ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ

ನಾಪತ್ತೆ ಯಾಗಿದ್ದ ಮಹಿಳೆ ‘ಕನ್ನಡ ‘ದಿಂದಾಗಿ ಪತ್ತೆ

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಪೋತಲಕಟ್ಟೆ ನಿವಾಸಿಯಾಗಿರುವ ಇವರು ,ಎರಡು ದಶಕಗಳ ಹಿಂದೆ ಕಂಪ್ಲಿಯಲ್ಲಿ ಸಂಬಂಧಿಕರ ಸಮಾರಂಭ ವೊಂದರಲ್ಲಿ ನಾಪತ್ತೆಯಾಗಿದ್ದರು. ಸುತ್ತಲೂ ನೂರುಕಿಮೀ ವ್ಯಾಪ್ತಿಯಲ್ಲಿ ಕುಟುಂಬಸ್ಥರು ಹುಡುಕಾಡಿದರೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಸಹ ತಿಥಿ‌ ಕಾರ‌
ಮುಗಿಸಿದ್ದರು. ಆದರೆ, ಎರಡು ದಶಕಗಳ ಬಳಿಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ.

ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಸನದ ಐಪಿಎಸ್ ಅಧಿಕಾರಿ ರವಿನಂದನ್ ಅವರು, ಸಾಕಮ್ಮ ಕನ್ನಡ ಮಾತನಾಡುವುದನ್ನು ನೋಡಿ ವಿಚಾರಿಸಿದಾಗ ಅವರು ತಮ್ಮ ಕುಟುಂಬದ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ವಿಡಿಯೋ ಮಾಡಿದ ಐಪಿಎಸ್ ಅಧಿಕಾರಿ ರವಿನಂದನ್, ಬೆಂಗಳೂರಿನ ತಮ್ಮ ಸ್ನೇಹಿತರೊಬ್ಬರಿಗೆ ಕಳುಹಿಸಿದ್ದು, ಅವರು ಟ್ಟೀಟರ್ ನಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕ್ಯಾರದರ್ಶಿ ಮಣಿವಣ್ಣನ್ ಅವರು, ಬಳ್ಳಾರಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಗೆ ಆ ವಿಡಿಯೋ ಕಳುಹಿಸಿದ್ದಾರೆ .ಜಿಲ್ಲಾಡಳಿತ ,ಸಮಾಜ ಕಲ್ಯಾಣ ಇಲಾಖೆಯು ಸಾಕಮ್ಮಳ ಸಂಬಂಧಿಕರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಮಂಡಿಗೆ ತೆರಳಿದ ಮೂವರು ಅಧಿಕಾರಿಗಳು:

ಮಂಡಿ ಜಿಲ್ಲೆಯ ಬಾಲಕೋಟ್ ವೃದ್ಧಾಶ್ರಮದಲ್ಲಿ ವಾಸವಾಗಿರುವ ಸಾಕಮ್ಮಳನ್ನು ಕರೆತರಲು ಕಾರ್ಯಪ್ರವೃತ್ತರಾಗಿರುವ ಬಳ್ಳಾರಿ ಸಮಾಜ ಕಲ್ಯಾಣ ಇಲಾಖೆಗೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಅವರು ,ಹೊಸಪೇಟೆ ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧೀಕ್ಷಕ ಏನ್. ಜಿ .ಬಸವರಾಜ, ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ಭಾರತಿ, ಬಳ್ಳಾರಿ ನಿರಾಶ್ರಿತರ ಪರಿಹಾರ ಕೇಂದ್ರದ ಮಣಿಕಂಠ ಅವರನ್ನು ಮಂಡಿ ಜಿಲ್ಲೆಗೆ ಕಳುಹಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಿಂದ ವಿಮಾನದಲ್ಲಿ ತೆರಳಿದ ಅವರು, ಮಧ್ಯಾಹ್ನ 2 ಗಂಟೆಗೆ ದೆಹಲಿ ತಲುಪಿ ಅಲ್ಲಿಂದ ರಸ್ತೆ ಮೂಲಕ ಚಂಡಿಗಡದಿಂದ ಮಂಡಿ ಜಿಲ್ಲೆಗೆ ರಾತ್ರಿ 12 ಗಂಟೆಗೆ ತಲುಪಿದ್ದಾರೆ. ಶನಿವಾರ ಬೆಳಗ್ಗೆ ವೃದ್ದಾಶ್ರಮಕ್ಕೆ ತಲುಪಿ ಸಾಕಮ್ಮಳನ್ನು ಮಾತನಾಡಿಸಿದ್ದಾರೆ. ಆರೋಗ್ಯವಾಗಿ, ಚೆನ್ನಾಗಿದ್ದಾಳೆ ಎಂದು ಮಂಡಿಗೆ ತೆರಳಿರುವ ಮಣಿಕಂಠ ‘ಉದಯವಾಣಿ’ಗೆ ತಿಳಿಸಿದ್ದಾರೆ.

ಇದನ್ನೂ ಓದಿ:- ಸಾಹಿತ್ಯ ಪರಿಷತ್ತು : ಪರಿವರ್ತನೆಯ ಹೊತ್ತು

ಕಳೆದ ಎರಡು ವರ್ಷಗಳಿಂದ ಮಂಡಿಯ ಬಾಲಕೋಟ್ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವುದಷ್ಟೇ ಅವರಿಗೆ ಜ್ಞಾಪಕವಿದೆ. ವಿಡಿಯೋ ಕಾಲ್ ಮೂಲಕ ಕುಟುಂಬದವರೊಂದಿಗೆ ಮಾತನಾಡಿ ಸಿದರೂ ಅವರನ್ನು ಗುರುತು ಹಿಡಿಯುತ್ತಿಲ್ಲ. ಸಂಬಂಧಿಕರು ಈಕೆಯನ್ನು ಪತ್ತೆ ಹಚ್ಚಿದ್ದಾರೆ.ಚಿಂದಿ ಆಯ್ದುಜೀವನ ಸಾಗಿಸುತ್ತಿದ್ದೆ ಎಂದಷ್ಟೇ ಹೇಳುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಡಿ .24ರಂದು ಬೆಳಿಗ್ಗೆ ಮಂಡಿಯಿಂದ ದೆಹಲಿಗೆ ತೆರಳಿ, ಸಂಜೆ ವಿಮಾನದ ಮೂಲಕ ಬೆಂಗಳೂರಿಗೆ ಬರುತ್ತೇವೆ.ಡಿ. 25 ರಂದು ಬುಧವಾರ ಬಳ್ಳಾರಿಗೆ ಬರುತ್ತೇವೆ ಎಂದು ಮಣಿಕಂಠ ತಿಳಿಸಿದ್ದಾರೆ.

ಸಮಾರಂಭದಲ್ಲಿ ನಾಪತ್ತೆಯಾಗಿದ್ದಳು: ಮಾನಸಿಕ ಸಂಸ್ಥೆಯಿಂದ ಬಳಲುತ್ತಿರುವ ಸಾಕಮ್ಮ, 18 ,-20 ವರ್ಷಗಳ ಹಿಂದೆ ಕಪ್ಲಿಯಲ್ಲಿ ಸಂಬಂಧಿಕರ ಸಮಾರಂಭದಲ್ಲಿ ನಾಪತ್ತೆಯಾಗಿದ್ದರು. ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿ ಮೂರು ಜನ ಮಕ್ಕಳನ್ನು ಹೊಂದಿರುವ ಸಾಕಮ್ಮಾಳನ್ನು ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ನಂದಿಬಂಡಿ ಬಳಿ ನಡೆದ ಆಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿರುವುದನ್ನು ಕಂಡು ಇದೇ ಆಗಿರಬಹುದು ಎಂದು ತಿಥಿ ಕಾರ್ಯವನ್ನೂ ಮಾಡಿದ್ದರು. ಆದರೆ, ಕಳೆದ ಕಳೆದ ನಾಲ್ಕೈದು ದಿನಗಳಿಂದ ಮರಿಯಮ್ಮನಹಳ್ಳಿ, ಡಣಾ ನಾಯಕನ ಕೆರೆಯಲ್ಲಿ ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹಿರಿಯರೊಬ್ಬರು ಆಕೆಯನ್ನು ಪತ್ತೆ ಹಚ್ಚಿ, ಅಕ್ಕಸಾಲಿಗ ಸಮುದಾಯ ಎಂದು ತಿಳಿಸಿದ್ದಾರೆ. ಡಣಾಯಕನ ಕೆರೆ ಗ್ರಾ ಪಂ ಸದಸ್ಯ ನಾಗರಾಜ್ ಅವರು, ಅಕ್ಕಸಾಲಿಗ ಸಮುದಾಯದ ಪೋತಲಕಟ್ಟೆ ಯಲ್ಲಪ್ಪನ ಮೊಬೈಲ್ ಗೆ ಸಾಕಮ್ಮಳ ವಿಡಿಯೋ ಹಾಕಿದ್ದು, ಅವರು ತಮ್ಮ ಚಿಕ್ಕಮ್ಮ ಎಂದು ಪತ್ತೆ ಹಚ್ಚಿದ್ದಾರೆ.
ಭಾವುಕರಾದ ಮಕ್ಕಳು: ಸಾಕಮ್ಮ ನಾಪತ್ತೆಯಾದಾಗ ಅವರು ಮೂವರು ಮಕ್ಕಳು ಕ್ರಮ ವಾಗಿ 8, 10,12 ವರ್ಷದವರಾಗಿದ್ದರು. ತಾಯಿ ಜೀವಂತವಾಗಿದ್ದಾಳೆ ಎಂದು ಗೊತ್ತಾಗಿ ವಿಡಿಯೋ ಕಾಲ್ ನಲ್ಲಿ ಮಾತನಾಡಿದ ಮಕ್ಕಳು ಭಾವುಕರಾಗಿದ್ದಾರೆ.

Leave a Comment