ವಾಜಪೇಯಿ ತಮ್ಮದೇ ಕವಿತೆಯ ಆಶಯವನ್ನು ಪಾಲಿಸಿದ್ದುದು ಗಮನಾರ್ಹ

ವಾಜಪೇಯಿ ತಮ್ಮದೇ ಕವಿತೆಯ ಆಶಯವನ್ನು ಪಾಲಿಸಿದ್ದುದು ಗಮನಾರ್ಹ

ನಡೆ- ನುಡಿಯಿಂದ ಜನಮನ ಗೆದ್ದ ನಾಯಕ

ಸ್ವಾತಂತ್ರಾ ನಂತರದಲ್ಲಿ ದೇಶದ ಸಾರ್ವಜನಿಕ ಜೀವನವು ಕಂಡಿರುವ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರಾದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವವು ಇಂದು (ಡಿ. 25 )ನಡೆಯಲಿದೆ.ಅತ್ಯಂತ ಬಹುಮುಖಿ ವ್ಯಕ್ತಿತ್ವವನು ಹೊಂದಿದ್ದ ,ದೇಶದ ಅತ್ಯುತ್ತಮ ಸಂಸದೀಯ ಪಟ್ಟುಗಳಲ್ಲಿ ಒಬ್ಬರಾಗಿದ್ದ ,ಮಹಾನ್ ಪ್ರಜಾತಂತ್ರವಾದಿಯಾಗಿದ್ದ ,ಭಾರತದ ಭದ್ರತೆ ,ಆರ್ಥಿಕ ಸಮೃದ್ಧಿ ಮತ್ತು ವಿಕಾಸವನ್ನು ಖಾತರಿ ಪಡಿಸುವ ಬದ್ರತೆಯನ್ನು ಹೊಂದಿದ್ದ ವಾಜಪೇಯಿ ಅವರ ಜೀವನವನ್ನು ಅವಲೋಕಿಸಲು ಇಂದು ಸುಸಂದರ್ಭ. 1998ರಲ್ಲಿ ಕೇಂದ್ರ ಸರ್ಕಾರದ ನೇತೃತ್ವ ಹೊತ್ತಿದ್ದ ವಾಜಪೇಯಿ ಅವರ ಭಾರತವನ್ನು ಅಣ್ವಸ್ತ್ರ ಶಕ್ತ ರಾಷ್ಟ್ರವನ್ನಾಗಿಸುವ ಪ್ರಮುಖ್ಯ ತೀರ್ಮಾನವೊಂದನ್ನು ತೆಗೆದುಕೊಂಡಾಗ, ಅವರ ಧೈರ್ಯ, ದುರಾದೃಷ್ಟಿ ಮತ್ತು ಬದ್ಧತೆ ಎಂಥದ್ದು ಎಂಬುದರ ನೋಟ ಲಭಿಸಿತ್ತು. ರಾಷ್ಟ್ರದ ಭದ್ರತೆಗೆ ಆದ್ಯತೆ, ಅರ್ಥವ್ಯವಸ್ತವನ್ನು ಮುಕ್ತಗೊಳಿಸುವುದು ,ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು ಸೇರಿದಂತೆ ಹಲವು ವಲಯಗಳಲ್ಲಿ ವಾಜಪೇಯಿ ಅವರ ಪ್ರಧಾನಿಯಗಿ ಆರು ವರ್ಷಗಳ ಅಧಿಕಾರ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು ಸ್ಪಷ್ಟ ಆಲೋಚನೆಗಳು ಮತ್ತು ಬಲಿಷ್ಠ ನೀತಿಗಳ ಕಾರಣದಿಂದಾಗಿ ನೆನಪಿನಲ್ಲಿ ಉಳಿಯುತ್ತದೆ.

ಅಣ್ವಸ್ತ್ರ ಹೊಂದುವುದರ ಪರಿಣಾಮವಾಗಿ ದೇಶವು ಅಮೆರಿಕ ಹೇರುವ ದಿಗ್ಬಂದನಕ್ಕೆ ಗುರಿಯಾಗಬೇಕಾಗುತ್ತದೆ ಎಂಬುದು ಗೊತ್ತಿದ್ದರೂ, ಸವಾಲು ಎದುರಿಸಿ ನಿಂತ ವಾಜಪೇಯಿ, ಭಾರತವು ನಿಜಕ್ಕೂ ಸುರಕ್ಷಿತವಾಗುವಂತೆ ಖಾತರಿಪಡಿಸಿದರು. ಅದೇ ರೀತಿಯಲ್ಲಿ, ಆರ್ಥಿಕ ಹಾಗೂ ವಿದೇಶಾಂಗ ವ್ಯವಹಾರಗಳ ವಿಚಾರದಲ್ಲಿ ಅವರು ಇರಿಸಿದ ಹೆಜ್ಜೆಗಳು, ವಿವಿಧ ದೇಶಗಳ ಒಕ್ಕೂಟದಲ್ಲಿ ಭಾರತಕ್ಕೆ ಮಹತ್ವದ ಸ್ಥಾನ ದೊರೆಯುವಂತೆ ಮಾಡಿದವು. 1998ರ ಮಾರ್ಚ್ 22 ರಂದು ರಾಷ್ಟ್ರಪತಿಯವರು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ ನಂತರ ವಾಜಪೇಯಿ ಅವರ ಭಾಷಣದ ಸ್ಮರಣೆಯ ಮತ್ತೊಂದು ದೇಶದ ಬಗ್ಗೆ ಅವರು ಹೊಂದಿದ್ದ ಆಲೋಚನೆಯನ್ನು ಸ್ಪಷ್ಟಪಡಿಸುತ್ತದೆ: ರಾಮಕೃಷ್ಣ ಪರಮಹಂಸರು ಒಬ್ಬರಿಗೆ ಹೇಳಿದರು .ಜೀವನ ದೋಣಿಯಿದ್ದಂತೆ. ಅದು ಸಹಜವಾಗಿಯೇ ನೀರಿನ ಮೇಲಿರಬೇಕು. ಆದರೆ ದೋಣಿಗೆ ನೀರು ನುಗ್ಗಿ ,ಅದು ಮುಳುಗುವಂತೆ ಮಾಡಲು ಬಿಡಲಾಗದು. ಸ್ವದೇಶಿ ವಿಚಾರವಾಗಿ ನಾನು ಮತ್ತು ನನ್ನ ಸಹವರ್ತಿಗಳು ಹೇಳುವುದು ಇದೇನೇ .ದೇಶವು ಸಹಜವಾಗಿಯೇ ಜಗತ್ತಿನಲ್ಲಿ ಒಂದಾಗಿ ಇರಬೇಕು. ಆದರೆ ಈಗ ಜಾಗತಿಕ ಮಾರಾಕಟ್ಟೆಗಳನ್ನು ಅಪ್ಪಳಿಸುತ್ತಿರುವ ಪ್ರವಾಹ ನಮ್ಮನ್ನು ಮುಳುಗಿಸಲು ಬಿಡಲಾಗದು. ಬದಲಾಗಿ ,ಅದೇ ಪ್ರವಾಹವು ನಮಗೆ ಅನುಕೂಲಕರ ವಾಗುವಂತೆ ಮಾಡಬೇಕು. ಹೀಗಾಗಿ ,ನಮ್ಮ ಅರ್ಥವ್ಯವಸ್ಥೆಯ ದೋಣಿಯನ್ನು ನಾವು ಇನ್ನಷ್ಟು ಬಲಿಷ್ಠವಾಗಿಸೋಣ . ಭಾರತೀಯರ ಉತ್ಪಾದಕ ಶಕ್ತಿಯನ್ನು ಬಳಸಿ ನಾವು ಈ ಕೆಲಸವನ್ನು ಸಾಧ್ಯವಾದಷ್ಟೂ ಕಡಿಮೆ ಅವಧಿಯಲ್ಲಿ ಮಾಡೋಣ.’ ದೇಶದ ಆರ್ಥಿಕ ಶಕ್ತಿಯನ್ನು ಹೆಚ್ಚಿಸಲು ಇನ್ನೊಂದು ಅದ್ಭುತ ಆಲೋಚನೆ ಯಾಗಿತ್ತು .

ಇದನ್ನೂ ಓದಿ: ಬೆಳ್ಳಿತೆರೆಯಲ್ಲಿ ಲೀನವಾದ ಸಿನಿಮಾ ದಿಗ್ಗಜ ಶ್ಯಾಮ್ ಬೆನಗಲ್

ಕೇಂದ್ರದ ಈಗಿನ ಸರ್ಕಾರವು ‘ಭಾರತದಲ್ಲೇ ತಯಾರಿಸಿ ‘ಮತ್ತು ಸ್ಟ್ಯಾಂಡ್ ಆಫ್ ಇಂಡಿಯಾ’ ಯೋಜನೆಗಳ ಮೂಲಕ ಭಾರಿ ಯಶಸ್ಸು ಕಂಡಿರುವುದು ರಾಮಕೃಷ್ಣ ಬೋಧನೆಯ ಸಾರವನ್ನು ,ವಾಜಪೇಯಿ ಅವರ ಕಿವಿ ಮಾತನ್ನು ಗ್ರಹಿಸುವಲ್ಲಿ ಈಗಿನ ನ್ಯಾಯಕರ್ತದ ಸಾಮರ್ಥವನ್ನು ಮಾತ್ರವೇ ತೋರಿಸುತ್ತಿಲ್ಲ .ಬದಲಿಗೆ ,ವಾಜಪೇಯಿ ಅವರ ಕನಸನ್ನು ಸಹಕಾರ ಗೊಳಿಸುವ ಈಗಿನ ನ್ಯಾಯ ಕತ್ವದ ಶಕ್ತಿಯನ್ನೂ ತೋರಿಸುತ್ತದೆ .ವಾಜಪೇಯಿ ಅವರು ಸಲಹೆ ನೀಡಿದ 25 ವರ್ಷಗಳಲ್ಲಿ ಭಾರತವು ಜಗತ್ತಿನ ಐದನೆಯ ಅತಿ ದೊಡ್ಡ ಅರ್ಥ ವ್ಯವಸ್ಥೆ ಆಗಿರುವುದಷ್ಟೇ ಅಲ್ಲದೆ, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥ ವ್ಯವಸ್ಥೆಯೂ ಆಗಿದೆ .ವಾಜಪೇಯಿ ಅವರ ಈ ನಿಲುವು ದೇಶದ ಅರ್ಥ ವ್ಯವಸ್ಥೆಯ ಎಲ್ಲಾ ಅಂಗಗಳುನ್ನು ಉತ್ತೇಜಿಸುವ ಕೆಲಸ ಮಾಡಿತು. ಆಗ ನಿದ್ರಾವಸ್ಥೆಯಲ್ಲಿದ್ದಂತೆ ಕಾಣುತ್ತಿದ್ದ ದೈತ್ಯ ಶಕ್ತಿ ಎಚ್ಚೆತ್ತುಕೊಳ್ಳಲು ಆರಂಭವಾಗಿತು. ಅಭಿವೃದ್ಧಿ ಹಾಗೂ ಆರ್ಥಿಕ ಬೆಳವಣಿಗೆಯ ವಿಚಾರದಲ್ಲಿ ವಾಜಪೇಯಿ ಅವರಿಗೆ ಸಮಗ್ರವಾದ ದೃಷ್ಟಿಕೋನ ಇತ್ತು. ದೇಶದ ಉತ್ತರ ಮತ್ತು ದಕ್ಷಿಣವನ್ನು ಹಾಗೂ ಪೂರ್ವ ಮತ್ತು ಪಶ್ಚಿಮವನ್ನು ಬೆಸೆಯಲು ಸುವರ್ಣ ಚತುಷ್ಪಥ ಯೋಜನೆಯ ಅಡಿ ಎಕ್ಸ್ಪ್ರೆಸ್ ಹೆದ್ದಾರಿಗಳ ನಿರ್ಮಾಣಕ್ಕೆ ಅವರು ನೀಡಿದ ಒತ್ತು ನಿಜಕ್ಕೂ ಅದ್ಭುತ. ವಿಮಾನಯಾನ ಮತ್ತು ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಕೂಡ ಅವರು ಗಮನಹರಿಸಿದರು.

1999ರ ಜನವರಿ ಒಂದರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸುವಾಗ ಅವರು ,ಮುಂಬೈ, ದೆಹಲಿ ಮತ್ತು ಬೆಂಗಳೂರಿನ ವಿಮಾನ ನಿಲ್ದಾಣಗಳಿಗೆ ಕಾರ್ಪೊರೇಟ್ ರೂಪ ನೀಡುವ ಬದ್ಧತೆ ಸರ್ಕಾರಕ್ಕಿದೆ ಎಂದು ಘೋಷಿಸಿದರು. ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣಗಳ ನಿರ್ಮಾಣದತ್ತ ಇದು ಮೊದಲ ಹೆಜ್ಜೆ’ ಎಂದು ಅವರು ಹೇಳಿದರು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೆಯ ಟರ್ಮಿನಲ್ ವಿಶ್ವದ ಅತ್ಯುತ್ತಮ ಟರ್ಮಿನಲ್ ಗಳಲ್ಲಿ ಒಂದು ಎಂದು ಜಗತ್ತಿನ ಎಲ್ಲೆಡೆ ಜನ ಪ್ರಶಂಸೆಯ ಮಾತು ಆಡುವಾಗ .ನಾವು ದೂರದರ್ಶಿತ್ವ ಹೊಂದಿದ್ದ ವಾಜಪೇಯಿ ಅವರನ್ನು ನೆನಪಿಸಿಕೊಳ್ಳಬೇಕು .ನವ ಭಾರತವನ್ನು ಕಟ್ಟುವಲ್ಲಿ ಅವರು ಭದ್ಧತೆ ಹೇಗಿತ್ತೆದರೆ, 1999ರ ಜನವರಿ 2ರಂದು ಅವರು ರಾಷ್ಟ್ರೀಯ ಏಕೀಕೃತ ಹೆದ್ದಾರಿ ಯೋಜನೆಗೆ ಚಾಲನೆ ನೀಡಿದರು. ಅದನ್ನು ಅವರು ‘ಸ್ವತಂತ್ರ ಭಾರತದಲ್ಲಿ ಕೈಗೆತ್ತಿಕೊಂಡ ಅತ್ಯಂತ ಉದ್ದದ, ಅತಿ ದೊಡ್ಡದಾದ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಮೂಲ ಸೌಕರ್ಯ ಯೋಜನೆ ,ಎಂದು ಬಣ್ಣಿಸಿದ್ದರು.’ ಇದು ನಮ್ಮ ತಲೆಮಾರು ದೇಶದ ಮುಂದಿನ ತಲೆಮಾರಿಗೆ ನೀಡುವ ಅತ್ಯಂತ ಮೂಲ್ಯಯುತವಾದ ಉಡುಗೊರೆ’ ಎಂದು ಬಣ್ಣಿಸಿದದ್ದರು.

ಯೋಜನೆಯು ಗುಜರಾತನ್ನು ಅಸ್ಸಾಂ ಜೊತೆ, ಕನ್ಯಾಕುಮಾರಿ ಯನ್ನು ಕಾಶ್ಮೀರದ ಜೊತೆ ಬೆಸೆಯಲಿದೆ ಎಂದಿದ್ದರು .ಇಂದಿನ ಕೇಂದ್ರ ಸರ್ಕಾರವು ವಾಜಪೇಯಿ ಅವರ ಕನಸುಗಳನ್ನು ಈಡೇರಿಸುವ ಕೆಲಸ ಮಾಡುತ್ತಿದ್ದೆ .ವಾಜಪೇಯಿ ಅವರ ಸಂಸದೀಯ ಕೌಶಲ್ಯವುವ ಬಹುಶ್ರುವಾಗಿ ದೆಈ ದೇಶ ಕಂಡ ಮಹಾನ್ ಸಂಸದೀಯ ಪಟ್ಟುಗಳಲ್ಲಿ ಅವರು ಒಬ್ಬರು. ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಅವರ ತೀಕ್ಷಣವಾಗಿ ಮಾತನಾಡುತ್ತಿದ್ದರು, ಟೀಕೆಗಳನ್ನು ಮಾಡುತ್ತಿದ್ದರು ಹಾಸ್ಯ ಮಾಡುತ್ತಿದ್ದರು. ಆದರೆ ಎಂದಿಗೂ ನಿರ್ದಿಸುತ್ತಿರಲಿಲ್ಲ .ಅವರ ನಡೆಯಿಂದ ಕಲಿಯುವುದು ಸಂಸದರಿಗೆ ಬಹಳಷ್ಟಿದೆ .ಕೊನೆಯಲ್ಲಿ ವಾಜಪೇಯಿ ಅವರ ಕಾವ್ಯದ ಬಗ್ಗೆ ಕೆಲವು ಮಾತುಗಳು .ವಾಜಪೇಯಿ ಅವರಿಗೆ ಜನರೊಂದಿಗೆ ಬಹಳ ಆಳವಾದ ಸಂಪರ್ಕ ಹೊಂದಲು ಸಾಧ್ಯವಾಗಿದ್ದಕ್ಕೆ ತಮ್ಮಲ್ಲಿದ್ದ ಮಾತುಗಾರಿಕೆಯೊಂದೇ ಕಾರಣವಾಗಲಿಲ್ಲ .ಕಾವ್ಯವು ವಾಜಪೇಯಿ ವ್ಯಕ್ತಿತ್ವದ ಒಂದು ವಿಸ್ತರಿತ ಭಾಗವಾಗಿತ್ತು.

ಬಹಳ ನೆನಪಿನಲ್ಲಿ ಉಳಿಯುವ ಅವರ ಒಂದು ಕವಿತೆ ‘ಉಂಟಾಯಿ; ಇದನ್ನು ಅವರು ಬರೆದಿದ್ದು ತಮಗೆ ಪದ್ಮವಿಭೂಷಣ ಪುರಸ್ಕಾರ ಬಂದಿದ್ದಕ್ಕೆ ದೆಹಲಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮ ವೊಂದರಲ್ಲಿ ಭಾಗಿಯಾದ ನಂತರ. ಬಹಳ ಎತ್ತರವಾದ ಪರ್ವತದ ಮೇಲೆ ಮರಗಳು ಬೇರು ಬಿಡುವುದಿಲ್ಲ, ಸಸಿಗಳು ಬೆಳೆಯುವುದಿಲ್ಲ ,ಹುಲ್ಲು ಉಳಿಯುವುದಿಲ್ಲ ಎಂಬ ಅರ್ಥವನ್ನು ಆ ಕವಿತೆಯ ಆರಂಭಿಕ ಸಾಲುಗಳು ಧ್ವನಿಸುತ್ತವೆ.ಕವಿಯ ಕೊನೆಯಲ್ಲಿ ವಾಜಪೇಯಿ ಅವರು, ನನ್ನವರಲ್ಲದವರನ್ನು ಅಪ್ಪಿಕೊಳ್ಳಲು ಆಗದಷ್ಟು ಎತ್ತರಕ್ಕೆ ನನ್ನನ್ನು ಏರಿಸಬೇಡ ದೇವರೇ ಎಂದು ಬರೆದಿದ್ದಾರೆ .ದೇಶದ ಪ್ರಧಾನಿ ಆಗಿದ್ದಾಗ ವಾಜಪೇಯಿ ಅವರು ತಮ್ಮದೇ ಕವಿತೆಯ ಆಶಯವನ್ನು ಪಾಲಿಸಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಅವರ ತಮ್ಮ ಬೆರುಗಳನ್ನು, ಹಳೆಯ ಸ್ನೇಹಿತರನ್ನು, ಕಷ್ಟದ ಆರಂಭಿಕ ದಿನಗಳನ್ನು ಎಂದಿಗೂ ಮರೆಯಲಿಲ್ಲ .ಅವರು ಎತ್ತರಕ್ಕೆ ಏರಿದರು ,ಅವರ ಬೆರುಗಳು ನೆಲದಲ್ಲಿ ಭದ್ರವಾಗಿ ಊರಿದ್ದವು .ಈ ಕಾರಣಕ್ಕಾಗಿ ಪ್ರಜಾತಂತ್ರ ಭಾರತವು ಅವರನ್ನು ಯಾವತ್ತಿಗೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

Leave a Comment