ದೂರದೃಷ್ಟಿ ವ್ಯಕ್ತಿತ್ವದ ಅಟಲ್ ಜಿ
ಡಿಸೆಂಬರ್ 25 ರಾಷ್ಟ್ರವು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜಯಂತಿಯನ್ನು ಆಚರಿಸುತ್ತಿದೆ. ಅವರು ಅಸಂಖ್ಯಾತ ಜನರಿಗೆ ಸ್ಪೂರ್ತಿ ನೀಡುತ್ತಿರುವ ಮುತ್ಸಹದಿಯಾಗಿ ಎತ್ತರದ ಸ್ಥಾನದಲ್ಲಿದ್ದಾರೆ. 1998ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ದೇಶವು ರಾಜಕೀಯ ಅಸ್ಥಿರತೆಯ ಅವಧಿಯನ್ನು ಕಂಡಿತ್ತು. ಸುಮಾರು 9 ವರ್ಷಗಳಲ್ಲಿ ನಾಲ್ಕು ಲೋಕಸಭೆ ಚುನಾವಣೆಗಳನ್ನು ನೋಡಿದ್ದೇವು. ಭಾರತದ ಜನರು ಸಹನೆ ಕಳೆದುಕೊಂಡಿದ್ದರು ಮತ್ತು ಸರ್ಕಾರಗಳ ಕಾರ್ಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸ್ಥಿರ ಮತ್ತು ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಈ ಪರಿಸ್ಥಿತಿಯನ್ನು ಬದಲಾಯಿಸಿದವರು ಅಟಲ್ ಜಿ. ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಸಾಮಾನ್ಯ ನಾಗರಿಕರ ಹೋರಾಟ ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿಯನ್ನು ಅರಿತುಕೊಂಡರು.
ನಮ್ಮ ಸುತ್ತಲಿನ ಹಲವು ಕ್ಷೇತ್ರಗಳಲ್ಲಿ ಅಟಲ್ ಜಿ ಅವರ ನಾಯಕತ್ವದ ದೀರ್ಘಕಾಲೀನ ಪ್ರಭಾವವನ್ನು ನಾವು ನೋಡಬಹುದು. ಅವರ ಯುಗವು ಮಾಹಿತಿ ತಂತ್ರಜ್ಞಾನ ,ದೂರಸಂಪರ್ಕ ಮತ್ತು ಸಂವಹನ ಜಗತ್ತಿನಲ್ಲಿ ಒಂದು ದೊಡ್ಡ ಜಿಗಿತವನ್ನು ಕಂಡಿತು . ಅತ್ಯಂತ ಶಕ್ತಿಯುತ ಯುವ ಶಕ್ತಿಯನ್ನು ಹೊಂದಿರುವ ರಾಷ್ಟ್ರಕ್ಕೆ ಇದು ವಿಶೇಷವಾಗಿ ಮಹತ್ವದ್ದಾಗಿತ್ತು. ಮೊದಲ ಬಾರಿಗೆ ,ಅಟಲ್ ಜಿ ನೇತೃತ್ವದ ಎನ್ಡಿಎ ಸರ್ಕಾರವು ಸಾಮಾನ್ಯ ನಾಗರಿಕರಿಗೆ ತಂತ್ರಜ್ಞಾನವು ಲಭ್ಯವಾಗುವಂತೆ ಮಾಡಲು ಗಂಭೀರ ಪ್ರಯತ್ನ ಮಾಡಿತು. ಅಲ್ಲದೆ, ಭಾರತದ ಸಂಪರ್ಕ ವ್ಯವಸ್ಥೆಯಲ್ಲಿ ದೂರ ದೃಷ್ಟಿಯನ್ನು ತೋರಿಸಿತು .ಇಂದಿಗೂ, ಬಹುತೇಕ ಜನರು ಭಾರತದ ಮೂಲೆ ಮೂಲೆಯನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಯೋಜನೆಗಳನ್ನು ನೆನಪಿಸಿಕೊಳ್ಳುತ್ತಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಂತಹ ಉಪಕ್ರಮಗಳ ಮೂಲಕ ಸ್ಥಳೀಯ ಸಂಪರ್ಕವನ್ನು ಹೆಚ್ಚಿಸಲು ವಾಜಪೇಯಿ ಸರ್ಕಾರದ ಪ್ರಯತ್ನಗಳು ಅಷ್ಟೇ ಗಮನಾಹ್ಮವಾಗಿದೆ.
ದೆಹಲಿ ಮೆಟ್ರೋ ಗಾಗಿ ವ್ಯಾಪಕವಾದ ಕೆಲಸವನ್ನು ಮಾಡುವ ಮೂಲಕ ಮೆಟ್ರೋ ಸಂಪರ್ಕವನ್ನು ಉತ್ತೇಜಿಸುತು. ಇದು ವಿಶ್ವದರ್ಜೆಯ ಮೂಲ ಸೌಕರ್ಯ ಯೋಜನೆಯಾಗಿ ಹೊರಹೊಮ್ಮಿದೆ. ಹೀಗಾಗಿ ,ವಾಜಪೇಯಿ ಸರ್ಕಾರವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಿದ್ದು ಮಾತ್ರವಲ್ಲದೆ ದೂರದ ಪ್ರದೇಶಗಳನ್ನು ಹತ್ತಿರಕ್ಕೆ ತಂದಿತು, ಈ ಮೂಲಕ ಏಕತೆ ಮತ್ತು ಏಕೀಕರಣವನ್ನು ಉತ್ತೇಜಿಸಿತು. ಸಮಾಜಿಕ ಕ್ಷೇತ್ರದಲ್ಲಿ, ಸರ್ವಶೀಕ್ಷ ಅಭಿಯಾನದಂತಹ ಉಪಕ್ರಮಗಳ ದೇಶಾದ್ಯಂತ ಜನರಿಗೆ, ವಿಶೇಷವಾಗಿ ಬಡವರು ಮತ್ತು ಅಂಚಿನಲ್ಲಿರುವವರಿಗೆ ಆಧುನಿಕ ಶಿಕ್ಷಣವನ್ನು ಪ್ರವೇಶಿಸುವ ಭಾರತವನ್ನು ನಿರ್ಮಿಸುವ ಕನಸು ಅಟಲ್ ಜಿ ಕಂಡಿದ್ದರು ಎಂಬುದನ್ನು ಎತ್ತಿ ತೋರಿಸುತ್ತದೆ. ಹಾಗೆಯೇ ಅವರ ಸರ್ಕಾರವು ಹಲವಾರು ಆರ್ಥಿಕ ಸುಧಾರಣೆಗಳನ್ನು ತಂದಿತು. ಇದು ಸ್ವಜನ ಪಕ್ಷ ಮತ್ತು ನಿಶ್ಚಲತೆಯನ್ನು ಉತ್ತೇಜಿಸುವ ಆರ್ಥಿಕ ತತ್ವವನ್ನು ಅನುಸರಿಸಿದ ದಶಕಗಳ ನಂತರ ಭಾರತದ ಆರ್ಥಿಕ ಉತ್ಕಷ್ಟಕ್ಕೆ ವೇದಿಕೆಯಾಗಿತ್ತು. ವಾಜಪೇಯಿ ಅವರ ನಾಯಕತ್ವದ ಅದ್ಭುತ ಉದಾಹರಣೆಯನ್ನು 1998ರ ಬೇಸಿಗೆಯಲ್ಲಿ ಕಾಣಬಹುದು .
ಅವರ ಸರ್ಕಾರವು ಆಗತಾನೇ ಅಧಿಕಾರ ವಹಿಸಿಕೊಂಡಿತ್ತು ಮತ್ತು ಮೇ 11ರಂದು ಭಾರತವು ಆಪರೇಷನ್ ಶಕ್ತಿ ಎಂದು ಕರೆಯಲಾಗುವ ಪ್ರೋ ಕನ್ ಪರೀಕ್ಷೆಗಳನ್ನು ನಡೆಸಿತು. ಈ ಪರೀಕ್ಷೆಗಳು ಭಾರತದ ವೈಜ್ಞಾನಿಕ ಸಮುದಾಯದ ಶಕ್ತಿಗೆ ಉದಾಹರಣೆಯಾದ ವು. ಭಾರತ ಈ ಪರೀಕ್ಷೆ ನಡೆಸಿದಾಗ ವಿಶ್ವವೇ ಬೆಚ್ಚಿಬಿದ್ದಿತು ಹಾಗೂ ಯಾವುದೇ ಅನುಮಾನಕ್ಕೆ ಅಸ್ಪದವಿಲ್ಲದೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತು. ಯಾವುದೇ ಸಾಮಾನ್ಯ ನಾಯಕರು ತಲೆಬಾಗುತ್ತಿದ್ದರು, ಆದರೆ ಅಟಲ್ ಜಿ ವಿಭಿನ್ನವಾಗಿದ್ದರು. ನಂತರ ಏನಾಯಿತು? ಭಾರತವು ಬಲವಾಗಿ ಮತ್ತು ದೃಢವಾಗಿ ನಿಂತಿತು ಮತ್ತು ಸರ್ಕಾರವು ಎರಡು ದಿನಗಳ ನಂತರ ಮೇ 13 ರಂದು ಮರು ಪರೀಕ್ಷೆಗೆ ಕರೆ ನೀಡಿತು! ಮೇ 11ರ ಪರೀಕ್ಷೆಗಳು ವೈಜ್ಞಾನಿಕ ಪರಾಕ್ರಮವನ್ನು ತೋರಿಸಿದರೆ. ಮೇ 13ರ ಪರೀಕ್ಷೆಗಳು ನಿಜವಾದ ನಾಯಕತ್ವವನ್ನು ತೋರಿಸಿದವು. ಭಾರತವು ಬೆದರಿಕೆ ಅಥವಾ ಒತ್ತಡಕ್ಕೆ ಮಣಿಯುವ ದಿನಗಳು ಮುಗಿದುಹೋದವು ಎಂಬ ಸಂದೇಶವನ್ನು ಜಗತ್ತಿಗೆ ನೀಡಿತು .ಅಂತರರಾಷ್ಟ್ರೀಯ ನಿರ್ಬಂಧಗಳು ಎದುರಿಸುತ್ತಿದ್ದರು, ವಾಜಪೇಯಿಯವರ ಆಗಿನ ಎನ್ ಡಿ ಎ ಸರ್ಕಾರವು ತನ್ನ ಸರ್ವಭೌಮಾತ್ವವನ್ನು ಕ್ಷಿಸುವ ರಕ್ಷಿಸುವ ಭಾರತದ ಹಕ್ಕನ್ನು ಸ್ಪಷ್ಟ ಪಡಿಸುವುದರ ಜೊತೆಗೆ ವಿಶ್ವ ಶಾಂತಿಯ ಪ್ರಬಲ ಪ್ರತಿಪಾದವಾಗಿತ್ತು. ಅಟಲ್ ಜಿ ಭಾರತೀಯ ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡರು ಮತ್ತು ಅದನ್ನು ಬಲಪಡಿಸುವ ಅಗತ್ಯವನ್ನು ಸಹ ಅರ್ಥ ಮಾಡಿಕೊಂಡರು. ಅಟಲ್ ಜಿ ಅವರ ಎನ್ ಡಿ ಎ ರಚನೆಯ ಅದ್ಯಕ್ಷತೆ ವಹಿಸಿದ್ದರು, ಇದು ಭಾರತೀಯ ರಾಜಕೀಯದಲ್ಲಿ ಮೈತ್ರಿಗಳು ಮೂರು ವ್ಯಾಖ್ಯಾನಿಸಿತು. ಅವರು ಇತರರನ್ನು ಒಟ್ಟುಗೂಡಿಸಿದರು ಮತ್ತು ಎನ್ ಡಿ ಎ ಯನ್ನು ಅಭಿವೃದ್ಧಿ, ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಮಹತ್ವಾಕಾಂಕ್ಷೆಗಳಿಗೆ ಶಕ್ತಿಯನ್ನಾಗಿ ಮಾಡಿದರು.
ಇದನ್ನೂ ಓದಿ:- ಜಿಲ್ಲೆಯಲ್ಲೆಡೆ ಸಂಭ್ರಮ ಸಡಗರ ಕ್ರಿಸ್ ಮಸ್
ಅಟಲ್ ಜಿ ಅವರ ರಾಜಕೀಯ ಜೀವನದುದ್ದಕ್ಕೂ ಅವರ ಸಂಸದೀಯ ಪ್ರತಿಭೆ ಕಂಡು ಬಂದಿದೆ. ಬೆರಳೆಣಿಸಿಕೆಯ ಸಂಸದರಿದ್ದ ಪಕ್ಷಕ್ಕೆ ಸೇರಿದ ಅವರು, ಆಗಿನ ಸರ್ವಶಕ್ತ ಕಾಂಗ್ರೆಸ್ ಪಕ್ಷದ ಅಧಿಕಾರವನ್ನೇ ಅಲ್ಲಾಡಿಸಲು ಅವರು ಮಾತು ಸಾಕಾಗಿತ್ತು .ಪ್ರಧಾನಿಯಾಗಿ ಅವರು ಪ್ರತಿಪಕ್ಷಗಳ ಟೀಕೆ ಗಳನ್ನು ತಮ್ಮ ಶೈಲಿ ಮತ್ತು ವಿಷಯದಿಂದ ಮೊಂಡಾಗಿಸಿದರು. ಅವರ ರಾಜಕೀಯ ಜೀವನವು ಹೆಚ್ಚಾಗಿ ವಿರೋಧ ಪಕ ಪಕ್ಷದಲ್ಲಿಯೇ ಕಳೆಯಿತು ,ಆದರೆ ಕಾಂಗ್ರೆಸ್ ಅವರನ್ನು ದೇಶದ್ರೋಹಿ ಎಂದು ಕರೆಯುವ ಕೀಳು ಮಟ್ಟಕ್ಕೆ ಇಳಿದಾಗಲೂ ಅವರಲ್ಲಿ ಯಾರ ಬಗ್ಗೆಯೂ ಕಹಿಯ ಕುರುಹು ಸಹ ಇರಲಿಲ್ಲ !ಅವರು ಅವಕಾಶವಾದಿ ಮಾರ್ಗಗಳ ಮೂಲಕ ಅಧಿಕಾರಕ್ಕೆ ಅಂಟಿಕೊಂಡವರಲ್ಲ. 1996 ರಲ್ಲಿ, ಕುದುರೆ ವ್ಯಾಪಾರ ಮತ್ತು ಕೊಳಕು ರಾಜಕೀಯದ ಹಾದಿಯನ್ನು ಅನುಸರಿಸುವುದಕ್ಕಿಂತ ರಾಜೀನಾಮೆ ನೀಡುವುದು ಉತ್ತಮ ಎಂದು ಅವರು ಭಾವಿಸಿದರು .
1999ರಲ್ಲಿ ಅವರ ಸರ್ಕಾರ 1 ಮತದಿಂದ ಸೋತಿತು. ಆ ಸಮಯದಲ್ಲಿ ನಡೆಯುತ್ತಿದ್ದ ಅನೈತಿಕ ರಾಜಕಾರಣವನ್ನು ಪ್ರಶ್ನಿಸುವಂತೆ ಅನೇಕರು ಕೇಳಿಕೊಂಡರು, ಆದರೆ ಅವರು ನಿಯಮಗಳನ್ನು ಅನುಸರಿಸಲು ಆಧ್ಯತೆ ನೀಡಿದರು. ಅಂತಿಮವಾಗಿ, ಅವರು ಜನರಿಂದ ಮತ್ತೊಂದು ಪ್ರಬಲ ಜನ ದೇಶದೊಂದಿಗೆ ಮರಳಿದರು. ಸಂವಿಧಾನವನ್ನು ರಚಿಸುವ ಭದ್ರತೆಯ ವಿಷಯಕ್ಕೆ ಬಂದಾಗ ,ಅಟಲ್ ಜಿ ಮುಂಚುಣಿಯಲ್ಲಿ ನಿಲ್ಲುತ್ತಾರೆ. ಮುಖರ್ಜಿಯವರ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಹುತಾತ್ಮತೆಯಿಂದ ಅವರು ಆಳವಾಗಿ ಪ್ರಭಾವಿತರಾಗಿದ್ದರು. ವರ್ಷಗಳ ನಂತರ, ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಅಧಾರ ಸ್ತಂಭವಾಗಿದ್ದರು. ತುರ್ತು ಪರಿಸ್ಥಿತಿಯ ನಂತರ 1977ರ ಚುನಾವಣೆಯ ಸಮಯದಲ್ಲಿ, ಅವರು ತಮ್ಮ ಪಕ್ಷವನ್ನು (ಜನಸಂಘ) ಜನತಾ ಪಕ್ಷದೊಂದಿಗೆ ವಿಲೀನಗೊಳಿಸಲು ಒಪ್ಪಿಕೊಂಡರು. ಇದು ಅವರಿಗೆ ಮತ್ತು ಇತರರಿಗೆ ನೋವಿನ ನಿರ್ಧಾರವಾಗಿತ್ತೆಂದು ನನಗೆ ಖಾತ್ರಿಯಿದೆ, ಆದರೆ ಸಂವಿಧಾನವನ್ನು ರಕ್ಷಿಸುವುದು ಅತ್ಯಂತ ಮುಖ್ಯವಾಯಿತ್ತು. ಭಾರತೀಯ ಸಂಸ್ಕೃತಿಯಲ್ಲಿ ಅಟಲ್ ಜಿ ಎಷ್ಟು ಆಳವಾಗಿ ಬೇರೂರಿದ್ದರು ಎಂಬುದು ಕೂಡ ಗಮನಾರ್ಹವಾಗಿದೆ.
ಭಾರತದ ವಿದೇಶಾಂಗ ಸಚಿವರಾದ ನಂತರ, ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಭಾರತೀಯ ನಾಯಕರಾದರು. ಇದು ಭಾರತದ ಪರಂಪರೆ ಮತ್ತು ಅಸ್ಥಿತೆಯ ಬಗ್ಗೆ ಅವರಿಗಿದ್ದ ಅಪಾರ ಹೆಮ್ಮೆಯನ್ನು ಪ್ರದರ್ಶಿಸಿತು, ಜಾಗತಿಕ ವೇದಿಕೆಯಲ್ಲಿ ಆಳಿಸಲಾಗದ ಗುರುತು ಮೂಡಿಸಿತು. ಅಟಲ್ ಜಿ ಅವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿದ್ದರು ಮತ್ತು ಅವರ ಸಾಹಿತ್ಯ ಮತ್ತು ಅಭಿ ವ್ಯಕ್ತಿಯ ಮೇಲಿನ ಪ್ರೀತಿಯಿಂದ ಅವರ ಜೀವನವು ಶ್ರೀಮಂತವಾಗಿತ್ತು. ಸೃಜನಶೀಲ ಬರಹಗಾರ ಮತ್ತು ಕವಿಯಾಗಿ ಅವರು ಸ್ಫೂರ್ತಿ ನೀಡಲು. ಆಲೋಚನೆಯನ್ನು ಪ್ರಚೋದಿಸಲು ಮತ್ತು ಸಾಂತ್ವನ ಹೇಳಲು ಪದಗಳನ್ನು ಬಳಸಿದರು. ರಾಷ್ಟ್ರಕ್ಕಾಗಿ ಅವರ ಆಂತರಿಕ ಹೋರಾಟಗಳು ಮತ್ತು ಭರವಸೆಗಳನ್ನು ಪ್ರತಿಬಿಂಬಿಸುವ ಅವರ ಕವಿತೆಗಳು ಎಲ್ಲಾ ವಯೋಮಾನದ ಜನರಲ್ಲಿ ಅನುರಾಣಿಸುತ್ತಲೇ ಇವೆ. ಅಟಲ್ ಜಿ ಅವರಂತಹ ವ್ಯಕ್ತಿಯೊಂದಿಗೆ ಕಲಿಯಲು ಮತ್ತು ಅವರೊಂದಿಗೆ ಸಂವಹನ ನಡೆಸಲು ನನ್ನಂತಹ ಅನೇಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಾಗಿ ಅವಕಾಶ ಸಿಕ್ಕಿದ್ದು ಅದೃಷ್ಟದ ಸಂಗತಿಯಾಗಿದೆ.
ಬಿಜೆಪಿಗೆ ಅವರ ಕೊಡುಗೆ ಮೂಲಭೂತವಾದುದು. ಆ ದಿನಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವನ್ನು ಕೊನೆಗೊಳಿಸಲು ಪರ್ಯಾಯ ನಿರೂಪಣೆಯನ್ನು ಮುನ್ನಡೆಸಿದ್ದು ಅವರ ಹಿರಿಮೆಯನ್ನು ತೋರಿಸುತ್ತದೆ. ಅವರ 100 ನೇ ಜನ್ಮ ವಾರ್ಷಿಕೋತ್ಸವದಂದು, ಅವರ ಆದರ್ಶಗಳನ್ನು ಸಾಕಾರಗೊಳಿಸಲು ಮತ್ತು ಭಾರತಕ್ಕಾಗಿ ಅವರ ಕನಸನ್ನು ನನಸಾಗಿಸಲು ನಮ್ಮನ್ನು ಸಮರ್ಪಿಸಿಕೊಳ್ಳೋಣ. ಅವರ ಉತ್ತಮ ಆಡಳಿತ, ಏಕತೆ ಮತ್ತು ಪ್ರಗತಿಯ ತತ್ವಗಳನ್ನು ಒಳಗೊಂಡ ಭಾರತವನ್ನು ನಿರ್ಮಿಸಲು ನಾವು ಶ್ರಮಿಸೋಣ. ನಮ್ಮ ರಾಷ್ಟ್ರದ ಸಮಥ್ಯದ ಬಗ್ಗೆ ಅಟಲ್ ಜಿ ಅವರ ಅಚಲವಾದ ನಂಬಿಕೆಯು ಉನ್ನತ ಗುರಿಗಾಗಿ ಹೆಚ್ಚು ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ.