ವಿದ್ಯುತ್ ತರ ಏರಿಕೆ ಹೊರಗೆ ಇಲ್ಲವೇ ಪರಿಣಾಮ

ವಿದ್ಯುತ್ ತರ ಏರಿಕೆ ಹೊರಗೆ ಇಲ್ಲವೇ ಪರಿಣಾಮ

ರಾಜ್ಯದಲ್ಲಿ ಕಳೆದ 25 ವರ್ಷಗಳಿಂದ ವಿದ್ಯುತ್ ನಿರಂತರ ಏರಿಕೆ ಇದೆ. ಕಡೆ ಸರ್ಕಾರ ಸಬ್ಸಿಡಿ ಹೆಚ್ಚಿಸುತ್ತಿದೆ. ಮತ್ತೊಂದು ಕಡೆ ಗ್ರಾಹಕರು ವಿದ್ಯುತ್‌ ದರ ನೀಡುತ್ತಲೇ ಬಂದಿದ್ದಾರೆ. ಆದರೂ ವಿದ್ಯುತ್ ವಿತರಣ ಕಂಪನಿಗಳ ಸಾಲ ಮಾತ್ರ ಪ್ರತಿ ವರ್ಷ ಅಧಿಕಗೊಳ್ಳುತ್ತಲೇ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ಎಸ್ಕಾಂಗಳು ದಿವಾಳಿಯಾದರೂ ಆಶ್ಚರ್ಯವೇನೂ ಇಲ್ಲ. ವಿದ್ಯುತ್ ರಂಗವನ್ನು ಸಂಪೂರ್ಣವಾಗಿ ಖಾಸಗಿ ರಂಗಕ್ಕೆ ಸಂಪೂರ್ಣವಾಗಿ ಒಪ್ಪಿಸುವ ಹಂತದಲ್ಲೂ ನಾವಿಲ್ಲ, ಖಾಸಗಿ ಕಂಪನಿಗಳಲ್ಲಿ ಲಾಭಗಳಿಕೆಯ ಹಂಬಲ ಕಂಡು ಬರುತ್ತಿದೆಯೇ ಹೊರತು ಸಾಮಾಜಿಕ ಅನಿವಾರ್ಯತೆಗೆ ಸ್ಪಂದಿಸುವ ಲಕ್ಷಣ ಕಂಡು ಬರುತ್ತಿಲ್ಲ.

ಬಹುವಾರ್ಷಿಕ ವಿದ್ಯುತ್ ದರವನ್ನು ಎಲ್ಲ ಕಂಪನಿಗಳು ಪ್ರಕಟಿಸಿವೆ. ಪ್ರತಿ ಯೂನಿಟ್‌ಗೆ 2025-26ಕ್ಕೆ 67-70 ಪೈಸೆ, 2026-27 85-90, 27-28 85-90: ಪೈಸೆ ಏರಿಕೆಯನ್ನು ಸೂಚಿಸಿವೆ. ಇದನ್ನು ಕೆಇಆರ್‌ಸಿ ಪ್ರತಿವರ್ಷ ಪರಿಶೀಲಿಸಿ ಮುಂದಿನ ವರ್ಷ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಹೊಸ ದರವನ್ನು ಪ್ರಕಟಿಸಬೇಕು. ಕಳೆದ ವರ್ಷ ರಾಜ್ಯದಲ್ಲಿ ಮಳೆ ಕೊರತೆ ಇತ್ತು. ಜಲವಿದ್ಯುತ್ ಉತ್ಪಾದನೆ ಕಡಿಮೆ ಇತ್ತು. ಈಗ ಎಲ್ಲ ಜಲವಿದ್ಯುತ್ ಕೇಂದ್ರಗಳಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಈಗ ನಾವು ಪ್ರತಿದಿನ 32 ದಶಲಕ್ಷ ಯೂನಿಟ್ ವಿದ್ಯುತ್ತನ್ನು ಜಲ ವಿದ್ಯುತ್‌ ನಿಂದ ಪಡೆಯುತ್ತಿದ್ದೇವೆ. ಇದೇ ಪ್ರಮಾಣದಲ್ಲಿ ಬಳಸಿದರೆ ಇನ್ನೂ 234 ದಿನ ಜಲ ವಿದ್ಯುತ್ ಇರುತ್ತದೆ. ಇದು ಅತಿ ಕಡಿಮೆ ವೆಚ್ಚದಲ್ಲಿ ಲಭಿಸುವ ವಿದ್ಯುತ್‌ ಆಗಿರುವುದರಿಂದ ನಮ್ಮ ವಿದ್ಯುತ್ ದರ ಕಡಿಮೆಯಾಗಬೇಕು.

ನಮ್ಮಲ್ಲಿ ಲಭ್ಯವಿರುವ ವಿದ್ಯುತ್ ಮೂಲಗಳನ್ನು ನೋಡಿದರೆ ಶಾಖೋತ್ಪನ್ನ ಮತ್ತು ಸೋಲಾರ್ ಸಮಪ್ರಮಾಣದಲ್ಲಿ ಲಭಿಸುತ್ತಿದೆ. ಅದೇರೀತಿ ಕೇಂದ್ರೀಯ ವಿದ್ಯುತ್ ಜಾಲದಿಂದ ಶೇ.17.6 ರಷ್ಟು ವಿದ್ಯುತ್ ಲಭಿಸುತ್ತಿದೆ. ವಿದ್ಯುತ್ ಬಳಕೆ ಪ್ರಮಾಣ ನೋಡಿದರೆ ಒಟ್ಟು ಗ್ರಾಹಕರು 3.20 ಕೋಟಿ. ಕೃಷಿಗೆ ಶೇ.40, ಗೃಹಬಳಕೆಗೆ ಶೇ. 21, ವಾಣಿಜ್ಯ ಬಳಕೆಗೆ ಶೇ. 10.6, ಕೈಗಾರಿಕೆಗೆ ಶೇ.16 ರಷ್ಟು ವಿದ್ಯುತ್ ಹೋಗುತ್ತಿದೆ. ಕೃಷಿ ಮತ್ತು ಗೃಹಬಳಕೆಗೆ ಸರ್ಕಾರ ಸಹಾಯಧನ ನೀಡುವುದರಿಂದ ವಿದ್ಯುತ್ ಕಂಪನಿಗಳಿಗೆ ಹೆಚ್ಚಿನ ವರಮಾನ ಬರುವುದಿಲ್ಲ. ಇದು ಗ್ಯಾರಂಟಿ ಯೋಜನೆಯಲ್ಲಿ ಬರುವುದರಿಂದ ವಿದ್ಯುತ್ ವಿತರಣ ಕಂಪನಿಗಳು ನಷ್ಟ ಅನುಭವಿಸುವುದು ನಿಶ್ಚಿತ. ಸರ್ಕಾರ ಭರಿಸುವ ಸಬ್ಸಿಡಿ ಕೂಡ ಜನರ ತೆರಿಗೆ ಹಣವೇ ಆಗಿರುವುದರಿಂದ ಎಸ್ಕಾಂಗಳು ಈ ಗ್ರಾಹಕರಿಂದ ಹೆಚ್ಚಿನ ವರಮಾನ ನಿರೀಕ್ಷಿಸಲು ಬರುವುದಿಲ್ಲ. ಹೀಗಾಗಿ ಎಸ್ಕಾಂಗಳು ಲಾಭಗಳಿಸುವುದಿರಲಿ, ಮಾಡಿದ ವೆಚ್ಚವನ್ನು ಹಿಂದಕ್ಕೆ ಪಡೆಯುವುದೇ ಕಷ್ಟವಾಗಿದೆ. ಅವುಗಳ ಆದಾಯ ಕೊರತೆಯನ್ನು ನೋಡಿದರೆ ತಿಳಿಯುತ್ತದೆ. ಬೆಸ್ಕಾಂ ಕಂಪನಿ 2572.69 ಕೋಟಿ ರೂ. ಮಂಗಳೂರು ಕಂಪನಿ 768.97 60 0 51904 ఆదాయం రకి ఎదురిగుత్తిది గుల్బగ కంవనియంత ಶೇ.46 ರಷ್ಟು ಸರ್ಕಾರದ ಸಹಾಯಧನದ ಮೇಲೆ ನಡೆಯುತ್ತಿದೆ. ಇಂಥ ಪರಿಸ್ಥಿತಿ ಎಂದು ಉತ್ತಮಗೊಳ್ಳುತ್ತದೋ ತಿಳಿಯದು.

ಮುಕ್ತ ಮಾರುಕಟ್ಟೆ

ಇವುಗಳ ನಡುವೆ ಈಗ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು ಮುಕ್ತ ಮಾರುಕಟ್ಟೆಯಲ್ಲಿ ನೇರವಾಗಿ ವಿದ್ಯುತ್ ಖರೀದಿ ಮಾಡಲು ಮುಂದಾಗಿರುವುದು ಎಸ್ಕಾಂಗಳಿಗೆ ತಲೆನೋವಾಗಿದೆ ಅದರಲ್ಲೂನಗರಗಳಲ್ಲಿರುವಕೈಗಾರಿಕೆಮತ್ತುವಾಣಿಜ್ಯಬಳಕೆದಾರರುಮುಕ್ತಮಾರುಕಟ್ಟೆಗೆವಲಸೆ ಹೋದರೆ ಎಲ್ಲಎಸ್ಕಾಂಗಳ ಆದಾಯ ಕುಸಿಯುವುದು ನಿಶ್ಚಿತ,ಅದರಿಂದ ಎಸ್ಕಾಂಗಳು ಸೋಲಾರ್ ಬಳಕೆಯನ್ನು ಹೆಚ್ಚು ಉತ್ತೇಜನ ನೀಡುತ್ತಿಲ್ಲ. ಆದರೆ ಕೇಂದ್ರ ಸರ್ಕಾರ ನೇರವಾಗಿ ಸಹಾಯಧನ ನೀಡುತ್ತಿರುವುದರಿಂದ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇಂದ್ರದ ಧೋರಣೆಯನ್ನು ಧಿಕ್ಕರಿಸಲು ಬರುವುದಿಲ್ಲ. ನಗರ ಪ್ರದೇಶದಲ್ಲಿ ಸೋಲಾರ್ ಮತ್ತು ಮುಕ್ತ ಮಾರುಕಟ್ಟೆ ಬಳಕೆ ಅಧಿಕಗೊಳ್ಳುತ್ತಿದೆ. ಒಂದು ಕಡೆ ಸರ್ಕಾರದ ಸಹಾಯಧನ, ಮತ್ತೊಂದು ಕಡೆ ಮುಕ್ತ ಮಾರುಕಟ್ಟೆಯ ಮೂಲಕ ಸೋಲಾರ್ ವಿದ್ಯುತ್ ಮಾರಾಟೆ ಎಸ್ಕಾಂಗಳಿಗೆ ಉಸಿರು ಕಟ್ಟಿಸುವ ವಾತಾವರಣ ರೂಪಿಸುತ್ತಿದೆ.

ಇದನ್ನೂ ಓದಿ: ವಿವಾಹ ವ್ಯವಹಾರವಲ್ಲ, ಅದು ಸಂಸ್ಕೃತಿಗೆ ಆಧಾರ

ಈಗಎಸ್ಕಾಂಗಳಿಗೆ ವಿದ್ಯುತ್ ಮಾರ್ಗಗಳನ್ನು ನಿರ್ವಹಿಸಲು ಹಣವಿಲ್ಲದ ಪರಿಸ್ಥಿತಿ 11 ಕೆವಿಫೀಡರ್‌ಗಳನ್ನೂ ಈಗ ಖಾಸಗಿಯವರಿಗೆ ಹೊರ ಗುತ್ತಿಗೆಯ ಮೇಲೆ ನೀಡಲಾಗುತ್ತಿದೆ. ಅದರಿಂದ ಗುಣಮಟ್ಟಇಳಿಮುಖಗೊಂಡಿದೆ. ಟ್ರಾನ್ಸ್‌ಫಾರ್ಮ ರಗಳ ನಿರ್ವಹಣೆಇಳಿಮುಖಗೊಂಡು ಸಾರ್ವಜನಿಕರಕುಂದುಕೊರತೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಸಹಾಯಧನ ಮತ್ತೊಂದು ಖಾಸಗಿ ವಲಯಕ್ಕೆಉತ್ತೇಜನ ಮುಂಬರುವ ದಿನಗಳಲ್ಲಿಸರ್ಕಾರಿಕಂಪನಿಗಳನ್ನು ನುಂಗಿ ಹಾಕುವುದರಲ್ಲಿ ಸಂದೇಹವಿಲ್ಲ. ಇದು ರಾಜಕಾರಣಿಗಳಿಗೆ ಬೇಕಾದ ಸಂದರ್ಭ. ಅವರು ಚಿನ್ನದ . ಮೊಟ್ಟೆಗಾಗಿ ಕೋಳಿಯನ್ನು ಕೊಲ್ಲುವ ಮನಸ್ಥಿತಿಯಲ್ಲಿದ್ದಾರೆ.

ಇದುವರೆಗೆ ನಡೆದಿರುವ ವಿದ್ಯಮಾನಗಳನ್ನು ನೋಡಿದರೆ ತಿಳಿಯುತ್ತದೆ. ಕಲ್ಲಿದ್ದಲು ಗಣಿಗಳು ಈಗ ಖಾಸಗಿಯವರ ಪಾಲಾಗುತ್ತಿದೆ. ಸರ್ಕಾರಿ ಜಲ ವಿದ್ಯುತ್ ಯೋಜನೆಗಳ ಬಳಿ ಖಾಸಗಿ ಕಂಪನಿಗಳು ತಲೆಎತ್ತುತ್ತಿವೆ. ಸೋಲಾರ್‌ನಲ್ಲಿ ಖಾಸಗಿ ಮೇಲುಗೈ ಸಾಧಿಸಿದೆ. ಅದಾನಿ ಹಗರಣ ನೋಡಿದರೆ ತಿಳಿಯುತ್ತದೆ. ಖಾಸಗಿ ರಂಗದವರು ವಿದ್ಯುತ್ ದರ ಇಳಿಯುವುದಕ್ಕೆ ಬಿಡುವುದಿಲ್ಲ. ಸಿಮೆಂಟ್ ಉತ್ಪಾದನೆ ರೀತಿಯಲ್ಲಿ ವಿದ್ಯುತ್ ರಂಗ ಖಾಸಗಿಯವರ ಕಪಿಮುಷ್ಟಿಗೆ ಸಿಲುಕುವುದರಲ್ಲಿ ಆಶ್ಚರ್ಯವೇನೂ ಇಲ್ಲ. ದೇಶದ ಆರ್ಥಿಕ ಬೆಳವಣೆಗೆ ಕಾರಣವಾಗುವ ವಿದ್ಯುತ್ ಖಾಸಗಿ ಪಾಲಾದರೆ ಜನಸಾಮಾನ್ಯರ ಗತಿ ಏನು ಎಂಬುದು ತಿಳಿಯುತ್ತಿಲ್ಲ. ಮುಂದಿನ ವರ್ಷಗಳಲ್ಲಿ ವಿದ್ಯುತ್ ಅಭಾವ ಸೃಷ್ಟಿಯಾದರೆ ಖಾಸಗಿ ಕಂಪನಿಗಳು ಅದನ್ನು ಸ್ವಾಗತಿಸುವುದರಲ್ಲಿ ಸಂದೇಹವಿಲ್ಲ. ಸರ್ಕಾರಿ ಕಂಪನಿಗಳು ಗ್ಯಾರಂಟಿ ಯೋಜನೆ ಮೇಲೆ ಮತ್ತು ಮೀಸಲಾತಿ ನಿಯಮಗಳಿಂದ ಸೊರಗಿಹೋಗುತ್ತವೆ.

ಸೋಲಾರ್ ವಿದ್ಯುತ್ ಬಂದಾಗ ದರ ಏರಿಕೆ ಇರುವುದಿಲ್ಲ ಎಂದು ಭಾವಿಸಿದ್ದೆವು. ಆದರೆ ಅದಕ್ಕೆ ವಿರುದ್ಧವಾಗಿ ಏರಿಕೆಯಾಗಿದೆ. ಮುಕ್ತಮಾರುಕಟ್ಟೆಯಲ್ಲಿ ಪ್ರತಿ ಯೂನಿಟ್ ಸೋಲಾರ್‌ಗೆ 2-3 ರೂ. ಗ್ರಾಹಕರು ಪಾವತಿ ಮಾಡುವುದು ಪ್ರತಿ ಯೂನಿಟ್‌ಗೆ 7 ರೂ. ಆದರೂ ಕಂಪನಿಗಳು ನಷ್ಟದಲ್ಲಿವೆ. ಇತ್ತ ಸರ್ಕಾರ ಜೇಬಿಗೂ ಕತ್ತರಿ, ಅತ್ತ ಗ್ರಾಹಕನ ಜೇಬಿಗೂ ಬ್ಲೇಡ್ ಎಂದರೆ ಇದಕ್ಕೆ ಪರಿಹಾರ ಎಲ್ಲಿ? ಈಗ ಕೆಪಿಸಿ ರಾಜ್ಯ ಸರ್ಕಾರದ್ದು, ಅದರಿಂದ ಸಾಲದ . ರೂಪದಲ್ಲಿ ವಿದ್ಯುತ್ ಲಭಿಸುತ್ತಿದೆ. ಖಾಸಗಿ ಕಂಪನಿಗೆ ಹಣ ಕೊಡಲಿಲ್ಲ ಎಂದರೆ ತಕ್ಷಣವೇ ವಿದ್ಯುತ್‌ ಸಿಗುವುದಿಲ್ಲ. ಆದರೂ ಸರ್ಕಾರ ಖಾಸಗಿ ಕಂಪನಿಗಳಿಗೆ ಮಣೆ ಹಾಕುವುದನ್ನು ನಿಲ್ಲಿಸಿಲ್ಲ. ಖಾಸಗಿ ಕಂಪನಿಯವರು ದುಡ್ಡು ಚೆಲ್ಲಿ ದುಡ್ಡು ಸಂಪಾದಿಸುವ ಕಲೆ ಕಲಿತಿದ್ದಾರೆ. ಅದರಿಂದ ಅವರಿಗೆ ಲಂಚ ಸಮಸ್ಯೆ ಅಲ್ಲ. ಅದು ಲಾಭಾಂಶದಲ್ಲಿ ಸೇರಿ ಹೋಗುತ್ತದೆ. ಸರ್ಕಾರಿ ಸಂಸ್ಥೆಗಳು ಆ ರೀತಿ ಕೆಲಸ ಮಾಡಲು ಬರುವುದಿಲ್ಲ.

ಕೂಡಗಿಯಲ್ಲಿ ಎನ್‌ಟಿಪಿಸಿ ಉತ್ಪಾದನೆ ಕೇಂದ್ರ ಆರಂಭಿಸುವಾಗ ಅದಕ್ಕೆ ಅಡ್ಡಿಯಾದವರು ಖಾಸಗಿ ಕಂಪನಿಗಳೇ ಹೊರತು ಬೇರಾರೂ ಅಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಎನ್‌ಟಿಪಿಸಿಗೆ ನಿಗದಿಪಡಿಸಿದ ಕಲ್ಲಿದ್ದಲು ಗಣಿ ಇದೆ. ಅದರಿಂದ ಸಮಸ್ಯೆ ಇಲ್ಲ. ವಿದ್ಯುತ್ ರಂಗದಲ್ಲಿ ಖಾಸಗಿ ಕಂಪನಿಗಳು ಬರುವುದು ಬೇಡ ಎಂದು ಯಾರೂ ಹೇಳುವುದಿಲ್ಲ. ಆದರೆ ಅವುಗಳು ಸರ್ಕಾರಿ ಒಳ ಸಂಸ್ಥೆಗಳನ್ನು ನುಂಗಿ ಹಾಕಬಾರದು. ದೂರವಾಣಿ ಕ್ಷೇತ್ರದಲ್ಲಿ ಇದೇ ಆಗಿದೆ. ವಿದ್ಯುತ್ ರಂಗ ಅದೇ ಹಾದಿ ಹಿಡಿಯಬಾರದು ಎಂದರೆ ಸರ್ಕಾರಿ ಕಂಪನಿಗಳ ದಕ್ಷತೆ ಹೆಚ್ಚಿಸಿ ಕಡಿಮೆ ದರದಲ್ಲಿ ವಿದ್ಯುತ್ ನೀಡುವಂತಾಗಬೇಕು. ನೂರಾರು ಸರ್ಕಾರಿ ಕಂಪನಿಗಳು ಮುಚ್ಚಿ ಹೋಗಿವೆ. ಒಬ್ಬ ರಾಜಕಾರಣಿಯನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಭೋಪಾಲ್ ಅನಿಲ ದುರಂತ ನಡೆದದ್ದು ಖಾಸಗಿ ಕಂಪನಿಯಿಂದಲೇ ಯಾರಿಗೂ ಶಿಕ್ಷೆ ಆಗಲೇ ಇಲ್ಲ. ವಿದ್ಯುತ್‌ ರಂಗದಲ್ಲೂ ಇದೇ ಪರಿಸ್ಥಿತಿ ಇದೆ. ವಿದ್ಯುತ್ ಅಪಘಾತಗಳಲ್ಲಿ ಸಿಬ್ಬಂದಿ ಮತ್ತು ಜನಸಾಮಾನ್ಯರು ಸಾಯುತ್ತಲೇ ಇದ್ದಾರೆ. ಯಾರಿಗೂ ಶಿಕ್ಷೆ ಆಗುವುದಿಲ್ಲ. ಆರ್ಥಿಕವಾಗಿ ಎಸ್ಕಾಂಗಳು ಈ ಕೃಶವಾಗುತ್ತಿವೆ. ಗ್ರಾಹಕರು ವಿದ್ಯುತ್ ದರ ಹೊರೆ ಭರಿಸಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

Leave a Comment