ಕನಸಿಗೆ ರೆಕ್ಕೆ ಕಟ್ಟಿ ಹಾರುವಾಗ…
ತಲೆ ಮೇಲೆ ಗಿರಗಿಟ್ಟೆಯಂತ ಹೆಲಿಕಾಪ್ಟರ್ ಫ್ಯಾನು ತಿರುಗುತ್ತಿತ್ತು. ನೋಡನೋಡುತ್ತಲೇ ವಿಜಯಪುರದ ನೆತ್ತಿಯ ಮೇಲೆ ಹಾರುತ್ತಿದ್ದವು. ಆ ಪೈಲಟ್ಗೆ ನಾನು ಹಲವಾರು ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅವರು ಸಮಾಧಾನದಿಂದ ಉತ್ತರಿಸುತ್ತಲೇ ನಮ್ಮ ಯಾನ ಮುಗಿಸಿದ್ದರು. ನವರಸಪುರ ಉತ್ಸವದಲ್ಲಿ ಕೈಗೊಂಡ ಈ ಹೆಲಿಕಾಪ್ಟರ್ ಯಾನ ನನ್ನಲ್ಲಿ ಕನಸನ್ನು ಬಿತ್ತುತ್ತ ಹೋಗಿತ್ತು. ಮೇಲೆ ಹೋದಂತೆಲ್ಲ, ಅಳವಾಗಿ ಮನದೊಳಗೆ ಹಾಡುವ ಕನಸು ಬೇರೂರು ತೊಡಗಿತ್ತು.
ಆದಾದ ಏಳು ವರ್ಷಗಳ ನಂತರ ನಾನು ವಿಮಾನದಲ್ಲಿ ಹತ್ತಿದ್ದೆ ತರಬೇತಿಗಾಗಿ, ಮೊದಲ ಸಲ ಹತ್ತಿ ಇಳಿಯುವವರೆಗೂ ನಾನು ಮುಗುಳ್ಳಗುತ್ತಲೇ ಇದ್ದೆ, ಜೊತೆಗಿದ್ದ ಪೈಲಟ್ ಕಲ್ಪನಾ ಅವರು ಕೇಳಿದರು, ‘ಮಜಾ ಆ ರಹಾ ಹೈ’ ನಾನು ನಗುತ್ತಲೇ ಹೇಳಿದೆ ‘ಹೌದು, ಬಹುತ’ ಅಂತ ಮತ್ತೆ ಭೂ ಸ್ಪರ್ಶ ಮಾಡುವವರೆಗೂ ನಗುತ್ತಲೇ ಇದ್ದೆ. ‘ನಗುಮೂಡಿಸಿದೆ ಈ ಬಾನಂಗಳ, ಭುವಿಯ ಸ್ಪರ್ಶಿಸುವವರೆಗೂ, ನನ್ನೊಳಗಿನ ಭಾವ, ಭಾವಲಹರಿಯ lesbierto, elect ಓಹ್.. ದೇವರೆ, ನಾನು ಭೂಮಿಗೆದುರಾಗಿ ಇಳಿಯುತ್ತಲಿರುವೆ, ಕಾಕ್ಪಿಟ್ನಲ್ಲಿ ಅದೆಷ್ಟು ಸುರಕ್ಷಿತ, ನಾನಿಲ್ಲಿಗೇ ಸೇರಿದವಳು’ ಎಂಬರ್ಥದ ಕವಿತೆಯೊಂದು ನನ್ನೊಳು ಮೂಡಿತು.
ಮೊದಲ ಹಾರಾಟದಲ್ಲಿ ನಮ್ಮ ದೇಹ ಹೇಗೆ ಸ್ಪಂದಿಸುತ್ತದೆ. ಮಾನಸಿಕವಾಗಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನೋಡುತ್ತಾರೆ. ನಾನು ಇಡೀ ಹಾರಾಟ ಮುಗಿಯುವವರೆಗೂ ಕಾಂತಚಿತ್ತಲಾಗಿದ್ದೆ. ತಲೆ ಸುತ್ತು, ವಾಂತಿ ಅಂಥದ್ದೇನೂ ಆಗಲಿಲ್ಲ. ನಾನು ಹುಟ್ಟಿರುವುದೇ ಹಾರಾಡಲು ಅಂತ ಅವತ್ತೇ ಖಾತ್ರಿ ಆಯಿತು.
ವಿಜಯಪುರದ ಯುವತಿಯೊಬ್ಬಳು, ಪಿಯುಸಿ ಮುಗಿಸಿ ಪದವಿ ಓದಬಹುದಾಗಿತ್ತಾ, ಆದರೆ ನನ್ನ ಕನಸಿಗೆ ನೀರೆರೆಯಲು ನನ್ನಮ್ಮ ನನ್ನ ಹಿಂದೆ ನಿಂತಿದ್ದರು. ಅಪ್ಪಾಜಿ ಶುಲ್ಕ ಭರಿಸಲು ತಯಾರಾಗಿದ್ದರು. ಪಿಯುಸಿ ಮುಗಿದ ತಕ್ಷಣ ಕಾರ್ವರ್ ಏವಿಯಷನ್ ಕೇಂದ್ರಕ್ಕೆ ಸೇರಿಕೊಂಡೆ. ನನಗಾಗ ಹದಿನೇಳು ವರ್ಷ. ಕಠಿಣ ತರಬೇತಿ ಅದು. ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಿತ್ತು. ಬೆಳಗಿನ ಜಾವ, ಸಂಜೆಯ ನಂತರ ಹಾರಾಟದ ಕ್ಲಾಸುಗಳಿದ್ದರೆ, ಇಡೀ ದಿನ ಥಿಯರಿಗಳಾಗುತ್ತಿದ್ದವು. ಹೈರಾಣಾಗದಂತೆ ಇರಬೇಕಿತ್ತು. ಹೊಸ ಉತ್ಸಾಹ ಮತ್ತು ವಿಶ್ವಾಸದಿಂದ ದಿನವಿಡೀ ತರಬೇತಿಯಲ್ಲಿ ಪಾಲ್ಗೊಳ್ಳಬೇಕಿತ್ತು.
ಇದನ್ನೂ ಓದಿ: ಕಾಣುವ ಕನಸಿಗೂ ಕಾನೂನು ಚೌಕಟ್ಟು!
ಆಸಕ್ತಿ ಒಂದಿದ್ದರೆ ಎಲ್ಲವೂ ಸರಳವಾಗುತ್ತದೆ. ಕಾಕ್ಪಿಟ್ನಲ್ಲಿ ಕುಳಿತ ತಕ್ಷಣ ಗಾಳಿಸೀಳುವ ಶಕ್ತಿ ಅದೆಲ್ಲಿಂದ ಬರುತ್ತಿತ್ತೋ ಗೊತ್ತಿಲ್ಲ. ನಮ್ಮಮ್ಮ ಅಪ್ಪಾಜಿ ಇಬ್ಬರೂ ಪ್ರಗತಿಪರರು. ಯಾವತ್ತೂ ನನ್ನ ಆಸೆಯನ್ನು ಕಡೆಗಣಿಸಲಿಲ್ಲ. ಅವರ ಮಹತ್ವಾಕಾಂಕ್ಷೆ ನನ್ನ ಬಲವಾಗಿ ಬದಲಾಗುತ್ತಿತ್ತು. ಒಮ್ಮೆ ಏರ್ಪೋರ್ಟ್ನ ಲಾಂಜ್ನಲ್ಲಿ ನನ್ನಮ್ಮ ಕಾಯುತ್ತಿದ್ದರು. ಆಗ ಪೈಲಟ್ ಮತ್ತು ವಿಮಾನಯಾನ ಸಿಬ್ಬಂದಿ ನಡೆದು ಬರುವಾಗ ಎಲ್ಲರೂ ಅವರಿಗೆ ಗೌರವ ನೀಡುವುದು ನೋಡಿದರು. ಅದಾಗಲೇ ಅವರೂ ನಿರ್ಧರಿಸಿ ಆಗಿತ್ತು, ಅವರ ಮಡಿಲ ಮಗು ಸಮೈದಾ ಗಗನದಲ್ಲಿ ಹಾರಾಡಬೇಕು ಎಂದು.
ಪ್ರತಿಸಲ ತರಬೇತಿ ಹಾರಾಟದಲ್ಲಿ ಪಾಲ್ಗೊಂಡಾಗಲೂ ಕಾಕ್ಪಿಟ್ನಲ್ಲಿ ಕುಳಿತ ಗಳಿಗೆಯಿಂ ದಲೇ ವಿಮಾನವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭವಾಗುತ್ತಿತ್ತು, ಯಾವ ಸಂಕೇತ ಏನು ಹೇಳುತ್ತದೆ? ಜೊತೆಗಿರುವವರಿಗೆ ಸಂಕೇತ ಭಾಷೆಯಲ್ಲಿ ಏನು ಹೇಳಬೇಕು? ಹೇಗೆ ಹೇಳಬೇಕು? ಇವೆಲ್ಲವನ್ನೂ ಕಲಿಯುತ್ತಿದ್ದ ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆಯಲು ಒಟ್ಟು ಆರು ಪತ್ರಿಕೆಗಳನ್ನು ಪಾಸು ಮಾಡಬೇಕು. ಮೊದಲ ವರ್ಷವೇ ಐದು ಪತ್ರಿಕೆಗಳನ್ನು ಪಾಸು ಮಾಡಿದೆ. ಇನ್ನೊಂದು ಟೆಕ್ನಿಕಲ್ ಪತ್ರಿಕೆ ಬರೆಯಲು ಹದಿನೆಂಟು ವರ್ಷ ಪೂರೈಸಿರಬೇಕು. ಹದಿನೆಂಟು ವರ್ಷದವಳಾದ ಕೂಡಲೇ ಆ ಪತ್ರಿಕೆಯನ್ನೂ ಪಾಸು ಮಾಡಿದೆ. ಹದಿನೆಂಟು ಮುಗಿಯುವುದರೊಳಗೆ ಕಮರ್ಷಿಯಲ್ ಪೈಲಟ್ ಪರವಾನಗಿ ಕೈಗೆ ಸಿಕ್ಕಿತು. 200 ಗಂಟೆಗಳ ಹಾರಾಟದ ಅನುಭವ, ಆರು ಪತ್ರಿಕೆಗಳನ್ನೂ ಮೊದಲ ಪ್ರಯತ್ನದಲ್ಲಿಯೇ ಮುಗಿಸಿ ಯಶಸ್ಸು ಪಡೆದೆ.
ನನ್ನ ಯಶಸ್ತಿನ ಹಿಂದೆ ಏವಿಯೇಷನ್ ತರಬೇತಿ ಕೇಂದ್ರಗಳ ಪರಿಶ್ರಮ ಇದೆ. ಅವರು ನಿರಂತರವಾಗಿ ನಮ್ಮನ್ನು ಹುರಿದುಂಬಿಸುತ್ತಿದ್ದರು. ಯಾವುದೂ ಕ್ಲಿಷ್ಟವೆನಿಸದಂತೆ ಕಲಿಸುತ್ತಿದ್ದರು. ಅತ್ಯಂತ ಕಿರಿಯ ಕ್ಯಾಪ್ಟನ್ಗಳಲ್ಲಿ ಒಬ್ಬರಾಗಿರುವ ಕ್ಯಾಪ್ಸನ್ ತಪೇಶ್ ಯಾವಾಗಲೂ ಪ್ರೋತ್ಸಾಹಿಸುತ್ತಿದ್ದರು. ನನಗೆ ಹಾರಾಟದ ತರಬೇತಿ ನೀಡುತ್ತಿದ್ದ ಕ್ಯಾಪ್ಸನ್ ಮೋನಿಕಾ ಚೌಧರಿ, ಕ್ಯಾಪ್ಟನ್ ಮಾಧವ್ ಸಿಂಗ್ ಅವರ ಪಾತ್ರವೂ ಮಹತ್ತರದ್ದಾಗಿದೆ. ಯಾವ ಕ್ಷಣದಲ್ಲಿಯೂ ನಮ್ಮ ಸಮಚಿತ್ತವನ್ನು ಕಾಪಿಡಲು ಹಲವಾರು ಸೂತ್ರಗಳನ್ನು ಅವರು ಹೇಳಿಕೊಟ್ಟರು. ಅಪ್ಪ ಅಮ್ಮನ ಒತ್ತಾಸೆ, ಅಜ್ಜ ಅಜ್ಜಿಯ ಪ್ರೋತ್ಸಾಹದ ಜೊತೆಗೆ ತರಬೇತಿ ಕೇಂದ್ರದ ಸಿಬ್ಬಂದಿ ಮತ್ತು ನಮ್ಮ ಮೆಂಟರ್ ಆಗಿದ್ದವರೆಲ್ಲರ ಉತ್ಸಾಹ ನನ್ನನ್ನು ಬಾನಿನಂಗಳದಲ್ಲಿ ರೆಕ್ಕೆ ಬಿಚ್ಚುವಂತೆ ಮಾಡಿತು.
ನನ್ನಮ್ಮನನ್ನು ಮೊದಮೊದಲು ಎಲ್ಲರೂ ದೂರುವವರೇ ಆಗಿದ್ದರು. ಇದ್ದೊಬ್ಬ ಮಗಳನ್ನು ದೆಹಲಿಗೆ ಕಳುಹಿಸುವ ಧೈರ್ಯವಾದರೂ ಹೇಗೆ ಬಂತು? ಇಲ್ಲೇ ಓದಿಸಬಾರದೆ? ಜಾಣೆ ಅವಳು. ಇಂಜಿನಿಯರಿಂಗ್ ఇల్ల ಎಂಬಿಬಿಎಸ್ ಮಾಡಿಕೊಳ್ಳುತ್ತಿದ್ದಳು ಎಂದೆಲ್ಲ ಹೇಳುತ್ತಿದ್ದರು.
ನನ್ನ ಕನಸನ್ನು ಅಪ್ಪ ಅಮ್ಮ ನನಸಾಗಿಸಿದರು. ಇನ್ನುಂದಿನ ಕೋರ್ಸಿಗೆ ತಯಾರಿ ನಡೆಸಿರುವೆ. ಹಾಗೆಯೇ ಈ ಕ್ಷೇತ್ರದಲ್ಲಿ ವಿಪುಲವಾದ ಅವಕಾಶಗಳಿವೆ. ಆಯ್ಕೆ ನನ್ನ ಕೈಯಲ್ಲಿಯೇ ಇದೆ. ಹಾರಾಡುವಾಗಲೆಲ್ಲ ಒಂದೇ ಹಾಡು ಗುನುಗುತ್ತೇನೆ, ‘ಮೇರಿ ಹೀಲ್ ಆಸ್ಮಾನಿ’ ಅಂತ (ಈ ಬಾನಂಗಳವೇ ನನ್ನ ಹೀರ್. ನನ್ನ ಪೇಯಸಿ)