ಶಿವಗಂಗೆಯಲ್ಲಿ ಚುಂಚನಗಿರಿ ಶಾಖಾ ಮಠ

ಶಿವಗಂಗೆಯಲ್ಲಿ ಚುಂಚನಗಿರಿ ಶಾಖಾ ಮಠ

ಒಂದು ವರ್ಷದೊಳಗೆ ಮಠ ಸ್ಥಾಪನೆ! ದಿವ್ಯದರ್ಶನ ಯಾತ್ರೆ ಪ್ರಯುಕ್ತ ಗಿರಿ ನಾಡಿಗೆ
ದಾಬಸ್ ಪೇಟೆ: ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಆದಿಚುಂಚನಗಿರಿ ಶಾಖಾ ಮಠವನ್ನು ಶೀಘ್ರದಲ್ಲೇ ಸ್ಥಾಪಿಸಲಿ ದ್ದೇವೆ. ಮುಂದಿನ ಒಂದು ವರ್ಷದಲ್ಲಿ ಭಕ್ತರ ಸಹಕಾರದಲ್ಲಿ ಇಲ್ಲಿ ಮಠ ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ಆದಿಚುಂಚನಗಿರಿ ಮಠದ ಡಾ.ಶ್ರೀ ನಿರ್ಮಲಾನಂದ ನಾಥ್ ಸ್ವಾಮೀಜಿ ಹೇಳಿದರು.ಸೋಂಪೂರಹುಬಳ್ಳಿಯ ಶಿವಗಂಗೆಗೆ ಶ್ರೀ ಆದಿಚುಂಚನಗಿರಿ ಸಾಂಸ್ಕೃತಿಕ ಮತ್ತು ಅಭ್ಯತ್ವಿಕ ಪ್ರತಿಷ್ಠಾನದ ದಿವ್ಯ ದರ್ಶನ ಯಾತ್ರೆ ಪ್ರಯುಕ್ತ ಹಮ್ಮಿಕೊಂಡಿರುವ ಗಿರಿ ನಾಡಿಗೆಯ ಮೈತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಆಧ್ಯಾತ್ಮಿಕ ಪ್ರದಯಾತ್ರೆ ಭಕ್ತರ ಜೊತೆ ಬೆಟ್ಟ ಹತ್ತಿ ಭಜನೆ ಮಾಡಬೇಕೆಂಬ ಬಯಕೆ ಇತ್ತು .ಆಧುನಿಕ ಕಾಲದಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಇಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಇತಿಹಾಸ ಮತ್ತು ನಮ್ಮ ಧಾರ್ಮಿಕ ಕ್ಷೇತ್ರಗಳ ವಿಶೇಷತೆ ತಿಳಿಸಲು ಈ ಯಾತ್ರೆ ಆಯೋಜಿಸಿದ್ದೇವು.ನಾಡಪ್ರಭು ಕೆಂಪೇಗೌಡರು, ಬಾಲ್ಯ ವ್ಯವಸ್ಥೆಯಲ್ಲಿ ಇಲ್ಲಿ ಅಧ್ಯಾಯನ ಮಾಡಿ ಭವಿಷ್ಯದ ಆಡಳಿತದ ದೃಷ್ಟಿಕೋನ ಹಾಗೂ ಸಮಾಜದ ಏಳಿಗೆಗೆ ಕೈಗೊಂಡ ಕಾರ್ಯಗಳಿಗೆ ಮುನ್ನುಡಿ ಶಿವಗಂಗೆ ಯಿಂದ ಪ್ರಾರಂಭವಾಯಿತು ಎಂದು ಹೇಳಿದರು.
ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ತುತ್ತ ತುದಿಯಲ್ಲಿ ಶ್ರೀ ಆದಿ ಚುಂಚನಗಿರಿ ಸ್ವಾಮೀಜಿಗಳ ಜೊತೆ ಹಲವಾರು ಭಕ್ತರು ಗಿರಿ ನಡಿಗೆ ನಡೆಸಿ ಭಜನೆ ಮಾಡುತ್ತಿರುವುದು .

ಇದನ್ನೂ ಓದಿ: ಒಂದು ಪರ್ಫೆಕ್ಟ್ ಥ್ರಿಲ್ಲರ್ ಬಂದ ಅಸಲಿ ಕಿಲ್ಲರ್!

ಬೆಟ್ಟದ ಮೇಲೆ ಭಜನೆ: ಶಿವಗಂಗೆಯ ಹಿಪ್ಪನವಲನದಿಂದ ಗಿರಿ ನಡಿಗೆ ಆರಂಭವಾಗಿ, ಬೆಟ್ಟದ ಹೆಬ್ಬಾಗಿಲಿನಿಂದ, ಸುಮಾರು 4000 ಅಡಿಗಳ ಎತ್ತರದ ಬೆಟ್ಟದ ತುತ್ತ ತುದಿಯವರೆಗೆ ಶ್ರೀಗಳ ಜೊತೆ ಹಲವಾರು ಮಠಾಧೀಶರು, ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಯ 1500ಕ್ಕೂ ಅಧಿಕ ವಿದ್ಯಾರ್ಥಿಗಳು, ನೆಲಮಂಗಲ ತಾಲೂಕಿನ ಸಮುದಾಯದ ಮುಖಂಡರು, ಭಕ್ತರು ಶಿವಗಂಗೆ ಬೆಟ್ಟವನ್ನು ಸಂಪೂರ್ಣವಾಗಿ ವೀಕ್ಷಿಸಿ, ಬೆಟ್ಟದ ಉರಿಯ ಕಂಬ -ತೀರ್ಥ ಕಂಬದ ಬಳಿ ಭಜನೆ ಕೈಗೊಂಡರು. ನಂತರ ಶ್ರೀಗಳು ಒಳಕಲ್ಲು ತೀರ್ಥ, ನಾಟ್ಯರಾಣಿ ಶಾಂತಲಾ ಐಕ್ಯವಾದ ಸ್ಥಳ, ಶ್ರೀ ಹೊನ್ನಾದೇವಿ ಸಮೇತ ಗಂಗಾಧರೇಶ್ವರ ಸ್ವಾಮಿ ದೇವಾಲಯದ, ದಾಸೋಹ ಭವನಾದಲಿ ಭಕ್ತರಿಗೆ ಪ್ರಸಾದ ವಿತರಿಸಿ, ನಾಡಪ್ರಭು ಶ್ರೀ ಕೆಂಪೇಗೌಡರ ಪುತ್ತಳಿ, ಹಜಾರ,ಇತರ ಶಿವಗಂಗೆಯಲ್ಲಿರುವ ಪುರಾಣ ಪ್ರಸಿದ್ಧ ಸಂಸ್ಥೆಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ. ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ರಾಮಣಾನಂದ ಸ್ವಾಮೀಜಿ ,ಮಠದ ಭಕ್ತಾದಿಗಳು ಉಪಸ್ಥಿತರಾಗಿದ್ದರು. ದಾವಸ್ ಪೇಟೆ ಪೊಲೀಸ್ ಠಾಣೆಯ ಪಿಐ ಬಿ .ರಾಜು ಹಾಗೂ ನೆಲಮಂಗಲ ಟೌನ್ ಠಾಣೆಯ ಪಿಐ ಶಶಿಧರ್ ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.

Leave a Comment