4 ಗುರಿಗಳಲ್ಲಿ ಮುಗ್ಗರಿಸಿದ್ದು 2, ಹಳಿ ಮೇಲೆ ಬಾರದ್ದು ಒಂದು ನಿರೀಕ್ಷೆಯಂತೆ ನಡೆದ
ಹೂಡಿಕೆದಾರರ ಸಮಾವೇಶ ತಲೆಕೆಳಗಾದ ರಾಜ್ಯ ಸರ್ಕಾರದ ವಿತ್ತೀಯ ಕಾರ್ಯನೀತಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಳಿ ತಪ್ಪದಂತೆ ನೋಡಿಕೊಳ್ಳುವ ಉದ್ದೇಶದಿಂದ ಸರ್ಕಾರ 2024-25ನೇ ಸಾಲಿಗೆ ತನ್ನ ವಿತ್ತೀಯ ಕಾರ್ಯನೀತಿ ಪ್ರಸ್ತಾಪಿಸಿತ್ತು, ಆದಾಯ ಮತ್ತು ವೆಚ್ಚದ ಮೇಲೆ ನಿಯಂತ್ರಣ ಸಾಧಿಸುವುದು ಈ ನೀತಿಯ ಪ್ರಮುಖ ಸಂಗತಿ, ಆದರೆ, ಸರ್ಕಾರ ಆರ್ಥಿಕ ವರ್ಷದ ಆರಂಭದಲ್ಲಿ ಅಂದುಕೊಂಡಿದ್ದೇ ಬೇರೆ, ಕೊನೆಯಲ್ಲಿ ಆಗಿದ್ದೇ ಬೇರೆ ಎಂಬಂತಾಗಿದೆ. ವಿತ್ತೀಯ ಕಾರ್ಯನೀತಿಯು ನಾಲ್ಕು ಪ್ರಮುಖ ಅಂಶದ ಮೇಲೆ ಕೇಂದ್ರೀಕೃತವಾಗಿತ್ತು. ರಾಜಸ್ವ ಹೆಚ್ಚಿಸುವುದು, ವೆಚ್ಚ ತರ್ಕಬದ್ಧಗೊಳಿಸುವುದು, ಆಸ್ತಿ ನಗದೀಕರಣ, ಹೂಡಿಕೆಗಳನ್ನು ಆಕರ್ಷಿಸುವುದಕ್ಕೆ ಆದ್ಯತೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ನಾಲ್ಕು ಗುರಿಗಳಲ್ಲಿ ಮೂರು ಮುಗ್ಗರಿಸಿವೆ. ರಾಜಸ್ವ ಹೆಚ್ಚಳ: ರಾಜಸ್ವ ಸಂಗ್ರಹಣೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸುವುದರ ಜತೆಗೆ ತೆರಿಗೆ ಸಂಗ್ರಹಣೆಯಲ್ಲಿ ಹೆಚ್ಚಿನ ದಕ್ಷತೆ ತೋರುವುದರಿಂದ ರಾಜ್ಯ ಸರ್ಕಾರದ ರಾಜಸ್ವದ ಮೂಲ ಹೆಚ್ಚಿಸುವ ಮಹತ್ವಾಕಾಂಕ್ಷೆ ಹೊಂದಲಾಗಿತ್ತು.
ತೆರಿಗೆಯೇತರ ಸ್ವೀಕೃತಿಗಳಲ್ಲಿ ಹಲವು ವರ್ಷಗಳಿಂದ ಪರಿಷ್ಕರಣೆ ಮಾಡದ ಬಳಕೆದಾರರ ಶುಲ್ಕ ಪರಿಷ್ಕರಣೆ ಮಾಡುವ ಕ್ರಮ ವಹಿಸಲಾಗುವುದೆಂದು ಹೇಳಲಾಗಿತ್ತು. ಜತೆಗೆ ತೆರಿಗೆ ಅನುಪಾಲನೆ ಹೆಚ್ಚಿಸಲು ತೆರಿಗೆ ಪಾವತಿದಾರರಿಗೆ ತೆರಿಗೆ ಪಾವತಿ ಪ್ರಕ್ರಿಯೆ ಸರಳೀಕರಿಸಲು ಕ್ರಮವಹಿಸುವ ಪ್ರಸ್ತಾಪ ಮಾಡಲಾಗಿತ್ತು. ತೆರಿಗೆ ಸಂಗ್ರಹ ವಿಚಾರಕ್ಕೆ ಬಂದರೆ ಹಾಕಿಕೊಂಡ ಗುರಿ ಮುಟ್ಟುವ ಅನುಮಾನ ಇರುವುದರಿಂದ ಗುರಿಯನ್ನೇ ಪರಿಷ್ಕರಿಸಬೇಕಾಗಿ ಬಂದಿದೆ. ವಿವಿಧ ಏಕಾಏಕಿ ದೊಡ್ಡ ಪ್ರಮಾಣದ ಶುಲ್ಕ ಹೆಚ್ಚಳದಿಂದ ಸರ್ಕಾರ ವಿರೋಧವನ್ನೂ ಕಟ್ಟಿಕೊಳ್ಳಬೇಕಾಗಿ ಬಂದಿದೆ.
ವೆಚ್ಚ ತರ್ಕಬದ್ಧ: ಸಂಪನ್ಮೂಲಗಳನ್ನು ಸಮರ್ಥವಾಗಿ ಹಂಚಿಕೆ ಮಾಡಲು ಸರ್ಕಾರವು ಅನುದಾನದ ಬಳಕೆ, ವೆಚ್ಚದ ಉಪಯುಕ್ತತೆ ಪರಿಶೀಲಿಸಲು ಮುಂದಾಗಿತ್ತು. ಅಲ್ಲದೆ, ಅನವಶ್ಯಕ ಹುದ್ದೆಗಳನ್ನು ಗುರುತಿಸಿ, ವೇತನ ವೆಚ್ಚ ಕಡಿಮೆ ಮಾಡಲು ಪ್ರಾಧಾನ್ಯತೆ ನೀಡಬೇಕೆಂದಿತ್ತು. ಇದರೊಂದಿಗೆ ಕಲ್ಯಾಣ ಕಾರ್ಯಕ್ರಮಗಳಿಗೆ ನೀಡುವ ಅನುದಾನದ ಸೋರಿಕೆ ತಡೆಗಟ್ಟಲು ಕ್ರಮತೆಗೆದುಕೊಳ್ಳಲಾಗು ವುದು ಎಂದೂ ಹೇಳಿತ್ತು. ಈ ಕೆಲಸ ಆಗೇ ಇಲ್ಲ ಎಂದು ಹೇಳಬೇಕು. ಅಲ್ಲೊಂದು ಇಲ್ಲೊಂದು ಉದಾಹರಣೆ ಹೊರತುಪಡಿಸಿದರೆ ದೊಡ್ಡಮಟ್ಟದ ಬದಲಾವಣೆ ಕಾಣಿಸಿಲ್ಲ. ಅಸ್ತಿ ನಗದೀಕರಣ: ಹೆಚ್ಚುವರಿ ರಾಜಸ್ವ ಸಂಗ್ರಹಿಸಲು ಮತ್ತು ರಾಜ್ಯದಲ್ಲಿ ಹೂಡಿಕೆ ಹೆಚ್ಚಿಸಲು ಸರ್ಕಾರವು ಆಸ್ತಿಗಳ ನಗದೀಕರಣ ಪ್ರಕ್ರಿಯೆ ತ್ವರಿತಗೊಳಿಸ ಬಯಸಿತ್ತು. ತಜ್ಞರ ಸಮಿತಿ ಮತ್ತು ಖಾಸಗಿ ಸಂಸ್ಥೆಗಳ ನೆರವು ಪಡೆದುಕೊಂಡಿರುವ ಸಮಿತಿ ಮತ್ತು ಖಾಸಗಿ ಸಂಸ್ಥೆಗಳನೆರವು ಪಡೆದುಕೊಂದಿನ ಕಾರ್ಯರೂಪಕ್ಕೆ ಬಂದಿಲ್ಲ. ವಿವಿಧ ಹಂತದಲ್ಲಿ ಪ್ರಕ್ರಿಯೆ ನಡೆದಿದೆ. ಹೊಸ ನೀತಿಯನ್ನೂ ಪ್ರಕಟಿಸಿ ಆಸ್ತಿ ನಗದೀಕರಣದ ಪ್ರಸ್ತಾಪ ಮಾಡಲಾಗಿದೆ. ಆ ಪ್ರಸ್ತಾವನೆಗಳು ಇನ್ನೂ ಅನುಷ್ಠಾನಕ್ಕೆ ಬರುವ ಹಂತದಲ್ಲೂ ಇಲ್ಲ. ತರ್ಕಬದ್ಧಗೊಳಿಸಲು ಹಿಂದೇಟು: ವಿವಿಧ ಯೋಜನೆಗಳಫಲಾನುಭವಿಗಳಪಟ್ಟಿತರ್ಕಬದ್ಧಗೊಳಿಸಬೇಕ, ಅರ್ಹರಿಗೆ ಮಾತ್ರ ಯೋಜನೆ ಲಾಭತಲುಪುವಂತಾಗಬೇಕೆಂದು ಸರ್ಕಾರದ ಅಭಿಲಾಷೆ ಆದರೆ, ಆ ವಿಚಾರಕ್ಕೆ ಕೈಹಾಕಿದರೆ ರಾಜಕೀಯವಾಗಿ ಟೀಕೆಗೊಳಗಾಗಬೇಕು ಎಂಬ ಕಾರಣಕ್ಕೆ ಪ್ರಸ್ತಾವನೆಗಳನ್ನು ಹಾಗೇ ಇಟ್ಟುಕೊಂಡು ಕುಳಿತುಕೊಳ್ಳುವಂತಾಗಿದೆ.