ಹೋರಾಟದ ನಿಧಿಗೆ ಉದಾರವಾಗಿ ಕಾಣಿಕೆ ನೀಡಿ.

ಹೋರಾಟದ ನಿಧಿಗೆ ಉದಾರವಾಗಿ ಕಾಣಿಕೆ ನೀಡಿ.

ನಾವು ನಮ್ಮವರು ಇಂದು ಸುರಕ್ಷಿತವೇ? ಈ ಪ್ರಶ್ನೆಯು ಅತ್ಯಂತ ಮುಖ್ಯವಾಗಿ ನಮ್ಮೆದುರು ಬಂದಿದೆ. ಮೌಲ್ಯಗಳು ನಾಶವಾದರೆ, ಮನುಷ್ಯನು ಮೃಗಕ್ಕಿಂತಲೂ ಕಡೆಯಾಗುತ್ತಾನೆ ಎನ್ನುವುದಕ್ಕೆ ಆರ್. ಜಿ. ಕರ್ ಮೆಡಿಕಲ್ ಕಾಲೇಜಿನ ಕಿರಿಯ ವೈದ್ಯೆ (ಅಭಯಾ!)ಯ ಮೇಲೆ ನಡೆದ ಘೋರ ಪಾತಕವು ಸಾಕ್ಷಿಯಾಗಿ ನಿಂತಿದೆ. ದೇಶದಾದ್ಯಂತ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಮನಸುಗಳು ಜಝರೃರಿತವಾಗುತ್ತಿವೆ. ‘ತಂದೆಯಿಂದ ಮಗಳ ಮೇಲೆ ದೌರ್ಜನ್ಯ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಮಹಿಳೆಯ ಮೇಲೆ ಗುಂಪು ಅತ್ಯಾಚಾರ, – ಇವು ದಿನನಿತ್ಯದ ಸುದ್ದಿಗಳಾಗಿವೆ. ಮಹಿಳೆಯರ ಮೇಲಿನ ಅಪರಾಧಗಳ ಕೊನೆಯಿಲ್ಲದ ಪಟ್ಟಿಯು ಬೆಳೆಯುತ್ತಲೇ ಇದೆ.

ಇದನ್ನೂ ಓದಿ: ರಾಜ್ಯದ 10 ನದಿಗಳು ಕಲುಷಿತ.

ನಮ್ಮ ಸಮಾಜವು ಎಂದೆಂದೂ ಕಾಣದಿದ್ದಂತಹ ಬಿಕ್ಕಟ್ಟನ್ನು ಇಂದು ಅನುಭವಿಸುತ್ತಿದೆ. ಹೆಚ್ಚುತ್ತಿರುವ ಬಡತನ, ಬೆಲೆ ಏದಕೆ, ಉಲ್ಲಣ ಗೊಳ್ಳುತ್ತಿರುವ ನಿರುದ್ಯೋಗ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ಅತ್ಯಾಚಾರಗಳು, ಶಿಕ್ಷಣ ಮತ್ತು ಆರೋಗ್ಯಗಳ ವ್ಯಾಪಾರೀಕರಣ, ಸಂಸ್ಕೃತಿಕ ಹಧಃಪತನ ಇವು ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿವೆ. ಉದ್ಯೋಗಕಾಶಗಳು ತೀವ್ರವಾಗಿ ಕುಸಿಯುತ್ತಿದೆ.ಈ ಕೆಲವು ಉದ್ಯೋಗಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಪರೀಕ್ಷೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಮೆರೆಯುತ್ತಿದೆ.ಈ ಹಿನ್ನಲೆಯಲ್ಲಿ,‌ ಕೋಟ್ಯಂತರ ಯುವಜನರು ಯೋಗ್ಯವಾದೊಂದು ಉದ್ಯೋಗಕ್ಕಾಗಿ ಅಲೆಯುತ್ತಾ ಹೈರಾಣಾಗುತ್ತಿದ್ದಾರೆ; ಪ್ರವೇಶ ಪರೀಕ್ಷೆಗಳಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಈ ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪ್ರಪಂಚದ ಒತ್ತಡ ತಾಳಲಾರದೆ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಸಾವಿಗೆ ಶರಣಾಗುತ್ತಿದ್ದಾರೆ. ಕೃಷಿ ಬಿಕ್ಕಟ್ಟಿಗೆ ಸಿಲುಕಿರುವ ರೈತರ ಆತ್ಮಹತ್ಯೆಯ ಪ್ರಕಾರಣಗಳ ಸಂಖ್ಯೆ ಏರುತ್ತಿದೆ. ಕಾರ್ಮಿಕರು ತೀವ್ರ ಶೋಷಣೆಗೆ ಸಿಲುಕಿದ್ದು, ಉದ್ಯೋಗದ ಅಭದ್ರತೆ, ಅಲ್ಪ ಆದಾಯ, ಗುತ್ತಿಗೆ-ಅರೆಗುತ್ತಿಗೆ ಪದ್ಧತಿ, ಬದುಕಿನ ಅನಿಶ್ಚಿತ ತೆಗಳಿಂದ ಅವರು ಕಂಗೆಟ್ಟಿದ್ದಾರೆ.

Leave a Comment