ವೆಬ್ಕಾಸ್ಟಿಂಗ್ ಕಣ್ಣಾವಲಿನಲ್ಲಿ ನಮ್ಮ ನೈತಿಕತೆಯ ಪರೀಕ್ಷೆ
ಪರೀಕ್ಷಾ ಕಾಲ ಆರಂಭವಾಗಿದೆ. ಸಾಮಾನ್ಯವಾಗಿ ಪರೀಕ್ಷೆ ಎಂದ ಕೂಡಲೇ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೇನೋ ಭಯವಿರುತ್ತಿತ್ತು. ಆದರೆ, ಕಳೆದ ಬಾರಿ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಯಲ್ಲಿ ವೆಬ್ ಕಾಸ್ಟಿಂಗ್ ಎಂಬ ವ್ಯವಸ್ಥೆ ಪ್ರಯೋಗವಾದ ನಂತರ ಕೊಠಡಿ ಮೇಲ್ವಿಚಾರಣೆ ಕಾರ್ಯನಿರ್ವ ಹಿಸುತ್ತಿರುವ ಶಿಕ್ಷಕರಿಗೂ ಒತ್ತಡ ಹೆಚ್ಚಾಗಿತ್ತು. ಇದಾದ ಬಳಿಕ ಪರೀಕ್ಷೆಯ ಫಲಿತಾಂಶ ಕೂಡ ಕಡಿಮೆಯಾಗಿ ಕೃಪಾಂಕವನ್ನು ನೀಡಿ ವಿದ್ಯಾರ್ಥಿಗಳನ್ನು ಪಾಸು ಮಾಡಿದ್ದು ಬಹಳಷ್ಟು ಚರ್ಚಿತವಾಗಿತ್ತು. ಹೀಗೆ ವೆಬ್ ಕಾಸ್ಟಿಂಗ್ ಬಗ್ಗೆ ಹಲವು ಪ್ರಶ್ನೆಗಳೆದ್ದು, ಚರ್ಚೆಗಳು ನಡೆದ ಬೆನ್ನಲ್ಲೇ ಮತ್ತೊಂದು ಶೈಕ್ಷಣಿಕ ವರ್ಷ ಮುಕ್ತಾಯವಾಗಿ ಮಾರ್ಚ್ 1ರಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಜಾರಿಗೊಳಿಸಿದ್ದ ವೆಬ್ ಕಾಸ್ಟಿಂಗ್ ಕಣ್ಣಾವಲನ್ನು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಗೂ ವಿಸ್ತರಿಸಲಾಗಿದೆ. ರಾಜ್ಯದ 1171 ಕೇಂದ್ರಗಳ ಪ್ರತಿ ಕೊಠಡಿಯಲ್ಲಿಯೂ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಸದ್ಯದಲ್ಲೇ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೂ ವೆಬ್ ಕಾಸ್ಟಿಂಗ್ ಕಣ್ಣಾವಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗಸೂಚಿಯಂತೆ ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳ ಚಲನವಲನ ಹಾಗೂ ಅವರು ನಕಲು ಮಾಡುತ್ತಿದ್ದಾರೆಯೇ? ಅವರಿಗೆ ನಕಲು ಮಾಡಲು ಯಾರಾದರೂ ನೆರವಾಗುತ್ತಿದ್ದಾರೆಯೇ? ಎಂಬುದನ್ನು ಕ್ಯಾಮೆರಾಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಆದರೆ, ಎಲ್ಲಾ ಹಂತದ ಅಧಿ ಕಾರಿಗಳು ಕೊಠಡಿ ಮೇಲ್ವಿಚಾರಕರು ಈ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿದರಷ್ಟೇ ಅದು ಯಶಸ್ವಿಯಾಗಲು ಸಾಧ್ಯ ಎಂಬುದನ್ನು ಇಲಾಖೆ ಮನಗಾಣಬೇಕಿದೆ. ಪರೀಕ್ಷೆಯ ಗೌಪ್ಯತೆ, ಪರೀಕ್ಷೆಯ ಪಾವಿತ್ರ್ಯತೆ ಮತ್ತು ಸಮಗ್ರತೆಗೆ ಧಕ್ಕೆಯಾಗದಂತೆ ನ್ಯಾಯಸಮ್ಮತವಾಗಿ ಪರೀಕ್ಷಾ ಕಾರ್ಯವನ್ನು ಯಶಸ್ವಿಗೊಳಿಸಬೇಕಿದೆ. ಎಲ್ಲಕ್ಕೂ ಮಿಗಿಲಾಗಿ ಪರೀಕ್ಷಾ ಭಯವನ್ನು ಎದುರಿಸುವ ವಿದ್ಯಾರ್ಥಿ ಸಮೂಹಕ್ಕೆ ದೈಹಿಕ, ಭಾವನಾತ್ಮಕ ಒತ್ತಡದ ನಡುವೆ ಈ ಹೊಸ ಪ್ರಯೋಗದಿಂದ ವಿದ್ಯಾರ್ಥಿಗಳ ಆತಂಕ ಮತ್ತಷ್ಟು ಹೆಚ್ಚದಂತೆ ನೋಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ಮೊದಲೇ ವಿದ್ಯಾರ್ಥಿಗಳಿಗೆ ಈ ವೆಬ್ ಕಾಸ್ಟಿಂಗ್ ಬಗ್ಗೆ ಮಾಹಿತಿ ನೀಡಿ ಎಂದು ಕೆಎಸ್ಇಬಿ ಏನೋ ಸೂಚಿಸಿತ್ತಾದರೂ ಅದೆಷ್ಟರ ಮಟ್ಟಿಗೆ ಶಾಲಾ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿವೆ ಎಂಬುದು ಪ್ರಶ್ನಾರ್ಹ ಸಂಗತಿ.
ಇದನ್ನೂ ಓದಿ:ಭೀಮಾ ತೀರ ಚಿಂತಕರ ಬೀಡು
ಕೋವಿಡ್ ಬಳಿಕ ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಬಿಕ್ಕಟ್ಟುಗಳು ಎದುರಾದವು . ಅದರ ಪರಿಣಾಮವಾಗಿ ಮುಂದೆ ಮುಂದೆ ಸಾಗಬೇಕಿದ್ದ ಶೈಕ್ಷಣಿಕ ಕ್ಷೇತ್ರ ಹಿಂದೆಹಿಂದೆ ಸರಿಯುತ್ತಿರುವುದಕ್ಕೆ ಅನೇಕ ನಿದರ್ಶನಗಳಿವೆ . ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷೆಗಳ ಅಂಕಗಳು ಮತ್ತು ಅದರ ಫಲಿತಗಳು ಮುಂದಿನ ಭವಿಫ್ಯವನ್ನು ನಿರ್ದರಿಸುತ್ತವೆ ಎಂಬುದು ನಿಜ . ಆದರೆ,ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆಯಲ್ಲಿ ನಂಬಿಕೆ ಇದ್ದ ನಮ್ಮ ಶಿಕ್ಷಣ ವ್ಯವಸ್ಥೆ ವೆಬ್ ಕಾಸ್ಟಿಂಗ್ ಅಳವಡಿಕೆಯಿಂದ ಒಮ್ಮೆಲೇ ಬುಡಮೇಲಾದಂತಾಗಲಿಲ್ಲವೆ? ಶಿಕ್ಷಿತರನ್ನಾಗಿಸುವುದು ಎಂದರೆ ಪಾರದರ್ಶಕತೆ, ಸತ್ಯ, ಪ್ರಾಮಾಣಿಕತೆ ಹಾದಿಯಲ್ಲಿ ಮುಕ್ತ ಸಮೂಹನವನ್ನು ಉತ್ತೇಜಿಸುವುದು. ಆರೋಗ್ಯಕರ ಸ್ಪರ್ಧೆಯನ್ನು ಪೋಷಿಸುವುದು, ಒತ್ತಡ ಋ ಮುಕ್ತ ವಾತಾವರಣ ನಿರ್ಮಿಸುವುದೇ ಆಗಬೇಕಲ್ಲವೇ? ಆ ನಿಟ್ಟಿನಲ್ಲಿ ವೆಬ್ ಕಾಸ್ಟಿಂಗ್ನ ಅಳವಡಿಕೆ ನಮ್ಮ ಶಿಕ್ಷಣ ವ್ಯವಸ್ಥೆಯ ಸೋಲಿಗೆ ಸಾಕ್ಷಿಯಾಗಿದೆ. ಆತ್ಮವಿಶ್ವಾಸ, ದೃಢತೆ, ಪ್ರಾಮಾಣಿಕತೆಯೇ ಇಲ್ಲದ ವಿದ್ಯಾರ್ಥಿಗಳು ಒಂದೆಡೆಯಾದರೆ, ಉತ್ತಮ ವಿದ್ಯಾರ್ಥಿಗಳನ್ನು ನಿರ್ಮಿಸಿ ಸದೃಢ ಸಮಾಜ ಕಟ್ಟಲು ಸಾಧ್ಯವಾಗದ ಶಿಕ್ಷಕ ಸಮುದಾಯ ಮತ್ತೊಂದೆಡೆ. ಇವರನ್ನು ನಿಯಂತ್ರಿಸುವ ವ್ಯವಸ್ಥೆಯಂತೂ ಜನರ ನಂಬಿಕೆಯನ್ನೇ ಕಳೆದು ಕೊಂಡಿದೆ. ವಿಪರಾಯಸವೆಂಬಂತೆ ಕರ್ನಾಟಕದಲ್ಲಂತೂ ಯಾವ ಪರೀಕ್ಷೆಗಳು ಘನತೆಯನ್ನು ಉಳಿಸಿಕೊಂಡಿಲ್ಲ. ಏತನ್ಮಧ್ಯೆ, ಪಿಯುಸಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ನಾಲ್ಕು ಈ ಗೋಡೆಗಳ ಮಧ್ಯೆ ಕ್ಯಾಮೆರಾ ಕಣ್ಣಾವಲಿನಲ್ಲಿ ವರ್ಷಕ್ಕೆ ಮೂರು- ಮೂರು ಪರೀಕ್ಷೆಗಳನ್ನು ಬರೆಸಿ, ಫಲಿತಾಂಶ ನೀಡಿ ಸಮಾಜಕ್ಕೆ ಉತ್ತಮ ನಾಗರಿಕ ರನ್ನಾಗಿಸಲು ಸಾಧ್ಯವೇ? ಕಲಿತದ್ದು ಅಂತರಂಗಕ್ಕಿಳಿದು ಬದುಕನ್ನು ಕಟ್ಟಿಕೊಳ್ಳಲು ದಾರಿಯಾಗಬೇಕಲ್ಲವೇ? ಯಾರು ನೋಡಲಿ ನೋಡದೇ ಇರಲಿ, ಕ್ಯಾಮೆರಾ ಇರಲಿ ಬಿಡಲಿ ವಿದ್ಯಾರ್ಥಗಳು ಒತ್ತಡವಿಲ್ಲದೆ ಪ್ರಾಮಾಣಿ ಕತೆಯಿಂದ ನೈತಿಕವಾಗಿ ಪರೀಕ್ಷೆ ಬರೆದರೆ ಅದು ಶಿಕ್ಷಣದ ನೈಜ ಧೈಯವಾಗಬಲ್ಲದು. ಕಲಿಯುವುದು ಮತ್ತು ಕಲಿಸುವುದು ಪ್ರೀತಿಯ ಕಾಯಕವಾದರೆ, ಆತ್ಮಸಾಕ್ಷಿಗೆ ಧಕ್ಕೆಯಾಗದಂತೆ ನಡೆದುಕೊಂಡರೆ ಸಾಕಲ್ಲವೇ? ಮುಂದಿನ ಪೀಳಿಗೆಯನ್ನು ಬದಲಾಯಿಸಲು ಹೊಸ ವ್ಯವಸ್ಥೆಯನ್ನು ಸೃಷ್ಟಿಸಲು..
MumH AaQz kqKVhOe