ಗುರು ಶಿಷ್ಯರ ಬಾಂಧವ್ಯವನ್ನು ಬೆಲೆ ಕಟ್ಟಲಾಗದು
ಗುರು ಶಿಷ್ಯರ ಬಾಂಧವ್ಯವನ್ನು ಬೆಲೆ ಕಟ್ಟಲಾಗದು. ನಿಮ್ಮ ಪ್ರೀತಿ ವಿಶ್ವಾಸವನ್ನು ಎಂದೆಂದಿಗೂ ಮರೆಯುವುದಿಲ್ಲ: ಪಿ ಎಸ್ ರವೀಂದ್ರನಾಥ್ ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ಇರುವ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಶಿಡ್ಲಘಟ್ಟ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪಿ.ಎಸ್. ರವೀಂದ್ರನಾಥ್ ಅವರಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1978 ರಿಂದ 1981ರ ತನಕ 8 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಳಗ್ಗೆ 11 ಗಂಟೆಯಿಂದಲೇ ರಸಮಂಜರಿ ಕಾರ್ಯಕ್ರಮವು ಶಿವಮೊಗ್ಗ ವಿಶ್ವನಾಥ್ ರವರ ನಿರೂಪಣೆಯಲ್ಲಿ ಅತ್ಯುತ್ತಮವಾಗಿ ಮೂಡಿಬಂದಿತ್ತು. ರಸಮಂಜರಿ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಉದ್ಯಮಿ ಚಂದ್ರಪ್ಪ ದಂಪತಿಗಳು ಉತ್ತಮ ಹಾಡುಗಳನ್ನು ಹಾಡಿದರು.
ಸಂಜೆ 5 ಗಂಟೆಗೆ ತಮ್ಮ ನೆಚ್ಚಿನ ಗುರುಗಳಿಗೆ ಗುರುವಂದನ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಕಾರ್ಯಕ್ರಮಕ್ಕೆ ತಮ್ಮ ನೆಚ್ಚಿನ ಗುರುಗಳಾದ ಪಿಎಸ್ ರವೀಂದ್ರನಾಥ್ ರವರು ಆಗಮಿಸುತ್ತಿದ್ದಂತೆ
ಹಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಕಂಡು ಪಾದಸ್ಪರ್ಶಿಸಿ ಆಶೀರ್ವಾದ ಪಡೆದರು ಇನ್ನೂ ಹಲವು ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುವನ್ನು ನೋಡಿ ಭಾವಕರಾದರು.
ಗುರು ಶಿಷ್ಯರ ಬಾಂಧವ್ಯವನ್ನು ಬೆಲೆ ಕಟ್ಟಲಾಗದು
ವಿದ್ಯಾರ್ಥಿಗಳಲ್ಲಿ ಶಿಸ್ತು ಕಲಿಸಿ ಅವರ ಜೀವನವನ್ನು ಉಜ್ವಲ ಗೊಳಿಸಿದ ಗುರು ಪಿ ಎಸ್ ರವೀಂದ್ರನಾಥ್ ಅವರಿಗೆ ಹಳೆ ಶಿಷ್ಯರೆಲ್ಲ ಸೇರಿ ಗುರು ವಂದನಾ ಕಾರ್ಯಕ್ರಮದಲ್ಲಿ ಗುರು ನಮನದ ಮೂಲಕ ಗುರುಗಳಿಗೆ ಪ್ರೀತಿ ಆದರದಿಂದ ಸ್ವಾಗತಿಸಿ ಅಭಿನಂದಿಸಿದರು ಒಂದು ರೀತಿಯಲ್ಲಿ ಕಲ್ಯಾಣ ಮಂಟಪದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ:- ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕ
ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಚಿತ್ರನಟ ಹಾಗೂ ಮಾಜಿ ಸಂಸದ ಶಶಿಕುಮಾರ್ ಆಗಮಿಸಿ ಕಾರ್ಯಕ್ರಮದಲ್ಲಿ ತಮ್ಮ ಅಭಿನಯದ ಚಿತ್ರ ಒಂದರ ಹಾಡನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದರು .
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಶಿಕುಮಾರ್ ಅವರು ಪ್ರತಿಯೊಬ್ಬರ ಜೀವನದಲ್ಲಿ ಬಲಿಷ್ಠವಾದದ್ದು ಗುರುಬಲ, ಬಾಲ್ಯದಲ್ಲಿ ತುಂಟತನ ಅಜ್ಞಾನ, ಆಶಿಸ್ತಿನಿಂದ ಇರುವ ಮಕ್ಕಳನ್ನು ಒಂದು ಹತೋಟಿಗೆ ತಂದು ವಿದ್ಯೆ ಕಳಿಸಿದ ಎಲ್ಲಾ ಗುರುಗಳಿಗೂ ನನ್ನ ನಮನಗಳು. ನಮಗೆ ವಿದ್ಯೆಯ ಗಂಧವೇ ಇರುತ್ತಿರಲಿಲ್ಲ ಎಂದು ತಿಳಿಸಿದ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಂತಹ ಸಂದರ್ಭದಲ್ಲಿ ನಾನು ಶಿಡ್ಲಘಟ್ಟಕ್ಕೆ ಬಂದಿದ್ದೆ ಎಂದು ತಮ್ಮ ಜೀವನ ಅಳಿಯ ನೆನಪುಗಳನ್ನು ನೆನೆಸಿಕೊಂಡರು.
ಗುರು ಶಿಷ್ಯರ ಬಾಂಧವ್ಯವನ್ನು ಬೆಲೆ ಕಟ್ಟಲಾಗದು
ಕಾರ್ಯಕ್ರಮದ ಆಯೋಜಕರಾದ ಚಂದ್ರಪ್ಪ ರವರು ಮಾತನಾಡಿ ನಮ್ಮ ಗುರುಗಳಾದ ರವೀಂದ್ರನಾಥ್ ರವರ ಶಿಷ್ಯರಾದ ನಾವೇ ಪುಣ್ಯವಂತರು. ಅವರು ನಮ್ಮನ್ನು ಬಹಳ ಶಿಸ್ತು ಬದ್ಧವಾಗಿ ವಿದ್ಯಾರ್ಥಿ ಜೀವನವನ್ನು ಕಲಿಸಿದ್ದು ಅದರಿಂದ ನಾವು ಒಳ್ಳೆಯ ಜೀವನವನ್ನು ರೂಪಿಸಿಕೊಂಡಿದ್ದೇವೆ , ಶಿಸ್ತು ಎಂದರೆ ನಮ್ಮ ಗುರುಗಳಾದ ರವೀಂದ್ರನಾಥ್ ರವರು. ಅವರ ಮೇಲಿರುವ ಭಕ್ತಿಗೆ ಈ ಗುರುವಂದನ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ಸ್ಪೂರ್ತಿಯ ನಮ್ಮ ಗುರುಗಳು. ನನ್ನ ಗುರುಗಳಿಗೆ ಆ ಭಗವಂತನು ಆಯುರ್ ಆರೋಗ್ಯ ಐಶ್ವರ್ಯ ಕೊಟ್ಟು ನಮ್ಮಂತಹ ಇನ್ನಷ್ಟು ಶಿಷ್ಯರನ್ನ ಈ ಜಗತ್ತಿಗೆ ನೀಡುವ ಶಕ್ತಿ ಆ ಭಗವಂತನ ನೀಡಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ ರಾಜಣ್ಣ, ರಾಜ್ಯ ಕುರುಬರ ಸಂಘದ ರಾಜ್ಯ ಉಪಾಧ್ಯಕ್ಷರಾದ ವೆಂಕಟರಮಣಪ್ಪ, ಉದ್ಯಮಿ ಗೋವಿಂದರೆಡ್ಡಿ ಶಿಡ್ಲಘಟ್ಟ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ , ವಕೀಲರ ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.