ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ
ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರೌಢಶಾಲಾ ಮಟ್ಟದಲ್ಲಿ ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ.ಇಂತಹದೊಂದು ಘಟನೆ ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದ ಪ್ರೌಢಶಾಲೆಯಲ್ಲಿ ಹಳೆ ಶೌಚಾಲಯ ಶಿತಲವಾಗಿದ್ದು ಹೊಸ ಶೌಚಾಲಯಕ್ಕೆ ಕಾಮಗಾರಿ ಪ್ರಾರಂಭವಾಗಿ ಎರಡು ವರ್ಷ ಆದರೂ ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಇದೀಗ ಶಾಲಾ ಪ್ರಾರಂಭವಾಗಿದೆ ಮಕ್ಕಳು ಶೌಚಾಲಯಕ್ಕೆ ಎಲ್ಲಿ ಹೋಗುವುದು ಎಂಬ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ:- ಗ್ರಾಮ ಸಭೆಗೂ ಹಾಗೂ ಸಾಮಾಜಿಕ ಪರಿಶೋಧನಾ ಗ್ರಾಮಸಭೆಗೂ ಇರುವ ವ್ಯತ್ಯಾಸ ಗೊತ್ತಿಲ್ಲ
ಈ ಸಮಸ್ಯೆಯ ಬಗ್ಗೆ ಶಾಲಾ ಮಕ್ಕಳಿಂದ ಪೋಷಕರ ಗಮನಕ್ಕೆ ಬಂದಿದ್ದು, ಗ್ರಾಮದ ಕೆಲ ಮುಖಂಡರು ಇಂದು ಶಾಲೆಗೆ ಭೇಟಿ ನೀಡಿ ಅಪೂರ್ಣಗೊಂಡಿರುವ ಶೌಚಾಲಯದ ಕಾಮಗಾರಿಯನ್ನು ವೀಕ್ಷಣೆಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಜೆ ಡಿ ಎಸ್ ಯುವ ಮುಖಂಡ ಎಂ.ಜಿ. ನವೀನ್ ಕುಮಾರ್ ರವರು ಪ್ರೌಢಶಾಲಾ ಮಕ್ಕಳಿಂದ ನಮ್ಮ ಶಾಲೆಯಲ್ಲಿ ಶೌಚಾಲಯ ಸಮಸ್ಯೆ ಇದೆ ಎಂದು ಶಾಲಾ ಮಕ್ಕಳಿಂದ ದೂರು ಬಂದಿದ್ದು ಶಾಲೆಗೆ ಭೇಟಿ ನೀಡಿ
ಪರಿಶೀಲಿಸಿದಾಗ. ಈ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲವಾಗಲೆಂದು ಶೌಚಾಲಯ ನಿರ್ಮಾಣ ಮಾಡಲು ಶೌಚಾಲಯ ಕಾಮಗಾರಿಯನ್ನು ಎರಡು ವರ್ಷಗಳ ಹಿಂದೆಯೇ ಪ್ರಾರಂಭಿಸಿದ್ದು, ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ, ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೋ, ಗುತ್ತಿಗೆದಾರನ ನಿಲ್ಲಕ್ಷವೋ, ಅಥವಾ ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷವೋ ನಮಗೆ ತಿಳಿಯದೆ ಇದ್ದು,
ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ
ಈ ಕಾಮಗಾರಿಯು ಶಿಕ್ಷಣ ಇಲಾಖೆ ಹಾಗೂ ಮನ್ರೇಗಾ ವತಿಯಿಂದ ನಡೆದಿದ್ದು ಎಲ್ಲಿ ತೊಂದರೆ ಆಗಿದೆ ಎಂದು ಸ್ಪಷ್ಟ ಮಾಹಿತಿ ಇಲ್ಲ . ಈ ವಿಚಾರವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಫೋನ್ ಕರೆ ಮೂಲಕ ಸಂಪರ್ಕಿಸಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ.
ಇದಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿ, ಈ ಸಮಸ್ಯೆಯ ಬಗ್ಗೆ ಮಾನ್ಯ ಶಾಸಕರ ಗಮನಕ್ಕೂ ತಂದು ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತವೆ ಎಂದು ತಿಳಿಸಿದರು .
ಶೌಚಾಲಯವನ್ನು ಮುಖ್ಯ ಯೋಜನಯಾಗಿ ರೂಪಿಸಿದರೂ ಹಲವು ಶಾಲೆಗಳಲ್ಲಿ ಅದು ಮರೀಚಿಕೆಯಾಗಿದೆ
ಶಾಲಾ ಶಿಕ್ಷಕಿ ವಾಣಿ ರವರು ಮಾತನಾಡಿ ನಮ್ಮ ಶಾಲೆಯಲ್ಲಿ ಶೌಚಾಲಯ ಕಾಮಗಾರಿಯು ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಎರಡು ವರ್ಷಗಳ ಹಿಂದೆ ಪ್ರಾರಂಭಿಸಿದ್ದು, ಕಾಮಗಾರಿ ಶೇಕಡಾ 90 ರಷ್ಟು ಪೂರ್ಣಗೊಂಡಿದ್ದು, ಕೇವಲ 10% ಮಾತ್ರ ಕಾಮಗಾರಿ ಬಾಕಿ ಇದ್ದು
,ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳಲ್ಲಿ ಅನೇಕಬಾರಿ ದೂರು ನೀಡಿದರು ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಮಕ್ಕಳಿಗೆ ಬಹಳ ತೊಂದರೆಯಾಗುತ್ತಿದ್ದು ಈ ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಳಮಾಚನಹಳ್ಳಿ ಗ್ರಾಮದ ಹಿರಿಯ ಮುಖಂಡ ಜಗದೀಶ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ರಾಮಚಂದ್ರ ಚಾರಿ, ಉಪಾಧ್ಯಕ್ಷರಾದ ಸವಿತಾ ಕೇಶವಮೂರ್ತಿ, ನಿರ್ದೇಶಕರಾದ ಮನೋಹರ್, ವೆಂಕಟೇಶ್, ಮಾಜಿ ಅಧ್ಯಕ್ಷರಾದ ದೇವರಾಜ್ ಸೇರಿದಂತೆ ಇತರರು ಇದ್ದರು.