ತೊರೆದು ಹೋಗುತ್ತಾರೆ,”ಎಂದು ವಿವರಿಸಿದ್ದಾರೆ.
ಉತ್ತಮ ಭವಿಷ್ಯಕ್ಕೆ ಭವಿಷ್ ಸೂತ್ರ. ನಾನು ಬೆಳಗ್ಗೆ ಏಳು ಗಂಟೆಗೆ ಕಚೇರಿಗೆ ತಲುಪಿ ಮಧ್ಯರಾತ್ರಿ ಹಿಂದಿರುಗುತ್ತೇನೆ. ಉದ್ಮಿಯಾಗಿ ಅತ್ಯುತ್ತಮ ಕೆಲಸ ನಾನು ಮಾಡುತ್ತೇನೆ. ಸಮಯ ನಿರ್ವಹಣೆಯೂ ಸ್ಟಾರ್ಟಪ್ ಬೆಳವಣಿಗೆಗೆ ಬೇಕಾದ ಮುಖ್ಯವಾದ ಮೂಲಭೂತ ಅಂಶವಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಯಾವುದೇ ಸಮಸ್ಯೆ ಕಟ್ಟುವಾಗ ಶಾರ್ಟ್ ಕಟ್ ಗಳನ್ನು ಬಳಸಬೇಡಿ, ನಿಮ್ಮ ಪ್ರಯತ್ನ ಉತ್ತಮವಾಗಿ ಮತ್ತು ಪ್ರಾಮಾಣಿಕವಾಗಿರಲಿ. ನಿಮ್ಮ ಕನಸುಗಳನ್ನು ಅಥವಾ ಮಹತ್ವ ಕ್ರಾಂಕ್ಷೆಗಳನ್ನು ಯಾರಿಗೂ ಮಾರಾಟ ಮಾಡಬೇಡಿ. ನಾವು ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ನಮ್ಮ ದೃಷ್ಟಿಕೋನವನ್ನು ಅವಲಂಬಿಸಿದೆ. ಕಷ್ಟದ ದಿನಗಳೆಲ್ಲ ನನಗೆ ಭರವಸೆಯ ದಿನಗಳಾಗಿ ಕಾಣುತ್ತಿದ್ದವು.