ಹಾಪ್ ಕಾಮ್ಸ್’ ಲಾಭದ ಹಾದಿಗೆ ಅಭಿಯಾನ

ಹಾಪ್ ಕಾಮ್ಸ್’ ಲಾಭದ ಹಾದಿಗೆ ಅಭಿಯಾನ


ಬೆಂಗಳೂರು: ಸಿಬ್ಬಂದಿ ಕೊರತೆ ರಸ್ತೆ ವಿಸ್ತರಣೆ ಸೇರಿದಂತೆ ನಾನಾ ಕಾರಣಗಳಿಂದ ಮುಚ್ಚಿರುವ ಮಾಳಿಗೆಗಳನ್ನು ಪುನರಾರಂಭಿಸಿ ವಿಶೇಷ ಅಭಿಯಾನ ,ಖಾಸಗಿಯವರಿಗೆ ಫ್ರಾಂಚೈಸಿ ನೀಡುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಹಾಪ್ ಕಾಮ್ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕಾರಣ ಸಂಘ) ಅನ್ನು ಲಾಭದ ಹಳಿಗೆ ತರುವ ಪ್ರಯತ್ನ ಆರಂಭವಾಗಿದೆ. ಹಾಪ್ ಕಾಮ್ಸ್:142 ಮಾಳಿಗೆ ಬಂದ್’ ಶ್ರೀರ್ಷಿಕೆಯಡಿ ಪ್ರಜಾವಾಣಿಯ ಜನರಿಯಲ್ಲಿ 27ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತು .ಈ ಬೆನ್ನಲ್ಲೇ, ಸಂಸ್ಥೆಯ ಬಲವರ್ಧನೆಗೆ ಆಡಳಿತ ಮಂಡಳಿ ಮುಂದಾಗಿದ್ದು ,ಹಲವು ನಿರ್ಧಾರ ತೆಗೆದುಕೊಂಡಿದೆ .ಮುಕ್ತ ಮಾರಾಕಟ್ಟೆ ಯಿಂದ ಎದುರಾಗಿರುವ ಸ್ಪರ್ಧೆ, ಖಾಸಗಿ ಕಂಪನಿಗಳ ಪೈಪೋಟಿಯ ಪರಿಣಾಮ ,ನಾಲ್ಕು ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ಬೆಂಗಳೂರು ಹಾಪ್ ಕಾಮ್ಸ್ ಸೇರಿದಂತೆ ಜಿಲ್ಲಾ ಹಾಪ್ ಕಾಮ್ ಗಳು ನಷ್ಟದಲ್ಲಿರುವ ಮಾಳಿಗೆಗಳನ್ನು ಖಾಸಗಿಯವರಿಗೆ ಫ್ರಾಂಚೈಸಿ ನೀಡಲು ನಿರ್ಧರಿಸಲಾಗಿದೆ .ಸಂಸ್ಥೆ , ವ್ಯಕ್ತಿಗಳು ಫ್ರಾಂಚೈಸಿ ಪಡೆಯಬಹುದು .

ಇದಕ್ಕಾಗಿ ₹ 1.50 ಲಕ್ಷಗಳ ಠೇವಣಿ ಇಡಬೇಕು. ಮೂರು ತಿಂಗಳವರೆಗೆ ₹50ಸಾವಿರ ಮೊತ್ತದ ತರಕಾರಿ, ಹಣ್ಣುಗಳನ್ನು ಖರೀದಿಸುವುದು ಕಡ್ಡಾಯ .ಲಾಭದ ಅಂಶದಲ್ಲಿ ಹಂಚಿಕೆ ಪದ್ಧತಿ ತರಲು ಹಾಪ್ ಕಾಮ್ಸ್ ಮುಂದಾಗಿದೆ. ಮುಚಿರುವ ಮಾಳಿಗೆಗಳನ್ನು ತೆರೆಯೋಣ ಬಾರ’ ಎಂಬ ವಿಶೇಷ ಅಭಿಯಾನ ಆರಂಭಿಸಿ. ಮಾಳಿಗೆಗಳನ್ನು ತೆರೆಯುವ ಹಾಲಿ ಸಿಬ್ಬಂದಿಗೆ ವೇತನದ ಜೊತೆಗೆ ಶೇಕಡಾ 6ರಷ್ಟು ರಿಯಾಯಿತಿ ನೀಡಲಾಗುವುದು. ಮಂಜೂರಾದ 965 ಸಿಬ್ಬಂದಿ ಪೈಕಿ ನಿವೃತ್ತಿ ನಿಧನ ಕಾರಣಗಳಿಂದ 389 ನೌಕರರು ಮಾತ್ರ ಕಾರ್ಯಾ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ನೀಗಿಸಲು 50 ಮಂದಿಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎಂದು ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ್ ಶಂಕರ್ ಅವರು ಪ್ರಜಾವಾಣಿಗೆ ತಿಳಿಸಿದರು .

ಇದನ್ನೂ ಓದಿ: ‘ಸನ್ಯಾಸಿಗಳು ಧರ್ಮರಕ್ಷಣೆಗೆ ಸೈನಿಕರಾಗಲಿ ‘

ಹಾಪ್ ಕಾಮ್ಸ್ ₹ 15 ಲಕ್ಷ ದುಡಿಯುವ ಬಂಡವಾಳವನ್ನು ಬಡ್ಡಿ ಸಹಿತ ಸಾಲವಾಗಿ ನೀಡುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತಾತ್ವಕ ಮಜೂರಾತಿ ನೀಡಿದ್ದಾರೆ. ಬೆಂಗಳೂರು ಅಪಾರ್ಟಮೆಂಟ್ ಫೆಡರೇಷನ್ (ಬಿಎಎಫ್ )ಸಹಯೋಗದಲ್ಲಿ ಮಹಾನಗರ ಪಾಲಿಕೆಯ ವಿವಿಧ ಅಪಾರ್ಟ್ ಮೆಂಟ್ ಗ ಗಳಲ್ಲಿ ಸಂಚಾರಿ ವ್ಯವಹಾರ ವ್ಯವಸ್ಥೆ ಹಾಗೂ ಮಾಳಿಗೆಗಳಲ್ಲಿ ಸಿರಿಧಾನ್ಯಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು .ಮುಂದಿನ ದಿನಗಳಲ್ಲಿ ಬೃಹತ್ ಕಾರ್ಖಾನೆಗಳು,ಸಂಘ ಸಂಸ್ಥೆಗಳಿಗೆ ಹಣ್ಣು, ತರಕಾರಿಗಳನ್ನು ಸಗಟು ದಾರರಲ್ಲಿ ಮಾರಾಟ ಮಾಡಲಾಗುವುದು. ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಬೇಕಾದ ಹಣ್ಣು, ತರಕಾರಿಗಳನ್ನು ಹಾಪ್ ಕಾಮ್ ನಿಂದ ಖರೀದಿಸಲು ಸಚಿವರು ಸೂಚನೆ ನೀಡಿದ್ದಾರೆ. ಕರ್ನಾಟಕ ಆಯಿಲ್ ಫೆಡರೇಷನ್ ತೊಗರಿಬೇಳೆ, ಕಡಲೆಬೇಳೆ, ಉದ್ದಿನಬೇಳೆ ಅಕ್ಕಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಹಾಪ್ ಕಾಮ್ಸ್ ಗಳಲ್ಲಿ ಮಾರಾಟ ಮಾಡಲಾಗುವುದು. ಇದರಿಂದ ಸಂಸ್ಥೆಗೂ ಲಾಭವಾಗಲಿದೆ ಎಂದು ಹಾಪ್ ಕಾಮ್ಸ್ ಅಧ್ಯಕ್ಷ ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.

ಪ್ರತಿ ತಿಂಗಳು 2 ಕೋಟಿ ದಾಸ್ತಾನು ಇಳಿಕೆ
ಸರ್ಕಾರಿ ಹಾಸ್ಪಿಟಲ್ ಹಾಸ್ಟೆಲ್ ಕೈಗಾರಿಗಳಿಗೆ ನಿತ್ಯ ಹಣ್ಣು ತರಕಾರಿಗಳನ್ನು ಸಾಲದ ರೂಪದಲ್ಲಿ ಸರಬರಾಜು ಮಾಡಲಾಗುತ್ತಿದೆ ಎರಡು ಮೂರು ತಿಂಗಳ ಬಳಿಕ ಅವರ ಹಣ ಪಾವತಿ ಮಾಡುತ್ತಿದ್ದಾರೆ ಅಲ್ಲದೆ ಮಾಳಿಗೆಗಳು ಕೇಂದ್ರದಿಂದ ಉಗ್ರಣಗಳಲ್ಲಿ ಪ್ರತಿ ತಿಂಗಳು 2 ಕೋಟಿ ಮೌಲ್ಯದ ದಾಸ್ತಾನು ಉಳಿಕೆ ಆಗುತ್ತದೆ ಇದರಿಂದ ಸಂಸ್ಥೆಗೆ ದುಡಿಯುವ ಬಂಡವಾಳ ಕೊರತೆಯಾಗಿ ಹಣ್ಣು ತರಕಾರಿ ಸರಬರಾಜು ಮಾಡಿದರೆ ನಿಗದಿತ ಸಮಯಕ್ಕೆ ಹಣ ಪಾವತಿ ಸಾಧ್ಯವಾಗಿಲ್ಲ ಎಂದು ಆಪ್ ಕಂ ಅಧ್ಯಕ್ಷ ಗೋಪಾಲಕೃಷ್ಣ ಹೇಳಿದರು.

Leave a Comment