ಕಲೆ ಆಸ್ವಾದಿಸುವ, ಆರಾಧಿಸುವ ಮನಸ್ಸು ಅಗತ್ಯ

ಕಲೆ ಆಸ್ವಾದಿಸುವ, ಆರಾಧಿಸುವ ಮನಸ್ಸು ಅಗತ್ಯ

ಜ್ಞಾನಪದ ತಜ್ಞ ಡಾ.ಕುರುವ ಬಸವರಾಜು ಅಭಿಮತ !ಅಂಬೇಡ್ಕರ್ ಭವನದಲ್ಲಿ ಕನ್ನಿಕಾ ಭರತನಾಟ್ಯ ರಂಗ ಪ್ರವೇಶ
ಕನ್ನಡಪ್ರಭ ವಾರ್ತೆ ರಾಮನಗರ ಶ್ರೀಮಂತ ಕಲಾ ಪ್ರಕಾರವಾಗಿರುವ ಭರತನಾಟ್ಯ ಕಲೆಯನ್ನು ಅಸ್ವಾದಿಸುವ ಮತ್ತು ಪ್ರೋತ್ಸಾಹಿಸುವ ಮನಸ್ಸುಗಳು ಬೇಕಿದೆ ಎಂದು ಜಾನಪದ ತಜ್ಞ ಡಾ.ಕುರುವ ಬಸವರಾಜು ಹೇಳಿದ್ದರು .ನಗರದ ಅಂಬೇಡ್ಕರ್ ಭವನದಲ್ಲಿ ಕು.ಕನ್ನಿಕಾ. ಆರ್ ಅವರು ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ,ಭರತನಾಟ್ಯದ ಬಗೆಗೆ ಜನರಲ್ಲಿ ಅಷ್ಟಾಗಿ ಅರಿವಿಲ್ಲ .ಪ್ರೇಕ್ಷಕರನ್ನು ಸೃಷ್ಟಿ ಮಾಡಿದ್ದಾರೆ ಕಲೆ ಎಷ್ಟೇ ಶ್ರೀಮಂತವಾಗಿದ್ದರೂ ಪ್ರಯೋಜನವಿಲ್ಲ. ಭರತನಾಟ್ಯ ಮಾತ್ರವಲ್ಲದೆ ಯಾವುದೇ ಕಲೆಗಳು ಉಳಿಯಬೇಕಾದರೆ ಪ್ರೋತ್ಸಾಹ ಅಗತ್ಯ. ನಿಮ್ಮ ನೋಡುವ ಗುಣ ಎಲ್ಲ ಕಲೆಗಳಿಗೂ ಇರಲಿ ಎಂದರು .ರಂಗ ಪ್ರವೇಶದ ಕನ್ನಿಕಾ ಪ್ರದರ್ಶಿಸಿದ ನೃತ್ಯಗಳಲ್ಲಿ ವೀರ, ಭಯಾನಕ ಅಚ್ಚರಿ, ಕರುಣೆ ,ನೋವಿನ ರೂಪ, ಗಮನಿಸಿದೆ. ಇಷ್ಟೊಂದು ಪಕ್ವವಾಗಿ ಪ್ರೌಢವಾಗಿ ಭರತನಾಟ್ಯ ಪ್ರದರ್ಶನ ಅನುಭವಿಗಳಿಂದ ಮಾತ್ರ ಪ್ರದರ್ಶ್ರೀಸಲು ಸಾಧ್ಯ. ಅವರ ಮುಖದಲ್ಲಿ ನಗುವಿನ ಭಾವನೆ, ಸಂಗೀತಕ್ಕೆ ತಕ್ಕ ಹೆಜ್ಜೆಗಳನ್ನು ಭರತನಾಟ್ಯದಲ್ಲಿ ನೋಡಿದೆ. ಸಮೃದ್ಧಿಯಾದ ಭರತನಾಟ್ಯ ನನಗೆ ಸಂತಸ ತಂದಿದೆ ಎಂದರು. ಭಾರತ ಮುನಿ ಕಟ್ಟಿದ ಶಿವನ ತಾಂಡವ ರೂಪದ ಎಲ್ಲಾ ಬಂಗಿಗಳನ್ನು ಪಾಕ್ವವಾಗಿ ಪ್ರದರ್ಶನ ಕಂಡೆ .ನಗರ ಪ್ರದೇಶಗಳಲ್ಲಿ ಕೆಲವು ಸಮುದಾಯಕ್ಕೆ ಒತ್ತು ಕೊಡುವ ಕಾಲಘಟ್ಟನದಲ್ಲಿ ರಾಮನಗರ ನೆಲದಲ್ಲಿ ಅದನ್ನು ಮೀರಿ ಗ್ರಾಮೀಣ ಮಗುವಿಗೆ ನೃತ್ಯ ತರಬೇತಿ ನೀಡುರುವ ವಿದುಷಿ ನಾಗವೇಣಿ ಅವರ ಕಾರ್ಯ ಮೆಚ್ಚುವಂತಹದು ಎಂದರು .

ಇದನ್ನೂ ಓದಿ: ಶಿವಗಂಗೆಯಲ್ಲಿ ಚುಂಚನಗಿರಿ ಶಾಖಾ ಮಠ

ಚೆನ್ನಪಟ್ಟಣ ವಿರಕ್ತಮಠದ ಶ್ರೀ ಮಾ.ನಿ.ಪ್ರ.ಸ್ವಶ್ರೀ ಶಿವರುದ್ರಪ್ಪ ಸ್ವಾಮೀಜಿ ಮಾತನಾಡಿ, ಮಗುವಿನ ಪ್ರತಿಭೆ ಘೋಷಿಸುತ್ತಿರುವ ತಂದೆ- ತಾಯಿ ಎಲ್ಲ ಪೋಷಕರಿಗೂ ಮಾದರಿ ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಗುವಿನ ಪ್ರತಿಭೆಗೆ ಪೂರಕವಾಗಿ ನೀರೆರೆಯುವ ಕೆಲಸ ಮಾಡಿದ್ದಾರೆ. ಕಲಿಕಗೆ ಗುರು ಇರಬೇಕು. ಗುರು ಮತ್ತು ಗುರಿ ಇದ್ದಾಗ ಮಾತ್ರ ಸಾಧನೆ ಸಾಧ್ಯ. ಸಾಧನೆಯನ್ನು ಹುಡುಕುತ್ತಾ ಹೋಗಬಾರದು. ಸಾಧನೆಯೇ ನಮ್ಮನ್ನು ಹುಡುಕಿ ಬರಬೇಕು .ಪೋಷಕರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಸಾಧನೆಯ ಹಾದಿಯಲ್ಲಿಸಾಗಲು ಸಾಧ್ಯ .ಮೊಬೈಲ್ ಎಲ್ಲವನ್ನು ಕೊಡುತ್ತದೆ. ಆದರೆ ,ಸಂಸ್ಕೃತಿ ಮಾತ್ರ ಕೊಡಲ್ಲ. ತತ್ವದರ್ಶಗಳು ಉಳಿಯಲು ಜಾನಪದ ಕಾರಣವಾಗಿದೆ .ಮಕ್ಕಳಲ್ಲಿ ಧಾರ್ಮಿಕ ಸಂಸ್ಕೃತಿ ಸದ್ಗುಣ ಅಳವಡಿಸಬೇಕು ಎಂದು ಶ್ರೀಗಳು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಸುಬ್ಬಾಶಾಸ್ತ್ರಿ, ವಿದ್ವಾನ್ ಶಂಕರ್ ಮಾಸ್ಟರ್ ಮಾತನಾಡಿದರು. ವಿದುಷಿ ಡಿ .ನಾಗವೇಣಿ,ಕು. ಚಿನ್ಮಯಿ, ನಂದಕುಮಾರ್, ಜಾನಪದ ತಜ್ಞ ಕುರುವ ಬಸವರಾಜು ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶರತ್ ಶಾಲೆಯ ಸಂಸ್ಥಾಪಕಿ ರಾಜೇಶ್ವರಿ, ಕನ್ನಿಕಾ ಪೋಷಕರಾದ ಕೆ. ಸುನಿತಾ ರವಿತಾಳವಾಡಿ ಉಪಸ್ಥಿತರಿದ್ದರು.
ಬಹು ಮುಖ ಪ್ರತಿಭೆ 9ನೇ ತರಗತಿಯ ಕನ್ನಿಕಾ.

ಸುನಿತಾ. ಕೆ ಮತ್ತು ರವಿ ತಾಳವಾದಿ ದಂಪತಿಯ ಪುತ್ರಿ ಕು. ಕನ್ನಿಕಾ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ರಾಮನಗರದ ದಲಿತ ನೃತ್ಯ ಕಲಾ ಮಂದಿರದ ವಿದುಷಿ ಡಿ. ನಾಗಮಣಿ ಅವರ ಬಳಿ 10 ವರ್ಷದಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಪ್ರಥಮ ದರ್ಜೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ, ದ್ವಿತೀಯ ದರ್ಜೆ ಪರೀಕ್ಷೆಗೆ ಅಭ್ಯಾಸ ಮಾಡುತ್ತಿದ್ದಾಳೆ, ಚಿತ್ರಕಲೆ, ಗಾಯನ, ನೃತ್ಯ ಕಾರ್ಯಕ್ರಮ ನೀಡುವ ಜೊತೆಗೆ ಕಿರು ಚಿತ್ರಗಳಲ್ಲಿ ಅಭಿನಯಿಸುವ ಬಹುಮುಖ ಪ್ರತಿಭೆ ಕನ್ನಿಕಾ .ರಾಜ್ಯ ಸರ್ಕಾರದ ಕೆಳದಿ ಚೆನ್ನಮ್ಮ ಪ್ರಶಸ್ತಿ ,ರಾಷ್ಟ್ರೀಯ ಕನ್ನಡ ರತ್ನ, ನಾಟ್ಯ ತರಂಗ, ರಾಜರತ್ನ ಗೌರವ, ನಾಟ್ಯ ಕೌಸ್ತುಭ , ಸುವರ್ಣ ಶ್ರೀ ಕನ್ನಡ ,ರೇಷ್ಮೆ ನಾಡು ಮಾಣಿಕ್ಯ, ಸೋಮಾಪ್ರಭ ಪ್ರಶಸ್ತಿ ಪಡೆದಿರುವುದು ಆಕೆಯ ಪ್ರತಿಭೆಗೆ ನಿರ್ದರ್ಶನ.

Leave a Comment