ಸರ್ಕಾರಕ್ಕೆ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ
ಸರ್ಕಾರಕ್ಕೆ ಸ್ವಾಮೀನಾಥನ್ ವರದಿ ಸಲ್ಲಿಸಿ 30 ವರ್ಷ ಕಳೆದರೂ ಇನ್ನೂ ಜಾರಿಗೊಳಿಸಿಲ್ಲ: ಕೊಡೀಹಳ್ಳಿ ಚಂದ್ರಶೇಖರ್.
ದೇವನಹಳ್ಳಿ: ಸರ್ಕಾರಗಳು ರೈತರ ಸಮಸ್ಯೆ ಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ರೈತರ ಸಮಸ್ಯೆಗಳು ಕಣ್ಣಿಗೆ ಕಾಣುವುದಿಲ್ಲ. ರೈತರಿಗೆ ಸಮರ್ಪಕ ಯೋಜನೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬೈಪಾಸ್ ರಸ್ತೆಯಲ್ಲಿ ದೇವನಹಳ್ಳಿ ತಾಲೂಕು ರೈತರ ಸಂಘದ ಸಮುದಾಯಭವನದನಮಪಾಲಕ ಉದ್ಘಾಟನೆ ಹಾಗೂ ರೈತರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 1990ರಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚು ಆಗುತ್ತಿರುವಾಗ ಭಾರತ ಸರ್ಕಾರಕ್ಕೆ ರೈತರು ಆತ್ಮಹತ್ಯೆಗಳ ಬಗ್ಗೆ ಮನವಿ ಸಲ್ಲಿಸಿದಾಗ, ಸ್ವಾಮಿನಾಥನ ವರದಿಯನ್ನು ಜಾರಿಗೊಳಿಸುತ್ತೇವೆ ಎಂದು ಹೇಳಿ 30 ವರ್ಷ ಕಳೆದರೂ ಸಹ ಯಾವುದೇ ಸರ್ಕಾರಗಳು ಜಾರಿಗೊಳಿಸಿಲ್ಲ. ಆತ್ಮಹತ್ಯೆಗೆ ಕಾರಣ ಅಂಶಗಳನ್ನು ಸ್ವಾಮಿನಾಥನ್ ವರದಿ ನೀಡಿದೆ. ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಲೆ ನೀಡಬೇಕು. ಸರಸ್ವಲಭ್ಯಗಳಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ನೀಡಿದ್ದರು. ರೈತರಿಗೆ ಮಾರುಕಟ್ಟೆಯ ವ್ಯವಸ್ಥೆ ಕಲ್ಲಿಸಬೇಕು. ರೈತರು ಬೆಳೆಯುವ ಯಾವುದೇ ಆಹಾರ ಉತ್ಪನ್ನ ಇದ್ದರೆ ಬೆಳೆಗಳಿಗೆ ಸರ್ಕಾರಗಳು ನಿಯಂತ್ರಣದಲ್ಲಿ ಇಟುಕೊಂಡಿದೆ. ಇದರಿಂದ ಆರ್ಥಿಕ ದಿವಾಳಿತನವನ್ನು ರೈತರ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:- ಬ್ಯಾಂಕ್ ಗಳಿಂದ ಸಿಗುವ ಸಾಲ ಸೌಲಭ್ಯ ಸದುಪಯೋಗಿಸಿಕೊಳ್ಳಿ
ಗ್ಯಾರೆಂಟಿ ಜಾರಿಗೆ ಅರ್ಜಿ ಹಾಕಿಲ್ಲ: ರೈತರ ದಿನಾಚರಣೆಯಲ್ಲಿ ಪ್ರತಿ ರೈತರು ಪಾಲ್ಗೊಳ್ಳಬೇಕು. ರೈತರ ದಿನಾಚರಣೆಯ ಮಹತ್ವವನ್ನು ತಿಳಿದುಕೊಳ್ಳಿ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಎಂದು ಯಾವ ಜನರು ಮತ್ತು ರೈತರು ಅರ್ಜಿ ಹಾಕಿಲ್ಲ. ಪ್ರಧಾನಿ ಮೋದಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಎರಡು ಸಾವಿರ ರೂಪಾಯಿ ಹಾಕುವಂತೆ ಯಾವ ರೈತರು ಅರ್ಜಿ ಹಾಕಿಲ್ಲ. ರೈತರು ಕಣ್ಣೀರು ಒರೆಸಲು ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಾರೆ. ಗ್ಯಾರೆಂಟಿ ಯೋಜನೆಗಳಿಂದ ಯಾರಿಗೆ ಅನುಕೂಲವಾಗಿದೆ. ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯಿಂದ ತಾಳ ಸಮುದಾಯಗಳಿಗೆ ಅವಮಾನವಾಗಿದೆ. ಕಾಂಗ್ರೆಸ್ ನವರು ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ದೂರಿದರು.
ರೈತ ಸಮುದಾಯ ಭಾವನವನ್ನು ದೇವನಹಳ್ಳಿ ತಾಲೂಕಿನಲ್ಲಿ ನಿರ್ಮಿಸಿ ಪ್ರತಿ ರೈತರಿಗೆ ಅನುಕೂಲ ಮಾಡಲು ಹೊರಟಿರುವುದು ತಮ್ಮ ಕಾರ್ಯವಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ವೆಂಕಟ ನಾರಾಯಣಪ್ಪ, ಹೊಸಕೋಟೆ ಕೆಂಚೇಗೌಡ, ಮುಖಂಡ ರಾಜಣ್ಣ ಮತ್ತು ದೇವನಹಳ್ಳಿ ತಾಲೂಕು ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.